ಬಳ್ಳಾರಿ ಗಣಿಗಾಥಾ: ಶ್ರೀರಾಮುಲು ಸ್ವಪ್ನ ವಿಮಾನಯಾನ
By ಹೃಷಿಕೇಶ್ ಬಹದ್ದೂರ್ ದೇಸಾಯಿ
ಆ ಫೋನು ನನಗೆ ಅಮರ ಚಿತ್ರಕಥಾದ ಆಕಾಶವಾಣಿಯಂತೆ ಕೇಳಿತು. ಆ ಕಡೆಯಿಂದ ಮಾತಾಡಿದವರು ಶ್ರೀರಾಮುಲು ಅವರ ಪಿಎ.
‘ಅಲ್ರೀ ಬಳ್ಳಾರಿಗೆ ಯಾಕೆ ಹೋದಿರಿ? ಸಾಹೇಬರು ಬೆಂಗಳೂರಿನ ಹತ್ತಿರ ಜಕ್ಕೂರು ಏರೋಡ್ರೋಮ್ ಹತ್ತಿರ ಇದ್ದಾರೆ. ಅಲ್ಲೇ ಹೋಗಿ' ಅಂತ ಅಂದರು. ನಾನು ಜಕ್ಕೂರಿಗೆ ಹೋದೆವು. ಆದರೆ ಅಲ್ಲಿ ಅವರು ಎಲ್ಲೂ ಕಾಣಲಿಲ್ಲ. ಸಾಹೇಬರ ಸಹಾಯಕ ಸಾಹೇಬರಿಗೆ ಫೋನು ಮಾಡಿದರೆ ‘ಜೀವನದಲ್ಲಿ ತಲೆ ಎತ್ತಿ ಬದುಕುವುದು ಕಲೀರಿ ಸಾರ್' ಅಂತ ಫಿಲಾಸಫಿ ಮಾತಾಡಿದರು.
ಮೇಲೆ ನೋಡಿದರೆ ಆಕಾಶದಲ್ಲಿ ಒಂದು ಡಿರಿಜಿಬಲ್ ಏರ್ ಷಿಪ್ (dirigible air ship) ಹಾರಾಡುತ್ತಾ ಇದೆ. ‘ಮೇಲೆ ಬನ್ನಿ' ಅಂತ ಸಾಹೇಬರ ಮತ್ತೊಬ್ಬ ಸಹಾಯಕರು ಒಂದು ಹಗ್ಗ ಇಳಿ ಬಿಟ್ಟರು. ಒಬ್ಬೊಬ್ಬರೇ ಮೇಲೆ ಹತ್ತಿ ಹೋದೆವು.
ಒಳಗೆ ನಾನು ಕಂಡರಿಯದ ಇನ್ನೊಂದು ಜಗತ್ತೇ ಇದೆ. ಅಲ್ಲಿ ಎಲ್ಲರೀತಿಯ ಯಂತ್ರಗಳಿವೆ. ನೂರಾರು ಸುಪರ್ ಕಂಪ್ಯೂಟರ್ ಗಳು, ಅವನ್ನು ನಿಯಂತ್ರಿಸಲು ಇನ್ನೊಂದು ಸುಪರ್ ಕಂಪ್ಯೂಟರ್, ಧ್ವನಿ ನಿಯಂತ್ರಿತ ರೊಬೊಟ್ ಗಳು, ನೀರು ಬೇಕಿಲ್ಲದ ಟಾಯ್ಲೆಟ್, ಊಟವಾದ ತಕ್ಷಣ ಹಾಸಿಗೆಯಾಗಿಬಿಡುವ ಡೈನಿಂಗ್ ಟೇಬಲ್, ಎಲ್ಲ.
ಚಿಯರ್ ಫುಲ್ ಮೋದಿ
ಇನ್ನು ಅಲ್ಲಿ ಸಚಿವರ ಆಫೀಸೇ ಅಲ್ಲಿದೆ. ಅಲ್ಲಿಯೇ ಪ್ರಿನ್ಸಿಪಲ್ ಸೆಕ್ರೆಟರಿ, ಅಂಡರ್ ಸೆಕ್ರೆಟರಿ, ಓವರ್ ಸೆಕ್ರೆಟರಿ ಎಲ್ಲರೂ ಇದ್ದಾರೆ. ಹೊಸ ಹಾಲಿವುಡ್ ಸಿನಿಮಾಗಳಲ್ಲಿ ಅಮೇರಿಕ ಅಧ್ಯಕ್ಷರ ವಿಶೇಷ ವಿಮಾನ ಏರ್ ಫೋರ್ಸ್ ಒನ್ ಥರ ಎಲ್ಲ ಸೌಲಭ್ಯ ಇದೆ. ಸೆಕ್ಯೂರಿಟಿಯವರು, ಅಡುಗೆಯವರು, ಕಂಪ್ಯೂಟರ್ ಆಪರೇಟರುಗಳು, ಎಲ್ಲ. ಅಮೇರಿಕೆ ಅಧ್ಯಕ್ಷರಿಗೆ ಇರುವಂಥ ಬ್ಲಾಂಡ್ ಗರ್ಲ್ ಸೆಕ್ರೆಟರಿಗಳು ಕೂಡ ಇದ್ದರು. "ಈ ಲಲಿತೆಯರೆಲ್ಲ ಐಪಿಎಲ್ ನಲ್ಲಿದ್ದ ಚಿಯರ್ ಗರ್ಲ್ಸ್. ನಾನು ಹೋದ ಮೇಲೆ ಇವರನ್ನು ಕೇಳುವವರೇ ಇಲ್ಲವಾಗಿದೆ ಅಂತ ಮೋದಿ ಫೋನ್ ಮಾಡಿದ್ದ. ಪಾಪ ಅಂತ ನಾನು ಇವರನ್ನು ಕೆಲಸಕ್ಕೆ ಸೇರಿಸಿಕೊಂಡೆ. ಎಷ್ಟಾದರೂ ಮೋದಿ ಎನ್ನುವ ಹೆಸರೇ ನಮಗೆ ಪವಿತ್ರ ಅಲ್ಲವೇ" ಅಂದರು.
ಜಕ್ಕೂರಿನಲ್ಲಿಯೂ ಫಿಟ್ ಆದ ಜರ್ಮನಿ
‘ಎರಡನೇ ಮಹಾಯುದ್ಧದಲ್ಲಿ ಜರ್ಮನ್ ಸೈನ್ಯದವರು ಕಂಡುಹಿಡಿದಿದ್ದ ವಿಮಾನ ಇದು' ಅಂದರು ಸಚಿವರು. ಜರ್ಮನಿಯಿಂದ ಜಕ್ಕೂರಿಗೆ ಹೇಗೆ ಬಂತು ಅಂತ ಕೇಳಿದೆವು. ‘ಕಳೆದ ಬಾರಿ ನಮ್ಮ ಮೈನ್ ಲಾರಿ ಜರ್ಮನಿಗೆ ಹೋದಾಗ ನಮ್ಮ ಡ್ರೈವರ್ ಹಾಗೂ ಕ್ಲೀನರ್ ಅವರು ಇದನ್ನು ನೋಡಿ ತುಂಬ ಇಷ್ಟಪಟ್ಟರು. ನನಗೆ ಹೇಳದೇ ಕೇಳದೆ ಇದನ್ನು ಖರೀದಿ ಮಾಡಿದರು. ಕೊನೆಗೆ ಅದನ್ನು ಬಿಚ್ಚಿ ಅದರ ಸ್ಪೇರ್ ಪಾರ್ಟ್ ಗಳನ್ನು ಲಾರಿಯಲ್ಲಿ ಹೇರಿಕೊಂಡು ಬಂದೆವು. ಇಲ್ಲಿ ಬಂದು ಫಿಟ್ ಮಾಡಿದೆವು. ಹೇಗಿದೆ ಸಾರ್ ಎಂದು ಕೇಳಿದರು' ಎಂದರು. ಬಿನ್ನಹಕ್ಕೆ ಬಾಯಿ ಎಲ್ಲಿದೆ ಸ್ವಾಮಿ, ನಾವೇನು ಹೇಳಿಯೇವು? ಜೀವನವೆಲ್ಲಾ ಬಿಎಂಟೀಸಿ ಬಸ್ಸಿನಲ್ಲಿ ಅಡ್ಡಾಡಿದ್ದ ನಾನು ಡಿರಿಜಿಬಲ್ ಏರ್ ಷಿಪ್ ಬಗ್ಗೆ ಏನನ್ನಬಹುದು? ಎಲ್ಲಿಯ ಮಹಾವಿಷ್ಣು, ಎಲ್ಲಿಯ ನಾರದ ಮುನಿ?
ಅನರೀಚೆಬಲ್ ಡಿರಿಜಿಬಲ್
ನಾವು ಇಲ್ಲಿ ಯಾಕೆ ಇರುತ್ತೇವೆ ಎನ್ನುತ್ತೀರಾ? ಕೆಳಗಡೆ ಆ ಬೆಂಗಳೂರಿನಲ್ಲಿ ಬರೀ ಟ್ರಾಫಿಕ್ ಜಾಮ್ ಸಾರ್, ಕಾರ್ ತೊಗೊಂಡು ಹೊಗೋಕೇ ಆಗಲ್ಲ. ಅಲ್ಲೀಗ ದಿನಕ್ಕೆ ೨೦ ರಾಸ್ತಾ ರೋಕೊ, ಸಂಪು, ಹರತಾಲ್ ನಡೆಯುತ್ತೆ. ಅದರಲ್ಲಿ ಅರ್ಧ ನಮ್ಮ ಪಾರ್ಟಿಯವರವೇ ಇರುತ್ತೆ. ಹೀಗಾಗಿ ಯಾರಿಗೂ ಏನೂ ಅನ್ನಕ್ಕೆ ಬರಲ್ಲ. ಅದಕ್ಕೇ ಈ ವ್ಯವಸ್ಥೆ.
ಇನ್ನೊಂದು ಮಾತು ಅಂದರೆ, ಇಲ್ಲಿ ಆ ಕಾಂಗ್ರೆಸ್ ನವರ ಪಾದಯಾತ್ರೆಯ ಭಯವಿಲ್ಲ. ಮತದಾರರ ಗೊಂದಲವಿಲ್ಲ. ದಿನಾ ಬೆಳಿಗ್ಗೆ ಪೇಪರ್ ಓದಿ ಬೇಜಾರಾಗಬೇಕಿಲ್ಲ. ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳ ಬಗ್ಗೆ ದೂರು ಹೇಳಲು ಯಾರೋ ಫೋನ್ ಮಾಡುತ್ತಾರೆ ಎನ್ನುವ ಟೆನ್ಷನ್ ಇಲ್ಲ. ಬಂದರೂ ನಾನೇ ಹೆಣ್ಣು ಧ್ವನಿ ಮಾಡಿ ‘ದಿಸ್ ಪರಸನ್ ಈಸ್ ಅನರೀಚೆಬಲ್' ಅಂತ ಹೇಳಿಬಿಡುತ್ತೇನೆ ಅಂದರು.
ಸಿಲ್ವರ್ ಲೈನಿಂಗ್
ಬೆಳ್ಳಿಯ ತಾಟಿನಲ್ಲಿ ನಮಗೆಲ್ಲ ತಿಂಡಿ ನೀಡಲಾಯಿತು. ಯಾರಾದರೂ ಕದ್ದು ಬಿಟ್ಟಾರು ಎಂದು ಆ ಪ್ಲೇಟುಗಳ ಮೇಲೆ ‘ಶ್ರೀರಾಮುಲು ಅವರ ವಿಮಾನದಿಂದ ಕದ್ದು ತಂದಿದ್ದು' ಅಂತ ಕೊರೆಸಲಾಗಿತ್ತು. ಇರಲಿ ಅಂತ ಅವೆಲ್ಲಕ್ಕೂ ಬಿಗ್ ಬಜಾರ್ ನಲ್ಲಿ ತಗಲಿಸಿರುವಂತೆ ಒಂದು ಮೈಕ್ರೋಚಿಪ್ ಅಂಟಿಸಲಾಗಿತ್ತು.
ಧರ್ಮಸಂಗಮ ಹಾಗು ತಿಥಿ ಊಟ
"ಅಂದಹಾಗೆ ನಿಮ್ಮ ಕನಸಿನಲ್ಲಿ ಕರುಣಾಕರ ರೆಡ್ಡಿ ಅವರು ಬಂದಿದ್ದರಂತಲ್ಲ. ನೀವೆಷ್ಟು ಪುಣ್ಯವಂತರು? ಬನ್ನಿ, ಬನ್ನಿ" ಅಂತ ನನ್ನನ್ನು ಹತ್ತಿರ ಎಳೆದುಕೊಂಡರು.
"ಆದರೆ ನೀವು ಅದರ ಬಗ್ಗೆ ಬರೆದಿದ್ದು ಅಷ್ಟು ಸರಿ ಇರಲಿಲ್ಲ. ನಿಜ ಹೇಳಬೇಕೆಂದರೆ ಅವರು ರಾಮಾಯಣ ಮಹಾಭಾರತ ಕತೆ ಅಷ್ಟಾಗಿ ಹೇಳುವುದಿಲ್ಲ. ಅವರು ಭಗವದ್ಗೀತೆ, ಬೈಬಲ್ ಹಾಗು ಕುರಾನ್ ಬಗ್ಗೆ ತುಂಬ ಒಳ್ಳೆ ಪ್ರವಚನ ನೀಡುತ್ತಾರೆ. ನೀವು ಅದನ್ನು ಕೇಳಿ ಅದರ ಬಗ್ಗೆ ಬರೆಯಬೇಕು ಅಂತ ಆದೇಶ ಮಾಡಿದರು. ಹಾಗೇನಾದರೂ ಆಗಿ ಅವರು ಕನ್ ಫ್ಯೂಸ್ ಪ್ರವಚನ ಮಾಡಿ, ನಾನು ಅದನ್ನು ವರದಿ ಮಾಡಿದರೆ ಒಂದು ವರ್ಷದ ನಂತರ ಈ ಪತ್ರಕರ್ತನ ಪುಣ್ಯತಿಥಿ ಕಾರ್ಯಕ್ರಮ ಆದೀತು. ಅದರಲ್ಲಿ ಮತ್ತೆ ರೆಡ್ಡಿಗಾರು ಅದೇ ಪ್ರವಚನ ಮಾಡಿಯಾರು, ಅದನ್ನು ಮತ್ತೆ ನನ್ನಂತಹ ಕೆಲವು ದುರದೃಷ್ಟಕರ ಪತ್ರಕರ್ತರು ವರದಿ ಮಾಡಬೇಕಾದೀತು ಎಂದೆನ್ನಿಸಿ ಮೈ ಜುಮ್ಮೆನಿಸಿತು.
ಮೋಡದ ಮೇಲಿನ ಮಳೆ
ಮಾತಾಡುತ್ತ ಮಾತಾಡುತ್ತ ನಮ್ಮ ಮಾತು ಹವಾಮಾನದ ಕಡೆ ಹೊರಳಿತು. ‘ಕರ್ನಾಟಕದಲ್ಲಿ ಮಳೆ ಇದೆಯಾ' ಅಂತ ನಮ್ಮ ಟೀಮಿನವರೊಬ್ಬರು ಕೇಳಿದರು. ನಾವು ಮೋಡಗಳಿಗಿಂತ ಮೇಲೆ ಇರುತ್ತೇವೆ ನೋಡಿ, ನಮಗೆ ಗೊತ್ತಾಗೋದೇ ಇಲ್ಲ ಎಂದರು ನಾಯಕರು. ಅದಕ್ಕಿಂತ ಒಳ್ಳೆಯ ಉತ್ತರ ಇರಬಹುದು ಅಂತ ನನಗೆ ಅನ್ನಿಸಲಿಲ್ಲ.
ಪರಬೊಮ್ಮ ನಕ್ಕಾಗ
ಇನ್ನು ನಮ್ಮ ಸಿಎನ್ ಎನ್ ದಂಡನಾಯಕಿ ಒಂದು ಗಂಭೀರವಾದ ಪ್ರಶ್ನೆ ಕೇಳುತ್ತೇನೆ. ನಿಮಗೆ ಸರಿ ಎನ್ನಿಸಿದರೆ ಉತ್ತರ ಕೊಡಬಹುದು ಎಂದರು. ಸಚಿವರ ಪರಿಚಾರಿಕರೆಲ್ಲ ಗಂಭೀರವಾಗಿ ಕೂತರು. ಪೆನ್ನು ಪ್ಯಾಡು ಸರಿಮಾಡಿಕೊಂಡರು.
ಅಲ್ಲ ನೀವು ಈ ಬಲಪಂಥೀಯ ಪಕ್ಷದಲ್ಲಿ ಇದ್ದೀರಲ್ಲಾ, ನಿಮಗೆ ಈ ಸಿದ್ಧಾಂತಕ್ಕೆ ಅಂಟಿಕೊಂಡಿರುವುದು ಸರಿ ಎನ್ನಿಸುತ್ತದಾ ಅಂತ ಆಯಮ್ಮ ಕೇಳುವುದಕ್ಕೂ ಸಚಿವರು ಜೋರಾಗಿ ನಕ್ಕರು. ಐದು ನಿಮಷ ನಗುತ್ತಲೇ ಇದ್ದರು. ಅವರ ನಗು ಎಷ್ಟು ಜೋರಾಗಿತ್ತು ಎಂದರೆ ನೆಲದ ಮೇಲಿನ ಹುಲು ಮಾನವರಿಗೂ ಕೇಳಿರಬಹುದು. ಚಾಮರಾಜಪೇಟೆಯ ಹಳೇ ಮನೆಗಳಲ್ಲಿರುವ ಮುದುಕರಿಗೆ ಸಾಕ್ಷಾತ್ ಪರಬ್ರಹ್ಮನೇ ನಕ್ಕ ಅಂತ ಅನ್ನಿಸಿರಬಹುದು. ಬನಶಂಕರಿಯ ಗಲ್ಲಿಗಳಲ್ಲಿ ಮೂರು ಇಟ್ಟಿಗೆ ಇಟ್ಟು ಕ್ರಿಕೆಟ್ ಆಡುತ್ತಿರುವ ಪಡ್ಡೆ ಹೈಕಳುಗಳು ಗುಡುಗು ಸಿಡಿಲು ಜೋರಾಗಿದೆ. ಇನ್ನೇನು ಮಳೆ ಆರಂಭವಾಗಬಹುದು ಎನ್ನಿಸಿ ಒಳಗೆ ಓಡಿಹೋಗಿರಬಹುದು.
ಕೊನೆಗೆ ನಕ್ಕೂ ನಕ್ಕೂ ಅವರ ಕಣ್ಣಲ್ಲಿ ನೀರು ಬಂತು. ನೀರು ಕುಡಿದು ಮಾತು ಆರಂಭಿಸಿದರು. ಅಲ್ಲ ಮೇಡಂ, ಇದನ್ನು ನೀವು ಗಂಭೀರ ಪ್ರಶ್ನೆ ಎನ್ನುತ್ತೀರಾ. ಇದು ಪ್ರಶ್ನೆನೇ ಅಲ್ಲ. ಇನ್ನು ಗಾಂಭೀರ್ಯ ಎಲ್ಲಿಂದ ಬಂತು ಅಂತ ಅಂದರು. ಅವಳಿಗೆ ತಿಳಿಯಲಿಲ್ಲ. ನನ್ನ ಮುಖ ನೋಡಿದಳು. ನನಗೇ ತಿಳಿದಿಲ್ಲವಾದ್ದರಿಂದ ನಾನು ಅವಳಿಗೆ ಏನು ಹೇಳಲಿ? ಹೀಗಾಗಿ ನಾನು ನಾಯಕರ ಮುಖ ನೋಡಿದೆ.
ಅಮೃತಕ್ಕೇರುವ ಬಡವ
ನೋಡಿ ನೀವು ನಾವು ಬಲಪಂಥೀಯರು ಎನ್ನುತ್ತೀರಿ. ಇದರಲ್ಲಿ ಏನು ತಪ್ಪು? ನಮ್ಮ ಜನ ಏನು ಕೇಳುತ್ತಾರೆ? ಊಟ, ನೀರು, ವಾಸದ ಮನೆ, ಕ್ಲೀನ್ ಚರಂಡಿ, ಕರೆಂಟು ಇತ್ಯಾದಿ. ಇವೆಲ್ಲ ಲೌಕಿಕ ವಿಷಯಗಳು. ಇವೆಲ್ಲಾ ಯಾರಿಗೆ ಬೇಕು ಹೇಳಿ? ದಾಸರು ಹೇಳಿಲ್ಲವೇ, ಇಲ್ಲಿರುವುದು ಸುಮ್ಮನೇ, ಅಲ್ಲಿರುವುದು ನಮ್ಮನೆ ಅಂತ, ಹೀಗಾಗಿ ನಾವೆಲ್ಲ ಜನರಿಗೆ ಈ ಲೌಕಿಕ ಬದುಕಿನ ಸಂಕಷ್ಟಗಳಿಂದ ಪಾರಾಗುವ ಒಂದು ಉತ್ತಮ ದಾರಿ ಸೂಚಿಸುತ್ತೇವೆ. ಅದೇನೆಂದರೆ, ಅಯೋಧ್ಯೆಯಿಂದ ಹಿಡಿದು ರಾಮ ಸೇತುವರೆಗೂ ರಸ್ತೆ ಬದಿಯಲ್ಲೆಲ್ಲ ಒಂದೊಂದು ದೇವಸ್ಥಾನ ಕಟ್ಟಿಸುವುದು. ಇದು ಅವರ ಮೋಕ್ಷದ ಮಾರ್ಗ ಅಲ್ಲವೇ? ಅವರಿಗೆ ಇನ್ನೂ ಹತ್ತಿರದ ಮಾರ್ಗ ಬೇಕು ಎಂದಾದರೆ ಸರಕಾರಿ ಆಸ್ಪತ್ರೆ ಕಟ್ಟಿಸುವುದು. ಇದೂ ಬೇಡವೆಂದರೆ ಮಲ್ಟಿ ಫ್ಲೋರೀಡ್ ಸ್ಮಶಾನ ಕಟ್ಟಿಸುವುದು. ಇದು ಮೇಡಂ ನಿಜವಾದ ಬಲ ಪಂಥ. ನಿಮಗೆ ಗೊತ್ತಿಲ್ಲ, ಅಂದರು. ಮತ್ತೆ ನಕ್ಕರು. ನನಗೆ ಗೊತ್ತಿರಲಾರದ್ದು ಬಹಳ ಇದೆ ಎಂದು ಅವಳಿಗೆ ಅರ್ಥವಾಗುತ್ತಿದ್ದಂತೆಯೇ ಅವಳೂ ನಕ್ಕಳು.
ಸ್ಪೆಷಲ್ ಪೊಲಿಟಿಕಲ್ ಝೋನ್
ನಮ್ಮ ವೃತ್ತಿ ಆಂಧ್ರದಲ್ಲಾದರೆ ನಮ್ಮ ಪ್ರವೃತ್ತಿ ಕರ್ನಾಟಕದಲ್ಲಿ. ಇಲ್ಲಿ ನಾವು ಬಲಪಂಥೀಯರು ಇರಬಹುದು. ಆದರೆ ಅಲ್ಲಿ? ಅಲ್ಲಿ ನಾವು ಯಾರು, ಏನು ಎನ್ನುವುದನ್ನು ಚಂದ್ರಬಾಬು ನಾಯ್ಡು ಅವರನ್ನು ಕೇಳಿ. ಅಲ್ಲರೀ ನಾವು ನಿಜವಾದ ಬಲಪಂಥೀಯರಾಗಿದ್ದರೆ ನಮ್ಮ ಗಣಿ ಮಣ್ಣನ್ನು ನಾವು ಪಾಕಿಸ್ತಾನಕ್ಕೆ ಕಳಿಸುತ್ತಿದ್ದೆವಾ? ಹೋಗಲಿ ನಾವು ಈ ಸಿದ್ಧಾಂತದವರು ಅಂತ ಅಲ್ಲಿನವರಿಗೆ ಖಾತ್ರಿಯಾಗಿದ್ದರೆ ಅವರು ಅದನ್ನು ಖರೀದಿ ಮಾಡುತ್ತಿದ್ದರಾ? ಅಲ್ಲರೀ ನಮ್ಮ ವಾಜಪೇಯಿ ಲಾಹೋರಿಗೆ ಬರೀ ಬಸ್ ಬಿಟ್ಟರು. ನಾವು ಮನಸು ಮಾಡಿದರೆ ಬಳ್ಳಾರಿಯಿಂದ ಡೈರೆಕ್ಟ್ ಒಂದು ಗೂಡ್ಸ್ ರೈಲೇ ಬಿಟ್ಟು ಬಿಡುತ್ತೇವೆ.
ಪಂಟರುಗಳ ಪಂಥ
ನಿಜ ಹೇಳಬೇಕೆಂದರೆ, ನಮಗೆ ಬಲ, ಎಡ ಅಂತೇನೂ ಇಲ್ಲ. ಇದೆಲ್ಲ ಒಂದು ಪಂಥ ಅಷ್ಟೇ. ನಮ್ಮ ಜೀವನವೇ ಒಂದು ಪಂಥ. ನೀವೂ ಒಂದು ಫೈನಾನ್ಸ್ ಕಂಪನಿ ನಡೆಸಿ ನೋಡೋಣ ಅಂತ ನಮ್ಮ ಚೇರ್ಮನ್ ಜನಾರ್ಧನ ರೆಡ್ಡಿ ಅವರಿಗೆ ಯಾರೋ ಪಂಥ ಒಡ್ಡಿದರು. ಅವರು ಎನ್ನೋಬಲ್ ಇಂಡಿಯಾ ಶುರು ಮಾಡಿದರು. ನೀವೂ ಗಣಿ ಲೈಸನ್ಸ್ ತೊಗೊಳ್ಳಿ ನೋಡೋಣ ಅಂತ ಯಾರೋ ನಮಗೆ ಪಂಥ ಹಾಕಿದರು, ನಾವು ತೊಗೊಂಡ್ವಿ. ನಮ್ ಥರಾ ರಾಜಕೀಯ ಮಾಡಿ ನೋಡೋಣ ಅಂತ ದಿವಾಕರ್ ಬಾಬು ಪಂಥ ಹಾಕಿದರು, ನಾವು ಅವರಿಗಿಂತ ಚೆನ್ನಾಗಿ ಮಾಡಿ ತೋರಿಸಿದೆವು.
ಇನ್ನು ಇಷ್ಟು ದಿನ ಬರೀ ಬಲಗಡೆ ರಾಜಕೀಯ ಮಾಡಿದಿರಿ, ಈ ಕಡೆ ಬನ್ನಿ ನೋಡೋಣ ಅಂತ ಯಾರಾದರೂ ಪಂಥ ಹಾಕಿದರೆ ನಾವು ಆ ಕಡೆ ಹೋಗ್ತೇವೆ. ಎಡಗೈಗೂ ಬಲಗೈಗೂ ಎಷ್ಟು ದೂರ ಹೇಳಿ, ಕೊನೆಗೂ ಡಿಸೈಡ್ ಮಾಡೋದು ತಲೇನೇ ತಾನೆ?
ನಮಗೆ ಸಿದ್ಧಾಂತವೇ ಇಲ್ಲ. ನಮಗಿರುವುದೆಲ್ಲ ಒಂದೇ ಸಿದ್ಧಾಂತ. ಜನರಿಗೆ ಒಳ್ಳೆಯದಾಗಬೇಕೂಂತ. ಆ ಜನ ನಮ್ಮವರಾಗಿದ್ದಷ್ಟೂ ಒಳ್ಳೆಯದು. ಇದೆಲ್ಲ ಸಾಧ್ಯವಾಗಲು ಮೊದಲು ನಾವು ಆರಾಮ ಇರಬೇಡವೇ? ಹಾಹಾಹಾ ಅಂತ ಇಂಟರನೆಟ್ ಸ್ಮೈಲಿಯ ಥರ ನಕ್ಕರು.
ನಮ್ಮಾಕೆಗೆ ಇದು ಪೂರ್ತಿ ಕನ್ವಿನ್ಸ್ ಆಗಲಿಲ್ಲ. ಅವಳು ಸ್ವಲ್ಪ ಬಿಡಿಸಿ ಹೇಳಿ ಅಂತ ಅಂದಳು. ಅವರು ಹೇಳಲು ರೆಡಿಯಾದರು. ನಾನು ಓಡಲು ರೆಡಿಯಾದೆ.
ಸಿದ್ಧಾಂತ ಸಂಗಮ ಅಥವಾ ಸಂಪೂರ್ಣ ಸಂಪಾದನೆ
ಹೇಗೂ ಶ್ರಾವಣ ಮಾಸದಲ್ಲಿ ಬಂದಿದ್ದೀರಿ. ನಿಮಗೊಂದು ಸಣ್ಣ ಪ್ರವಚನ ಕೇಳಿಸುತ್ತೇನೆ ಅಂದರು. ಶಾಲು ಸರಿಮಾಡಿಕೊಂಡು ಕುರ್ಚಿಯಲ್ಲಿ ಸರಿಯಾಗಿ ಕುಳಿತುಕೊಂಡರು. ರೆಡ್ಡಿ ಅವರ ರಾಂಭಾರತ ಕೇಳಿದ್ದ ನಾನು ಇದನ್ನೆಲ್ಲಿ ಕೇಳಲಿ ಅಂತ ಹೆದರಿ ಓಡಿ ಹೋಗಲು ಜಾಗ ಹುಡುಕಿದೆ. ಆದರೆ ಅಲ್ಲೆಲ್ಲಿದೆ ಜಾಗ? ಮೋಡಗಳ ಮೇಲೇನು ಫುಟ್ ಪಾತ್ ಇದೆಯಾ? ಸುಮ್ಮನೆ ಮೂಲೆಯಲ್ಲಿ ಕೂತೆ.
ರಂಗ ಪಂಚಮಿ
ನೋಡಿ ಮೇಡಂ. ನಾವು ಕರ್ನಾಟಕದಲ್ಲಿದ್ದೇವೆ, ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಈ ಪಕ್ಷದಲ್ಲಿ ಇದ್ದೇವೆ. ನಾವು ಕೇರಳ, ಪಶ್ಚಿಮ ಬಂಗಾಳ ಅಥವಾ ಮಣಿಪುರದಲ್ಲಿ ಇದ್ದಿದ್ದರೆ ಅಧಿಕಾರ ಎಲ್ಲಿ ಇದೆಯೋ ಅಲ್ಲಿ ಇರುತ್ತಿದ್ದೆವು. ಸಿಂಪಲ್. ನಮ್ಮ ಕೇಸರಿ ಪೈಜಾಮ್ ಜುಬ್ಬಾಗಳನ್ನು ಒಂದು ಸಾರಿ ಹೋಳಿ ಹುಣ್ಣಿಮೆಗೆ ಹಾಕಿಕೊಂಡರೆ ಅವು ಕೆಂಪಾಗುತ್ತವೆ. ಇಲ್ಲಾ ವಿಂಡ್ ಚೀಟರ್ ಗಳ ಥರ ಡಬಲ್ ಕಲರ್ ಇರುವ ಜಾಕೆಟ್ ಹೊಲಿಸುವುದು. ಸಮಯಕ್ಕೆ ತಕ್ಕಂತೆ ಹಾಕಿಕೊಳ್ಳುವುದು. ಆ ಹೊತ್ತಿಗೆ ಯಾವ ಬಣ್ಣದ ಜಾಕೇಟು ಹಾಕಿಕೊಳ್ಳುತ್ತೇವೊ ಅದಕ್ಕೆ ಸಂಬಂಧ ಪಟ್ಟ ಭಾಷಣ ಮಾಡುವುದು. ಅದೇನು ಕಷ್ಟವೇ?
ಕಾರ್ಮಿಕ ಕಲ್ಯಾಣ
ಕಾರ್ಮಿಕರಿಗೆ ಕೆಲಸ ಕೊಡಬೇಕು ಅಂತ ಯಾರಾದರೂ ಗಲಾಟೆ ಮಾಡಿದರೆ, ನಮ್ಮ ಜೆಸಿಬಿಗಳನ್ನೆಲ್ಲ ತೆಗೆದು ಕೂಲಿಯವರಿಂದ ಭೂಮಿ ಅಗೆಸುತ್ತಿದ್ದೆವು. ಅಷ್ಟೇ. ನಾವು ಈಗಾಗಲೇ ವರ್ಷಕ್ಕೆ ಸಾವಿರಾರು ಉಚಿತ ಮದುವೆ ಮಾಡಿಸುತ್ತೇವೆ. ಅಲ್ಲಿ ಕಾರ್ಮಿಕರ ಮದುವೆ ಮಾಡಿಸುತ್ತಿದ್ದೆವು. ಅದೇ ಕಾರ್ಮಿಕರ ಕಲ್ಯಾಣ ಅಲ್ಲವೇ, ಅಂದರು. ನನಗೂ ಹೌದಲ್ಲವೇ ಎನ್ನಿಸತೊಡಗಿತ್ತು.
ಸಿದ್ಧಾಂತಕ್ಕೂ ಪೇಟೆಂಟೇ
ಕಾರ್ಮಿಕರು ದೊರೆಗಳಾಗುವುದು ಕೆಲ ಎಡಪಂಥೀಯ ಚಿಂತಕರ ಕನಸು. ಅದೇನು ಬರೀ ಕನಸೇ? ಸ್ವಾಮಿ, ನಾವೇನು ಟಾಟಾ ಬಿರ್ಲಾಗಳ ಮಕ್ಕಳಾ, ಹತ್ತು ವರ್ಷಗಳ ಹಿಂದೆ ನಾವು ಸೈಕಲ್ ಮೇಲೆ ಓಡಾಡುತ್ತಿದ್ದೆವು. ಬೇರೆಯವರ ಕೈಯಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ನಾವೇ ಬೇರೆಯವರಿಗೆ ಕೆಲಸ ಕೊಡುವಂತೆ ಆಗಿಲ್ಲವೇ? ಇದು ಕಾರ್ಮಿಕರ ಸಬಲೀಕರಣ ಅಲ್ಲವೇ? ಇದಕ್ಕಾಗಿ ರಾಜ್ಯದ ಎಲ್ಲ ಕಾರ್ಮಿಕರಿಗೆ ಗಣಿ ಪರವಾನಗಿ ನೀಡಿಬಿಟ್ಟರೆ ಆಯಿತು. ಅಲ್ಲಿ ಇಲ್ಲಿ ಸ್ವಲ್ಪ ಕಾಡು ಕಡಿಮೆ ಆದರೆ ಏನಾಗುವುದಿದೆ? ನಾಡು ಮುಖ್ಯವೇ ಹೊರತು ಕಾಡಲ್ಲ. ಕಾರ್ಮಿಕರು ಮುಖ್ಯವೇ ಹೊರತು ಕಂಪನಿಯಲ್ಲ. ಆಡಳಿತ ಮುಖ್ಯವೇ ಹೊರತು ಚುನಾವಣೆಯಲ್ಲ. ಪಕ್ಷ ಮುಖ್ಯವೇ ಹೊರತು ಸರಕಾರವಲ್ಲ. ಕಾರ್ಮೇಡ್ ಗಳು ಮುಖ್ಯ ಹೊರತು ಮತದಾರರಲ್ಲ. ಪಕ್ಷದ ಕಚೇರಿ ಮುಖ್ಯ ಹೊರತು ವಿಧಾನಸೌಧವಲ್ಲ. ಇದೆಲ್ಲ ನಮಗೂ ಗೊತ್ತಿದೆ. ಈ ಜ್ಞಾನವೇನು ಬರೀ ಕಾರ್ಮೇಡ್ ಗಳ ಸ್ವತ್ತಾ?
ಕಾರ್ಲ್ ಎಷ್ಟು ಮಾರ್ಕ್ಸ್ ತೊಗೊಂಡಿದ್ದ?
ನೋಡಿ, ಕಾರ್ಲ್ ಮಾರ್ಕ್ಸ್ ಏನು ಹೇಳಿದ್ದಾರೆ, ‘ವರ್ಕರ್ಸ್ ಆಫ್ ದಿ ವರ್ಲ್ಡ್ ಯುನೈಟ್' ಅಂತ. ನಾವು ಅದನ್ನು ಸ್ವಲ್ಪ ಬದಲಾಯಿಸಿ ‘ಪಾರ್ಟಿ ವರ್ಕರ್ಸ್ ಆಫ್ ದಿ ವರ್ಲ್ಡ್ ಯುನೈಟ್' ಅಂತ ಮಾಡಿದ್ದೇವೆ. ಕೇವಲ ಒಂದು ಶಬ್ದ ಕಮ್ಮಿ. ನಮಗೆ ಎಷ್ಟು ಮಾರ್ಕ್ಸ್ ಬಂದಂತಾಯಿತು? ನಮಗಿಂತ ಕಮ್ಮಿ ಮಾರ್ಕ್ಸ್ ತೊಗೊಂಡವರೆಷ್ಟು ಜನ ಮಾರ್ಕ್ಸ್ ಅವರ ಪಕ್ಷದಲ್ಲಿ ಇದ್ದಾರೆ ಅಂತ ತೋರಿಸಲಾ ನಾನು?
ಬದಲಾವಣೆಯೇ ಬಳ್ಳಾರಿಯ ನಿಯಮ
ಮಾರ್ಕ್ಸ್ ಅವರು ಇನ್ನೂ ಒಂದು ಮಾತು ಏನು ಹೇಳಿದ್ದಾರೆ? ‘ತತ್ವಜ್ಞಾನಿಗಳೆಲ್ಲ ಈ ಜಗತ್ತು ನಡೆಯುವುದು ಹೇಗೆ ಎಂದು ವಿವರಿಸಿ ಹೇಳಿದ್ದಾರೆ. ಆದರೆ ನಮಗೆ ಈಗ ಬೇಕಾಗಿರುವುದು ಅದನ್ನು ಬದಲಾಯಿಸುವುದು ಹೇಗೆ ಎನ್ನುವ ಬಗೆ'. ನಾವು ಅವರು ಹೇಳಿದ್ದನ್ನು ನಾವು ಚಾಚೂತಪ್ಪದೇ ಪಾಲಿಸುತ್ತಿದ್ದೇವೆ.
ನಮ್ಮನ್ನು ನೋಡಿ, ನಾವು ಎಲ್ಲವನ್ನೂ ಬದಲಾಯಿಸುತ್ತಿಲ್ಲವಾ? ಎಲೆಕ್ಷನ್ ವ್ಯವಸ್ಥೆ, ಆಡಳಿತ ವ್ಯವಸ್ಥೆ, ಪಕ್ಷ ನಡೆಸುವ ವ್ಯವಸ್ಥೆ, ಪ್ರಜೆ-ಪ್ರಭು ಸಂಬಂಧ, ಸಮ್ಮೇಳನ ನಡೆಸುವುದು, ಇವೆಲ್ಲವನ್ನೂ ನಾವು ಬೇರೆ ಯಾರೂ ಕಲ್ಪನೆ ಮಾಡಲಾರದಷ್ಟು ಬದಲಾಯಿಸಿದ್ದೇವೆ. ಈ ದೃಷ್ಟಿಯಿಂದ ನಾವು ಈಗಲೇ ಮಾರ್ಕ್ಸಿಸ್ಟುಗಳು. ನಾವು ಪಕ್ಷ ಬದಲಿಸುವುದೇ ಬೇಕಾಗಿಲ್ಲ. ಇದನ್ನು ಯಾರು ಹೇಳುತ್ತಾರೆ? ಪೇಪರ್ ನವರು, ಟೀವಿಯವರು, ಬರೀ ಗಣಿ, ಮಣ್ಣು ಧೂಳು ಅಂತ ಏನೇನೋ ಬರೆಯುತ್ತಾರೆ. ಇದನ್ನೆಲ್ಲಾ ಯಾಕೆ ಬರೆಯೋದಿಲ್ಲ? ಅಂತ ಒಮ್ಮಿಂದೊಮ್ಮೆಲೇ ಮ್ಲಾನವದನರಾಗಿ ಚಿಂತಾಕ್ರಾಂತರಾದರು.
ಒಂದು ಭಾಷೆ, ಎರಡು ಭಾವ
ಇನ್ನು ಬಲ ಎಡ, ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಿ ಅಂತ ನಮ್ಮ ತಾಯಿ ಸಾಹೇಬರು ಅಪ್ಪಣೆ ಕೊಡಿಸಿದರೆ, ನಾವು ಅದಕ್ಕೂ ರೆಡಿ. ಒಂದು ಸಾರಿ ಜರ್ಮನ್ ಕಲಿತುಬಿಟ್ಟರೆ ಸಾಕು, ಬಲ ಎಡ ಎರಡೂ ಸರಿಯಾಗಿ ಅರ್ಥವಾಗುತ್ತವೆ. ಕಾರ್ಲ್ ಮಾರ್ಕ್ಸ್ನ ದಾಸ್ ಕಾಪಿಟಲ್, ಹಿಟ್ಲರ್ ನ ಮೈನ್ ಕೆಂಫ್ ಎರಡೂ ಅದೇ ಭಾಷೆಯಲ್ಲಿ ಇಲ್ಲವೇ?
ಇಂದು ರಾತ್ರಿ ಯಾವ ಶೋ?
ಯಾವುದೇ ಸಿದ್ಧಾಂತವನ್ನು ನಾವು ಒಪ್ಪದೇ ಇದ್ದರೂ ಎರಡನ್ನೂ ಒಪ್ಪಿದಂತೆ ನಟಿಸುವುದು. ಅದೇನು ತಪ್ಪೇ? ನಮ್ಮ ರಾಜ್ಯದ ಹೆಸರೇ ಕರ್ ನಾಟಕ್ ಅಲ್ಲವೇ?
ಗಡ್ಡ ಬಿಟ್ಟವನಿಗೆ ಮಿಠಾಯಿ
ಯಾರಾದರೂ ಕಾಮ್ರೇಡ್ ಶಾಂತಿನಿಕೇತನದಲ್ಲಿ ಓದಿ ರವೀಂದ್ರನಾಥ ಟಾಗೋರ್ ಥರ ಗಡ್ಡ ಬಿಟ್ಟುಕೊಂಡು ನಮಗೆ ಬುದ್ಧಿ ಹೇಳಲು ಬಂದರು ಎಂದುಕೊಳ್ಳಿ. ಅವರನ್ನು ಚಾಮರಾಜಪೇಟೆ ಮೈದಾನದ ಬೌದ್ಧಿಕಕ್ಕೆ ಕರೆದುಕೊಂಡು ಹೋಗುವುದು. ಅಲ್ಲಿ ಎಲ್ಲರ ಭಾಷಣದ ನಂತರ ಅವರ ಭಾಷಣನ ಇಟ್ಟುಕೊಳ್ಳಬೇಕು. ಅದಾದ ನಂತರ ನಾವಾದರೂ ಬದಲಾಗಬೇಕು, ಅವರಾದರೂ ಬದಲಾಗಬೇಕು. ಸಣ್ಣ ವಿಷಯ.
ಅಣು -ರೇಣು ತೃಣ ಏನು ಕಷ್ಟ?
ಅಮೇರಿಕದ ಜತೆಗಿನ ಅಣು ಒಪ್ಪಂದ ವಿರೋಧ ಮಾಡಬೇಕೆ? ಮಾಡೋಣ. ಅದರಿಂದ ನಮ್ಮ ಮೈನ್ಸ್ ಬಿಸಿನೆಸ್ ಗೆ ಯಾವ ಸಂಬಂಧ ಇಲ್ಲವಷ್ಟೇ. ಹಾಗಾದರೆ ನಮಗೇನು ಸಂಬಂಧ? ಇನ್ನು ಕಬ್ಬಿಣದ ಅದಿರು ಹುಡುಕುತ್ತ ಹೋದಾಗ ಯುರೇನಿಯಂ ಸಿಕ್ಕಿತು ಅಂದುಕೊಳ್ಳಿ. ಆಗ ಅಣು ಒಪ್ಪಂದವನ್ನು ಒಪ್ಪಬೇಕು ಅಂತ ನಮ್ಮ ನಾಯಕರು ನಿರ್ಧಾರ ಮಾಡಿದರು ಎಂದುಕೊಳ್ಳಿ. ಅದನ್ನೂ ಮಾಡೋಣ. ನ್ಯೂಕ್ಲಿಯರ್ ಸಪ್ಲೆಯರ್ ಲಿಸ್ಟ್ ನಲ್ಲಿ ಬಳ್ಳಾರಿಯ ನಮ್ಮಂಥ ಸಣ್ಣ ಕೈಗಾರಿಕೋದ್ಯಮಿಗಳನ್ನು ಸೇರಿಸಬೇಕು ಅಂತ ಅದರಲ್ಲಿ ಕಂಡಿಷನ್ ಹಾಕಿದರಾಯಿತು. ಇಷ್ಟಾಗಿಯೂ ಅಣು-ಗಣಿ ಒಂದೇ ಅಕ್ಷರ ವ್ಯತ್ಯಾಸ ಸ್ವಾಮಿ.
ಕಿಮ್ ಜಾಂಗ್ ಇಲ್, ಇಲ್ ಯಾಕ್ ಇಲ್?
ಇನ್ನು ಖಾಸಗಿ ಆಸ್ತಿ, ಉದ್ದಿಮೆ, ಕಾರ್ಖಾನೆಗಳನ್ನೆಲ್ಲ ರಾಷ್ಟ್ರೀಕರಿಸಬೇಕು ಅಂತ ಯಾರಾದರೂ ಪುಕಾರು ತೆಗೆದರು ಅಂದುಕೊಳ್ಳಿ. ಮಾಡಿದರಾಯಿತು. ಆದರೆ ಸದಾ ಸರಕಾರದಲ್ಲಿ ನಾವೇ ಇರುವಂತೆ ನೋಡಿಕೊಂಡರಾಯಿತು. ಈಗ ಉತ್ತರ ಕೋರಿಯಾದ ಕಿಮ್ ಜಾಂಗ್ ಇಲ್ ಇಲ್ಲವೇ? ರಾಷ್ಟ್ರವೇ ಅವರದಿದ್ದಾಗ, ರಾಷ್ಟ್ರೀಕರಣದಿಂದೇನು ಭಯ?
ಡರೋಜಿ ಕರಡಿ ‘ಪರಂ'ಧಾಮ
ಇನ್ನು ಗೋಹತ್ಯೆ ನಿಷೇಧ ಕಾಯಿದೆ. ಜಾರಿಗೆ ಬರಬಹುದು. ಬರಲಿ. ಹಾಗೇನಾದರೂ ಆದರೆ, ನಾವು ಹುಲಿ, ಸಿಂಹ, ಕರಡಿ ತಿನ್ನಬಹುದು. ನಾವೆಲ್ಲ ಕಾಡನ್ನು ಅರ್ಥಪೂರ್ಣವಾಗಿ ಬಳಸಿಕೊಂಡಮೇಲೆ ಅಲ್ಲಿ ಉಳಿದಿದ್ದೇನು? ಕಾಡು ಪ್ರಾಣಿಗಳೆಲ್ಲ ಸಾಕು ಪ್ರಾಣಿಗಳಾಗುವುದಿಲ್ಲವೇ? ಅರಣ್ಯವೇ ಇಲ್ಲದಿದ್ದಾಗ ಅವನ್ನೆಲ್ಲ ಕೊಟ್ಟಿಗೆಗೆ ಕಟ್ಟುವುದೇ ತಾನೆ? ಕಾಡಿನಲ್ಲಿರುವ ಹುಲಿ ಕೊಲ್ಲಬಾರದು ಅಂತ ನಿಯಮ ಇದೆ. ಕೊಟ್ಟಿಗೆಯಲ್ಲಿರುವ ಹುಲಿ ತಿನ್ನಬಾರದು ಅಂತೇನೂ ಇಲ್ಲವಲ್ಲಾ?
ಎಡವಿದ ಬಲ
ಇನ್ನು ಪಶ್ಚಿಮ ಬಂಗಾಲದಂತೆ ಶಾಸನ ಸಭೆಗಿಂತ ಪಕ್ಷದ ವಿಲೇಜ್ ಕಮಿಟಿಯೇ ಹೆಚ್ಚು ಪಾವರ್ ಫುಲ್ ಆಗಬೇಕು. ಈಗ ಬಳ್ಳಾರಿಯಲ್ಲಿ ನಡೆಯುತ್ತಿರುವುದೇನು? ನಮ್ಮಲ್ಲಿಗೆ ಬಂದು ಯಾವ ಅಧಿಕಾರಿಯನ್ನಾದರೂ ಕೇಳಿ. ಅವರಿಗೆ ಕಾಲಕಾಲಕ್ಕೆ ಸಲಹೆ- ನಿರ್ದೇಶನ, ಕೆಟ್ಟ ಕಾಲಕ್ಕೆ ರಕ್ಷಣೆ ಕೊಡುವವರು ಯಾರು ಅಂತ. ವಿಧಾನಸೌಧದಲ್ಲಿರುವ ಹಿರಿಯ ಅಧಿಕಾರಿಗಳಲ್ಲ. ಪಕ್ಷದ ಕಚೇರಿಯಲ್ಲಿರುವ ಹಿರಿ-ಕಿರಿಯ ನಾಯಕರು. ಬಂಗಾಲದಲ್ಲಿರುವುದೂ ಇದೇ ವ್ಯವಸ್ಥೆ ತಾನೆ? ಇದಕ್ಕಿಂತ ಬಲವಾದ ಎಡಪಂಥೀಯ ವಾದ ಇರಬಹುದೆ?
ಬಲವಿಲ್ಲದ ಎಡ
ಇಷ್ಟಾಗಿ ಕೆಲವು ಕಾರ್ಯಕ್ರಮಗಳನ್ನು ಜೊತೆ ಜೊತೆಯಾಗಿಯೇ ತೆಗೆದುಕೊಳ್ಳಬಹುದು. ಉದಾಹರಣೆಗೆ ನಾಗಪುರದಲ್ಲಿ ಐಟಿಸಿ, ಓಟಿಸಿ ಕ್ಯಾಂಪ್ ಗಳಾದ ಮರುದಿನವೇ ಕೇಡರ್ ಕ್ಯಾಂಪ್ ಮಾಡಬಹುದು. ಅದೇ ಟೆಂಟು, ಅದೇ ಲಾಠಿ, ಅದೇ ಅಡುಗೆಯವರು, ಅದೇ ಮೈಕಿನವರು. ಮಾತು ಬೇರೆ, ಮಾತಾಡುವವರು ಬೇರೆ ಅಷ್ಟೇ. ನಮಗೇನೂ ಅಂಥ ವ್ಯತ್ಯಾಸವಾಗುವುದಿಲ್ಲ.
ಎರಡಕ್ಷರದಲ್ಲಿ ಅದೆಂಥ ಬಲ?
ಸರಕಾರ ಬಲವಿದ್ದರೇನು, ಎಡವಿದ್ದರೇನು? ಉದ್ದಿಮೆಗಳಿಗೆ ಜಮೀನು ಬೇಕು. ಬೇಡ ಅನ್ನಲು ರೈತರು ಯಾರು? ಅಲ್ಲಿನ ರೈತರು ಸಿಂಗೂರಿನಲ್ಲಿ ಗಲಾಟೆ ಮಾಡಿದರು. ನಮ್ಮವರು ಚಾಗನೂರಿನಲ್ಲಿ ಗಲಾಟೆ ಮಾಡಿದರು. ಮತ್ತೆ ಬರೀ ಎರಡಕ್ಷರದ ವ್ಯತ್ಯಾಸ. ಅದಕ್ಕೆ ಉತ್ತರವಾಗಿ ಮಾತ್ರ ಅವರು ಅಲ್ಲೇನು ಮಾಡಿದರೋ ಅದನ್ನೇ ನಾವು ಇಲ್ಲಿಯೂ ಮಾಡಿದೆವು. ಏನೂ ವ್ಯತ್ಯಾಸವಿಲ್ಲ.
ಏಟು ಹಾಗು ಓಟು
ಕಾರ್ಮಿಕರ ಸರಕಾರ ಕಾರ್ಮಿಕರ ಮಕ್ಕಳಿಗೆ ಕೇವಲ ಪ್ರಾಥಮಿಕ ಶಿಕ್ಷಣ ಒದಗಿಸಬೇಕು ಅಂತ ಯಾರಾದರೂ ಯುನಿವರ್ಸಿಟಿ ಬುದ್ಧಿವಂತರು ಕೂಗು ಹಾಕಿದರು ಅಂದುಕೊಳ್ಳಿ. ನಮ್ಮ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳನ್ನು ಬಂದ್ ಮಾಡಿ ಅಲ್ಲಿ ಒಂದನೇ ಈಯತ್ತೆ ತೆರೆಯಬೇಕು. ನಮ್ಮ ಹುಡುಗರನ್ನು ಹೆಚ್ಚಿಣ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಕಳಿಸಬೇಕು. ಒಂದೆರಡು ಏಟು ತಿನ್ನಬೇಕಾಗಬಹುದು. ತಿನ್ನಲಿ. ಪ್ರೈಮರಿ ಶಾಲೆಯಲ್ಲಿ ತಿನ್ನಬಹುದಾದಲ್ಲಿ ಇಂಜಿನಿಯರಿಂಗ್ ಓದುವಾಗ ತಿನ್ನಬಾರದೇ? ಅಷ್ಟಾಗಿಯೂ ಏಟು ತಿನ್ನುವುದನ್ನು ಕಲಿತ ಹುಡುಗರು ನಮಗೆ ರಾಜಕೀಯ ಹೋರಾಟಗಳಿಗೆ ಬೇಕು. ಕಾಮ್ರೇಡ್ ಗಳು ತಯಾರಾಗುವುದು ಎಂದರೆ ಏನು ಸುಲಭವೇ?
ಗರೀಬೋಂಕೊ ಹಟಾವೋ
ಇನ್ನು ರೇಷನ್ ವ್ಯವಸ್ಥೆಯನ್ನು ಕೇವಲ ಬಡವರಿಗಲ್ಲದೇ ಎಲ್ಲರಿಗೂ ವಿಸ್ತರಿಸಬೇಕು ಅನ್ನುವುದು ಎಡಪಂಥೀಯರ ಬಲವಾದ ವಾದ. ಈಗ ನಾವು ಆ ದಿಕ್ಕಿನಲ್ಲಿಯೇ ಹೋಗುತ್ತಿದ್ದೇವೆ. ನಮ್ಮ ಸರಕಾರ ನಡೆಯುತ್ತಿರುವ ರೀತಿ ನೋಡಿದರೆ ಇನ್ನು ಮೂರು ವರ್ಷಗಳಲ್ಲಿ ಅಬೊವ್ ಪಾವರ್ಟಿ ಲೈನ್ ಅಂತ ಯಾರೂ ಉಳಿಯುವುದಿಲ್ಲ. ಎಲ್ಲರೂ ಬಿಪಿಎಲ್ ಆಗಿ ಬಿಡ್ತಾರೆ. ಆಗ ತಾನಾಗಿಯೇ ಎಲ್ಲ ಕುಟುಂಬಗಳು ರೇಷನ್ ಪಡೆಯಬೇಕಾಗುತ್ತದೆ. ಶ್ರೀಮತಿ ಇಂದಿರಾಗಾಂಧಿ ಅವರು ಗರೀಬೀ ಹಟಾವೋ ಅಂತ ಹೇಳಿದ್ದರು. ನಾವು ಗರೀಬೋಂಕೊ ಹಟಾವೋ ಅಂತ ಹೇಳುತ್ತೇವೆ. ಅಷ್ಟೇ.
ಅಯೋಧ್ಯೆಯಲ್ಲಿ ಕಾರ್ಮಿಕ ಭವನ
ನೋಡಿ ಬಲ, ಎಡ, ಈ ಎರಡೂ ಸಿದ್ಧಾಂತಗಳು ಸಾಂಕೇತಿಕವಾಗಿ ಸಂಗಮವಾಗಬೇಕಾದರೆ ಅಯೋಧ್ಯೆಯಲ್ಲಿ ಕಾರ್ಮಿಕ ಭವನ ಆಗಬೇಕು ಅಷ್ಟೇ ಅಲ್ಲವೇ? ಅದೇನು ಮಹಾ ಬಿಡಿ. ರಾಮ ಮಂದಿರದ ಬದಲಿ ಕಾರ್ಮಿಕ ಭವನ. ಎರಡೂ ಬಿಲ್ಡಿಂಗ್ ಗಳೇ ತಾನೆ, ಅಷ್ಟೇನೂ ವ್ಯತ್ಯಾಸ ಇಲ್ಲ. ಆಗ ೧೯೯೦-೧೯೯೧ರಲ್ಲಿ ಒಬ್ಬೊಬ್ಬರಿಂದ ಒಂದು ರೂಪಾಯಿ ನಾಲ್ಕಾಣೆ ಸಂಗ್ರಹಿಸಿದ್ದೆವು, ಈಗ ಹಣದುಬ್ಬರ ಹೆಚ್ಚಾಗಿದೆ, ಎರಡು ರೂಪಾಯಿ ಎಂಟಾಣೆ ಸಂಗ್ರಹಿಸಿದರಾಯಿತು. ಸೇಮ್ ಡಿಫೆರೆನ್ಸ್. ಅಷ್ಟನ್ನೂ ಜನರಿಂದ ಕೊಡಲಿಕ್ಕೆ ಆಗೊದಿಲ್ಲ ಎಂದರೆ ನಮ್ಮ ಸ್ನೇಹಿತರಾದ ಜಗನ್ ಮೋಹನ್ ರೆಡ್ಡಿ ಅವರನ್ನು ಈ ಪ್ರಾಯೋಜಕರನ್ನಾಗಿ ಮಾಡಿದರಾಯಿತು. ಎಂದರು. ಅವರ ಹುಡುಗರು ಗೋರಿ ಕಟ್ಟುವುದರಲ್ಲಿ ನಿಷ್ಣಾತರು. ಅದು ಪಕ್ಷವಿರಲಿ, ಪಕ್ಷದ ಕಾರ್ಯಕರ್ತರಿರಲಿ ಅವರಿಗೆ ಎಲ್ಲ ಒಂದೆ.
ಕಟ್ಟುವುದು ಹಾಗೂ ಕೆಡವುವುದು ಎಂಬ ರಚನಾತ್ಮಕ ಕ್ರಿಯೆ
ಇನ್ನು ಈ ಮಹಾ ಕಾರ್ಯದ ಮೊದಲ ಹೆಜ್ಜೆಯಾಗಿ ಒಂದು ಬಿಲ್ಡಿಂಗ್ ಕೆಡವಬೇಕು. ಬೆಂಗಳೂರಿನ ವಿಧಾನಸೌಧವನ್ನೇ ಕೆಡವಿದರಾಯಿತು. ಆಡಳಿತ ಯಂತ್ರವೆಲ್ಲ ಬಳ್ಳಾರಿಗೆ ಬಂದಮೇಲೆ ಆ ಖಾಲಿ ಫ್ಯಾಕ್ಟರಿ ಕಟ್ಟಡದಿಂದೇನು ಫಲ? ಅದನ್ನು ಕೆಡವಿದರೇನು, ಇನ್ನಷ್ಟು ದೊಡ್ಡದಾಗಿ ಬೆಳೆಸಿದರೇನು? ಮೂವತ್ತೈದು ಮಂತ್ರಿಗಳಲ್ಲಿ ಒಂದು ಮೂರೂವರೆ ಜನ ಮಾತ್ರ ವಿಧಾನಸೌಧಕ್ಕೆ ದಿನವೂ ಹೋಗುತ್ತಾರೆ, ಉಳಿದವರೆಲ್ಲ ಆ ಕಡೆ ತಲೆ ಹಾಕಿ ಮಲಗುವುದಿಲ್ಲ. ಹೀಗಿದ್ದಾಗ ಆ ಕಲ್ಲಿನ ಕಟ್ಟಡ ಯಾವಾನಿಗೆ ಬೇಕು. ಬೇರೆ ಯಾರಿಗೂ ಬೇಡ. ಆದರೆ, ನಮಗೆ ಆ ಜಾಗ ಅವಶ್ಯವಾಗಿ ಬೇಕಾಗಿದೆ.
ಕಬ್ಬನ್ ಪಾರ್ಕಿಂಗ್
ನಮಗೆ ಹೇಗಿದ್ದರೂ ವಾರದಲ್ಲಿ ಮೂರು ದಿನ ಹೈಕೋರ್ಟ್ ನಲ್ಲಿ ಕೆಲಸ ಇರುತ್ತದೆ. ಆದರೆ ಅಂಬೇಡ್ಕರ್ ವೀಧಿಯಲ್ಲಿ ಎಲ್ಲಿಯೂ ಪಾರ್ಕಿಂಗ್ ಜಾಗ ಇಲ್ಲ. ನಾವು ನಾಲ್ಕು ಜನ, ನಮ್ಮ ಸೆಕ್ಯೂರಿಟಿಯವರು ನಲವತ್ತು-ನಲವತ್ತು ಜನ, ನಮ್ಮ ಹಿಂಬಾಲಕರು ನಾನೂರು ಜನ, ಹೆಲಿಕಾಪ್ಟರಿನಲ್ಲಿ ಬಂದು ಹೋಗಬೇಕೆಂದರೆ ಬಹಳ ಕಿರಿಕಿರಿಯಾಗುತ್ತದೆ. ಹೀಗಾಗಿ ಹೈಕೋರ್ಟ್ ಎದುರಿಗೆ ವಿಧಾನಸೌಧವೇ ಇಲ್ಲದಿದ್ದರೆ ನಮಗೆ ಅನುಕೂಲವಾಗುತ್ತದೆ. ಆಫ್ಟರಾಲ್ ಈ ಇಡೀ ವ್ಯವಸ್ಥೆಯೇ ನಮ್ಮ ಅನುಕೂಲಕ್ಕಾಗಿ ಇದೆ ತಾನೆ? ಇಲ್ಲದಿದ್ದರೂ ಮಾಡಿಕೊಳ್ಳಬೇಕು ಎನ್ನುವವನು ನಾನು.
ಸರಕಾರವನ್ನೇ ಔಟ್ ಸೋರ್ಸ್ ಮಾಡುವ ಸತ್ಯಂ ನಾರಾಯಣ ವೃತ
ವಿಧಾನಸೌಧವೇ ಇಲ್ಲದಿದ್ದರೆ ಸರಕಾರ ಹೇಗೆ ಎನ್ನುವ ಚಿಂತೆ ಬೇಡಿ. ರಾಜ್ಯದ ಆಡಳಿತವನ್ನೆಲ್ಲ ನಾವು ಒಂದು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗೆ ಕೊಡಬೇಕು ಅಂತ ಮಾಡಿದ್ದೇವೆ. ಅದು ನಮ್ಮ ಸತ್ಯಂ ರಾಜು ಅವರು ಆರಂಭಿಸಿದ್ದು. ಅವರು ಸುಳ್ಳಂ ಆದ ಮೇಲೆ ಅದನ್ನು ಬೇರೆ ಕಂಪನಿಯವರು ಖರೀದಿ ಮಾಡಿದರು. ಅವರೀಗ ಆಫ್ರಿಕಾ, ಸೌದಿ ಅರೇಬಿಯಾ, ಪಶ್ಚಿಮ ರಷಿಯಾಗಳಲ್ಲಿನ ಕೆಲವು ದೇಶಗಳನ್ನು ತುಂಬ ಚೆನ್ನಾಗಿ ಮ್ಯಾನೇಜ್ ಮಾಡುತ್ತಿದ್ದಾರೆ. ಅಲ್ಲಿ ಹೆಸರಿಗೆ ಮಾತ್ರ ರಾಷ್ಟ್ರಾಧ್ಯಕ್ಷ, ಪ್ರಧಾನಿ ಅಂತ ಕೆಲವರನ್ನು ಇಟ್ಟಿದ್ದಾರೆ. ಕೆಲಸ ಎಲ್ಲ ಇವರದೇ, ಆದರೂ ಅವರಿಗೆ ದಿನ ನಿತ್ಯದ ಆಡಳಿತದಲ್ಲೇನಾದರೂ ತೊಂದರೆ ಬಂದರೆ ಇರಲಿ ಅಂತ ಹೈದ್ರಾಬಾದ್, ನೊಯಿಡಾ, ಹೊಸೂರುಗಳಲ್ಲಿ ಕಾಲ್ ಸೆಂಟರ್ ಗಳನ್ನು ಸ್ಥಾಪಿಸಿದ್ದಾರೆ. ಆದರೆ ಆ ನನ್ನ ಮಕ್ಕಳು ಎಂತ ದಡ್ಡರು ಎಂದರೆ ಈ ಕಾಲ್ ಸೆಂಟರ್ ಗಳಿಗೆ ಫೋನ್ ಮಾಡುವುದನ್ನು ಬಿಟ್ಟು ೧೦೮ ಆಂಬುಲನ್ಸ್ ಗಳಿಗೆ ಫೋನ್ ಮಾಡುತ್ತಿರುತ್ತಾರೆ. ಇರಲಿ. ನಮ್ಮ ಕೆಲಸ ಆದರೆ ಸಾಕು ಬಿಡಿ. ಒಟ್ಟಿನಲ್ಲಿ ಈ ಎರಡೂ ಸಿದ್ಧಾಂತಗಳ ಸಂಗಮದಿಂದ ನಮಗೆ ಸಂಪೂರ್ಣ ಸಂಪಾದನೆ ಆಗಬೇಕು. ಅಷ್ಟೇ ಅಲ್ಲವೇ, ಆಗುತ್ತದೆ. ನೀವು ಅಂದುಕೊಂಡದ್ದಕ್ಕಿಂತ ಬೇಗ ಆಗುತ್ತದೆ ಅಂತ ಅಂದರು.
ಪತ್ರಿಕಾ ಕಚೇರಿಗಳಲ್ಲಿ ಮೂಲಭೂತ ಹಕ್ಕುಗಳ ದಮನ
ನನ್ನ ತಲೆ ತಿರುಗಿದಂತಾಗಿ, ಹೊಟ್ಟೆ ತೊಳಸಿದಂತಾಗಲು ಶುರುವಾಯಿತು. ಈ ಆಕಾಶದಲ್ಲಿ ೧೦೮ ಆಂಬುಲೆನ್ಸಿಗೆ ಎಲ್ಲಿಂದ ಫೋನ್ ಮಾಡಲಿ ಅಂತ ತಿಳಿಯದೇ ನಿಂತೆ. ತಲೆ ತಿರುಗಿದಂತಾಗಿ ಬಿದ್ದೆ.
ಎದ್ದಾಗ ಕಚೇರಿಯ ಕಂಪ್ಯೂಟರ್ ಎದುರು ಇದ್ದೆ. ‘ಏನ್ರೀ ಕಳೆದ ಸಾರಿ ಮನೆಯಲ್ಲಾದರೂ ಮಲಗಿದ್ದಿರಿ. ಈಗ ನೋಡಿದರೆ ಇಲ್ಲೇ ಮಲಗಿದ್ದೀರಿ. ಏನ್ರೀ ಇದು' ಅಂತ ಬಾಸ್ ಜೋರಾಗಿ ಕಿರುಚುತ್ತಿದ್ದರು. ನಾನು ಆ ಕಡೆ ನೋಡದೇ ಟಾಯ್ಲೆಟ್ಟಿಗೆ ಹೋದೆ. ಅಲ್ಲಿ ನೀರಿರಲಿಲ್ಲ. ಆದರೆ ಇದು ಏರ್ ಷಿಪ್ ಅಲ್ಲ ಅನ್ನುವುದು ನೆನಪಾಯಿತು. ಒತ್ತಿ ಬರುತ್ತಿರುವ ಭಾವನೆಗಳನ್ನು ದಮನ ಮಾಡುತ್ತಾ ಹೊರಬಂದೆ.
(ಮುಗಿಯಿತು)
ಹೃಷಿಕೇಶರ ಪಡಿಪಾಟಲುಗಳನ್ನು ಶುರುವಿನಿಂದಲೇ ಓದಲು ಇಲ್ಲಿ ಕ್ಲಿಕ್ ಮಾಡಿ
Print Close
Tuesday, February 15, 2011
Spoof on BJP government in Karnataka-1
ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ
By ಹೃಷಿಕೇಶ್ ಬಹದ್ದೂರ್ ದೇಸಾಯಿ
ಅಂದು ಮಧ್ಯಾಹ್ನ ನನ್ನ ಫೋನಿಗೆ ವಿದೇಶಿ ನಂಬರಿನಿಂದ ಫೋನ್ ಬಂತು. ಲಂಡನ್ನಿನಲ್ಲಿರುವ ನನ್ನ ಹೆಂಡತಿಯ ತಮ್ಮ ಫೋನ್ ಮಾಡಿರಬೇಕು ಅಂತ ಎತ್ತಿದೆ. ಆದರೆ ಫೋನ್ ಮಾಡಿದವರು ಬೇರೆ. ಸಹಕಾರಿ ಧುರೀಣ ಹಾಗೂ ಹಿರಿಯ ಮಿತ್ರ ಗುರುನಾಥ್ ಈಜಿಪ್ತ್ ನಿಂದ ಮಾತಾಡುತ್ತಿದ್ದರು.
ಪಿರಾಮಿಡ್ಡೀಕರಣ
``ಏನ್ ನ್ಯೂಸು ಸರ್ ನಮ್ಮ ಪಾರ್ಟಿ ಏನಂತದ? ಸರಕಾರ ಇರ್ತದೋ ಇಲ್ಲೋ?'' ಎಂದರು.
``ನೀವು ಈಜಿಪ್ತ್ ನಲ್ಲಿ ಇದ್ದೀರೋ ಇಲ್ಲೋ. ಅಲ್ಲಿಯೇ ಯಾವುದಾದರೂ ಪಿರಾಮಿಡ್ ನೋಡಲಿಕ್ಕೆ ಹೋದಾಗ ಯಾವುದಾದರೂ ಪಿರಾಮಿಡ್ ಖಾಲಿ ಇದ್ದರೆ ನಿಮ್ಮ ಪಕ್ಷಕ್ಕೊಂದು ಸಮಾಧಿ ಬುಕ್ ಮಾಡಿಬಂದು ಬಿಡ್ರಿ'' ಅಂತಂದೆ.
``ಹೌದು ಹೋಗಿದ್ವಿ. ಆದರೆ ಪಿರಾಮಿಡ್ ಯಾವುದೂ ಖಾಲಿ ಇದ್ದಂಗ ಕಾಣಲಿಲ್ಲ'' ಅಂದರು. ``ಅಯ್ಯೋ ಹಂಗಾರ ಅಯೋಧ್ಯಾನೋ, ಕಾಶ್ಮೀರಾನೋ ಎಲ್ಲೋ ಒಂದು ಕಡೆ ಸಮಾಧಿ ಹುಡುಕಬೇಕಾತು'' ಅಂತ ನಕ್ಕು ಸುಮ್ಮನಾದೆವು.
ಪ್ಲ್ಯಾಂಟರ್ ಗಳ ಸಮಾವೇಶ
ಆ ನಂತರ ಸ್ವಲ್ಪ ಹೊತ್ತಿಗೆ ಸ್ನೇಹಿತ ಶ್ರೀರಾಮುಲು ಅವರ ಪಿಎ ಅವರ ಫೋನ್ ಬಂತು. ಸಾಹೇಬರ ಪ್ರೆಸ್ ಮೀಟ್ ಇದೆ ಸಾರ್, ಬರಬೇಕಂತೆ ಅಂದರು. ನಾನು ಹೋದರೆ ಅಲ್ಲಿ ಪತ್ರಿಕಾಗೋಷ್ಠಿ ಇಲ್ಲ. ಏನಿಲ್ಲ. ಪ್ರೆಸ್ ಮೀಟ್ ಅಂದರೆ ಸುದ್ದಿಗೋಷ್ಠಿ ಅಲ್ಲ. ಸರ್, ಪ್ರೆಸ್ ನವರನ್ನು ಮೀಟ್ ಮಾಡೋದು, ಅಷ್ಟೇ, ಅಂದರು ಸಚಿವರು. ಅವರನ್ನು ಆವಾಗಾವಾಗ ಮೀಟು ಮಾಡುತ್ತಿದ್ದರೆ ಯಾವಾಗ್ಯಾವಾಗ ಏನೇನು ಸುದ್ದಿ ಮಾಡುತ್ತಿರಬೇಕು, ಅದಾಗದಿದ್ದರೆ ಏನೇನು ಸುದ್ದಿ ಪ್ಲ್ಯಾಂಟು ಮಾಡಬೇಕು ಅಂತ ಗೊತ್ತಾಗುತ್ತದೆ, ಅಂದರು. ಈ ಪ್ಲ್ಯಾಂಟೇಷನ್ ಕೆಲಸಕ್ಕಾಗಿಯೇ ಇವರು ಹಿರಿಯ ಪತ್ರಕರ್ತರನ್ನು ಸಲಹೆಗಾರರನ್ನಾಗಿ ಇಟ್ಟುಕೊಂಡಿರುವುದು. ಇಂಥ ದೊಡ್ಡ ಪ್ರ್ಯಾಂಟರುಗಳಿಗೆ ಇದೆಲ್ಲ ಸಹಜ ಅಂದುಕೊಂಡೆ.
ಸವ್ಯಸಾಚಿಯ ಚೆಸ್
ಒಳಗೆ ಜನಾರ್ಧನ ರೆಡ್ಡಿ ಅವರು ಚೆಸ್ ಬೋರ್ಡ್ ಮುಂದೆ ಧ್ಯಾನಾಸಕ್ತರಾಗಿ ಕೂತಿದ್ದಾರೆ. ಅವರ ಜತೆ ಚೆಸ್ ಆಡುತ್ತಿದ್ದವರು ಎದ್ದು ಹೊರಗೆ ಹೋಗಿದ್ದಾರೋ ಏನೋ? ಅದಕ್ಕೇ ಒಬ್ಬರೇ ಕೂತಿರಬಹುದು ಅಂತ ಅಂದುಕೊಂಡೆ. ನೀವು ಏನು ವಿಚಾರ ಮಾಡುತ್ತಿದ್ದೀರಿ ಅಂತ ಗೊತ್ತಾಯ್ತು. ಇವರು ಒಬ್ಬರೇ ಏನು ಮಾಡಾತ್ತ ಇದ್ದಾರೆ ಅಂದುಕೊಂಡಿರಿ ತಾನೇ ನೀವು? ಅಂದರು ಶ್ರೀರಾಮುಲು.
ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೆ
ನಮ್ಮ ಚೇರ್ಮನ್ನರು ತುಂಬ ಒಳ್ಳೇ ಚೆಸ್ ಪ್ಲೇಯರ್. ಅವರು ಎಷ್ಟು ಒಳ್ಳೆ ಆಟಗಾರರು ಅಂದರೆ ಅವರಿಗೆ ಇನ್ನೊಬ್ಬರ ಜತೆ ಚೆಸ್ ಆಡಲು ಸರಿ ಹೋಗೋದಿಲ್ಲ. ಅವರಿಗೆ ಹೀಗೇ ಸರಿ. ಅದಕ್ಕೇ ಯಾವಾಗಲೂ ಹಿಗೇನೇ ಆಡ್ತಾ ಇರ್ತಾರೆ. ಹೀಗಿದ್ದರೆ ಎರಡೂ ಕಡೆಯಿಂದ ಕಾಯಿಗಳನ್ನು ಇವರೇ ನಡೆಸಬಹುದಲ್ಲವೇ? ಒಮ್ಮೆ ಈ ಕಡೆಯಿಂದ ಮೂವ್ ಮಾಡುವುದು, ಇನ್ನೊಮ್ಮೆ ಆ ಕಡೆಯಿಂದ ಮೂವ್ ಮಾಡುವುದು. ಯಾವ ಟೈಮ್ ನಲ್ಲಿ ಯಾವ ಕಡೆಯಿಂದ ಗೆದೆಯಬಹುದೋ ಅಲ್ಲಿಂದ ಜಯ ಡಿಕ್ಲೇರ್ ಮಾಡುತ್ತಾರೆ. ಹೀಗಾಗೇ ಅವರನ್ನು ಅರ್ಥ ಮಾಡಿಕೊಳ್ಳೋದು ಬೇರೆಯವರಿಗೆ ಕಷ್ಟ. ಅಂದರು. ಇವರು ಮಾತು ಕೇಳಿದ ಮೇಲೆ ಇನ್ನೂ ಕಷ್ಟ ಅನ್ನಿಸಿ ಹೌದೌದು ಅಂತಂದೆ.
ದುಡ್ಡು ಇಂಟು ದುಡ್ಡು ಇಕ್ವಲ್ ಟು ರಾಜತಂತ್ರ
ಯಂಡಮೂರಿ ಅವರ ಒಡನಾಟದಿಂದ ಪ್ರಭಾವಿತರಾದ ನಮ್ಮ ಚೇರ್ಮನ್ನರು ತುಂಬ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ. `ಅಘೋರಿಗಳಿಗಿಂತ ಮುಂದೆ',
`ಮೋಹಿನಿ ಕಾಟ ತೊಲಗಿಸುವುದು ಹೇಗೆ?'
`ಸರಕಾರ: ಪ್ರಾಣ ಪ್ರತಿಷ್ಠಾಪನೆ ಹಾಗು ವಿಸರ್ಜನೆ,'
`ಕೆಂಪು ಮಣ್ಣಿನಲ್ಲಿ ಮಳೆ ಇಲ್ಲದ ಬೆಳೆ'ೆ
ಇವೆಲ್ಲ ಬೆಸ್ಟ್ ಸೆಲ್ಲರ್ ಗಳು. ಅಲ್ಲದೇ
ನೀನೇ ಮಾಡಿನೋಡು ಸೀರಿಸ್ ನಲ್ಲಿ
`ರಾಜ್ಯಗಳ ಗಡಿ ವಿಸ್ತರಿಸುವುದು ಹೇಗೆ?'
`ಶಕುನಿಗೇ ತಿರುಮಂತ್ರ ಮಾಡುವುದು ಹೇಗೆ?'
`ಹಿಮಾಲಯದ ಯೋಗಿಗಳ ತಂತ್ರಗಳನ್ನು ರಣ ರಣ ಬಿಸಿಲಿನಲ್ಲಿ ಬಳಸುವುದು ಹೇಗೆ?'
ಇತ್ಯಾದಿ ಪುಸ್ತಕ ಬರೆದಿದ್ದಾರೆ.
ಈಗ `ಎಲ್ಲಾ ಸಾಧಿಸಿದ ಮೇಲೆ ಯಾವ ಸಾಧನೆ ಮಾಡುವುದು?' ಅನ್ನೋ ಮಹಾ ಕಾದಂಬರಿ ಬರೆಯುತ್ತಿದ್ದಾರೆ. ರಜನಿ ಪಿಕ್ಚರ್ ಥರಾ ಮಾರುಕಟ್ಟೆಗೆ ಬರುವ ಮೊದಲೇ ಮೊದಲ ಪ್ರಿಂಟ್ ಖರ್ಚಾಗಿ ಎರಡನೇ ಪ್ರಿಂಟ್ ಗೆ ಬೇಡಿಕೆ ಬಂದಿದೆ ಅಂದರು. ಅದರ ಪಿಆರ್ ಕೆಲಸ ಎಲ್ಲ ನಮ್ಮಲ್ಲಿ ಕೆಲಸಕ್ಕೆ ಇರುವ ಹಾಲಿ ಹಾಗೂ ಮಾಜಿ ಪರ್ತಕತ್ರರು ನೋಡಿಕೊಳ್ಳುತ್ತಾರೆ ಎಂದರು. ಯೆಸ್ ಯೆಸ್ ಅಂತ ಅಲ್ಲಿ ಕೂತಿದ್ದ ಪೆನ್ನಿಗರಾಯರು ತಲೆ ಆಡಿಸಿದರು.
ಕೊನೆಗೆ ಅವರ ಹೆಲಿಕಾಪ್ಟರ್ ನಲ್ಲಿ ಗೋವಾಕ್ಕೆ ಹೋದೆವು.
ಕೊಳೆಯುವ ಸಿರಿ ಮೊಳಕೆಯಲ್ಲಿ
ಅಲ್ಲಿ ನಮ್ಮ ರೇಣುಕಾಚಾರ್ಯ ಅವರು ಇದ್ದರು. ``ಸ್ವಾಮಿ ನಮ್ಮನ್ನು ಸೀಎಮ್ಮು ಏನು ಅಂದುಕೊಂಡಿದ್ದಾರೆ? ನಾನು ನನಗೆ ಕೊಟ್ಟ ಖಾತೆ ಸರಿಯಾಗಿ ನಡೆಸಿಲ್ಲವೇ? ಹಿಂದಿನ ಅಬಕಾರಿ ಮಂತ್ರಿಗಳೆಲ್ಲ ದೊಡ್ಡವರಿಗೆ ಸರಾಯಿ ಕುಡಿಸಲು ಆಗದೇ ಸೋತು ಹೋಗಿದ್ದಾರೆ. ಆದರೆ ನಾನು ಏಳು ವರ್ಷದ ಹುಡುಗನಿಗೂ ಕೂಡ ಕುಡಿಸಿದ್ದೇನೆ. ಮಾಧ್ಯಮದ ಮಿತ್ರರು ಅದನ್ನು ಟೀವಿಯಲ್ಲಿ, ಪೇಪರ್ ನಲ್ಲಿ ತೋರಿಸಿದ್ದಾರೆ. ಬೇಕಾದರೆ ನೊಡಿ'' ಅಂತ ಪೇಪರ್ ಕಟಿಂಗ್ ಇಟ್ಟುಕೊಂಡಿದ್ದ ಫೈಲ್ ತೋರಿಸಿದರು. ``ನನ್ನಷ್ಟು ಕಷ್ಟ ಪಡೋ ಕಾರ್ಯಕತ್ರನಿಗೆ ಜಯಲಕ್ಷ್ಮಿ ಒಲಿಯಬಾರದೇ'' ಅಂದರು. ನೀವು ಹೇಳುವುದೂ ಸರಿ ಇದೆ ಅಂತ ಹೇಳಿದೆ.
ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ
ಅಷ್ಟೊತ್ತಿಗೆ ಹರಿಹರದ ಹರೀಶ್ ಸಿಕ್ಕರು. ಸೀಎಮ್ಮು ಫೋನ್ ಮಾಡಿದ್ರು ಸಾ, ನಮ್ಮ ಎಮ್ಮೆಲ್ಲೆ ಗಳು ಚೆನ್ನೈ ರಿಸಾರ್ಟಿಗೆ ಹೋಗಿದ್ದಾರೆ. ಅವರು ಒಳಗೊಳಗೇ ಏನು ಮಾತಾಡ್ತಾರೆ ಅಂತ ತಿಳಿದುಕೊಳ್ಳೋಕೆ ನೀವು ಹೋಗಬೇಕು ಅಂತ ಹೇಳಿದರು. ಅದಕ್ಕೇ ಇಲ್ಲಿ ಇದ್ದೀನಿ ಅಂದರು. ಹಾಗಾದರೆ ಗೂಢಚಾರನ ಕೆಲಸ ಅನ್ನಿ, ನಿಮ್ಮಂಥ ಗೂಢಚಾರರು ಇಲ್ಲಿ ಎಷ್ಟು ಜನ ಇದ್ದೀರಿ ಅಂತ ಮೆಲುದನಿಯಲ್ಲಿ ಕೇಳಿದೆ. ಅಯ್ಯೋ ಅದಕ್ಕೇಕೆ ಅಷ್ಟೊಂದು ಹಿಂಜರಿದುಕೊಂಡು ಮಾತಾಡ್ತೀರಾ? ಇಲ್ಲಿ ಇರೋರೆಲ್ಲಾ ಗೂಢಚಾರರೇ. ಯಾರ ಕಡೆ ಗೂಢಚಾರರು ಅನ್ನೋದು ಮಾತ್ರ ವಿಶ್ವಾಸ ಮತದ ನಂತರ ತೀರ್ಮಾನವಾಗುತ್ತೆ. ಅಲ್ಲಿವರೆಗೂ ನಾವು ನಿಮ್ಮವರವಲ್ಲ. ನೀವು ನಮ್ಮವರಲ್ಲ. ನಮ್ಮ ಕೆಲಸ ಏನು ಅಂದರೆ ಭಿನ್ನಮತೀಯರಲ್ಲಿ ಭಿನ್ನಮತ ಮೂಡಿಸುವುದು, ಹೀಗೆ ನಮ್ಮ ಕಡೆ ಬಂದವರ ಮೇಲೆ ನಿಗಾ ಇಡಲು ಗೂಢಚಾರರನ್ನು ನೇಮಿಸುವುದು. ಆಮೇಲೆ ಅವರು ಸರಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಅಂತ ನೋಡಲು ಅವರ ಮೇಲೆ ಮತ್ತೊಬ್ಬ ಗೂಢಚಾರರನ್ನು ನೇಮಿಸುವುದು. ಇದೆಲ್ಲಾ ನಡೀತಾ ಇದೆ. ನೇಮಕದ ವಿಷಯದಲ್ಲಿ ಪರಿಣಿತರಾಗಿರುವ ರಾಮಚಂದ್ರಗೌಡರೇ ಇದಕ್ಕೆಲ್ಲಾ ಇನ್ ಚಾರ್ಜು. ಆದರೆ ಇದ್ಯಾವುದೂ ಕ್ಲಿಯರ್ ಇಲ್ಲ. ಇದೊಂಥರಾ ಯಂಡಮೂರಿ ಕಾದಂಬರಿ ಲೆಕ್ಕ ಅಂದರು. ಇದರ ಬಗ್ಗೆ ಯಾರಾದರೂ ಕಾದಂಬರಿ ಬರೆಯುತ್ತಿದ್ದಾರಾ ಎಂದು ಕೇಳಿದೆ. ಇರಬಹುದು. ಕೆಲವು ದಿನ ಕಾದು ನೋಡಿ ಅಂದರು.
ಸ್ಟ್ಯಾಂಪಿಟ್
``ನಮಗ ಯಾರೂ ರೊಕ್ಕಾ ಕೊಟ್ಟಿಲ್ಲರೀ. ನಾವ ಎಲ್ಲರಿಗೂ ಕೊಡೋದು. ನಮಗ ರೊಕ್ಕಾ ಕೊಡಲಿಕ್ಕೆ ಬರುವ ಗಂಡಸು ಮಗ ಯಾವಾ ಅದಾನರೀ,'' ಅಂದರು ಜಾರ್ಕಿಹೊಳಿ. ಅವರು ಕೊಟ್ಟಿದ್ದು ಏನಿದ್ರೂ ಅಲ್ಲಿ ಗ್ಯಾರೇಜಿನಲ್ಲಿ ಅದಾವು ನೋಡ್ರಿ ಅಂದರು. ಅಲ್ಲಿ ಕೆಲವು ಸಾರಾಯಿ ಪ್ಯಾಕ್ ಮಾಡೋ ಪ್ಲಾಸ್ಟಿಕ್ ಚೀಲ ಇದ್ದವು. ಅದರಲ್ಲಿ ಹಸಿರು, ಕೇಸರಿ ಮತ್ತು ಬಿಳಿ ಸ್ಟ್ಯಾಂಪ್ ಗಳನ್ನು ಅಂಟಿಸಿದ ಚೀಲಗಳಿದ್ದವು. ``ಅವು ಬೇರೆ ಬೇರೆ ಪಾರ್ಟಿಯವರು ಕೊಟ್ಟಿದ್ದು. ಸ್ವಲ್ಪ ದಿನಾ ನೋಡ್ತೇವಿ. ಆಮ್ಯಾಲೆ ಯಾವ ಸರಕಾರ ಬರ್ತದೋ ಆ ಸರಕಾರದ ಸ್ಟೀಕರನ್ನೇ ಎಲ್ಲಾದಕ್ಕೂ ಹಚ್ಚಿ ಇಟ್ಟುಕೊಂಡು ಬಿಡ್ತೇವಿ,'' ಅಂದರು.
ಗಾಂಧಿಗೂ ಟೊಪ್ಪಿಗೆಗೂ ಏನು ಸಂಬಂಧ?
ಬೆಳ್ಳುಬ್ಬಿ ಅವರು ಅಂಬರ ಚರಕಾ ಇಟ್ಟುಕೊಂಡು ಕೂತಿದ್ದರು. ತಮ್ಮ ತಲೆಯ ಮೇಲಿನ ಗಾಂಧಿ ಟೊಪ್ಪಿಗೆ ತೆಗೆದು ಗಾಂಧೀಜಿ ಫೋಟೋಗೆ ಹಾಕಿದ್ದರು.
ಅಲ್ಲರೀ ಈ ಗಾಂಧಿ ಅಜ್ಜ ತಾನು ಜೀವನದಾಗ ಟೊಪಿಗೆ ಹಾಕ್ಕೋಳಿಲ್ಲ. ನಮ್ಮಂಥವರಿಗೆ ಹಾಕಿ ಹೋದ. ಅದನ್ನು ಹಾಕಿಕೊಂಡಾಗ ಎಷ್ಟು ಕಷ್ಟ ಇರತದ ಅಂತ ಗೊತ್ತಾಗಲಿ ಅಂತ ಆ ಫೋಟೋಕ್ಕ ಹಾಕೇವಿ ಅಂದರು. ಅದೂ ಸರಿ ಇರಬಹುದು ಅನ್ನಿಸಿತು.
``ಸುಮ್ಮನೇ ಖಾಲಿ ಕೂತು ಏನು ಮಾಡೋದ್ರಿ, ಖಾದಿ ನೂಲು ತೆಗೆಯೋಣು ಅಂತ ಕೂತೇನಿ'' ಅಂತ ಚರಕಾದ ಮೇಲೆ ಕೈಯಾಡಿಸಿದರು.
ನೂತಿದ್ದುಟ್ಟು ಕೊಳ್ಳೋ ಮಾರಾಯ
``ಅಲ್ಲರೀ ಖಾದಿ ನೂಲಾದರ ಮನ್ಯಾಗೆ ತೆಗೀಬಹುದು. ಆದರೆ ಕೆಂಪು ಗೂಟದ ಕಾರು ನಮ್ಮ ಮನೀ ಗ್ಯಾರೇಜಿನ್ಯಾಗ ಮಾಡಿದರ ಮಂದಿ ನಗತಾರ ನೋಡ್ರಿ. ಮಿನಿಸ್ಟರ ಲೆಟರ್ ಹೆಡ್ಡೂ, ವಿಧಾನಸೌಧದ ಚೇಂಬರು, ಗನ್ ಮೆನ್ನೂ, ಪ್ರೊಟೊಕಾಲ್ ವೆಹಿಕಲ್ಲೂ ಇವೆಲ್ಲ ಹೊರಗಿನಿಂದ ತರೋ ಸಾಮಾನು ನೋಡ್ರಿ. ಅದಕ್ಕ ಚೆನ್ನೈಗೆ ಹೊದಿವಿ. ಅಲ್ಲಿ ಹವಾ ಸರಿ ಇಲ್ಲ ಅಂತ ಇಲ್ಲಿಗೆ ಬಂದೇವಿ'' ಅಂದರು.
ತಿಂದು ಹೆಚ್ಚಾದವರ ಪುನರ್ವಸತಿ
ಕೊನೆಗೆ ಸುಧಾಕರ್ ಅವರು ಸಿಕ್ಕರು. ಅಲ್ಲಾ ಸ್ವಾಮಿ, ಇದೆಲ್ಲ ಈಗ ಮಾಡುತ್ತಿದ್ದಾರೆ. ಸುಮ್ಮನೇ ರಿಸಾರ್ಟ್ ಖರ್ಚು. ಕೆಲವು ತಿಂಗಳು ಹಿಂದಾಗಿದ್ದರೆ ಮಾಗಡಿ ರೋಡ್ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿಯೇ ನಮ್ಮ ಎಮ್ಮೆಲ್ಲೇಗಳು ಇರಬಹುದಿತ್ತು. ಅದೆಲ್ಲಾ ನಮ್ಮ ಕೈಯಲ್ಲೇ ಇತ್ತು. ಊಟ, ವಸತಿ ಎಲ್ಲಾ ಫ್ರೀ. ಯಾರೂ ಹೊರಗೆ ಹೋಗಲಿಕ್ಕೆ ಸಾಧ್ಯ ಇರಲಿಲ್ಲ. ನಮ್ಮವರನ್ನು ಭೇಟಿಯಾಗಲಿಕ್ಕೆ ಯಾವುದೇ ಪಾರ್ಟಿಯವರು ಬರಬಹುದಿತ್ತು. ಯಾರಾದರೂ ಧುರೀಣರು ಬಂದು ನಮಗೆ ಏನಾದರೂ ಕೊಟ್ಟರೂ ಕೂಡ ಇಸಗೊಂಡು ಸುಮ್ಮನೇ ಇರಬಹುದಾಗಿತ್ತು. ಯಾರಾದರೂ ತಕರಾರು ಮಾಡಿದರೆ, ಅದು ಹೇಳಿ ಕೇಳಿ ಭಿಕ್ಷುಕರ ಕೇಂದ್ರ ಅಪ್ಪಾ ಸುಮ್ಮನೇ ಇರಿ ಅಂತ ತಿಳಿಹೇಳಬಹುದಿತ್ತು. ಏನಾಗ್ತಿತ್ತು? ಬಹಳ ಅಂದರೆ ಒಂದೆರೆಡು ಜನ ಸಾಯಬಹುದಿತ್ತು. ಅವರು ಹಸಿವಿನಿಂದ ಸತ್ತಿಲ್ಲ. ಊಟ ಹೆಚ್ಚಾಗಿ ಸತ್ತರು ಅಂತ ಸರಕಾರಿ ಡಾಕ್ಟರಿಂದ ಸರ್ಟಿಫಿಕೆಟ್ ಕೊಡಿಸಿ ಸುಮ್ಮನಾಗಬಹುದಿತ್ತು. ಅಂದರು. ಅವರು ಹೇಳುವುದರಲ್ಲೇನೂ ತಪ್ಪಿಲ್ಲ ಅನ್ನಿಸಿ ಸುಮ್ಮನಾದೆ.
ಎಲ್ಲರಿಗೂ ಸೇರಿದ ಸಂಪತ್ತು
ಗೂಳಿಹಟ್ಟಿ ಅವರು ನಮ್ಮ ಸಿಟ್ಟು ಏನಿದ್ದರೂ ಆ ಕಲ್ಮಾಡಿ ಮೇಲೆ ನೋಡಿ. ನಾನು ಮಿನಿಸ್ಟರಾಗಿ ಕಂಟಿನ್ಯೂ ಆಗಿದ್ದರೆ ಕಾಮನ್ ವೆಲ್ತ್ ಗೇಮ್ಸ್ ನೋಡಲಿಕ್ಕೆ ಸರಕಾರಿ ಗೌರವದಿಂದ ಹೋಗುತ್ತಿದ್ದೆನೆ? ನನಗೆ ಆ ಭಾಗ್ಯ ತಪ್ಪಲಿ ಅಂತ ಅವರು ಯಡ್ಯೂರಪ್ಪ ಅವರ ಕಿವಿ ಕಚ್ಚಿ ನನ್ನ ಸಚಿವ ಸ್ಥಾನ ತಪ್ಪಿಸಿದರು. ಅವರ ಮಾತು ಕೇಳಿ ಯಡ್ಡಿ ಅವರು ನನ್ನನ್ನು ರಿಂಗಿನಿಂದ ಎತ್ತಿ ಹೊರಗೆ ಒಗೆದರು.
ಅಲ್ಲಾ ಇವರೆಲ್ಲ ನಾಯಕರಾಗಬಾರದು. ಕಲ್ಮಾಡಿ ಅವರು ಗುರಿಕಾರಾಗಬೇಕು. ಯಡ್ಡಿ ಅವರು ಕುಸ್ತಿಪಟು ಆಗಬೇಕು. ಬಂಗಾರದ ಪದಕಗಳ ಸುರಿಮಳೆ ಗ್ಯಾರಂಟಿ ನೋಡಿ. ಅಂದರು.
ಕದ್ದ ಮಾವಿನಕಾಯೇ ರುಚಿ
ಕೆಲವೇ ಕ್ಷಣಗಳಲ್ಲಿ ಅಲ್ಲಿಯ ವಾತಾವರಣವೇ ಬದಲಾಯಿತು. ಮಾವಿನಕಾಯಿ ಕದಿಯಲು ಹೋದ ಹುಡುಗರ ಗುಂಪು ತೋಟದ ಕಾವಲುಗಾರ ಬಂದಾಗ ಓಡಿ ಹೋದಂತೆ ಎಲ್ಲ ಎಮ್ಮೆಲ್ಲೆಗಳು ಓಡಿ ರಿಸಾರ್ಟಿನ ಹಿತ್ತಲಿನಲ್ಲಿದ್ದ ಸಮುದ್ರ ದಂಡೆಯ ಕಡೆ ಓಡಿದರು.
ಯಾಕೆ ಅಂತ ನೋಡಿದರೆ ಮುಂಬಾಗಿಲಿನಲ್ಲಿ ನಿಂತ ಡಾ.ಅಶೋಕ್ ಕಂಡರು. ಅವರು ಮುಂಚೆ ಎಲ್ಲಾ ಬಸ್ಸು ಓಡಿಸುವುದು, ರಿಯಲ್ ಎಸ್ಟೇಟು ವ್ಯವಹಾರ ಮುಂತಾದ ಕೆಲಸ ಮಾಡುತ್ತಿದ್ದರಂತೆ. ಆದರೆ ಈಗೀಗ ಆಪರೇಷನ್ ಮಾಡಬೇಕಾಗುತ್ತದೆ ಅಂತ ಮೆಡಿಕಲ್ ಕಾಲೇಜು ಸೇರಿಕೊಂಡಿದ್ದರಂತೆ. ಅವರನ್ನು ನೋಡಿಯೇ ಎಮ್ಮೆಲ್ಲೆಗಳು ಓಡಿ ಹೋದರೆ, ಅವರೇನಾದರೂ ಬಂದು ಇವರ ಕೈಹಿಡಿದರೆ ಏನಾಗಬಹುದು ಅಂತ ಅನ್ನಿಸಿತು.
ಪಿಎಚ್ಡಿ ಇನ್ ಬ್ಲಡ್ ಲೆಸ್ ಸರ್ಜರಿ
ಅಯ್ಯೋ ಆವಾಗ ಆರ್ಎಂಪಿ ಡಾಕ್ಟರೆಲ್ಲ ಆಪರೇಷನ್ ಮಾಡ್ತಿದ್ರಿ. ಈಗ ಡಬಲ್ ಡಿಗ್ರಿ ಬೇಕಾಗೈತೆ. ಪೇಷಂಟೇ ಸಿಗಕ್ಕಿಲ್ಲ. ಸಿಕ್ಕರೂ ಪೋಸ್ಟ್ ಆಪರೇಟಿವ್ ಎಕ್ಸ್ ಪೆನ್ಸಸ್ ಅಂತ ಸಿಕ್ಕಾಪಟ್ಟೆ ಹಣ ಕೇಳ್ತಾರೆ. ನಾವು ಎಲ್ಲಕ್ಕೂ ವ್ಯವಸ್ಥೆ ಮಾಡಿದಿರಿ.
ಮೊದಮೊದಲು ನಮಗೂ ಕಲಿಯಕ್ಕೆ ತುಂಬ ಕಷ್ಟ ಆಯಿತು. ಆದರೆ ಮಾಡಿ ಮಾಡಿ ಕಲಿತು ಬಿಟ್ಟಿದ್ದೀರಿ. ನಮ್ಮ ಸರ್ಜರಿ ತುಂಬಾ ಇಂಟರೆಸ್ಟಿಂಗ್. ಮೇಜರ್ ಆಪರೇಷನ್ ಆದರೂ ನೋವಾಗೋದಿಲ್ಲ, ರಕ್ತ ಬರೋದಿಲ್ಲ.
ಸುಮ್ಮನೇ ನೋಡಿ ಯಾವ್ಯಾವ ಪೇಷಂಟ್ ಸಿಕ್ತಾರೆ, ಹೆಂಗೆಂಗೆ ರಿಪೇರಿ ಆಗ್ತಾರೆ ಅಂತ ನೋಡ್ತಾ ಇರಿ ಅಂದರು. ಅವರು ಗ್ಲೌಸು ಹಾಕಿಕೊಳ್ಳುವವರೆಗೆ ನಾನು ಪಕ್ಕಕ್ಕೆ ಸರಿದು ನಿಂತೆ.
(ಮುಗಿಯಿತು)
Print Close
By ಹೃಷಿಕೇಶ್ ಬಹದ್ದೂರ್ ದೇಸಾಯಿ
ಅಂದು ಮಧ್ಯಾಹ್ನ ನನ್ನ ಫೋನಿಗೆ ವಿದೇಶಿ ನಂಬರಿನಿಂದ ಫೋನ್ ಬಂತು. ಲಂಡನ್ನಿನಲ್ಲಿರುವ ನನ್ನ ಹೆಂಡತಿಯ ತಮ್ಮ ಫೋನ್ ಮಾಡಿರಬೇಕು ಅಂತ ಎತ್ತಿದೆ. ಆದರೆ ಫೋನ್ ಮಾಡಿದವರು ಬೇರೆ. ಸಹಕಾರಿ ಧುರೀಣ ಹಾಗೂ ಹಿರಿಯ ಮಿತ್ರ ಗುರುನಾಥ್ ಈಜಿಪ್ತ್ ನಿಂದ ಮಾತಾಡುತ್ತಿದ್ದರು.
ಪಿರಾಮಿಡ್ಡೀಕರಣ
``ಏನ್ ನ್ಯೂಸು ಸರ್ ನಮ್ಮ ಪಾರ್ಟಿ ಏನಂತದ? ಸರಕಾರ ಇರ್ತದೋ ಇಲ್ಲೋ?'' ಎಂದರು.
``ನೀವು ಈಜಿಪ್ತ್ ನಲ್ಲಿ ಇದ್ದೀರೋ ಇಲ್ಲೋ. ಅಲ್ಲಿಯೇ ಯಾವುದಾದರೂ ಪಿರಾಮಿಡ್ ನೋಡಲಿಕ್ಕೆ ಹೋದಾಗ ಯಾವುದಾದರೂ ಪಿರಾಮಿಡ್ ಖಾಲಿ ಇದ್ದರೆ ನಿಮ್ಮ ಪಕ್ಷಕ್ಕೊಂದು ಸಮಾಧಿ ಬುಕ್ ಮಾಡಿಬಂದು ಬಿಡ್ರಿ'' ಅಂತಂದೆ.
``ಹೌದು ಹೋಗಿದ್ವಿ. ಆದರೆ ಪಿರಾಮಿಡ್ ಯಾವುದೂ ಖಾಲಿ ಇದ್ದಂಗ ಕಾಣಲಿಲ್ಲ'' ಅಂದರು. ``ಅಯ್ಯೋ ಹಂಗಾರ ಅಯೋಧ್ಯಾನೋ, ಕಾಶ್ಮೀರಾನೋ ಎಲ್ಲೋ ಒಂದು ಕಡೆ ಸಮಾಧಿ ಹುಡುಕಬೇಕಾತು'' ಅಂತ ನಕ್ಕು ಸುಮ್ಮನಾದೆವು.
ಪ್ಲ್ಯಾಂಟರ್ ಗಳ ಸಮಾವೇಶ
ಆ ನಂತರ ಸ್ವಲ್ಪ ಹೊತ್ತಿಗೆ ಸ್ನೇಹಿತ ಶ್ರೀರಾಮುಲು ಅವರ ಪಿಎ ಅವರ ಫೋನ್ ಬಂತು. ಸಾಹೇಬರ ಪ್ರೆಸ್ ಮೀಟ್ ಇದೆ ಸಾರ್, ಬರಬೇಕಂತೆ ಅಂದರು. ನಾನು ಹೋದರೆ ಅಲ್ಲಿ ಪತ್ರಿಕಾಗೋಷ್ಠಿ ಇಲ್ಲ. ಏನಿಲ್ಲ. ಪ್ರೆಸ್ ಮೀಟ್ ಅಂದರೆ ಸುದ್ದಿಗೋಷ್ಠಿ ಅಲ್ಲ. ಸರ್, ಪ್ರೆಸ್ ನವರನ್ನು ಮೀಟ್ ಮಾಡೋದು, ಅಷ್ಟೇ, ಅಂದರು ಸಚಿವರು. ಅವರನ್ನು ಆವಾಗಾವಾಗ ಮೀಟು ಮಾಡುತ್ತಿದ್ದರೆ ಯಾವಾಗ್ಯಾವಾಗ ಏನೇನು ಸುದ್ದಿ ಮಾಡುತ್ತಿರಬೇಕು, ಅದಾಗದಿದ್ದರೆ ಏನೇನು ಸುದ್ದಿ ಪ್ಲ್ಯಾಂಟು ಮಾಡಬೇಕು ಅಂತ ಗೊತ್ತಾಗುತ್ತದೆ, ಅಂದರು. ಈ ಪ್ಲ್ಯಾಂಟೇಷನ್ ಕೆಲಸಕ್ಕಾಗಿಯೇ ಇವರು ಹಿರಿಯ ಪತ್ರಕರ್ತರನ್ನು ಸಲಹೆಗಾರರನ್ನಾಗಿ ಇಟ್ಟುಕೊಂಡಿರುವುದು. ಇಂಥ ದೊಡ್ಡ ಪ್ರ್ಯಾಂಟರುಗಳಿಗೆ ಇದೆಲ್ಲ ಸಹಜ ಅಂದುಕೊಂಡೆ.
ಸವ್ಯಸಾಚಿಯ ಚೆಸ್
ಒಳಗೆ ಜನಾರ್ಧನ ರೆಡ್ಡಿ ಅವರು ಚೆಸ್ ಬೋರ್ಡ್ ಮುಂದೆ ಧ್ಯಾನಾಸಕ್ತರಾಗಿ ಕೂತಿದ್ದಾರೆ. ಅವರ ಜತೆ ಚೆಸ್ ಆಡುತ್ತಿದ್ದವರು ಎದ್ದು ಹೊರಗೆ ಹೋಗಿದ್ದಾರೋ ಏನೋ? ಅದಕ್ಕೇ ಒಬ್ಬರೇ ಕೂತಿರಬಹುದು ಅಂತ ಅಂದುಕೊಂಡೆ. ನೀವು ಏನು ವಿಚಾರ ಮಾಡುತ್ತಿದ್ದೀರಿ ಅಂತ ಗೊತ್ತಾಯ್ತು. ಇವರು ಒಬ್ಬರೇ ಏನು ಮಾಡಾತ್ತ ಇದ್ದಾರೆ ಅಂದುಕೊಂಡಿರಿ ತಾನೇ ನೀವು? ಅಂದರು ಶ್ರೀರಾಮುಲು.
ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೆ
ನಮ್ಮ ಚೇರ್ಮನ್ನರು ತುಂಬ ಒಳ್ಳೇ ಚೆಸ್ ಪ್ಲೇಯರ್. ಅವರು ಎಷ್ಟು ಒಳ್ಳೆ ಆಟಗಾರರು ಅಂದರೆ ಅವರಿಗೆ ಇನ್ನೊಬ್ಬರ ಜತೆ ಚೆಸ್ ಆಡಲು ಸರಿ ಹೋಗೋದಿಲ್ಲ. ಅವರಿಗೆ ಹೀಗೇ ಸರಿ. ಅದಕ್ಕೇ ಯಾವಾಗಲೂ ಹಿಗೇನೇ ಆಡ್ತಾ ಇರ್ತಾರೆ. ಹೀಗಿದ್ದರೆ ಎರಡೂ ಕಡೆಯಿಂದ ಕಾಯಿಗಳನ್ನು ಇವರೇ ನಡೆಸಬಹುದಲ್ಲವೇ? ಒಮ್ಮೆ ಈ ಕಡೆಯಿಂದ ಮೂವ್ ಮಾಡುವುದು, ಇನ್ನೊಮ್ಮೆ ಆ ಕಡೆಯಿಂದ ಮೂವ್ ಮಾಡುವುದು. ಯಾವ ಟೈಮ್ ನಲ್ಲಿ ಯಾವ ಕಡೆಯಿಂದ ಗೆದೆಯಬಹುದೋ ಅಲ್ಲಿಂದ ಜಯ ಡಿಕ್ಲೇರ್ ಮಾಡುತ್ತಾರೆ. ಹೀಗಾಗೇ ಅವರನ್ನು ಅರ್ಥ ಮಾಡಿಕೊಳ್ಳೋದು ಬೇರೆಯವರಿಗೆ ಕಷ್ಟ. ಅಂದರು. ಇವರು ಮಾತು ಕೇಳಿದ ಮೇಲೆ ಇನ್ನೂ ಕಷ್ಟ ಅನ್ನಿಸಿ ಹೌದೌದು ಅಂತಂದೆ.
ದುಡ್ಡು ಇಂಟು ದುಡ್ಡು ಇಕ್ವಲ್ ಟು ರಾಜತಂತ್ರ
ಯಂಡಮೂರಿ ಅವರ ಒಡನಾಟದಿಂದ ಪ್ರಭಾವಿತರಾದ ನಮ್ಮ ಚೇರ್ಮನ್ನರು ತುಂಬ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ. `ಅಘೋರಿಗಳಿಗಿಂತ ಮುಂದೆ',
`ಮೋಹಿನಿ ಕಾಟ ತೊಲಗಿಸುವುದು ಹೇಗೆ?'
`ಸರಕಾರ: ಪ್ರಾಣ ಪ್ರತಿಷ್ಠಾಪನೆ ಹಾಗು ವಿಸರ್ಜನೆ,'
`ಕೆಂಪು ಮಣ್ಣಿನಲ್ಲಿ ಮಳೆ ಇಲ್ಲದ ಬೆಳೆ'ೆ
ಇವೆಲ್ಲ ಬೆಸ್ಟ್ ಸೆಲ್ಲರ್ ಗಳು. ಅಲ್ಲದೇ
ನೀನೇ ಮಾಡಿನೋಡು ಸೀರಿಸ್ ನಲ್ಲಿ
`ರಾಜ್ಯಗಳ ಗಡಿ ವಿಸ್ತರಿಸುವುದು ಹೇಗೆ?'
`ಶಕುನಿಗೇ ತಿರುಮಂತ್ರ ಮಾಡುವುದು ಹೇಗೆ?'
`ಹಿಮಾಲಯದ ಯೋಗಿಗಳ ತಂತ್ರಗಳನ್ನು ರಣ ರಣ ಬಿಸಿಲಿನಲ್ಲಿ ಬಳಸುವುದು ಹೇಗೆ?'
ಇತ್ಯಾದಿ ಪುಸ್ತಕ ಬರೆದಿದ್ದಾರೆ.
ಈಗ `ಎಲ್ಲಾ ಸಾಧಿಸಿದ ಮೇಲೆ ಯಾವ ಸಾಧನೆ ಮಾಡುವುದು?' ಅನ್ನೋ ಮಹಾ ಕಾದಂಬರಿ ಬರೆಯುತ್ತಿದ್ದಾರೆ. ರಜನಿ ಪಿಕ್ಚರ್ ಥರಾ ಮಾರುಕಟ್ಟೆಗೆ ಬರುವ ಮೊದಲೇ ಮೊದಲ ಪ್ರಿಂಟ್ ಖರ್ಚಾಗಿ ಎರಡನೇ ಪ್ರಿಂಟ್ ಗೆ ಬೇಡಿಕೆ ಬಂದಿದೆ ಅಂದರು. ಅದರ ಪಿಆರ್ ಕೆಲಸ ಎಲ್ಲ ನಮ್ಮಲ್ಲಿ ಕೆಲಸಕ್ಕೆ ಇರುವ ಹಾಲಿ ಹಾಗೂ ಮಾಜಿ ಪರ್ತಕತ್ರರು ನೋಡಿಕೊಳ್ಳುತ್ತಾರೆ ಎಂದರು. ಯೆಸ್ ಯೆಸ್ ಅಂತ ಅಲ್ಲಿ ಕೂತಿದ್ದ ಪೆನ್ನಿಗರಾಯರು ತಲೆ ಆಡಿಸಿದರು.
ಕೊನೆಗೆ ಅವರ ಹೆಲಿಕಾಪ್ಟರ್ ನಲ್ಲಿ ಗೋವಾಕ್ಕೆ ಹೋದೆವು.
ಕೊಳೆಯುವ ಸಿರಿ ಮೊಳಕೆಯಲ್ಲಿ
ಅಲ್ಲಿ ನಮ್ಮ ರೇಣುಕಾಚಾರ್ಯ ಅವರು ಇದ್ದರು. ``ಸ್ವಾಮಿ ನಮ್ಮನ್ನು ಸೀಎಮ್ಮು ಏನು ಅಂದುಕೊಂಡಿದ್ದಾರೆ? ನಾನು ನನಗೆ ಕೊಟ್ಟ ಖಾತೆ ಸರಿಯಾಗಿ ನಡೆಸಿಲ್ಲವೇ? ಹಿಂದಿನ ಅಬಕಾರಿ ಮಂತ್ರಿಗಳೆಲ್ಲ ದೊಡ್ಡವರಿಗೆ ಸರಾಯಿ ಕುಡಿಸಲು ಆಗದೇ ಸೋತು ಹೋಗಿದ್ದಾರೆ. ಆದರೆ ನಾನು ಏಳು ವರ್ಷದ ಹುಡುಗನಿಗೂ ಕೂಡ ಕುಡಿಸಿದ್ದೇನೆ. ಮಾಧ್ಯಮದ ಮಿತ್ರರು ಅದನ್ನು ಟೀವಿಯಲ್ಲಿ, ಪೇಪರ್ ನಲ್ಲಿ ತೋರಿಸಿದ್ದಾರೆ. ಬೇಕಾದರೆ ನೊಡಿ'' ಅಂತ ಪೇಪರ್ ಕಟಿಂಗ್ ಇಟ್ಟುಕೊಂಡಿದ್ದ ಫೈಲ್ ತೋರಿಸಿದರು. ``ನನ್ನಷ್ಟು ಕಷ್ಟ ಪಡೋ ಕಾರ್ಯಕತ್ರನಿಗೆ ಜಯಲಕ್ಷ್ಮಿ ಒಲಿಯಬಾರದೇ'' ಅಂದರು. ನೀವು ಹೇಳುವುದೂ ಸರಿ ಇದೆ ಅಂತ ಹೇಳಿದೆ.
ಕಮಲದಲ್ಲಿ ಕಮಲ ಹುಟ್ಟಿ, ಗೂಢದಲ್ಲಿ ಲೀನವಾಗಿ
ಅಷ್ಟೊತ್ತಿಗೆ ಹರಿಹರದ ಹರೀಶ್ ಸಿಕ್ಕರು. ಸೀಎಮ್ಮು ಫೋನ್ ಮಾಡಿದ್ರು ಸಾ, ನಮ್ಮ ಎಮ್ಮೆಲ್ಲೆ ಗಳು ಚೆನ್ನೈ ರಿಸಾರ್ಟಿಗೆ ಹೋಗಿದ್ದಾರೆ. ಅವರು ಒಳಗೊಳಗೇ ಏನು ಮಾತಾಡ್ತಾರೆ ಅಂತ ತಿಳಿದುಕೊಳ್ಳೋಕೆ ನೀವು ಹೋಗಬೇಕು ಅಂತ ಹೇಳಿದರು. ಅದಕ್ಕೇ ಇಲ್ಲಿ ಇದ್ದೀನಿ ಅಂದರು. ಹಾಗಾದರೆ ಗೂಢಚಾರನ ಕೆಲಸ ಅನ್ನಿ, ನಿಮ್ಮಂಥ ಗೂಢಚಾರರು ಇಲ್ಲಿ ಎಷ್ಟು ಜನ ಇದ್ದೀರಿ ಅಂತ ಮೆಲುದನಿಯಲ್ಲಿ ಕೇಳಿದೆ. ಅಯ್ಯೋ ಅದಕ್ಕೇಕೆ ಅಷ್ಟೊಂದು ಹಿಂಜರಿದುಕೊಂಡು ಮಾತಾಡ್ತೀರಾ? ಇಲ್ಲಿ ಇರೋರೆಲ್ಲಾ ಗೂಢಚಾರರೇ. ಯಾರ ಕಡೆ ಗೂಢಚಾರರು ಅನ್ನೋದು ಮಾತ್ರ ವಿಶ್ವಾಸ ಮತದ ನಂತರ ತೀರ್ಮಾನವಾಗುತ್ತೆ. ಅಲ್ಲಿವರೆಗೂ ನಾವು ನಿಮ್ಮವರವಲ್ಲ. ನೀವು ನಮ್ಮವರಲ್ಲ. ನಮ್ಮ ಕೆಲಸ ಏನು ಅಂದರೆ ಭಿನ್ನಮತೀಯರಲ್ಲಿ ಭಿನ್ನಮತ ಮೂಡಿಸುವುದು, ಹೀಗೆ ನಮ್ಮ ಕಡೆ ಬಂದವರ ಮೇಲೆ ನಿಗಾ ಇಡಲು ಗೂಢಚಾರರನ್ನು ನೇಮಿಸುವುದು. ಆಮೇಲೆ ಅವರು ಸರಿ ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಅಂತ ನೋಡಲು ಅವರ ಮೇಲೆ ಮತ್ತೊಬ್ಬ ಗೂಢಚಾರರನ್ನು ನೇಮಿಸುವುದು. ಇದೆಲ್ಲಾ ನಡೀತಾ ಇದೆ. ನೇಮಕದ ವಿಷಯದಲ್ಲಿ ಪರಿಣಿತರಾಗಿರುವ ರಾಮಚಂದ್ರಗೌಡರೇ ಇದಕ್ಕೆಲ್ಲಾ ಇನ್ ಚಾರ್ಜು. ಆದರೆ ಇದ್ಯಾವುದೂ ಕ್ಲಿಯರ್ ಇಲ್ಲ. ಇದೊಂಥರಾ ಯಂಡಮೂರಿ ಕಾದಂಬರಿ ಲೆಕ್ಕ ಅಂದರು. ಇದರ ಬಗ್ಗೆ ಯಾರಾದರೂ ಕಾದಂಬರಿ ಬರೆಯುತ್ತಿದ್ದಾರಾ ಎಂದು ಕೇಳಿದೆ. ಇರಬಹುದು. ಕೆಲವು ದಿನ ಕಾದು ನೋಡಿ ಅಂದರು.
ಸ್ಟ್ಯಾಂಪಿಟ್
``ನಮಗ ಯಾರೂ ರೊಕ್ಕಾ ಕೊಟ್ಟಿಲ್ಲರೀ. ನಾವ ಎಲ್ಲರಿಗೂ ಕೊಡೋದು. ನಮಗ ರೊಕ್ಕಾ ಕೊಡಲಿಕ್ಕೆ ಬರುವ ಗಂಡಸು ಮಗ ಯಾವಾ ಅದಾನರೀ,'' ಅಂದರು ಜಾರ್ಕಿಹೊಳಿ. ಅವರು ಕೊಟ್ಟಿದ್ದು ಏನಿದ್ರೂ ಅಲ್ಲಿ ಗ್ಯಾರೇಜಿನಲ್ಲಿ ಅದಾವು ನೋಡ್ರಿ ಅಂದರು. ಅಲ್ಲಿ ಕೆಲವು ಸಾರಾಯಿ ಪ್ಯಾಕ್ ಮಾಡೋ ಪ್ಲಾಸ್ಟಿಕ್ ಚೀಲ ಇದ್ದವು. ಅದರಲ್ಲಿ ಹಸಿರು, ಕೇಸರಿ ಮತ್ತು ಬಿಳಿ ಸ್ಟ್ಯಾಂಪ್ ಗಳನ್ನು ಅಂಟಿಸಿದ ಚೀಲಗಳಿದ್ದವು. ``ಅವು ಬೇರೆ ಬೇರೆ ಪಾರ್ಟಿಯವರು ಕೊಟ್ಟಿದ್ದು. ಸ್ವಲ್ಪ ದಿನಾ ನೋಡ್ತೇವಿ. ಆಮ್ಯಾಲೆ ಯಾವ ಸರಕಾರ ಬರ್ತದೋ ಆ ಸರಕಾರದ ಸ್ಟೀಕರನ್ನೇ ಎಲ್ಲಾದಕ್ಕೂ ಹಚ್ಚಿ ಇಟ್ಟುಕೊಂಡು ಬಿಡ್ತೇವಿ,'' ಅಂದರು.
ಗಾಂಧಿಗೂ ಟೊಪ್ಪಿಗೆಗೂ ಏನು ಸಂಬಂಧ?
ಬೆಳ್ಳುಬ್ಬಿ ಅವರು ಅಂಬರ ಚರಕಾ ಇಟ್ಟುಕೊಂಡು ಕೂತಿದ್ದರು. ತಮ್ಮ ತಲೆಯ ಮೇಲಿನ ಗಾಂಧಿ ಟೊಪ್ಪಿಗೆ ತೆಗೆದು ಗಾಂಧೀಜಿ ಫೋಟೋಗೆ ಹಾಕಿದ್ದರು.
ಅಲ್ಲರೀ ಈ ಗಾಂಧಿ ಅಜ್ಜ ತಾನು ಜೀವನದಾಗ ಟೊಪಿಗೆ ಹಾಕ್ಕೋಳಿಲ್ಲ. ನಮ್ಮಂಥವರಿಗೆ ಹಾಕಿ ಹೋದ. ಅದನ್ನು ಹಾಕಿಕೊಂಡಾಗ ಎಷ್ಟು ಕಷ್ಟ ಇರತದ ಅಂತ ಗೊತ್ತಾಗಲಿ ಅಂತ ಆ ಫೋಟೋಕ್ಕ ಹಾಕೇವಿ ಅಂದರು. ಅದೂ ಸರಿ ಇರಬಹುದು ಅನ್ನಿಸಿತು.
``ಸುಮ್ಮನೇ ಖಾಲಿ ಕೂತು ಏನು ಮಾಡೋದ್ರಿ, ಖಾದಿ ನೂಲು ತೆಗೆಯೋಣು ಅಂತ ಕೂತೇನಿ'' ಅಂತ ಚರಕಾದ ಮೇಲೆ ಕೈಯಾಡಿಸಿದರು.
ನೂತಿದ್ದುಟ್ಟು ಕೊಳ್ಳೋ ಮಾರಾಯ
``ಅಲ್ಲರೀ ಖಾದಿ ನೂಲಾದರ ಮನ್ಯಾಗೆ ತೆಗೀಬಹುದು. ಆದರೆ ಕೆಂಪು ಗೂಟದ ಕಾರು ನಮ್ಮ ಮನೀ ಗ್ಯಾರೇಜಿನ್ಯಾಗ ಮಾಡಿದರ ಮಂದಿ ನಗತಾರ ನೋಡ್ರಿ. ಮಿನಿಸ್ಟರ ಲೆಟರ್ ಹೆಡ್ಡೂ, ವಿಧಾನಸೌಧದ ಚೇಂಬರು, ಗನ್ ಮೆನ್ನೂ, ಪ್ರೊಟೊಕಾಲ್ ವೆಹಿಕಲ್ಲೂ ಇವೆಲ್ಲ ಹೊರಗಿನಿಂದ ತರೋ ಸಾಮಾನು ನೋಡ್ರಿ. ಅದಕ್ಕ ಚೆನ್ನೈಗೆ ಹೊದಿವಿ. ಅಲ್ಲಿ ಹವಾ ಸರಿ ಇಲ್ಲ ಅಂತ ಇಲ್ಲಿಗೆ ಬಂದೇವಿ'' ಅಂದರು.
ತಿಂದು ಹೆಚ್ಚಾದವರ ಪುನರ್ವಸತಿ
ಕೊನೆಗೆ ಸುಧಾಕರ್ ಅವರು ಸಿಕ್ಕರು. ಅಲ್ಲಾ ಸ್ವಾಮಿ, ಇದೆಲ್ಲ ಈಗ ಮಾಡುತ್ತಿದ್ದಾರೆ. ಸುಮ್ಮನೇ ರಿಸಾರ್ಟ್ ಖರ್ಚು. ಕೆಲವು ತಿಂಗಳು ಹಿಂದಾಗಿದ್ದರೆ ಮಾಗಡಿ ರೋಡ್ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿಯೇ ನಮ್ಮ ಎಮ್ಮೆಲ್ಲೇಗಳು ಇರಬಹುದಿತ್ತು. ಅದೆಲ್ಲಾ ನಮ್ಮ ಕೈಯಲ್ಲೇ ಇತ್ತು. ಊಟ, ವಸತಿ ಎಲ್ಲಾ ಫ್ರೀ. ಯಾರೂ ಹೊರಗೆ ಹೋಗಲಿಕ್ಕೆ ಸಾಧ್ಯ ಇರಲಿಲ್ಲ. ನಮ್ಮವರನ್ನು ಭೇಟಿಯಾಗಲಿಕ್ಕೆ ಯಾವುದೇ ಪಾರ್ಟಿಯವರು ಬರಬಹುದಿತ್ತು. ಯಾರಾದರೂ ಧುರೀಣರು ಬಂದು ನಮಗೆ ಏನಾದರೂ ಕೊಟ್ಟರೂ ಕೂಡ ಇಸಗೊಂಡು ಸುಮ್ಮನೇ ಇರಬಹುದಾಗಿತ್ತು. ಯಾರಾದರೂ ತಕರಾರು ಮಾಡಿದರೆ, ಅದು ಹೇಳಿ ಕೇಳಿ ಭಿಕ್ಷುಕರ ಕೇಂದ್ರ ಅಪ್ಪಾ ಸುಮ್ಮನೇ ಇರಿ ಅಂತ ತಿಳಿಹೇಳಬಹುದಿತ್ತು. ಏನಾಗ್ತಿತ್ತು? ಬಹಳ ಅಂದರೆ ಒಂದೆರೆಡು ಜನ ಸಾಯಬಹುದಿತ್ತು. ಅವರು ಹಸಿವಿನಿಂದ ಸತ್ತಿಲ್ಲ. ಊಟ ಹೆಚ್ಚಾಗಿ ಸತ್ತರು ಅಂತ ಸರಕಾರಿ ಡಾಕ್ಟರಿಂದ ಸರ್ಟಿಫಿಕೆಟ್ ಕೊಡಿಸಿ ಸುಮ್ಮನಾಗಬಹುದಿತ್ತು. ಅಂದರು. ಅವರು ಹೇಳುವುದರಲ್ಲೇನೂ ತಪ್ಪಿಲ್ಲ ಅನ್ನಿಸಿ ಸುಮ್ಮನಾದೆ.
ಎಲ್ಲರಿಗೂ ಸೇರಿದ ಸಂಪತ್ತು
ಗೂಳಿಹಟ್ಟಿ ಅವರು ನಮ್ಮ ಸಿಟ್ಟು ಏನಿದ್ದರೂ ಆ ಕಲ್ಮಾಡಿ ಮೇಲೆ ನೋಡಿ. ನಾನು ಮಿನಿಸ್ಟರಾಗಿ ಕಂಟಿನ್ಯೂ ಆಗಿದ್ದರೆ ಕಾಮನ್ ವೆಲ್ತ್ ಗೇಮ್ಸ್ ನೋಡಲಿಕ್ಕೆ ಸರಕಾರಿ ಗೌರವದಿಂದ ಹೋಗುತ್ತಿದ್ದೆನೆ? ನನಗೆ ಆ ಭಾಗ್ಯ ತಪ್ಪಲಿ ಅಂತ ಅವರು ಯಡ್ಯೂರಪ್ಪ ಅವರ ಕಿವಿ ಕಚ್ಚಿ ನನ್ನ ಸಚಿವ ಸ್ಥಾನ ತಪ್ಪಿಸಿದರು. ಅವರ ಮಾತು ಕೇಳಿ ಯಡ್ಡಿ ಅವರು ನನ್ನನ್ನು ರಿಂಗಿನಿಂದ ಎತ್ತಿ ಹೊರಗೆ ಒಗೆದರು.
ಅಲ್ಲಾ ಇವರೆಲ್ಲ ನಾಯಕರಾಗಬಾರದು. ಕಲ್ಮಾಡಿ ಅವರು ಗುರಿಕಾರಾಗಬೇಕು. ಯಡ್ಡಿ ಅವರು ಕುಸ್ತಿಪಟು ಆಗಬೇಕು. ಬಂಗಾರದ ಪದಕಗಳ ಸುರಿಮಳೆ ಗ್ಯಾರಂಟಿ ನೋಡಿ. ಅಂದರು.
ಕದ್ದ ಮಾವಿನಕಾಯೇ ರುಚಿ
ಕೆಲವೇ ಕ್ಷಣಗಳಲ್ಲಿ ಅಲ್ಲಿಯ ವಾತಾವರಣವೇ ಬದಲಾಯಿತು. ಮಾವಿನಕಾಯಿ ಕದಿಯಲು ಹೋದ ಹುಡುಗರ ಗುಂಪು ತೋಟದ ಕಾವಲುಗಾರ ಬಂದಾಗ ಓಡಿ ಹೋದಂತೆ ಎಲ್ಲ ಎಮ್ಮೆಲ್ಲೆಗಳು ಓಡಿ ರಿಸಾರ್ಟಿನ ಹಿತ್ತಲಿನಲ್ಲಿದ್ದ ಸಮುದ್ರ ದಂಡೆಯ ಕಡೆ ಓಡಿದರು.
ಯಾಕೆ ಅಂತ ನೋಡಿದರೆ ಮುಂಬಾಗಿಲಿನಲ್ಲಿ ನಿಂತ ಡಾ.ಅಶೋಕ್ ಕಂಡರು. ಅವರು ಮುಂಚೆ ಎಲ್ಲಾ ಬಸ್ಸು ಓಡಿಸುವುದು, ರಿಯಲ್ ಎಸ್ಟೇಟು ವ್ಯವಹಾರ ಮುಂತಾದ ಕೆಲಸ ಮಾಡುತ್ತಿದ್ದರಂತೆ. ಆದರೆ ಈಗೀಗ ಆಪರೇಷನ್ ಮಾಡಬೇಕಾಗುತ್ತದೆ ಅಂತ ಮೆಡಿಕಲ್ ಕಾಲೇಜು ಸೇರಿಕೊಂಡಿದ್ದರಂತೆ. ಅವರನ್ನು ನೋಡಿಯೇ ಎಮ್ಮೆಲ್ಲೆಗಳು ಓಡಿ ಹೋದರೆ, ಅವರೇನಾದರೂ ಬಂದು ಇವರ ಕೈಹಿಡಿದರೆ ಏನಾಗಬಹುದು ಅಂತ ಅನ್ನಿಸಿತು.
ಪಿಎಚ್ಡಿ ಇನ್ ಬ್ಲಡ್ ಲೆಸ್ ಸರ್ಜರಿ
ಅಯ್ಯೋ ಆವಾಗ ಆರ್ಎಂಪಿ ಡಾಕ್ಟರೆಲ್ಲ ಆಪರೇಷನ್ ಮಾಡ್ತಿದ್ರಿ. ಈಗ ಡಬಲ್ ಡಿಗ್ರಿ ಬೇಕಾಗೈತೆ. ಪೇಷಂಟೇ ಸಿಗಕ್ಕಿಲ್ಲ. ಸಿಕ್ಕರೂ ಪೋಸ್ಟ್ ಆಪರೇಟಿವ್ ಎಕ್ಸ್ ಪೆನ್ಸಸ್ ಅಂತ ಸಿಕ್ಕಾಪಟ್ಟೆ ಹಣ ಕೇಳ್ತಾರೆ. ನಾವು ಎಲ್ಲಕ್ಕೂ ವ್ಯವಸ್ಥೆ ಮಾಡಿದಿರಿ.
ಮೊದಮೊದಲು ನಮಗೂ ಕಲಿಯಕ್ಕೆ ತುಂಬ ಕಷ್ಟ ಆಯಿತು. ಆದರೆ ಮಾಡಿ ಮಾಡಿ ಕಲಿತು ಬಿಟ್ಟಿದ್ದೀರಿ. ನಮ್ಮ ಸರ್ಜರಿ ತುಂಬಾ ಇಂಟರೆಸ್ಟಿಂಗ್. ಮೇಜರ್ ಆಪರೇಷನ್ ಆದರೂ ನೋವಾಗೋದಿಲ್ಲ, ರಕ್ತ ಬರೋದಿಲ್ಲ.
ಸುಮ್ಮನೇ ನೋಡಿ ಯಾವ್ಯಾವ ಪೇಷಂಟ್ ಸಿಕ್ತಾರೆ, ಹೆಂಗೆಂಗೆ ರಿಪೇರಿ ಆಗ್ತಾರೆ ಅಂತ ನೋಡ್ತಾ ಇರಿ ಅಂದರು. ಅವರು ಗ್ಲೌಸು ಹಾಕಿಕೊಳ್ಳುವವರೆಗೆ ನಾನು ಪಕ್ಕಕ್ಕೆ ಸರಿದು ನಿಂತೆ.
(ಮುಗಿಯಿತು)
Print Close
Labels:
BJP spoof Karnataka,
Janardhana Reddy,
Kendasampige,
Sriramulu
In defence of plain language
`!?#$%^&*@@??!': ಗೆಳೆಯರೇ ಇದೇನೆಂದು ದಯವಿಟ್ಟು ಗಳಹುವಿರಾ!
By ಹೃಷಿಕೇಶ್ ಬಹದ್ದೂರ್ ದೇಸಾಯಿ
ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ? ಅದೆಷ್ಟು ಸಾರಿ ಅವರು ಹೇಳಿದ ವಿಷಯಗಳು ನಿಮಗೆ ಅರ್ಥವಾಗಿವೆ? ಅದೆಷ್ಟು ಸಾರಿ ಅವರು ನೀಡಿದ ಹಾಳೆಗಳ ಮೇಲೆ ಪ್ರಿಂಟಾದ ವಿಷಯಗಳನ್ನು ನೀವು ಓದಿದ್ದೀರಿ? ಓದಿದ ಎಷ್ಟು ವಿಷಯ ನಿಮಗೆ ಎಷ್ಟು ಸಾರಿ ಅರ್ಥವಾಗಿದೆ? ಅದು ನಿಮ್ಮ ತಪ್ಪಲ್ಲ. ಆ ಪಾಲಿಸಿಗಳನ್ನು ಬರೆದವರ ತಪ್ಪು.
ಇದು ಯಾಕೆ? ಯಾಕೆಂದರೆ, ಜಗತ್ತಿನ ಎಲ್ಲ ಮಾರಕ ರೋಗಗಳಿಗಿಂತಲೂ ಭಯಂಕರ ರೋಗ ಈಗ ನಮಗೆಲ್ಲ ಅಂಟಿಕೊಂಡಿದೆ.
ಅದರ ಲಕ್ಷಣಗಳೇನೆಂದರೆ
1. ತನಗೆ ಒಂದು ಚೂರೂ ಅರ್ಥವಾಗದ ವಿಷಯದ ಬಗ್ಗೆ ಎಲ್ಲಾ ಗೊತ್ತಿದ್ದವರಂತೆ ಜೋರು ದನಿಯಲ್ಲಿ ಮಾತಾಡುವುದು ಹಾಗೂ
2. ತಾವು ಹೇಳುವ ವಿಷಯಗಳು ಇತರರಿಗೆ ತಿಳಿಯುತ್ತಿದ್ದಾವೋ ಇಲ್ಲವೋ ಎಂಬುದನ್ನು ಗಮನಿಸದೇ ಮಾತಾಡುತ್ತಾ ಹೋಗುವುದು.
ಈ ವ್ಯಾಧಿಯನ್ನು ನೀವು ಸುದ್ದಿ ಮಾಧ್ಯಮಗಳಿಂದ ಹಿಡಿದು, ಜಾಹೀರಾತುಗಳು, ಸರಕಾರದ ನೀತಿಗಳು, ಈಗ ತಾನೆ ಯುರೋಪ್ ಯಾತ್ರೆ ಮುಗಿಸಿಕೊಂಡು ಬಂದ ವಿದೇಶಾಂಗ ವ್ಯವಹಾರ ಮಂತ್ರಿಗಳ ಹೇಳಿಕೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳು, ಯುನಿವರ್ಸಿಟಿಯ ಬುದ್ಧಿಜೀವಿಗಳ ಮಾತಿನಲ್ಲಿ, ಸಮಾಜದ ಅಭಿಪ್ರಾಯ ರೂಪಿಸುವ ಜವಾಬ್ದಾರಿ ಹೊತ್ತುಕೊಂಡಿರುವ ನಾಯಕರ ಸೆಮಿನಾರು ಪೇಪರ್ ಗಳಲ್ಲಿ, ಹಾಗೂ ಇತರ ಕಡೆಗಳಲ್ಲಿ ಕಾಣುತ್ತೀರಿ.
ಉದಾಹರಣೆಗೆ ರೇಡಿಯೋ ಹವಾಮಾನ ವರದಿಯಲ್ಲಿ `ಉತ್ತರ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆ' ಎಂದು ವರ್ಷಾನುಗಟ್ಟಲೇ ಓದಿದ ಉದ್ಘೋಷಕಿಗೆ ತಾನು ಹೇಳುತ್ತಿರುವುದರ ಅರ್ಥ ಒಂದು ದಿನವಾದರೂ ತಿಳಿದಿರಬಹುದೇ?
ದಶಕಗಳಿಂದ `ಪಟ್ಟಭದ್ರ ಹಿತಾಸಕ್ತಿ' ಎಂದು ಪತ್ರಿಕೆ ಹೆಡಲೈನ್ ಗಳಲ್ಲಿ ಓದಿ ಓದಿ ಬೇಜಾರಾದ ಮೇಲೂ ಆ ಶಬ್ದದ ಅರ್ಥ ಏನು, ತಿಳಿಸಿ, ಎಂದು ಯಾರಾದರೂ ವಾಚಕರು ಸಂಪಾದಕರಿಗೆ ಪತ್ರ ಬರೆದರೆ?
ಪಾಕಿಸ್ತಾನದೊಂದಿಗೆ ತೆಗೆದುಕೊಂಡ `ಕಾನ್ಫಿಡೆನ್ಸ್ ಬಿಲ್ಡಿಂಗ್ ಮೆಸರ್ಸ್' ಎಲ್ಲ ನಿರೀಕ್ಷಿತ ಯಶಸ್ಸು ಕಾಣದೇ ಅದಕ್ಕೆ `ಮೋಸ್ಟ್ ಫೇವರ್ಡ್ ನೇಷನ್ ಸ್ಟೇಟಸ್' ಕೊಡಲು ಸಾಧ್ಯವಾಗಿಲ್ಲ ಎಂದು ಸಂಸತ್ತಿನಲ್ಲಿ ವಿದೇಶಾಂಗ ಮಂತ್ರಿ ಹೇಳಿದಾಗ `ಹಂಗಂದ್ರೇನು, ಇನ್ನೊಮ್ಮೆ ಹೇಳಿ' ಅಂತ ಯಾವುದಾದರೂ ಸದಸ್ಯರು ಕೇಳಿದ್ದು ನಿಮಗೆ ನೆನಪಿದೆಯಾ?
`ತಮಿಳುನಾಡಿಗೆ 205 ಟಿಎಂಸಿ ನೀರು ಬಿಡಲು ರಾಜ್ಯ ನಕಾರ' ಎಂದು ಹಗಲೆಲ್ಲಾ ಬರೆಯುವ ಪತ್ರಕರ್ತರಿಗೆ ಕಾವೇರಿ ನೀರು ಒಪ್ಪಂದ, ನದಿ ನೀರು ಹಂಚಿಕೆ ನ್ಯಾಯಾಧಿಕರಣದ ತೀರ್ಪು, ಇತ್ಯಾದಿ ವಿಷಯಗಳ ಬಗ್ಗೆ ಗೊತ್ತಿರುತ್ತವೆಯೇ?
`ರಕ್ತ ಕೊಟ್ಟೇವು, ನೀರು ಕೊಡೆವು' ಎಂದು ಹೇಳುವ ರೈತ ನಾಯಕರಿಗೆ ಒಂದು ಟೀಮ್ಮಿಸಿ ಎಂದರೆ ಎಷ್ಟು ಲೀಟರ್ ನೀರು, ಒಂದು ವೇಳೆ ತಲೈವಾರ್ ಕರುಣಾನಿಧಿ ಅವರು ನೀರು ಬೇಡ, ಅದೇನೋ ಕೊಡ್ತೇನಿ ಅಂದ್ರಲ್ಲಾ, ಅದನ್ನೇ ಕೊಡಿ ಎಂದರೆ ಎಷ್ಟು ರಕ್ತ ಕೊಡಬೇಕಾಗುತ್ತದೆ ಅಂತ ಗೊತ್ತೆ? ಹೋಗಲಿ, ಅವರಿಗೆ ಇದನ್ನೆಲ್ಲಾ ತಿಳಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಪೇಪರುಗಳು, ಚಾನ್ನೆಲ್ಲುಗಳ ಅನ್ಯಾಲಿಸ್ಟುಗಳಿಗಾದರೂ ಗೊತ್ತೆ?
ಇದೇನು ಹೊಸ ರೋಗವೇ? ಹಂಗೇನಿಲ್ಲ. ಸುದ್ದಿ ಎನ್ನುವುದನ್ನು ಮಾರಾಟದ ಸರಕನ್ನಾಗಿ ಮಾಡಿದ ವಿಶ್ವದ ಮೊದಲ ಯಶಸ್ವೀ ಮೀಡಿಯಾ ಬ್ಯಾರನ್ ಎನ್ನಿಸಿಕೊಂಡ ಲಾರ್ಡ್ ನಾರ್ಥಕ್ಲಿಫ್ 19ನೇ ಶತಮಾನದ ಬ್ರಿಟನ್ನಿನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬನಾಗಿದ್ದ. ಅಂದಿನ ಗುಣಮಾನಕ್ಕೆ ತಕ್ಕಂತೆ ಅವನು ಎರಡು ಮಾತು ಹೇಳಿದ.
1. ``ತನಗೇ ತಿಳಿಯಲಾರದ ವಿಷಯಗಳನ್ನು ಇತರರಿಗೆ ತಿಳಿ ಹೇಳುವ ವೃತ್ತಿಗೆ ಪತ್ರಿಕೋದ್ಯಮ ಎಂದು ಹೆಸರು.''
2. ``ಎಲ್ಲೊ ಒಂದು ಕಡೆ ಯಾರೋ ಒಬ್ಬರು ಯಾವುದೋ ಒಂದು ವಿಷಯವನ್ನು ಮುಚ್ಚಿ ಇಡಲಿಕ್ಕೆ ಪ್ರಯತ್ನ ನಡೆಸಿದ್ದರೆ ಅದು ಸುದ್ದಿ. ಉಳಿದಿದ್ದೆಲ್ಲ ಜಾಹೀರಾತು.''
ಅವನ ಮಾತುಗಳು ಇಂದಿಗೂ ನಿಜವೆನ್ನಿಸುತ್ತವೆ.
ಇದಕ್ಕೆ ಪರಿಹಾರವೇನು? ಈ ಅರೆತಿಳವಳಿಕೆ(ಅರವಳಿಕೆ?)ಯ ಜಂಗಲ್ಲಿನಲ್ಲಿ ನಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಡಲು ಕೆಂಡಸಂಪಿಗೆಯ ಸ್ನೇಹಿತರು ಒಂದು ಸಣ್ಣ ಪ್ರಯತ್ನ ಮಾಡಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಅತೀವ ಆಸಕ್ತಿ ಇದ್ದವರು ಏನೂ ತಿಳಿಯದವರಿಗೆ ಸಣ್ಣ ಸಣ್ಣ ಕ್ಯಾಪ್ಸೂಲ್ ಗಳಲ್ಲಿ ತಿಳಿ ಹೇಳಲಿದ್ದಾರೆ.
ಹೊಸ ವಿಷಯಗಳ ಬಗ್ಗೆ ಕುತೂಹಲ ಕೆರಳುವಂತೆ, ಕಡಿಮೆ ಶಬ್ದಗಳಲ್ಲಿ ವಿವರಿಸಲಿದ್ದಾರೆ. ಇದರಲ್ಲಿ ನೀವೂ ಭಾಗವಹಿಸಬಹುದು. ನಿಮಗೆ ತಿಳಿದ ವಿಷಯಗಳ ಬಗ್ಗೆ, ನಿಮ್ಮ ಹಾಬಿಯ ಬಗ್ಗೆ, ನೀವು ಅತೀವ ಪ್ರೇಮದಿಂದ ಹುಡುಕಾಡಿ ಕಲೆ ಹಾಕಿರುವ ಮಾಹಿತಿಗಳ ಬಗ್ಗೆ, ಇತರರಿಗೆ ತಿಳಿಯುವಂತೆ ಸರಳವಾಗಿ, ಜೀವಂತಿಕೆಯಿಂದ ಹೇಳಿ.
ಬರಹಗಳು ಅಕಾಡೆಮಿಕ್ ಆಗಿರುವುದು ಬೇಡ. ಸೆಮಿನಾರ್ ಪೇಪರ್ ಗಳಂತೆ ಬೋರಿಂಗ್ ಆಗಿರಬೇಕಿಲ್ಲ. ವಿಕಿಪೀಡಿಯಾ ಎಂಟ್ರಿಗಳ ಥರ ಮಸಾಲೆ ರಹಿತವೂ ಆಗಬೇಕಾದ್ದಿಲ್ಲ.
ಇದಕ್ಕೆ ಇಂಥದ್ದೇ ಅಂತ ಫಾರ್ಮ್ಯಾಟ್ ಇಲ್ಲ. ಕತೆ-ದೃಷ್ಟಾಂತಗಳ ಮೂಲಕ, ಅಥವಾ ಪ್ರಶ್ನೆ-ಉತ್ತರ ರೂಪದಲ್ಲಿ, ಸ್ವಗತದ ರೂಪದಲ್ಲಿ, ವ್ಯಾಖ್ಯಾನದ ರೂಪದಲ್ಲಿ, ಅಥವಾ ಇನ್ನಾವುದೋ ರೂಪದಲ್ಲಿ ಇರಬಹುದು. ನಿಮಗೆ ಹೇಳಲು ಅನುಕೂಲವಾದದ್ದು ಇತರರಿಗೆ ಕೇಳಲು ಅನುಕೂಲ.
ಬೇಂದ್ರೆಯವರು ತಮ್ಮ ಕವನವೊಂದರಲ್ಲಿ ಹೊಸ ಹುಟ್ಟಿನ ಬಗ್ಗೆ ವಿವರಿಸಿದ್ದು ಹೀಗೆ.
`ಕುದುರಿಯವರು ಬಂದಾರವ್ವಾ
ಕುದುರಿಯವರು ಬಂದಾರ'
`ಉಸುರಿಗೊಂದು ಹೆಸರು ಕೊಟ್ಟು,
ಹೆಸರಿಗೊಂದು ಕುಸುರು ಕೊಟ್ಟು,
ಏನೇನೋ ಅಂದಾರವ್ವಾ,
ಏನೇನೋ ಅಂದಾರ,
ಕುದುರಿಯವರು ಬಂದಾರ'
ಇಲ್ಲಿ `ಕುದುರಿಯವರು' ಎಂದರೆ ಕಲಾವಿದರು, ವಿಜ್ಞಾನಿಗಳು. `ಉಸಿರು' ಎಂದರೆ ಜೀವನ, `ಹೆಸರು ಕೊಡುವುದು' ಎಂದರೆ ವಿಷಯವೊಂದನ್ನು ಗುರುತಿಸಿ, ಹುಡುಕಿ ತೆಗೆದು, ತೊಳೆದು, ಇತರರಿಗೆ ತಿಳಿಯುವಂತೆ ಮಾಡುವುದು. `ಕುಸುರು ಕೊಡುವುದು' ಎಂದರೆ ಅದನ್ನು ಚಂದ ಕಾಣುವಂತೆ ಮಾಡುವುದು. `ಏನೇನೋ ಅಂದಾರ' ಎನ್ನುವುದು ಹೊಸ ವಿಷಯವೊಂದನ್ನು ತಿಳಿದ ಸಾದಾ ಮನುಷ್ಯನ ಬೆರಗು. ತಮಗೆ ಕಂಡದ್ದನ್ನು ಇತರರಿಗೆ ಖುಷಿಯಿಂದ ತೋರಿಸಲು ಇಷ್ಟು ಸಾಕಲ್ಲವೇ? ಬರೆದ ಮೇಲೆ ಯಾವ ಮುಲಾಜೂ ಇಲ್ಲದೆ ನಮ್ಮ ಎಡಿಟರ್ ಸಾಹೇಬರ editor@kendasampige.com ಎಂಬ ಈಮೇಲ್ವಿಳಾಸಕ್ಕೆ ಕಳುಹಿಸುವಿರಾ ಗೆಳೆಯರೇ ಮತ್ತು ಗೆಳತಿಯರೇ...
Print Close
By ಹೃಷಿಕೇಶ್ ಬಹದ್ದೂರ್ ದೇಸಾಯಿ
ನಿಮ್ಮ ದೂರದ ಸಂಬಂಧಿಕರಾದ (ಹಾಗೆಂದು ಅವರೇ ಹೇಳಿಕೊಂಡ) ಎಲ್ಲೈಸಿ ಏಜೆಂಟರು ನಿಮ್ಮ ಮನೆಗೆ ಬಂದು ನಿಮ್ಮ ಚಹಾ ಕುಡಿದು, ನಿಮ್ಮದೇ ಹಣ ಪಡೆದು, ಬಿಳೀ ಹಾಳೆಯ ಮೇಲೆ ನಿಮ್ಮ ಸಹಿ ಮಾಡಿಸಿಕೊಂಡಿದ್ದು ಎಷ್ಟು ಸಾರಿ? ಅದೆಷ್ಟು ಸಾರಿ ಅವರು ಹೇಳಿದ ವಿಷಯಗಳು ನಿಮಗೆ ಅರ್ಥವಾಗಿವೆ? ಅದೆಷ್ಟು ಸಾರಿ ಅವರು ನೀಡಿದ ಹಾಳೆಗಳ ಮೇಲೆ ಪ್ರಿಂಟಾದ ವಿಷಯಗಳನ್ನು ನೀವು ಓದಿದ್ದೀರಿ? ಓದಿದ ಎಷ್ಟು ವಿಷಯ ನಿಮಗೆ ಎಷ್ಟು ಸಾರಿ ಅರ್ಥವಾಗಿದೆ? ಅದು ನಿಮ್ಮ ತಪ್ಪಲ್ಲ. ಆ ಪಾಲಿಸಿಗಳನ್ನು ಬರೆದವರ ತಪ್ಪು.
ಇದು ಯಾಕೆ? ಯಾಕೆಂದರೆ, ಜಗತ್ತಿನ ಎಲ್ಲ ಮಾರಕ ರೋಗಗಳಿಗಿಂತಲೂ ಭಯಂಕರ ರೋಗ ಈಗ ನಮಗೆಲ್ಲ ಅಂಟಿಕೊಂಡಿದೆ.
ಅದರ ಲಕ್ಷಣಗಳೇನೆಂದರೆ
1. ತನಗೆ ಒಂದು ಚೂರೂ ಅರ್ಥವಾಗದ ವಿಷಯದ ಬಗ್ಗೆ ಎಲ್ಲಾ ಗೊತ್ತಿದ್ದವರಂತೆ ಜೋರು ದನಿಯಲ್ಲಿ ಮಾತಾಡುವುದು ಹಾಗೂ
2. ತಾವು ಹೇಳುವ ವಿಷಯಗಳು ಇತರರಿಗೆ ತಿಳಿಯುತ್ತಿದ್ದಾವೋ ಇಲ್ಲವೋ ಎಂಬುದನ್ನು ಗಮನಿಸದೇ ಮಾತಾಡುತ್ತಾ ಹೋಗುವುದು.
ಈ ವ್ಯಾಧಿಯನ್ನು ನೀವು ಸುದ್ದಿ ಮಾಧ್ಯಮಗಳಿಂದ ಹಿಡಿದು, ಜಾಹೀರಾತುಗಳು, ಸರಕಾರದ ನೀತಿಗಳು, ಈಗ ತಾನೆ ಯುರೋಪ್ ಯಾತ್ರೆ ಮುಗಿಸಿಕೊಂಡು ಬಂದ ವಿದೇಶಾಂಗ ವ್ಯವಹಾರ ಮಂತ್ರಿಗಳ ಹೇಳಿಕೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳು, ಯುನಿವರ್ಸಿಟಿಯ ಬುದ್ಧಿಜೀವಿಗಳ ಮಾತಿನಲ್ಲಿ, ಸಮಾಜದ ಅಭಿಪ್ರಾಯ ರೂಪಿಸುವ ಜವಾಬ್ದಾರಿ ಹೊತ್ತುಕೊಂಡಿರುವ ನಾಯಕರ ಸೆಮಿನಾರು ಪೇಪರ್ ಗಳಲ್ಲಿ, ಹಾಗೂ ಇತರ ಕಡೆಗಳಲ್ಲಿ ಕಾಣುತ್ತೀರಿ.
ಉದಾಹರಣೆಗೆ ರೇಡಿಯೋ ಹವಾಮಾನ ವರದಿಯಲ್ಲಿ `ಉತ್ತರ ಒಳನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆ' ಎಂದು ವರ್ಷಾನುಗಟ್ಟಲೇ ಓದಿದ ಉದ್ಘೋಷಕಿಗೆ ತಾನು ಹೇಳುತ್ತಿರುವುದರ ಅರ್ಥ ಒಂದು ದಿನವಾದರೂ ತಿಳಿದಿರಬಹುದೇ?
ದಶಕಗಳಿಂದ `ಪಟ್ಟಭದ್ರ ಹಿತಾಸಕ್ತಿ' ಎಂದು ಪತ್ರಿಕೆ ಹೆಡಲೈನ್ ಗಳಲ್ಲಿ ಓದಿ ಓದಿ ಬೇಜಾರಾದ ಮೇಲೂ ಆ ಶಬ್ದದ ಅರ್ಥ ಏನು, ತಿಳಿಸಿ, ಎಂದು ಯಾರಾದರೂ ವಾಚಕರು ಸಂಪಾದಕರಿಗೆ ಪತ್ರ ಬರೆದರೆ?
ಪಾಕಿಸ್ತಾನದೊಂದಿಗೆ ತೆಗೆದುಕೊಂಡ `ಕಾನ್ಫಿಡೆನ್ಸ್ ಬಿಲ್ಡಿಂಗ್ ಮೆಸರ್ಸ್' ಎಲ್ಲ ನಿರೀಕ್ಷಿತ ಯಶಸ್ಸು ಕಾಣದೇ ಅದಕ್ಕೆ `ಮೋಸ್ಟ್ ಫೇವರ್ಡ್ ನೇಷನ್ ಸ್ಟೇಟಸ್' ಕೊಡಲು ಸಾಧ್ಯವಾಗಿಲ್ಲ ಎಂದು ಸಂಸತ್ತಿನಲ್ಲಿ ವಿದೇಶಾಂಗ ಮಂತ್ರಿ ಹೇಳಿದಾಗ `ಹಂಗಂದ್ರೇನು, ಇನ್ನೊಮ್ಮೆ ಹೇಳಿ' ಅಂತ ಯಾವುದಾದರೂ ಸದಸ್ಯರು ಕೇಳಿದ್ದು ನಿಮಗೆ ನೆನಪಿದೆಯಾ?
`ತಮಿಳುನಾಡಿಗೆ 205 ಟಿಎಂಸಿ ನೀರು ಬಿಡಲು ರಾಜ್ಯ ನಕಾರ' ಎಂದು ಹಗಲೆಲ್ಲಾ ಬರೆಯುವ ಪತ್ರಕರ್ತರಿಗೆ ಕಾವೇರಿ ನೀರು ಒಪ್ಪಂದ, ನದಿ ನೀರು ಹಂಚಿಕೆ ನ್ಯಾಯಾಧಿಕರಣದ ತೀರ್ಪು, ಇತ್ಯಾದಿ ವಿಷಯಗಳ ಬಗ್ಗೆ ಗೊತ್ತಿರುತ್ತವೆಯೇ?
`ರಕ್ತ ಕೊಟ್ಟೇವು, ನೀರು ಕೊಡೆವು' ಎಂದು ಹೇಳುವ ರೈತ ನಾಯಕರಿಗೆ ಒಂದು ಟೀಮ್ಮಿಸಿ ಎಂದರೆ ಎಷ್ಟು ಲೀಟರ್ ನೀರು, ಒಂದು ವೇಳೆ ತಲೈವಾರ್ ಕರುಣಾನಿಧಿ ಅವರು ನೀರು ಬೇಡ, ಅದೇನೋ ಕೊಡ್ತೇನಿ ಅಂದ್ರಲ್ಲಾ, ಅದನ್ನೇ ಕೊಡಿ ಎಂದರೆ ಎಷ್ಟು ರಕ್ತ ಕೊಡಬೇಕಾಗುತ್ತದೆ ಅಂತ ಗೊತ್ತೆ? ಹೋಗಲಿ, ಅವರಿಗೆ ಇದನ್ನೆಲ್ಲಾ ತಿಳಿಸುವ ಜವಾಬ್ದಾರಿ ಹೊತ್ತುಕೊಂಡಿರುವ ಪೇಪರುಗಳು, ಚಾನ್ನೆಲ್ಲುಗಳ ಅನ್ಯಾಲಿಸ್ಟುಗಳಿಗಾದರೂ ಗೊತ್ತೆ?
ಇದೇನು ಹೊಸ ರೋಗವೇ? ಹಂಗೇನಿಲ್ಲ. ಸುದ್ದಿ ಎನ್ನುವುದನ್ನು ಮಾರಾಟದ ಸರಕನ್ನಾಗಿ ಮಾಡಿದ ವಿಶ್ವದ ಮೊದಲ ಯಶಸ್ವೀ ಮೀಡಿಯಾ ಬ್ಯಾರನ್ ಎನ್ನಿಸಿಕೊಂಡ ಲಾರ್ಡ್ ನಾರ್ಥಕ್ಲಿಫ್ 19ನೇ ಶತಮಾನದ ಬ್ರಿಟನ್ನಿನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬನಾಗಿದ್ದ. ಅಂದಿನ ಗುಣಮಾನಕ್ಕೆ ತಕ್ಕಂತೆ ಅವನು ಎರಡು ಮಾತು ಹೇಳಿದ.
1. ``ತನಗೇ ತಿಳಿಯಲಾರದ ವಿಷಯಗಳನ್ನು ಇತರರಿಗೆ ತಿಳಿ ಹೇಳುವ ವೃತ್ತಿಗೆ ಪತ್ರಿಕೋದ್ಯಮ ಎಂದು ಹೆಸರು.''
2. ``ಎಲ್ಲೊ ಒಂದು ಕಡೆ ಯಾರೋ ಒಬ್ಬರು ಯಾವುದೋ ಒಂದು ವಿಷಯವನ್ನು ಮುಚ್ಚಿ ಇಡಲಿಕ್ಕೆ ಪ್ರಯತ್ನ ನಡೆಸಿದ್ದರೆ ಅದು ಸುದ್ದಿ. ಉಳಿದಿದ್ದೆಲ್ಲ ಜಾಹೀರಾತು.''
ಅವನ ಮಾತುಗಳು ಇಂದಿಗೂ ನಿಜವೆನ್ನಿಸುತ್ತವೆ.
ಇದಕ್ಕೆ ಪರಿಹಾರವೇನು? ಈ ಅರೆತಿಳವಳಿಕೆ(ಅರವಳಿಕೆ?)ಯ ಜಂಗಲ್ಲಿನಲ್ಲಿ ನಮ್ಮ ಸುತ್ತಮುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಡಲು ಕೆಂಡಸಂಪಿಗೆಯ ಸ್ನೇಹಿತರು ಒಂದು ಸಣ್ಣ ಪ್ರಯತ್ನ ಮಾಡಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಅತೀವ ಆಸಕ್ತಿ ಇದ್ದವರು ಏನೂ ತಿಳಿಯದವರಿಗೆ ಸಣ್ಣ ಸಣ್ಣ ಕ್ಯಾಪ್ಸೂಲ್ ಗಳಲ್ಲಿ ತಿಳಿ ಹೇಳಲಿದ್ದಾರೆ.
ಹೊಸ ವಿಷಯಗಳ ಬಗ್ಗೆ ಕುತೂಹಲ ಕೆರಳುವಂತೆ, ಕಡಿಮೆ ಶಬ್ದಗಳಲ್ಲಿ ವಿವರಿಸಲಿದ್ದಾರೆ. ಇದರಲ್ಲಿ ನೀವೂ ಭಾಗವಹಿಸಬಹುದು. ನಿಮಗೆ ತಿಳಿದ ವಿಷಯಗಳ ಬಗ್ಗೆ, ನಿಮ್ಮ ಹಾಬಿಯ ಬಗ್ಗೆ, ನೀವು ಅತೀವ ಪ್ರೇಮದಿಂದ ಹುಡುಕಾಡಿ ಕಲೆ ಹಾಕಿರುವ ಮಾಹಿತಿಗಳ ಬಗ್ಗೆ, ಇತರರಿಗೆ ತಿಳಿಯುವಂತೆ ಸರಳವಾಗಿ, ಜೀವಂತಿಕೆಯಿಂದ ಹೇಳಿ.
ಬರಹಗಳು ಅಕಾಡೆಮಿಕ್ ಆಗಿರುವುದು ಬೇಡ. ಸೆಮಿನಾರ್ ಪೇಪರ್ ಗಳಂತೆ ಬೋರಿಂಗ್ ಆಗಿರಬೇಕಿಲ್ಲ. ವಿಕಿಪೀಡಿಯಾ ಎಂಟ್ರಿಗಳ ಥರ ಮಸಾಲೆ ರಹಿತವೂ ಆಗಬೇಕಾದ್ದಿಲ್ಲ.
ಇದಕ್ಕೆ ಇಂಥದ್ದೇ ಅಂತ ಫಾರ್ಮ್ಯಾಟ್ ಇಲ್ಲ. ಕತೆ-ದೃಷ್ಟಾಂತಗಳ ಮೂಲಕ, ಅಥವಾ ಪ್ರಶ್ನೆ-ಉತ್ತರ ರೂಪದಲ್ಲಿ, ಸ್ವಗತದ ರೂಪದಲ್ಲಿ, ವ್ಯಾಖ್ಯಾನದ ರೂಪದಲ್ಲಿ, ಅಥವಾ ಇನ್ನಾವುದೋ ರೂಪದಲ್ಲಿ ಇರಬಹುದು. ನಿಮಗೆ ಹೇಳಲು ಅನುಕೂಲವಾದದ್ದು ಇತರರಿಗೆ ಕೇಳಲು ಅನುಕೂಲ.
ಬೇಂದ್ರೆಯವರು ತಮ್ಮ ಕವನವೊಂದರಲ್ಲಿ ಹೊಸ ಹುಟ್ಟಿನ ಬಗ್ಗೆ ವಿವರಿಸಿದ್ದು ಹೀಗೆ.
`ಕುದುರಿಯವರು ಬಂದಾರವ್ವಾ
ಕುದುರಿಯವರು ಬಂದಾರ'
`ಉಸುರಿಗೊಂದು ಹೆಸರು ಕೊಟ್ಟು,
ಹೆಸರಿಗೊಂದು ಕುಸುರು ಕೊಟ್ಟು,
ಏನೇನೋ ಅಂದಾರವ್ವಾ,
ಏನೇನೋ ಅಂದಾರ,
ಕುದುರಿಯವರು ಬಂದಾರ'
ಇಲ್ಲಿ `ಕುದುರಿಯವರು' ಎಂದರೆ ಕಲಾವಿದರು, ವಿಜ್ಞಾನಿಗಳು. `ಉಸಿರು' ಎಂದರೆ ಜೀವನ, `ಹೆಸರು ಕೊಡುವುದು' ಎಂದರೆ ವಿಷಯವೊಂದನ್ನು ಗುರುತಿಸಿ, ಹುಡುಕಿ ತೆಗೆದು, ತೊಳೆದು, ಇತರರಿಗೆ ತಿಳಿಯುವಂತೆ ಮಾಡುವುದು. `ಕುಸುರು ಕೊಡುವುದು' ಎಂದರೆ ಅದನ್ನು ಚಂದ ಕಾಣುವಂತೆ ಮಾಡುವುದು. `ಏನೇನೋ ಅಂದಾರ' ಎನ್ನುವುದು ಹೊಸ ವಿಷಯವೊಂದನ್ನು ತಿಳಿದ ಸಾದಾ ಮನುಷ್ಯನ ಬೆರಗು. ತಮಗೆ ಕಂಡದ್ದನ್ನು ಇತರರಿಗೆ ಖುಷಿಯಿಂದ ತೋರಿಸಲು ಇಷ್ಟು ಸಾಕಲ್ಲವೇ? ಬರೆದ ಮೇಲೆ ಯಾವ ಮುಲಾಜೂ ಇಲ್ಲದೆ ನಮ್ಮ ಎಡಿಟರ್ ಸಾಹೇಬರ editor@kendasampige.com ಎಂಬ ಈಮೇಲ್ವಿಳಾಸಕ್ಕೆ ಕಳುಹಿಸುವಿರಾ ಗೆಳೆಯರೇ ಮತ್ತು ಗೆಳತಿಯರೇ...
Print Close
Democracy for Dummies-1
ಬಡಪಾಯಿಗಳಿಗೆ ಕೆಲವು ಡೆಮಾಕ್ರಸಿ ಪಾಠಗಳು
By ಹೃಷಿಕೇಶ್ ಬಹದ್ದೂರ್ ದೇಸಾಯಿ
ಕರುನಾಡಲ್ಲಿ ಉಂಟಾಗುತ್ತಿರುವ ತಳಮಳಗಳ ಅರಿವಾಗದೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಬಡಪಾಯಿಗಳಿಗಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿಕೊಡುವ ಕೆಲವು ಪ್ರಾಥಮಿಕ ಪಾಠಗಳು ಇಲ್ಲಿವೆ
ಸೋಮವಾರ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಟಾಖಟಿಯನ್ನು ಟಿವಿಯಲ್ಲಿ ನೋಡಿದವರಿಗೆ ಗೊಂದಲ ಆಗಿರಬಹುದು, ಏನೂ ತಿಳಿಯದೇ ಇರದಿರಬಹುದು ಅಥವಾ ಪೂರ್ವಯೋರೋಪಿನ ದೇಶದ ಕಾಮೆಡಿ ಚಿತ್ರ ನೋಡಿದ ಅನುಭವ ಆಗಿರಬಹುದು. ಅಂಥವರು ಟಿವಿ ಚಾನೆಲ್ ಅನ್ನು ಮ್ಯೂಟ್ ಆಗಿಟ್ಟಿರಬಹುದು. ಹಾಗೆಂದು ಅವರಿಗೇನೂ ಮನರಂಜನೆ ಕಮ್ಮಿ ಆಗಿರಲಿಕ್ಕಿಲ್ಲ.
ಹಾಗಾದರೆ ನಿಜವಾಗಿಯೂ ನಡೆದದ್ದೇನು? ಎನ್ನುವ ವಿಷಯದ ಬಗ್ಗೆ ಬರೆಯೋಣ ಎನ್ನಿಸಿತು. ಹೇಗೂ ಇದು ಕಂಪ್ಯೂಟರ್ಸ್ ಫಾರ್ ಡಮ್ಮೀಸ್ ಸರಣಿಯಲ್ಲಿ ಡೆಮಾಕ್ರೆಸಿ ಫಾರ್ ದ ಇನ್ ಡಿಫರೆಂಟ್ ಎಂದು ಪುಸ್ತಕರೂಪದಲ್ಲಿ ಹೊರಬರಲಿದೆ. ಕೆಂಡಸಂಪಿಗೆ ಓದುಗರಿಗಾಗಿ ಇದೊಂದು ಪೈರೆಟೆಡ್ ಕಾಪಿ.
೧. ಐದೈದು ವರ್ಷಕ್ಕೆ ಬರಬೇಕಾದ ಆದರೆ ಹಗಲೆಲ್ಲ ಬರುವ ಕಾಮೆಡಿ ಬೀದಿ ನಾಟಕಗಳಿಗೆ ಚುನಾವಣೆಗಳು ಎಂದು ಹೆಸರು.
೨. ಇಂಥಾ ಚುನಾವಣೆಗಳಲ್ಲಿ ನಾವು ನಮ್ಮ ಪರವಾಗಿ ಶಾಸನ ಮಾಡುವ ಹಾಗೂ ವಿವಿಧ ಇಲಾಖೆಗಳು ವೆಚ್ಚ ಮಾಡುವ ಹಣದ ಲೆಕ್ಕ ತಪಾಸು ಮಾಡಲು ಕಳಿಸುವ ಜನರಿಗೆ ಶಾಸಕ ಅಥವಾ ಎಮ್ಮೆಲ್ಲೆ ಎಂದು ಹೆಸರು.
೩. ತಾಯಿ ಭುವನೇಶ್ವರಿಯ ಕೃಪೆಯಿಂದ ಆರಿಸಿ ಬಂದ ಇಂಥ ಪುಣ್ಯಾತ್ಮರು ರಾಜ್ಯದಲ್ಲಿ ೨೨೪ ಜನ ಇದ್ದಾರೆ. ಇವರಲ್ಲಿ ೧೧೭ ಜನ ಬಿಜೆಪಿಯವರು. ೭೪ ಕಾಂಗ್ರೆಸ್ಸಿಗರು. ೨೮ ಜನ ಜಾತ್ಯತೀತ ಜನತಾದಳಕ್ಕೆ ಸೇರಿದವರು. ಇತರ ಆರು ಜನ ಪಕ್ಷೇತರರು. ಇವರಲ್ಲಿ ಐದು ಜನ ಬಿಜೆಪಿ ಸರಕಾರವನ್ನು ಬೆಂಬಲಿಸಿದ್ದರು.
೪. ಈ ಪಕ್ಷಾತೀತರು ಹಾಗೂ ಬಿಜೆಪಿಯ ೧೧ ಜನ ಶಾಸಕರ ಸದಸ್ಯತ್ವವನ್ನು ಸ್ಪೀಕರ್ ಕೆಜಿ ಬೋಪಯ್ಯನವರು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ರದ್ದು ಮಾಡಿದ್ದಾರೆ.
೫. ಬೂಕನಕೆರೆ ಸಿದ್ದಲಿಂಗಪ್ಪ ಯಡ್ಡೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ. ಅದಕ್ಕೂ ಮೊದಲು ಅವರು ಒಬ್ಬ ಎಮ್ಮೆಲ್ಲೆ.
೬. ಒಂದೇ ರಾಜಕೀಯ ಪಕ್ಷದ ಎಮ್ಮೆಲ್ಲೆಗಳು ಇರುವ ಗುಂಪಿಗೆ ಶಾಸಕಾಂಗ ಪಕ್ಷ ಅಥವಾ ಎಲ್.ಪಿ ಎಂದು ಹೆಸರು. ಅವರು ಚುನಾಯಿಸಿದ ನಾಯಕನನ್ನು ರಾಜ್ಯಪಾಲರು ಮುಖ್ಯಮಂತ್ರಿ ಎಂದು ನೇಮಿಸುತ್ತಾರೆ. ಬಿ.ಎಸ್.ವೈ ಅವರು ಈ ರೀತಿ ಮುಖ್ಯಮಂತ್ರಿ ಆದವರು. ಮುಖ್ಯಮಂತ್ರಿಯಾದವನ ಪಕ್ಷವೇ ಆಡಳಿತ ಪಕ್ಷ. ಆಡಳಿತದಲ್ಲಿ ಭಾಗವಹಿಸಲು ಬಯಸದ ಪಕ್ಷವೇ ವಿರೋಧ ಪಕ್ಷ. ಮಜಾ ಎಂದರೆ ವಿರೋಧ ಪಕ್ಷ ಎನ್ನುವ ಶಬ್ದ ಸಂವಿಧಾನದಲ್ಲಿ ಇದೆ. ಆಡಳಿತ ಪಕ್ಷ ಎನ್ನುವ ಶಬ್ದ ಇಲ್ಲ.
೭. ಈ ರೀತಿ ಮು.ಮ ಆದವರು ತಮ್ಮ ಎಲ್.ಪಿ.ಯ ವಿಶ್ವಾಸವನ್ನೂ, ಸದನದಲ್ಲಿ ಬಹುಮತವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಅದೆರಡರಲ್ಲಿ ಒಂದನ್ನು ಅವರು ಕಳೆದುಕೊಂಡ ದಿನದಿಂದ ಅವರ ಕುರ್ಚಿಯ ಕೆಳಗಿನ ಭೂಮಿ ಕಂಪಿಸಲಾರಂಭಿಸುತ್ತದೆ.
೮. ಈ ರೀತಿ ತಾವೇ ಆರಿಸಿದ ಮು.ಮ.ರಲ್ಲಿ ವಿಶ್ವಾಸ ಕಳೆದುಕೊಂಡವರು ಭಿನ್ನಮತೀಯರು, ಬಂಡಾಯಗಾರರು, ಅತೃಪ್ತರು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಅವರು ಆ ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಇವರೆಲ್ಲ ಭೂಪರನ್ನು ಆರಿಸಿ ಕಳಿಸಿದ ಮತದಾರರಿಗೆ ಅವರನ್ನು ವಾಪಸ್ ಕರೆಸಿಕೊಳ್ಳುವ ಅವಕಾಶ ಇಲ್ಲ. ಗ್ರೀಸ್, ಸ್ವೀಡನ್ ಮುಂತಾದ ದೇಶಗಳಲ್ಲಿ ಈ ಅಧಿಕಾರ ಮತದಾರನಿಗೆ ಇದೆ.
೯. ರಾಜ್ಯಪಾಲರು ಎಂದರೆ ಕೇಂದ್ರ ಸರಕಾರದಲ್ಲಿ ನಿವೃತ್ತಿಯ ವಯಸ್ಸನ್ನು ಮೀರಿದ, ದೆಹಲಿ ರಾಜಕೀಯ ಮಾಡಲು ತಾಕತ್ತು ಕಳೆದುಕೊಂಡ, ಪಿಂಚಣಿ ಸೌಲಭ್ಯಕ್ಕಾಗಿ ಹಪಹಪಿಸುವ ಪುಢಾರಿಗಳು ಎಂದು ಅರ್ಥವಲ್ಲ. ಅಥವಾ ಹೈದರಾಬಾದಿನಲ್ಲಿದ್ದಂತೆ ರಾಜಭವನವನ್ನು ಸ್ವಾಮಿ ನಿತ್ಯಾನಂದನ ಆಶ್ರಮವನ್ನಾಗಿ ಪರಿವರ್ತಿಸಿದವರು ಅಂತಲೂ ಅಲ್ಲ. ರಾಜ್ಯದ ಆಡಳಿತ ಸಂವಿಧಾನದ ಪ್ರಕಾರ ನಡೆಯುತ್ತಿದೆಯೋ ಇಲ್ಲವೋ ಎಂದು ನೋಡಲು ರಾಷ್ಟ್ರಾಧ್ಯಕ್ಷರು ನೇಮಿಸಿದ ಸಾಂವಿಧಾನಿಕ ಅಧಿಕಾರಿ.
೧೦. ಈ ಅಧಿಕಾರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಸಂವಿಧಾನ ಬದ್ಧವಾಗಿ ಆಡಳಿತ ನಡೆಯುತ್ತಿಲ್ಲ, ರಾಜ್ಯ ಭಾರತವನ್ನು ಬಿಟ್ಟು ಹೊರಗೆ ಹೋಗುವ ಸಂಚು ನಡೆಸುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯದ ಆಡಳಿತವನ್ನು ಕೊನೆಗಾಣಿಸಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಬಹುದು.
೧೧. ಹಿಂದಿನ ವರ್ಷಗಳಲ್ಲಿ ಮುಖ್ಯಮಂತ್ರಿಯ ಮುಖ ಸರಿಯಾಗಿಲ್ಲ ಎಂಬ ಕಾರಣದಿಂದಲೂ ದೆಹಲಿಗೆ ವರದಿ ಕಳಿಸಿದ ರಾಜ್ಯಪಾಲರು ಇದ್ದರು. ರಾಜ್ಯಪಾಲರ ವರದಿಗೆ ಕಾಯದೇ ರಾಷ್ಟ್ರಪತಿ ಆಡಳಿತ ಹೇರಿದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳೂ ಇದ್ದರು. ಬೊಮ್ಮಾಯಿ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನ ನಿರ್ಣಯದ ನಂತರ ಇದು ಸ್ವಲ್ಪ ಕಡಿಮೆ ಆದಂತೆ ಕಾಣುತ್ತದೆ ಎಂದು ಬಲ್ಲವರು ಹೇಳುತ್ತಾರೆ.
೧೨. ಚುನಾವಣೆಯ ನಂತರ ಯಾವೊಬ್ಬ ಶಾಸಕನೂ ಇತರ ಶಾಸಕರ ವಿಶ್ವಾಸ ಗಳಿಸಿ ಮುಖ್ಯಮಂತ್ರಿ ಆಗಲು ಅರ್ಹತೆ ಗಳಿಸದಿದ್ದಾಗ ರಾಜ್ಯಪಾಲರು ತಮ್ಮ ಮನ ಬಂದಂತೆ ಮಾಡಬಹುದು. ೧) ಹಾದಿಯಲ್ಲಿ ಹೋಗುವವನನ್ನು ಮುಖ್ಯಮಂತ್ರಿ ಮಾಡಿ ಇನ್ನಷ್ಟು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಹೇಳಬಹುದು. ೨) ಶಾಸನ ಸಭೆಗೆ ಲಕ್ಪ ಹೊಡೆದಿದೆ ಎಂದು ಹೇಳಿ ಸುಮ್ಮನಿರಬಹುದು. ಇದಕ್ಕೆ ಸಸ್ಪೆಂಡೆಡ್ ಎನಿಮೇಷನ್ ಎನ್ನುತ್ತಾರೆ. ೩) ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು. ೪) ಇದಾದ ನಂತರ ಇನ್ನೊಮ್ಮೆ ಚುನಾವಣೆ ನಡೆಸುವ ನಿರ್ಧಾರ ತೆಗೆದುಕೊಳ್ಳಬಹುದು.
೧೩. ನಮ್ಮ ರಾಜ್ಯದ ವಿಧಾನಸಭೆಯ ಸದಸ್ಯರ ಸಂಖ್ಯೆ ೨೨೫. ಇದರಲ್ಲಿ ಒಬ್ಬರು ಆಂಗ್ಲೋ ಇಂಡಿಯನ್ ಕೋಟಾದಲ್ಲಿ ನಾಮ ನಿರ್ದೇಶಿತವಾಗಿರುತ್ತಾರೆ ಇನ್ನುಳಿದವರು ಚುನಾವಣೆಯಲ್ಲಿ ಗೆದ್ದಿರುತ್ತಾರೆ. ಇನ್ನೊಬ್ಬರು ಸಭಾಧ್ಯಕ್ಷರು ಅಥವಾ ಸ್ಪೀಕರ್. ನಾಮನಿರ್ದೇಶಿತ ಸದಸ್ಯರು ಸರಕಾರ ಉಳಿಸಲು ಅಥವಾ ಕೆಡವಲು ಮತ ಹಾಕುವಂತಿಲ್ಲ. ಮಸೂದೆಗಳನ್ನು ಪಾಸು ಮಾಡಲು ಅಥವಾ ಫೇಲು ಮಾಡಲು ಸಹ ಅವರು ಮತ ನೀಡುವಂತಿಲ್ಲ. ಸ್ಪೀಕರ್ ಸಾಹೇಬರು ಸ್ಪಷ್ಟ ನಿರ್ಧಾರಕ್ಕೆ ಬರಲಾರದ ವಿಧೇಯಕ ಹಾಗೂ ವಿಶ್ವಾಸ ಮಂಡನೆ ಸಮಯದಲ್ಲಿ ಮಾತ್ರ ಮತ ನೀಡಬಹುದು. ಇದಕ್ಕೆ ವೆಟೋ ವೋಟ್ ಎಂದು ಹೆಸರು.
೧೪. ಇನ್ನು ಆಯಾರಾಮ್ ಗಯಾರಾಮ್ ಗಳನ್ನು ನಿಯಂತ್ರಿಸಲು ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ಬಂತು. ಆಯಾರಾಮ್ ಎಂಬ ಹೆಸರಿನ ಸಂಸತ್ ಸದಸ್ಯ ನಿಜವಾಗಿಯೂ ಇದ್ದರು. ಅವರು ತುಂಬ ಸಾರಿ ಪಕ್ಷ ಬದಲಾಯಿಸಿದ್ದರು. ಅದಕ್ಕೇ ಈ ಮಾತು.
೧೫. ಪಕ್ಷಾಂತರ ನಿಷೇಧ ಕಾಯಿದೆ ಪ್ರಕಾರ ಒಂದು ಪಕ್ಷದ ಅಭ್ಯರ್ಥಿಯಾಗಿ ಚುನಾಯಿತಗೊಂಡ ಸದಸ್ಯರು ಇನ್ನೊಂದು ಪಕ್ಷ ಸೇರಿದರೆ, ತಮ್ಮ ಪಕ್ಷದ ನಿರ್ಧಾರದ ವಿರುದ್ಧವಾಗಿ ಸದನದಲ್ಲಿ ಮತ ನೀಡಿದರೆ, ಅಥವಾ ತಾವಾಗಿಯೇ ಪಕ್ಷ ತೊರೆದು ಬೇರೆ ಪಕ್ಷ ಸೇರದೇ ಇದ್ದರೂ ಸದಸ್ಯತ್ವ ರದ್ದಾಗುವುದು. ಪಕ್ಷದಿಂದ ಅಧ್ಯಕ್ಷರು ಕೊಕ್ ಕೊಟ್ಟರೆ ಮಾತ್ರ ನಿರುಮ್ಮಳವಾಗಿ ಇರಬಹುದು. - ಆಡಳಿತ ಪಕ್ಡದ ಸರಕಾರದ ನೀತಿಯ ವಿರುದ್ಧ ಶಾಸಕರು ಮಾತಾಡುವುದು, ಸರಕಾರದ ನೀತಿಯಿಂದ ಜನರಿಗೆ ಅನ್ಯಾಯವಾಗಿದೆ ಎಂದು ನಾಯಕರು ಮಂತ್ರಿ, ಅಧಿಕಾರಿಗಳ ಮುಂದೆ ಹೇಳುವುದು, ಮುಖ್ಯಮಂತ್ರಿಗೆ ಬೆಂಬಲ ಹಿಂಪಡೆಯುವುದು ಇವೆಲ್ಲವೂ ಸದಸ್ಯತ್ವದ ರದ್ದತಿಗೆ ಕಾರಣಗಳು ಎಂದು ಸೈಬರ್ ಮುತ್ಸದ್ದಿ ಹಾಗೂ ಟೀವಿ ಹೋರಾಟಗಾರ ಅರುಣ ಜೇಟ್ಲಿ (ಸೆಲಿನಾ ಜೇಟ್ಲಿಗೆ ಸಂಬಂಧ ಇಲ್ಲ!) ಅವರು ವಾದ ಮಂಡಿಸುತ್ತಿದ್ದಾರೆ. (ಮೊಂಡ ವಾದಕ್ಕೂ, ವಾದ ಮಂಡಿಸುವುದಕ್ಕೂ ಅರ್ಧ ಅಕ್ಷರ ವ್ಯತ್ಯಾಸ ಅಲ್ಲವೇ?)
೧೬. ಪಕ್ಷೇತರ ಸದಸ್ಯರು ಚುನಾಯಿತರಾಗಿ ಆರು ತಿಂಗಳ ಒಳಗೆ ಯಾವುದಾದರೂ ಪಕ್ಷ ಸೇರಿದರೆ ಈ ಕಾನೂನು ಜಾರಿಯಾಗದು. ಬಿ.ಎಸ್.ವೈ ಅವರ ಸರಕಾರದಲ್ಲಿ ಮಂತ್ರಿಯಾಗಿದ್ದ ಐದು ಜನ ಪಕ್ಷೇತರರು ಈ ರೀತಿ ಯಾವುದೇ ಪಕ್ಷ ಸೇರಿರಲಿಲ್ಲ.
೧೭. ಪಕ್ಷೇತರರು ಯಾವುದೇ ಸದಸ್ಯನಿಗೆ "ನೀನು ಮುಖ್ಯಮಂತ್ರಿಯಾಗು. ನಿನ್ನ ಮೆರವಣಿಗೆಯಲ್ಲಿ ನಾನು ಡಾನ್ಸ್ ಮಾಡುತ್ತೇನೆ" ಎಂದು ಹೇಳಬಹುದು. ಅದನ್ನು ತಡೆಯಲು ಯಾವ ಕಾನೂನಿನಲ್ಲಿಯೂ ಅವಕಾಶ ಇಲ್ಲ.
೧೮.ರದ್ದತಿ ಆಗಲಾರದ ಸನ್ನಿವೇಶಗಳು ಎಂದರೆ: ೧)ಶಾಸಕಾಂಗ ಪಕ್ಷದ ೬೬ % ಜನ ಹೊರ ಹೋಗಿ ಪಕ್ಷ ಒಡೆಯುವುದು. ೨)ಹಾಗೆಯೇ ೬೬% ಸದಸ್ಯರು ಹೊರಹೋಗಿ ಇನ್ನೊಂದು ಪಕ್ಷದ ಜತೆ ಸೇರಿ ವಿಲೀನ ವಾಗಬಹುದು. ಇದು ೨೦೦೩ ರ ತಿದ್ದುಪಡಿಯಲ್ಲಿ ಬದಲಾಯಿತು.
೧೯. ಒಂದು ಪಕ್ಷದಿಂದ ಆರಿಸಿ ಬಂದವರು ಬೇರೆ ಪಕ್ಷ ಸೇರಿ ರಾಜೀನಾಮೆ ಕೊಟ್ಟು ಮತ್ತೆ ಹೊಸ ಪಕ್ಷದ ಚಿನ್ಹೆ, ಹಮ್ಮು, ಹೊಗಳಿಕೆ, ಹಾಡು, ಹಣ, ಇತ್ಯಾದಿಗಳನ್ನು ಬಳಸಿ ಆರಿಸಿ ಬರುವುದಕ್ಕೆ ಆಪರೇಷನ್ ಕಮಲ ಎಂದು ಹೆಸರು. ಸಿಟಿ ರವಿಯವರು ಉಪಯೋಗಿಸಿದ ಹಕಾರದ ಶಬ್ದವನ್ನು ಇಲ್ಲಿ ಉಪಯೋಗಿಸಲಾಗಿಲ್ಲ. ಕರ್ನಾಟಕಕ್ಕೆ ಇಂಥ ಸರ್ಜರಿ ಹೊಸದೆಂದು ಕಂಡರೂ ಬಿಜೆಪಿಯವರು ಗೋವಾದಲ್ಲಿ ಕೆಲವು ವರ್ಷಗಳ ಹಿಂದೆಯೇ ಉಪಯೋಗಿಸಿದ್ದರು. ಗೋವಾದಲ್ಲಿಯೂ ಪೋಸ್ಟ್ ಆಪರೇಟಿವ್ ಕಾಂಪ್ಲಿಕೇಷನ್ ಗಳು ಉಂಟಾಗಿದ್ದವು. ಕರ್ನಾಟಕದಲ್ಲಿಯೂ ಆಗುತ್ತವೆ.
೨೦. ಆಪರೇಷನ್ ಕಮಲವನ್ನು ತಡೆಯಲು ಪಕ್ಷಾಂತರ ನಿಷೇಧದ ಕಾನೂನಿನಲ್ಲಿ ಅವಕಾಶಗಳಿಲ್ಲ.
೨೧. ಆಡಳಿತ ಪಕ್ಷದ ಯಾವುದೇ ಸದಸ್ಯ ಯಾವತ್ತಾದರೂ ಮುಖ್ಯಮಂತ್ರಿಗೆ ಬೆಂಬಲ ವಾಪಸ್ ಪಡೆಯಬಹುದು. ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿಕೊಂಡು ಹೋಗಬಹುದು. ಹಾಗೆ ಮಾಡಬೇಡಿ ಎಂದು ಹೇಳುವ ಅಧಿಕಾರ ಒಬ್ಬ ಸದಸ್ಯನಿಗೆ ಮಾತ್ರ ಇದೆ. ಅವರ ಹೆಸರು ಚೀಫ್ ವಿಪ್. ಅವರು ಪಕ್ಷದ ನಿರ್ಧಾರಗಳನ್ನು ಶಾಸಕಾಂಗ ಪಕ್ಷಕ್ಕೆ ಹಾಗೂ ಸದನಕ್ಕೆ ತಿಳಿಸುವ ಜವಾಬ್ದಾರಿ ಇದೆ.
೨೨. ಈ ವಿಪ್ ನ ಮನೆಯಲ್ಲಿ ಸಿಲಿಂಡರ್ ಖಾಲಿ ಆಗಿ, ಪಕ್ಷದ ಸದಸ್ಯರೊಬ್ಬರು ಅದನ್ನು ತುಂಬಿಸಿಕೊಂಡು ಬರದೇ ಹೋದರೆ ಅವರು ಅವರ ವಿರುದ್ಧ ವಿಪ್ ನೀಡಬಹುದು. ‘ಸದನದಲ್ಲಿ ಚರ್ಚೆಗೆ ಬಂದಿರುವ ವಿಧೇಯಕ, ವಿಶ್ವಾಸಮತ ಮಂಡನೆ ನಿರ್ಣಯ ಇತ್ಯಾದಿಗಳ ಬಗ್ಗೆ ನಮ್ಮ ಪಕ್ಷದ ವಿಚಾರ ಈ ರೀತಿ ಇದೆ. ಅದರ ಪ್ರಕಾರ ನೀವು ಈ ರೀತಿ ಸದನದಲ್ಲಿ ಮತ ನೀಡಬೇಕು' ಎಂದು ಅವರು ಗರ್ಜಿಸುವುದಕ್ಕೆ ವಿಪ್ ಎಂದು ಹೆಸರು.
೨೩. ಹೆಸರಿಗೆ ತಕ್ಕಂತೆ ವಿಪ್ಪಿನ ಕೆಲಸ ಚಾಟಿ ಏಟು ಹೊಡೆಯುವುದು. ಪಕ್ಷದ ಸದಸ್ಯರು ಹಾಗು ಮುಖ್ಯಮಂತ್ರಿಗೆ ಬೆಂಬಲ ನೀಡಿದ ಪಕ್ಷೇತರರಿಗೂ ಚಾಟಿ ಏಟು ಕೊಡಬಹುದು ಎಂದು ಸುಪ್ರೀಂಕೋರ್ಟ್ ಮಾಯಾವತಿ ಸರಕಾರಕ್ಕೆ ಸಂಬಂಧಪಟ್ಟ ಒಂದು ಕೇಸಿನಲ್ಲಿ ತೀರ್ಪು ನೀಡಿದೆ. ಒಂದು ಪಕ್ಷಕ್ಕೆ ಒಂದು ಸಾರಿ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದ ಪಕ್ಷೇತರರು ಕೊನೆಯವರೆಗೂ ಅದಕ್ಕೇ ಬೆಂಬಲ ನೀಡಬೇಕು ಎಂದು ಸಹ ಆ ತೀರ್ಪಿನಲ್ಲಿ ದಾಖಲಾಗಿದೆ.
೨೪. ಇದನ್ನು ಪಾಲಿಸದ ಪಕ್ಷದ, ಅಥವಾ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರ ಮೇಲೆ ಶಿಸ್ತು ಕ್ರಮ ಕೈಕೊಳ್ಳಿ ಎಂದು ವಿಪ್ ಸಾಹೇಬರು ಸ್ಪೀಕರ್ ಸಾಹೇಬರಿಗೆ ದೂರಬಹುದು. ಅವರು ಅದನ್ನು ಕೇಳಬಹುದು, ಕೇಳಿದರೂ ಕೇಳದಂತೆ ಇರಲೂಬಹುದು.
ವಿಪ್ಪಿನ ಮಾತನ್ನು ಸ್ಪೀಕರ್ ಸಾಹೇಬರು ಸೀರಿಯಸ್ಸಾಗಿ ಪರಿಗಣಿಸಿದರೆ ಸದಸ್ಯರ ೧> ನಿರ್ದಿಷ್ಟ ಅವಧಿಗೆ ಅಮಾನತು ಮಾಡಬಹುದು, ೨> ಸದಸ್ಯತ್ವ ರದ್ದು ಮಾಡಬಹುದು, ೩> ಹೋಗಲಿ ಬಿಡು ಅಂತ ಬಿಟ್ಟು ಬಿಟ್ಟು ಅವರ ಜತೆ ಇಬ್ಬರೂ ಕೂಡಿ ಥೈಲ್ಯಾಂಡ್ ಗೆ ಫ್ಯಾಮಿಲಿ ಟೂರ್ ಹೋಗಬಹುದು. ಇವೆಲ್ಲ ಮಾಡುವ ಮೊದಲು ನೋಟೀಸ್ ನೀಡಬೇಕು. ಅದಕ್ಕೆ, ಅದರ ಉತ್ತರ ಪಡೆಯಲಿಕ್ಕೆ ಕಾನೂನಿನಲ್ಲಿ ಕಾಲಾವಧಿ ಇಲ್ಲ. ರಾಜ್ಯ ವಿಧಾನಸಭೆ ಮಾಡಿದ ನಿಯಮಗಳಲ್ಲಿ ಎಳು ದಿನ ಅಂತ ಇದೆ. (ಧರ್ಮಸಿಂಗ್ ಸಾಹೇಬರ ಕಾದಲ್ಲಿಯ ಒಂದು ಪ್ರಕರಣವನ್ನು ಸ್ಪೀಕರ್ ೨೨ ತಿಂಗಳ ಮುಂದೂಡಿದರು. ಆ ನಂತರ ಚುನಾವಣೆ ಬಂತು. ಸ್ಪೀಕರ್ ಅವರ ಅಧಿಕಾರವನ್ನು ಮತದಾರರು ಹೈಜಾಕ್ ಮಾಡಿದರು!)
೨೫. ಸಂವಿಧಾನದ ಪ್ರಕಾರ ಸದಸ್ಯತ್ವ ರದ್ದಾಗುವುದು ಚುನಾವಣಾ ಸಂಬಂಧಿ ಕಾಯಿದೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗ ರಾಜ್ಯಪಾಲರಿಗೆ ಸಲಹೆ ನೀಡಿದಾಗ ಮಾತ್ರ. ಅಂಥ ಸನ್ನಿವೇಶವೇನೂ ಈಗ ಸೃಷ್ಟಿಯಾಗಿಲ್ಲ.
೨೬. ಶಾಸಕರ ಸದಸ್ಯತ್ವ ರದ್ದಾಗಬೇಕೇ ಬೇಡವೇ ಎಂದು ನಿರ್ಧರಿಸುವ ಅಂತಿಮ ಅಧಿಕಾರ ಇರುವುದು ಸ್ಪೀಕರ್ ಅವರಿಗೆ. ಅವರ ವಿರುದ್ಧ ದೂರು ಸಲ್ಲಿಸಲು ನ್ಯಾಯಾಲಯಕ್ಕೆ ಹೋಗಲು ಅವಕಾಶ ಇಲ್ಲ. ಅವರ ನಿರ್ಧಾರ ಸಂವಿಧಾನದ ಆಶಯದ ಪ್ರಕಾರ ಇತ್ತೋ ಇಲ್ಲವೋ ಎಂದು ನ್ಯಾಯಾಲಯದ ಅಭಿಪ್ರಾಯ ಕೇಳಬಹುದಷ್ಟೆ. (ಈ ಭಾಗ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋಟ್ ತೀರ್ಪು ನೀಡಿದ್ದರಿಂದ ಇದನ್ನು ಕಾನೂನಿನಿಂದ ಕೈಬಿಡಲಾಗಿದೆ )
೨೭. ಆದರೆ ವಿಪ್ ಉಲ್ಲಂಘನೆಯಾಗಿದೆಯೇ ಎಂದು ನಿರ್ಧಾರವಾಗುವುದು ಸದನದಲ್ಲಿ ಆ ಸದಸ್ಯನ ನಡುವಳಿಕೆಯ ಆಧಾರದ ಮೇಲೆಯೆ. ಸದನದಲ್ಲಿ ಅಧಿವೇಶನ ನಡೆಯುವ ಮೊದಲೇ ವಿಪ್ ಉಲ್ಲಂಘನೆ ಆಗಿದೆಯೋ ಇಲ್ಲವೋ ಎಂಬ ನಿರ್ಧಾರಕ್ಕೆ ಸ್ಪೀಕರ್ ಗಳು ಬಂದಿದ್ದು ಅಪರೂಪ. ಆದರೆ ವಿಪ್ ಉಲ್ಲಂಘನೆಗಾಗಿ ಶಾಸಕರ ಸದಸ್ಯತ್ವವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಸ್ಪೀಕರ್ ಬೋಪಯ್ಯನವರೇನೂ ಹೇಳಿಲ್ಲ. ಶಿಸ್ತು ಮೀರಿದ ಶಾಸಕರು ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಮಾಡುತ್ತೇನೆ ಎಂದು ಮು.ಮ ಅವರು ಕೆಲವು ದಿನಗಳ ಹಿಂದೆ ಧಮಕಿ ಹಾಕಿದ್ದನ್ನು ಇಲ್ಲಿ ನೆನೆಯಬಹುದು.
೨೮. ಹೀಗಾಗಿ ಬೋಪಯ್ಯನವರು ಈ ೧೬ ಜನ ಶಾಸಕರ ಸದಸ್ಯತ್ವವನ್ನು ಯಾಕೆ ರದ್ದು ಮಾಡಿದರು ಎನ್ನುವುದು ಸ್ಪಷ್ಟವಾಗಿಲ್ಲ.
೨೯. ಸದನದ ಒಳಗೆ ಬಿಳೀ ಬಟ್ಟೆ ಹಾಕಿದ ಪೋಲಿಸರಿಗೆ ಮಾರ್ಷಲ್ ಎಂದು ಹೆಸರು. ಖಾಕಿ ಹಾಕಿಕೊಂಡ ಪೋಲಿಸರು ವಿಧಾನಸೌಧದ ಒಳಗೆ ಬರಬಾರದು ಎಂಬ ಕಾನೂನು ಇಲ್ಲ. ಸಂಪ್ರದಾಯ ಇದೆ.
೩೦. ಇನ್ನು ಸದಸ್ಯತ್ವ ರದ್ದತಿ ಶಿಸ್ತು ಕ್ರಮ ಎದುರಿಸುತ್ತಿರುವ ಶಾಸಕರು ಸದನದ ಒಳಗೆ ಬರುವಂತಿಲ್ಲ. ಅವರು ಬಂದರೆ ಅವರನ್ನು ಸ್ಪೀಕರ್ ಅವರು ಹೊರಹೋಗಲು ಹೇಳಬಹುದು. ಕೇಳದಿದ್ದರೆ ಮಾರ್ಷಲ್ ಗಳಿಗೆ ಹೇಳಿ ಹೊರ ಹಾಕಿಸಬಹುದು. ಮಾರ್ಷಲ್ ಗಳಿಗೇ ಹೊಡೆಯುವ ಶಾಸಕರು ಸಂವಿಧಾನ ರಚನೆಯ ಸಮಯದಲ್ಲಿ ಇನ್ನೂ ಹುಟ್ಟಿದ್ದಿಲ್ಲವಾದ್ದರಿಂದ ಅದರ ಬಗ್ಗೆ ಸಂವಿಧಾನ ರಚನಾ ಸಮಿತಿ ಏನೂ ಹೇಳಿಲ್ಲ.
೩೧. ಸದಸ್ಯರಲ್ಲದವರು ಸದನಕ್ಕೆ ಬಂದು ಹೊರಗೆ ಹೋಗದೇ ಅಂಗಿ ಹರಿದುಕೊಂಡು ಹಟ ಮಾಡಿದರೆ (ಅಕ್ಷರಶಃ) ಸದನವು ಸುವ್ಯವಸ್ಥಿತವಾಗಿಲ್ಲ ಎಂದು ಸ್ಪೀಕರ್ ಸಾಹೇಬರು ತೀರ್ಪು ನೀಡಬಹುದು. ಅದರಂತೆ ಸಭೆ ಬರಖಾಸ್ತು ಮಾಡಬಹುದು. ವ್ಯವಸ್ಥಿತವಾಗಿದೆ ಎಂದು ಅವರಿಗೆ ಅನ್ನಿಸಿದರೆ ಸಭೆ ನಡೆಸಬಹುದು. ಸದನ ವ್ಯವಸ್ಥಿತವಾಗಿರಲಿಲ್ಲ ಎಂದು ಸದಸ್ಯರು ಆರೋಪ ಮಾಡಬಹುದು. ರಾಜ್ಯಪಾಲರಿಗೆ ಸ್ಪೀಕರ್ ಅವರು ಹೊಡೆದಾಟ ಬಡಿದಾಟದ ನಡುವೆಯೂ ಸಭೆ ನಡೆಸಿದ್ದಾರೆ ಎಂದು ದೂರು ನೀಡಬಹುದು.
೩೨. ಸಭೆ ನಡೆಸಲು ಬೇಕಾದ ಕನಿಷ್ಠ ಸದಸ್ಯರ ಸಂಖ್ಯೆ ೨೩. (ಶೇಕಡಾ ಹತ್ತು.) ಆಡಳಿತ ಪಕ್ಷದವರು ಇಷ್ಟಿರಬೇಕು, ವಿರೋಧ ಪಕ್ಷದವರು ಇಷ್ಟಿರಬೇಕು ಎಂಬ ನಿಯಮ ಇಲ್ಲ.
೩೩. ಸದನದಲ್ಲಿನ ಎಲ್ಲ ಮತದಾನಗಳೂ ಧ್ವನಿ ಮತದಿಂದಲೇ ಮೊದಲ ಬಾರಿಗೆ ನಿರ್ಧಾರ ವಾಗುತ್ತವೆ. ಯಾವ ಸದಸ್ಯರಾದರೂ ಅದಕ್ಕೆ ವಿರೋಧ ಮಾಡಿದಾಗ ಮಾತ್ರ ತಲೆ ಎಣಿಸುವ, ಹೆಡ್ ಕೌಂಟ್, ಅಥವಾ ಪೇಪರ್ ಬ್ಯಾಲಟ್ ಉಪಯೋಗವಾಗುತ್ತದೆ. ಧ್ವನಿ ಮತಕ್ಕೆ ವಿರೋಧ ಬರದೇ ಇದ್ದಲ್ಲಿ ತಲೆ ಎಣಿಕೆ ಅಗತ್ಯ ಇಲ್ಲ.
ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ. ಕೋರಂ ಎಂದರೆ ಸಭೆ ನಡೆಸಲು ಕನಿಷ್ಟ ಎಷ್ಟು ಜನ ಸದಸ್ಯರು ಇರಬೇಕು ಎಂಬ ಪ್ರಶ್ನೆಗೆ ಉತ್ತರ.
೩೪. ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ.
೩೫. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಬೋಪಯ್ಯನವರು ಸದಸ್ಯರನ್ನು ಅನೂರ್ಜಿತಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಅಭಿಪ್ರಾಯ ನೀಡಬಹುದು.
೩೬. ಇದೆಲ್ಲ ಆಗುತ್ತಿದ್ದಂತೆ ಯಡ್ಯೂರಪ್ಪ ಅವರು ಇನ್ನೊಂದು ಬಿಳಿ ಸಫಾರಿ ಹೊಲಿಸಿಕೊಂಡು ಮಿಂಚಬಹುದು. ಅಥವಾ ಸಿದ್ರಾಮನ ಹುಂಡಿ ಸಿದ್ರಾಮಯ್ಯನವರು ಹಸಿರು ಟವೆಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಬಹುದು.
೩೭. ಅಥವಾ ಇರುವ ಒಬ್ಬ ಮಗ, ಒಬ್ಬಳೇ ಮಗಳನ್ನು ಅಮೇರಿಕೆಗೆ ಮದುವೆ ಮಾಡಿಕೊಟ್ಟು ಸ್ವಿಜರ್ ಲ್ಯಾಂಡಿಗೆ ಟೂರ್ ಹೋದ ಐ.ಎ.ಎಸ್ ಅಧಿಕಾರಿಗಳು ತಮ್ಮ ಹಳೆಯ ಸೂಟುಗಳನ್ನು ರಾಜ್ಯಪಾಲರ ಸಲಹೆಗಾರರು ಎಂದು ಮರಳಿ ಬಂದು ನಮ್ಮ ಜೀವ ತಿನ್ನಬಹುದು.
೩೮. ಅಥವಾ ನಮ್ಮ ಪ್ರಭುಗಳು ಸರಕಾರದ ಅಕಾಲಿಕ ಮರಣವನ್ನು ಘೋಷಿಸಿ ಬೆಲೆಯೇರಿಕೆಯೇ ಇಳಿಯದ ನಮ್ಮ ಗಂಟಲೊಳಗೆ ಇನ್ನೊಂದು ಚುನಾವಣೆಯನ್ನು ತುರುಕಬಹುದು.
ಅಷ್ಟಕ್ಕೂ ಡೆಮಾಕ್ರಸಿ ಎಂದರೆ ಏನು? ಇದು ಮುಖ್ಯ ಪ್ರಶ್ನೆಯೇ? ಅಥವಾ ಇದಕ್ಕೆ ಉತ್ತರ ಯಾವ ನನ್ನ ಮಗನಿಗೆ ಬೇಕಾಗಿದೆ?
ಇಷ್ಟೆಲ್ಲಾ ಬರೆದು ಮುಗಿಸುವ ಹೊತ್ತಿಗೆ ನನಗೊಂದು ಫೋನ್ ಬಂತು. ಆ ಕೆಂಡಸಂಪಿಗೆಯಲ್ಲಿ ನೀವು ಬರೀ ಶ್ರೀರಾಮುಲು ಅವರ ಬಗ್ಗೆ ಮಾತ್ರವೇ ಬರೀತೀರಿ ನಮ್ಮ ಬಗ್ಗೆ ಯಾಕೆ ಬರೆಯೋದಿಲ್ಲ ಅಂತ ನನ್ನ ಜತೆ ಜಗಳವಾಡಿದವರು ಗೂಳಿಹಟ್ಟಿ ಶೇಖರ್. ಟೀವಿಯಲ್ಲಿ ನಾನು ಶರ್ಟ್ ತೆಗೆದದ್ದು ನೋಡಿದ ಸಲ್ಮಾನ್ ಖಾನ್ ಅವರು ನನ್ನನ್ನು ದಬಾಂಗ್-೩ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಾರೆ. ಹೇಗೂ ನಮಗೆ ಮುಂದಿನ ಚುನಾವಣೆಯ ವಿಚಾರ ಇಲ್ಲ. ನಾನು ಬಾಂಬೆಗೆ ಹೋಗೋಕಿಂತ ಮುಂಚೆ ಬನ್ನಿ ಇಂಟರ್ವ್ಯೂ ಮಾಡಿ, ಅಂದರು. ಆ ಪರಮ ದಯಾಳುವಾದ ಕರುಣಾಮಯ ಭಗವಂತನ ದಯೆ ಇದ್ದರೆ ಅದೂ ಆದೀತು ಎಂದುಕೊಂಡೆ.
Print Close
By ಹೃಷಿಕೇಶ್ ಬಹದ್ದೂರ್ ದೇಸಾಯಿ
ಕರುನಾಡಲ್ಲಿ ಉಂಟಾಗುತ್ತಿರುವ ತಳಮಳಗಳ ಅರಿವಾಗದೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಬಡಪಾಯಿಗಳಿಗಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿಕೊಡುವ ಕೆಲವು ಪ್ರಾಥಮಿಕ ಪಾಠಗಳು ಇಲ್ಲಿವೆ
ಸೋಮವಾರ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಖಟಾಖಟಿಯನ್ನು ಟಿವಿಯಲ್ಲಿ ನೋಡಿದವರಿಗೆ ಗೊಂದಲ ಆಗಿರಬಹುದು, ಏನೂ ತಿಳಿಯದೇ ಇರದಿರಬಹುದು ಅಥವಾ ಪೂರ್ವಯೋರೋಪಿನ ದೇಶದ ಕಾಮೆಡಿ ಚಿತ್ರ ನೋಡಿದ ಅನುಭವ ಆಗಿರಬಹುದು. ಅಂಥವರು ಟಿವಿ ಚಾನೆಲ್ ಅನ್ನು ಮ್ಯೂಟ್ ಆಗಿಟ್ಟಿರಬಹುದು. ಹಾಗೆಂದು ಅವರಿಗೇನೂ ಮನರಂಜನೆ ಕಮ್ಮಿ ಆಗಿರಲಿಕ್ಕಿಲ್ಲ.
ಹಾಗಾದರೆ ನಿಜವಾಗಿಯೂ ನಡೆದದ್ದೇನು? ಎನ್ನುವ ವಿಷಯದ ಬಗ್ಗೆ ಬರೆಯೋಣ ಎನ್ನಿಸಿತು. ಹೇಗೂ ಇದು ಕಂಪ್ಯೂಟರ್ಸ್ ಫಾರ್ ಡಮ್ಮೀಸ್ ಸರಣಿಯಲ್ಲಿ ಡೆಮಾಕ್ರೆಸಿ ಫಾರ್ ದ ಇನ್ ಡಿಫರೆಂಟ್ ಎಂದು ಪುಸ್ತಕರೂಪದಲ್ಲಿ ಹೊರಬರಲಿದೆ. ಕೆಂಡಸಂಪಿಗೆ ಓದುಗರಿಗಾಗಿ ಇದೊಂದು ಪೈರೆಟೆಡ್ ಕಾಪಿ.
೧. ಐದೈದು ವರ್ಷಕ್ಕೆ ಬರಬೇಕಾದ ಆದರೆ ಹಗಲೆಲ್ಲ ಬರುವ ಕಾಮೆಡಿ ಬೀದಿ ನಾಟಕಗಳಿಗೆ ಚುನಾವಣೆಗಳು ಎಂದು ಹೆಸರು.
೨. ಇಂಥಾ ಚುನಾವಣೆಗಳಲ್ಲಿ ನಾವು ನಮ್ಮ ಪರವಾಗಿ ಶಾಸನ ಮಾಡುವ ಹಾಗೂ ವಿವಿಧ ಇಲಾಖೆಗಳು ವೆಚ್ಚ ಮಾಡುವ ಹಣದ ಲೆಕ್ಕ ತಪಾಸು ಮಾಡಲು ಕಳಿಸುವ ಜನರಿಗೆ ಶಾಸಕ ಅಥವಾ ಎಮ್ಮೆಲ್ಲೆ ಎಂದು ಹೆಸರು.
೩. ತಾಯಿ ಭುವನೇಶ್ವರಿಯ ಕೃಪೆಯಿಂದ ಆರಿಸಿ ಬಂದ ಇಂಥ ಪುಣ್ಯಾತ್ಮರು ರಾಜ್ಯದಲ್ಲಿ ೨೨೪ ಜನ ಇದ್ದಾರೆ. ಇವರಲ್ಲಿ ೧೧೭ ಜನ ಬಿಜೆಪಿಯವರು. ೭೪ ಕಾಂಗ್ರೆಸ್ಸಿಗರು. ೨೮ ಜನ ಜಾತ್ಯತೀತ ಜನತಾದಳಕ್ಕೆ ಸೇರಿದವರು. ಇತರ ಆರು ಜನ ಪಕ್ಷೇತರರು. ಇವರಲ್ಲಿ ಐದು ಜನ ಬಿಜೆಪಿ ಸರಕಾರವನ್ನು ಬೆಂಬಲಿಸಿದ್ದರು.
೪. ಈ ಪಕ್ಷಾತೀತರು ಹಾಗೂ ಬಿಜೆಪಿಯ ೧೧ ಜನ ಶಾಸಕರ ಸದಸ್ಯತ್ವವನ್ನು ಸ್ಪೀಕರ್ ಕೆಜಿ ಬೋಪಯ್ಯನವರು ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ರದ್ದು ಮಾಡಿದ್ದಾರೆ.
೫. ಬೂಕನಕೆರೆ ಸಿದ್ದಲಿಂಗಪ್ಪ ಯಡ್ಡೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ. ಅದಕ್ಕೂ ಮೊದಲು ಅವರು ಒಬ್ಬ ಎಮ್ಮೆಲ್ಲೆ.
೬. ಒಂದೇ ರಾಜಕೀಯ ಪಕ್ಷದ ಎಮ್ಮೆಲ್ಲೆಗಳು ಇರುವ ಗುಂಪಿಗೆ ಶಾಸಕಾಂಗ ಪಕ್ಷ ಅಥವಾ ಎಲ್.ಪಿ ಎಂದು ಹೆಸರು. ಅವರು ಚುನಾಯಿಸಿದ ನಾಯಕನನ್ನು ರಾಜ್ಯಪಾಲರು ಮುಖ್ಯಮಂತ್ರಿ ಎಂದು ನೇಮಿಸುತ್ತಾರೆ. ಬಿ.ಎಸ್.ವೈ ಅವರು ಈ ರೀತಿ ಮುಖ್ಯಮಂತ್ರಿ ಆದವರು. ಮುಖ್ಯಮಂತ್ರಿಯಾದವನ ಪಕ್ಷವೇ ಆಡಳಿತ ಪಕ್ಷ. ಆಡಳಿತದಲ್ಲಿ ಭಾಗವಹಿಸಲು ಬಯಸದ ಪಕ್ಷವೇ ವಿರೋಧ ಪಕ್ಷ. ಮಜಾ ಎಂದರೆ ವಿರೋಧ ಪಕ್ಷ ಎನ್ನುವ ಶಬ್ದ ಸಂವಿಧಾನದಲ್ಲಿ ಇದೆ. ಆಡಳಿತ ಪಕ್ಷ ಎನ್ನುವ ಶಬ್ದ ಇಲ್ಲ.
೭. ಈ ರೀತಿ ಮು.ಮ ಆದವರು ತಮ್ಮ ಎಲ್.ಪಿ.ಯ ವಿಶ್ವಾಸವನ್ನೂ, ಸದನದಲ್ಲಿ ಬಹುಮತವನ್ನೂ ಇಟ್ಟುಕೊಳ್ಳಬೇಕಾಗುತ್ತದೆ. ಅದೆರಡರಲ್ಲಿ ಒಂದನ್ನು ಅವರು ಕಳೆದುಕೊಂಡ ದಿನದಿಂದ ಅವರ ಕುರ್ಚಿಯ ಕೆಳಗಿನ ಭೂಮಿ ಕಂಪಿಸಲಾರಂಭಿಸುತ್ತದೆ.
೮. ಈ ರೀತಿ ತಾವೇ ಆರಿಸಿದ ಮು.ಮ.ರಲ್ಲಿ ವಿಶ್ವಾಸ ಕಳೆದುಕೊಂಡವರು ಭಿನ್ನಮತೀಯರು, ಬಂಡಾಯಗಾರರು, ಅತೃಪ್ತರು ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಅವರು ಆ ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಇವರೆಲ್ಲ ಭೂಪರನ್ನು ಆರಿಸಿ ಕಳಿಸಿದ ಮತದಾರರಿಗೆ ಅವರನ್ನು ವಾಪಸ್ ಕರೆಸಿಕೊಳ್ಳುವ ಅವಕಾಶ ಇಲ್ಲ. ಗ್ರೀಸ್, ಸ್ವೀಡನ್ ಮುಂತಾದ ದೇಶಗಳಲ್ಲಿ ಈ ಅಧಿಕಾರ ಮತದಾರನಿಗೆ ಇದೆ.
೯. ರಾಜ್ಯಪಾಲರು ಎಂದರೆ ಕೇಂದ್ರ ಸರಕಾರದಲ್ಲಿ ನಿವೃತ್ತಿಯ ವಯಸ್ಸನ್ನು ಮೀರಿದ, ದೆಹಲಿ ರಾಜಕೀಯ ಮಾಡಲು ತಾಕತ್ತು ಕಳೆದುಕೊಂಡ, ಪಿಂಚಣಿ ಸೌಲಭ್ಯಕ್ಕಾಗಿ ಹಪಹಪಿಸುವ ಪುಢಾರಿಗಳು ಎಂದು ಅರ್ಥವಲ್ಲ. ಅಥವಾ ಹೈದರಾಬಾದಿನಲ್ಲಿದ್ದಂತೆ ರಾಜಭವನವನ್ನು ಸ್ವಾಮಿ ನಿತ್ಯಾನಂದನ ಆಶ್ರಮವನ್ನಾಗಿ ಪರಿವರ್ತಿಸಿದವರು ಅಂತಲೂ ಅಲ್ಲ. ರಾಜ್ಯದ ಆಡಳಿತ ಸಂವಿಧಾನದ ಪ್ರಕಾರ ನಡೆಯುತ್ತಿದೆಯೋ ಇಲ್ಲವೋ ಎಂದು ನೋಡಲು ರಾಷ್ಟ್ರಾಧ್ಯಕ್ಷರು ನೇಮಿಸಿದ ಸಾಂವಿಧಾನಿಕ ಅಧಿಕಾರಿ.
೧೦. ಈ ಅಧಿಕಾರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಸಂವಿಧಾನ ಬದ್ಧವಾಗಿ ಆಡಳಿತ ನಡೆಯುತ್ತಿಲ್ಲ, ರಾಜ್ಯ ಭಾರತವನ್ನು ಬಿಟ್ಟು ಹೊರಗೆ ಹೋಗುವ ಸಂಚು ನಡೆಸುತ್ತಿದೆ ಎಂಬ ಕಾರಣಕ್ಕಾಗಿ ರಾಜ್ಯದ ಆಡಳಿತವನ್ನು ಕೊನೆಗಾಣಿಸಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಬಹುದು.
೧೧. ಹಿಂದಿನ ವರ್ಷಗಳಲ್ಲಿ ಮುಖ್ಯಮಂತ್ರಿಯ ಮುಖ ಸರಿಯಾಗಿಲ್ಲ ಎಂಬ ಕಾರಣದಿಂದಲೂ ದೆಹಲಿಗೆ ವರದಿ ಕಳಿಸಿದ ರಾಜ್ಯಪಾಲರು ಇದ್ದರು. ರಾಜ್ಯಪಾಲರ ವರದಿಗೆ ಕಾಯದೇ ರಾಷ್ಟ್ರಪತಿ ಆಡಳಿತ ಹೇರಿದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳೂ ಇದ್ದರು. ಬೊಮ್ಮಾಯಿ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ನ ನಿರ್ಣಯದ ನಂತರ ಇದು ಸ್ವಲ್ಪ ಕಡಿಮೆ ಆದಂತೆ ಕಾಣುತ್ತದೆ ಎಂದು ಬಲ್ಲವರು ಹೇಳುತ್ತಾರೆ.
೧೨. ಚುನಾವಣೆಯ ನಂತರ ಯಾವೊಬ್ಬ ಶಾಸಕನೂ ಇತರ ಶಾಸಕರ ವಿಶ್ವಾಸ ಗಳಿಸಿ ಮುಖ್ಯಮಂತ್ರಿ ಆಗಲು ಅರ್ಹತೆ ಗಳಿಸದಿದ್ದಾಗ ರಾಜ್ಯಪಾಲರು ತಮ್ಮ ಮನ ಬಂದಂತೆ ಮಾಡಬಹುದು. ೧) ಹಾದಿಯಲ್ಲಿ ಹೋಗುವವನನ್ನು ಮುಖ್ಯಮಂತ್ರಿ ಮಾಡಿ ಇನ್ನಷ್ಟು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಹೇಳಬಹುದು. ೨) ಶಾಸನ ಸಭೆಗೆ ಲಕ್ಪ ಹೊಡೆದಿದೆ ಎಂದು ಹೇಳಿ ಸುಮ್ಮನಿರಬಹುದು. ಇದಕ್ಕೆ ಸಸ್ಪೆಂಡೆಡ್ ಎನಿಮೇಷನ್ ಎನ್ನುತ್ತಾರೆ. ೩) ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು. ೪) ಇದಾದ ನಂತರ ಇನ್ನೊಮ್ಮೆ ಚುನಾವಣೆ ನಡೆಸುವ ನಿರ್ಧಾರ ತೆಗೆದುಕೊಳ್ಳಬಹುದು.
೧೩. ನಮ್ಮ ರಾಜ್ಯದ ವಿಧಾನಸಭೆಯ ಸದಸ್ಯರ ಸಂಖ್ಯೆ ೨೨೫. ಇದರಲ್ಲಿ ಒಬ್ಬರು ಆಂಗ್ಲೋ ಇಂಡಿಯನ್ ಕೋಟಾದಲ್ಲಿ ನಾಮ ನಿರ್ದೇಶಿತವಾಗಿರುತ್ತಾರೆ ಇನ್ನುಳಿದವರು ಚುನಾವಣೆಯಲ್ಲಿ ಗೆದ್ದಿರುತ್ತಾರೆ. ಇನ್ನೊಬ್ಬರು ಸಭಾಧ್ಯಕ್ಷರು ಅಥವಾ ಸ್ಪೀಕರ್. ನಾಮನಿರ್ದೇಶಿತ ಸದಸ್ಯರು ಸರಕಾರ ಉಳಿಸಲು ಅಥವಾ ಕೆಡವಲು ಮತ ಹಾಕುವಂತಿಲ್ಲ. ಮಸೂದೆಗಳನ್ನು ಪಾಸು ಮಾಡಲು ಅಥವಾ ಫೇಲು ಮಾಡಲು ಸಹ ಅವರು ಮತ ನೀಡುವಂತಿಲ್ಲ. ಸ್ಪೀಕರ್ ಸಾಹೇಬರು ಸ್ಪಷ್ಟ ನಿರ್ಧಾರಕ್ಕೆ ಬರಲಾರದ ವಿಧೇಯಕ ಹಾಗೂ ವಿಶ್ವಾಸ ಮಂಡನೆ ಸಮಯದಲ್ಲಿ ಮಾತ್ರ ಮತ ನೀಡಬಹುದು. ಇದಕ್ಕೆ ವೆಟೋ ವೋಟ್ ಎಂದು ಹೆಸರು.
೧೪. ಇನ್ನು ಆಯಾರಾಮ್ ಗಯಾರಾಮ್ ಗಳನ್ನು ನಿಯಂತ್ರಿಸಲು ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ಬಂತು. ಆಯಾರಾಮ್ ಎಂಬ ಹೆಸರಿನ ಸಂಸತ್ ಸದಸ್ಯ ನಿಜವಾಗಿಯೂ ಇದ್ದರು. ಅವರು ತುಂಬ ಸಾರಿ ಪಕ್ಷ ಬದಲಾಯಿಸಿದ್ದರು. ಅದಕ್ಕೇ ಈ ಮಾತು.
೧೫. ಪಕ್ಷಾಂತರ ನಿಷೇಧ ಕಾಯಿದೆ ಪ್ರಕಾರ ಒಂದು ಪಕ್ಷದ ಅಭ್ಯರ್ಥಿಯಾಗಿ ಚುನಾಯಿತಗೊಂಡ ಸದಸ್ಯರು ಇನ್ನೊಂದು ಪಕ್ಷ ಸೇರಿದರೆ, ತಮ್ಮ ಪಕ್ಷದ ನಿರ್ಧಾರದ ವಿರುದ್ಧವಾಗಿ ಸದನದಲ್ಲಿ ಮತ ನೀಡಿದರೆ, ಅಥವಾ ತಾವಾಗಿಯೇ ಪಕ್ಷ ತೊರೆದು ಬೇರೆ ಪಕ್ಷ ಸೇರದೇ ಇದ್ದರೂ ಸದಸ್ಯತ್ವ ರದ್ದಾಗುವುದು. ಪಕ್ಷದಿಂದ ಅಧ್ಯಕ್ಷರು ಕೊಕ್ ಕೊಟ್ಟರೆ ಮಾತ್ರ ನಿರುಮ್ಮಳವಾಗಿ ಇರಬಹುದು. - ಆಡಳಿತ ಪಕ್ಡದ ಸರಕಾರದ ನೀತಿಯ ವಿರುದ್ಧ ಶಾಸಕರು ಮಾತಾಡುವುದು, ಸರಕಾರದ ನೀತಿಯಿಂದ ಜನರಿಗೆ ಅನ್ಯಾಯವಾಗಿದೆ ಎಂದು ನಾಯಕರು ಮಂತ್ರಿ, ಅಧಿಕಾರಿಗಳ ಮುಂದೆ ಹೇಳುವುದು, ಮುಖ್ಯಮಂತ್ರಿಗೆ ಬೆಂಬಲ ಹಿಂಪಡೆಯುವುದು ಇವೆಲ್ಲವೂ ಸದಸ್ಯತ್ವದ ರದ್ದತಿಗೆ ಕಾರಣಗಳು ಎಂದು ಸೈಬರ್ ಮುತ್ಸದ್ದಿ ಹಾಗೂ ಟೀವಿ ಹೋರಾಟಗಾರ ಅರುಣ ಜೇಟ್ಲಿ (ಸೆಲಿನಾ ಜೇಟ್ಲಿಗೆ ಸಂಬಂಧ ಇಲ್ಲ!) ಅವರು ವಾದ ಮಂಡಿಸುತ್ತಿದ್ದಾರೆ. (ಮೊಂಡ ವಾದಕ್ಕೂ, ವಾದ ಮಂಡಿಸುವುದಕ್ಕೂ ಅರ್ಧ ಅಕ್ಷರ ವ್ಯತ್ಯಾಸ ಅಲ್ಲವೇ?)
೧೬. ಪಕ್ಷೇತರ ಸದಸ್ಯರು ಚುನಾಯಿತರಾಗಿ ಆರು ತಿಂಗಳ ಒಳಗೆ ಯಾವುದಾದರೂ ಪಕ್ಷ ಸೇರಿದರೆ ಈ ಕಾನೂನು ಜಾರಿಯಾಗದು. ಬಿ.ಎಸ್.ವೈ ಅವರ ಸರಕಾರದಲ್ಲಿ ಮಂತ್ರಿಯಾಗಿದ್ದ ಐದು ಜನ ಪಕ್ಷೇತರರು ಈ ರೀತಿ ಯಾವುದೇ ಪಕ್ಷ ಸೇರಿರಲಿಲ್ಲ.
೧೭. ಪಕ್ಷೇತರರು ಯಾವುದೇ ಸದಸ್ಯನಿಗೆ "ನೀನು ಮುಖ್ಯಮಂತ್ರಿಯಾಗು. ನಿನ್ನ ಮೆರವಣಿಗೆಯಲ್ಲಿ ನಾನು ಡಾನ್ಸ್ ಮಾಡುತ್ತೇನೆ" ಎಂದು ಹೇಳಬಹುದು. ಅದನ್ನು ತಡೆಯಲು ಯಾವ ಕಾನೂನಿನಲ್ಲಿಯೂ ಅವಕಾಶ ಇಲ್ಲ.
೧೮.ರದ್ದತಿ ಆಗಲಾರದ ಸನ್ನಿವೇಶಗಳು ಎಂದರೆ: ೧)ಶಾಸಕಾಂಗ ಪಕ್ಷದ ೬೬ % ಜನ ಹೊರ ಹೋಗಿ ಪಕ್ಷ ಒಡೆಯುವುದು. ೨)ಹಾಗೆಯೇ ೬೬% ಸದಸ್ಯರು ಹೊರಹೋಗಿ ಇನ್ನೊಂದು ಪಕ್ಷದ ಜತೆ ಸೇರಿ ವಿಲೀನ ವಾಗಬಹುದು. ಇದು ೨೦೦೩ ರ ತಿದ್ದುಪಡಿಯಲ್ಲಿ ಬದಲಾಯಿತು.
೧೯. ಒಂದು ಪಕ್ಷದಿಂದ ಆರಿಸಿ ಬಂದವರು ಬೇರೆ ಪಕ್ಷ ಸೇರಿ ರಾಜೀನಾಮೆ ಕೊಟ್ಟು ಮತ್ತೆ ಹೊಸ ಪಕ್ಷದ ಚಿನ್ಹೆ, ಹಮ್ಮು, ಹೊಗಳಿಕೆ, ಹಾಡು, ಹಣ, ಇತ್ಯಾದಿಗಳನ್ನು ಬಳಸಿ ಆರಿಸಿ ಬರುವುದಕ್ಕೆ ಆಪರೇಷನ್ ಕಮಲ ಎಂದು ಹೆಸರು. ಸಿಟಿ ರವಿಯವರು ಉಪಯೋಗಿಸಿದ ಹಕಾರದ ಶಬ್ದವನ್ನು ಇಲ್ಲಿ ಉಪಯೋಗಿಸಲಾಗಿಲ್ಲ. ಕರ್ನಾಟಕಕ್ಕೆ ಇಂಥ ಸರ್ಜರಿ ಹೊಸದೆಂದು ಕಂಡರೂ ಬಿಜೆಪಿಯವರು ಗೋವಾದಲ್ಲಿ ಕೆಲವು ವರ್ಷಗಳ ಹಿಂದೆಯೇ ಉಪಯೋಗಿಸಿದ್ದರು. ಗೋವಾದಲ್ಲಿಯೂ ಪೋಸ್ಟ್ ಆಪರೇಟಿವ್ ಕಾಂಪ್ಲಿಕೇಷನ್ ಗಳು ಉಂಟಾಗಿದ್ದವು. ಕರ್ನಾಟಕದಲ್ಲಿಯೂ ಆಗುತ್ತವೆ.
೨೦. ಆಪರೇಷನ್ ಕಮಲವನ್ನು ತಡೆಯಲು ಪಕ್ಷಾಂತರ ನಿಷೇಧದ ಕಾನೂನಿನಲ್ಲಿ ಅವಕಾಶಗಳಿಲ್ಲ.
೨೧. ಆಡಳಿತ ಪಕ್ಷದ ಯಾವುದೇ ಸದಸ್ಯ ಯಾವತ್ತಾದರೂ ಮುಖ್ಯಮಂತ್ರಿಗೆ ಬೆಂಬಲ ವಾಪಸ್ ಪಡೆಯಬಹುದು. ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿಕೊಂಡು ಹೋಗಬಹುದು. ಹಾಗೆ ಮಾಡಬೇಡಿ ಎಂದು ಹೇಳುವ ಅಧಿಕಾರ ಒಬ್ಬ ಸದಸ್ಯನಿಗೆ ಮಾತ್ರ ಇದೆ. ಅವರ ಹೆಸರು ಚೀಫ್ ವಿಪ್. ಅವರು ಪಕ್ಷದ ನಿರ್ಧಾರಗಳನ್ನು ಶಾಸಕಾಂಗ ಪಕ್ಷಕ್ಕೆ ಹಾಗೂ ಸದನಕ್ಕೆ ತಿಳಿಸುವ ಜವಾಬ್ದಾರಿ ಇದೆ.
೨೨. ಈ ವಿಪ್ ನ ಮನೆಯಲ್ಲಿ ಸಿಲಿಂಡರ್ ಖಾಲಿ ಆಗಿ, ಪಕ್ಷದ ಸದಸ್ಯರೊಬ್ಬರು ಅದನ್ನು ತುಂಬಿಸಿಕೊಂಡು ಬರದೇ ಹೋದರೆ ಅವರು ಅವರ ವಿರುದ್ಧ ವಿಪ್ ನೀಡಬಹುದು. ‘ಸದನದಲ್ಲಿ ಚರ್ಚೆಗೆ ಬಂದಿರುವ ವಿಧೇಯಕ, ವಿಶ್ವಾಸಮತ ಮಂಡನೆ ನಿರ್ಣಯ ಇತ್ಯಾದಿಗಳ ಬಗ್ಗೆ ನಮ್ಮ ಪಕ್ಷದ ವಿಚಾರ ಈ ರೀತಿ ಇದೆ. ಅದರ ಪ್ರಕಾರ ನೀವು ಈ ರೀತಿ ಸದನದಲ್ಲಿ ಮತ ನೀಡಬೇಕು' ಎಂದು ಅವರು ಗರ್ಜಿಸುವುದಕ್ಕೆ ವಿಪ್ ಎಂದು ಹೆಸರು.
೨೩. ಹೆಸರಿಗೆ ತಕ್ಕಂತೆ ವಿಪ್ಪಿನ ಕೆಲಸ ಚಾಟಿ ಏಟು ಹೊಡೆಯುವುದು. ಪಕ್ಷದ ಸದಸ್ಯರು ಹಾಗು ಮುಖ್ಯಮಂತ್ರಿಗೆ ಬೆಂಬಲ ನೀಡಿದ ಪಕ್ಷೇತರರಿಗೂ ಚಾಟಿ ಏಟು ಕೊಡಬಹುದು ಎಂದು ಸುಪ್ರೀಂಕೋರ್ಟ್ ಮಾಯಾವತಿ ಸರಕಾರಕ್ಕೆ ಸಂಬಂಧಪಟ್ಟ ಒಂದು ಕೇಸಿನಲ್ಲಿ ತೀರ್ಪು ನೀಡಿದೆ. ಒಂದು ಪಕ್ಷಕ್ಕೆ ಒಂದು ಸಾರಿ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದ ಪಕ್ಷೇತರರು ಕೊನೆಯವರೆಗೂ ಅದಕ್ಕೇ ಬೆಂಬಲ ನೀಡಬೇಕು ಎಂದು ಸಹ ಆ ತೀರ್ಪಿನಲ್ಲಿ ದಾಖಲಾಗಿದೆ.
೨೪. ಇದನ್ನು ಪಾಲಿಸದ ಪಕ್ಷದ, ಅಥವಾ ಪಕ್ಷಕ್ಕೆ ಬೆಂಬಲ ನೀಡಿದ ಪಕ್ಷೇತರ ಶಾಸಕರ ಮೇಲೆ ಶಿಸ್ತು ಕ್ರಮ ಕೈಕೊಳ್ಳಿ ಎಂದು ವಿಪ್ ಸಾಹೇಬರು ಸ್ಪೀಕರ್ ಸಾಹೇಬರಿಗೆ ದೂರಬಹುದು. ಅವರು ಅದನ್ನು ಕೇಳಬಹುದು, ಕೇಳಿದರೂ ಕೇಳದಂತೆ ಇರಲೂಬಹುದು.
ವಿಪ್ಪಿನ ಮಾತನ್ನು ಸ್ಪೀಕರ್ ಸಾಹೇಬರು ಸೀರಿಯಸ್ಸಾಗಿ ಪರಿಗಣಿಸಿದರೆ ಸದಸ್ಯರ ೧> ನಿರ್ದಿಷ್ಟ ಅವಧಿಗೆ ಅಮಾನತು ಮಾಡಬಹುದು, ೨> ಸದಸ್ಯತ್ವ ರದ್ದು ಮಾಡಬಹುದು, ೩> ಹೋಗಲಿ ಬಿಡು ಅಂತ ಬಿಟ್ಟು ಬಿಟ್ಟು ಅವರ ಜತೆ ಇಬ್ಬರೂ ಕೂಡಿ ಥೈಲ್ಯಾಂಡ್ ಗೆ ಫ್ಯಾಮಿಲಿ ಟೂರ್ ಹೋಗಬಹುದು. ಇವೆಲ್ಲ ಮಾಡುವ ಮೊದಲು ನೋಟೀಸ್ ನೀಡಬೇಕು. ಅದಕ್ಕೆ, ಅದರ ಉತ್ತರ ಪಡೆಯಲಿಕ್ಕೆ ಕಾನೂನಿನಲ್ಲಿ ಕಾಲಾವಧಿ ಇಲ್ಲ. ರಾಜ್ಯ ವಿಧಾನಸಭೆ ಮಾಡಿದ ನಿಯಮಗಳಲ್ಲಿ ಎಳು ದಿನ ಅಂತ ಇದೆ. (ಧರ್ಮಸಿಂಗ್ ಸಾಹೇಬರ ಕಾದಲ್ಲಿಯ ಒಂದು ಪ್ರಕರಣವನ್ನು ಸ್ಪೀಕರ್ ೨೨ ತಿಂಗಳ ಮುಂದೂಡಿದರು. ಆ ನಂತರ ಚುನಾವಣೆ ಬಂತು. ಸ್ಪೀಕರ್ ಅವರ ಅಧಿಕಾರವನ್ನು ಮತದಾರರು ಹೈಜಾಕ್ ಮಾಡಿದರು!)
೨೫. ಸಂವಿಧಾನದ ಪ್ರಕಾರ ಸದಸ್ಯತ್ವ ರದ್ದಾಗುವುದು ಚುನಾವಣಾ ಸಂಬಂಧಿ ಕಾಯಿದೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗ ರಾಜ್ಯಪಾಲರಿಗೆ ಸಲಹೆ ನೀಡಿದಾಗ ಮಾತ್ರ. ಅಂಥ ಸನ್ನಿವೇಶವೇನೂ ಈಗ ಸೃಷ್ಟಿಯಾಗಿಲ್ಲ.
೨೬. ಶಾಸಕರ ಸದಸ್ಯತ್ವ ರದ್ದಾಗಬೇಕೇ ಬೇಡವೇ ಎಂದು ನಿರ್ಧರಿಸುವ ಅಂತಿಮ ಅಧಿಕಾರ ಇರುವುದು ಸ್ಪೀಕರ್ ಅವರಿಗೆ. ಅವರ ವಿರುದ್ಧ ದೂರು ಸಲ್ಲಿಸಲು ನ್ಯಾಯಾಲಯಕ್ಕೆ ಹೋಗಲು ಅವಕಾಶ ಇಲ್ಲ. ಅವರ ನಿರ್ಧಾರ ಸಂವಿಧಾನದ ಆಶಯದ ಪ್ರಕಾರ ಇತ್ತೋ ಇಲ್ಲವೋ ಎಂದು ನ್ಯಾಯಾಲಯದ ಅಭಿಪ್ರಾಯ ಕೇಳಬಹುದಷ್ಟೆ. (ಈ ಭಾಗ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋಟ್ ತೀರ್ಪು ನೀಡಿದ್ದರಿಂದ ಇದನ್ನು ಕಾನೂನಿನಿಂದ ಕೈಬಿಡಲಾಗಿದೆ )
೨೭. ಆದರೆ ವಿಪ್ ಉಲ್ಲಂಘನೆಯಾಗಿದೆಯೇ ಎಂದು ನಿರ್ಧಾರವಾಗುವುದು ಸದನದಲ್ಲಿ ಆ ಸದಸ್ಯನ ನಡುವಳಿಕೆಯ ಆಧಾರದ ಮೇಲೆಯೆ. ಸದನದಲ್ಲಿ ಅಧಿವೇಶನ ನಡೆಯುವ ಮೊದಲೇ ವಿಪ್ ಉಲ್ಲಂಘನೆ ಆಗಿದೆಯೋ ಇಲ್ಲವೋ ಎಂಬ ನಿರ್ಧಾರಕ್ಕೆ ಸ್ಪೀಕರ್ ಗಳು ಬಂದಿದ್ದು ಅಪರೂಪ. ಆದರೆ ವಿಪ್ ಉಲ್ಲಂಘನೆಗಾಗಿ ಶಾಸಕರ ಸದಸ್ಯತ್ವವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಸ್ಪೀಕರ್ ಬೋಪಯ್ಯನವರೇನೂ ಹೇಳಿಲ್ಲ. ಶಿಸ್ತು ಮೀರಿದ ಶಾಸಕರು ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಮಾಡುತ್ತೇನೆ ಎಂದು ಮು.ಮ ಅವರು ಕೆಲವು ದಿನಗಳ ಹಿಂದೆ ಧಮಕಿ ಹಾಕಿದ್ದನ್ನು ಇಲ್ಲಿ ನೆನೆಯಬಹುದು.
೨೮. ಹೀಗಾಗಿ ಬೋಪಯ್ಯನವರು ಈ ೧೬ ಜನ ಶಾಸಕರ ಸದಸ್ಯತ್ವವನ್ನು ಯಾಕೆ ರದ್ದು ಮಾಡಿದರು ಎನ್ನುವುದು ಸ್ಪಷ್ಟವಾಗಿಲ್ಲ.
೨೯. ಸದನದ ಒಳಗೆ ಬಿಳೀ ಬಟ್ಟೆ ಹಾಕಿದ ಪೋಲಿಸರಿಗೆ ಮಾರ್ಷಲ್ ಎಂದು ಹೆಸರು. ಖಾಕಿ ಹಾಕಿಕೊಂಡ ಪೋಲಿಸರು ವಿಧಾನಸೌಧದ ಒಳಗೆ ಬರಬಾರದು ಎಂಬ ಕಾನೂನು ಇಲ್ಲ. ಸಂಪ್ರದಾಯ ಇದೆ.
೩೦. ಇನ್ನು ಸದಸ್ಯತ್ವ ರದ್ದತಿ ಶಿಸ್ತು ಕ್ರಮ ಎದುರಿಸುತ್ತಿರುವ ಶಾಸಕರು ಸದನದ ಒಳಗೆ ಬರುವಂತಿಲ್ಲ. ಅವರು ಬಂದರೆ ಅವರನ್ನು ಸ್ಪೀಕರ್ ಅವರು ಹೊರಹೋಗಲು ಹೇಳಬಹುದು. ಕೇಳದಿದ್ದರೆ ಮಾರ್ಷಲ್ ಗಳಿಗೆ ಹೇಳಿ ಹೊರ ಹಾಕಿಸಬಹುದು. ಮಾರ್ಷಲ್ ಗಳಿಗೇ ಹೊಡೆಯುವ ಶಾಸಕರು ಸಂವಿಧಾನ ರಚನೆಯ ಸಮಯದಲ್ಲಿ ಇನ್ನೂ ಹುಟ್ಟಿದ್ದಿಲ್ಲವಾದ್ದರಿಂದ ಅದರ ಬಗ್ಗೆ ಸಂವಿಧಾನ ರಚನಾ ಸಮಿತಿ ಏನೂ ಹೇಳಿಲ್ಲ.
೩೧. ಸದಸ್ಯರಲ್ಲದವರು ಸದನಕ್ಕೆ ಬಂದು ಹೊರಗೆ ಹೋಗದೇ ಅಂಗಿ ಹರಿದುಕೊಂಡು ಹಟ ಮಾಡಿದರೆ (ಅಕ್ಷರಶಃ) ಸದನವು ಸುವ್ಯವಸ್ಥಿತವಾಗಿಲ್ಲ ಎಂದು ಸ್ಪೀಕರ್ ಸಾಹೇಬರು ತೀರ್ಪು ನೀಡಬಹುದು. ಅದರಂತೆ ಸಭೆ ಬರಖಾಸ್ತು ಮಾಡಬಹುದು. ವ್ಯವಸ್ಥಿತವಾಗಿದೆ ಎಂದು ಅವರಿಗೆ ಅನ್ನಿಸಿದರೆ ಸಭೆ ನಡೆಸಬಹುದು. ಸದನ ವ್ಯವಸ್ಥಿತವಾಗಿರಲಿಲ್ಲ ಎಂದು ಸದಸ್ಯರು ಆರೋಪ ಮಾಡಬಹುದು. ರಾಜ್ಯಪಾಲರಿಗೆ ಸ್ಪೀಕರ್ ಅವರು ಹೊಡೆದಾಟ ಬಡಿದಾಟದ ನಡುವೆಯೂ ಸಭೆ ನಡೆಸಿದ್ದಾರೆ ಎಂದು ದೂರು ನೀಡಬಹುದು.
೩೨. ಸಭೆ ನಡೆಸಲು ಬೇಕಾದ ಕನಿಷ್ಠ ಸದಸ್ಯರ ಸಂಖ್ಯೆ ೨೩. (ಶೇಕಡಾ ಹತ್ತು.) ಆಡಳಿತ ಪಕ್ಷದವರು ಇಷ್ಟಿರಬೇಕು, ವಿರೋಧ ಪಕ್ಷದವರು ಇಷ್ಟಿರಬೇಕು ಎಂಬ ನಿಯಮ ಇಲ್ಲ.
೩೩. ಸದನದಲ್ಲಿನ ಎಲ್ಲ ಮತದಾನಗಳೂ ಧ್ವನಿ ಮತದಿಂದಲೇ ಮೊದಲ ಬಾರಿಗೆ ನಿರ್ಧಾರ ವಾಗುತ್ತವೆ. ಯಾವ ಸದಸ್ಯರಾದರೂ ಅದಕ್ಕೆ ವಿರೋಧ ಮಾಡಿದಾಗ ಮಾತ್ರ ತಲೆ ಎಣಿಸುವ, ಹೆಡ್ ಕೌಂಟ್, ಅಥವಾ ಪೇಪರ್ ಬ್ಯಾಲಟ್ ಉಪಯೋಗವಾಗುತ್ತದೆ. ಧ್ವನಿ ಮತಕ್ಕೆ ವಿರೋಧ ಬರದೇ ಇದ್ದಲ್ಲಿ ತಲೆ ಎಣಿಕೆ ಅಗತ್ಯ ಇಲ್ಲ.
ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ. ಕೋರಂ ಎಂದರೆ ಸಭೆ ನಡೆಸಲು ಕನಿಷ್ಟ ಎಷ್ಟು ಜನ ಸದಸ್ಯರು ಇರಬೇಕು ಎಂಬ ಪ್ರಶ್ನೆಗೆ ಉತ್ತರ.
೩೪. ಇಂದಿನ ಶಾಸನ ಸಭೆಯನ್ನು ಸುವ್ಯವಸ್ಥೆಯ ಆಧಾರದ ಮೇಲೆ ಟೀಕಿಸಬಹುದು. ಕೋರಂ ಆಧಾರದ ಮೇಲೆ ಅಲ್ಲ.
೩೫. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಬೋಪಯ್ಯನವರು ಸದಸ್ಯರನ್ನು ಅನೂರ್ಜಿತಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಅಭಿಪ್ರಾಯ ನೀಡಬಹುದು.
೩೬. ಇದೆಲ್ಲ ಆಗುತ್ತಿದ್ದಂತೆ ಯಡ್ಯೂರಪ್ಪ ಅವರು ಇನ್ನೊಂದು ಬಿಳಿ ಸಫಾರಿ ಹೊಲಿಸಿಕೊಂಡು ಮಿಂಚಬಹುದು. ಅಥವಾ ಸಿದ್ರಾಮನ ಹುಂಡಿ ಸಿದ್ರಾಮಯ್ಯನವರು ಹಸಿರು ಟವೆಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಬಹುದು.
೩೭. ಅಥವಾ ಇರುವ ಒಬ್ಬ ಮಗ, ಒಬ್ಬಳೇ ಮಗಳನ್ನು ಅಮೇರಿಕೆಗೆ ಮದುವೆ ಮಾಡಿಕೊಟ್ಟು ಸ್ವಿಜರ್ ಲ್ಯಾಂಡಿಗೆ ಟೂರ್ ಹೋದ ಐ.ಎ.ಎಸ್ ಅಧಿಕಾರಿಗಳು ತಮ್ಮ ಹಳೆಯ ಸೂಟುಗಳನ್ನು ರಾಜ್ಯಪಾಲರ ಸಲಹೆಗಾರರು ಎಂದು ಮರಳಿ ಬಂದು ನಮ್ಮ ಜೀವ ತಿನ್ನಬಹುದು.
೩೮. ಅಥವಾ ನಮ್ಮ ಪ್ರಭುಗಳು ಸರಕಾರದ ಅಕಾಲಿಕ ಮರಣವನ್ನು ಘೋಷಿಸಿ ಬೆಲೆಯೇರಿಕೆಯೇ ಇಳಿಯದ ನಮ್ಮ ಗಂಟಲೊಳಗೆ ಇನ್ನೊಂದು ಚುನಾವಣೆಯನ್ನು ತುರುಕಬಹುದು.
ಅಷ್ಟಕ್ಕೂ ಡೆಮಾಕ್ರಸಿ ಎಂದರೆ ಏನು? ಇದು ಮುಖ್ಯ ಪ್ರಶ್ನೆಯೇ? ಅಥವಾ ಇದಕ್ಕೆ ಉತ್ತರ ಯಾವ ನನ್ನ ಮಗನಿಗೆ ಬೇಕಾಗಿದೆ?
ಇಷ್ಟೆಲ್ಲಾ ಬರೆದು ಮುಗಿಸುವ ಹೊತ್ತಿಗೆ ನನಗೊಂದು ಫೋನ್ ಬಂತು. ಆ ಕೆಂಡಸಂಪಿಗೆಯಲ್ಲಿ ನೀವು ಬರೀ ಶ್ರೀರಾಮುಲು ಅವರ ಬಗ್ಗೆ ಮಾತ್ರವೇ ಬರೀತೀರಿ ನಮ್ಮ ಬಗ್ಗೆ ಯಾಕೆ ಬರೆಯೋದಿಲ್ಲ ಅಂತ ನನ್ನ ಜತೆ ಜಗಳವಾಡಿದವರು ಗೂಳಿಹಟ್ಟಿ ಶೇಖರ್. ಟೀವಿಯಲ್ಲಿ ನಾನು ಶರ್ಟ್ ತೆಗೆದದ್ದು ನೋಡಿದ ಸಲ್ಮಾನ್ ಖಾನ್ ಅವರು ನನ್ನನ್ನು ದಬಾಂಗ್-೩ ಚಿತ್ರದಲ್ಲಿ ನನಗೆ ಅವಕಾಶ ನೀಡಿದ್ದಾರೆ. ಹೇಗೂ ನಮಗೆ ಮುಂದಿನ ಚುನಾವಣೆಯ ವಿಚಾರ ಇಲ್ಲ. ನಾನು ಬಾಂಬೆಗೆ ಹೋಗೋಕಿಂತ ಮುಂಚೆ ಬನ್ನಿ ಇಂಟರ್ವ್ಯೂ ಮಾಡಿ, ಅಂದರು. ಆ ಪರಮ ದಯಾಳುವಾದ ಕರುಣಾಮಯ ಭಗವಂತನ ದಯೆ ಇದ್ದರೆ ಅದೂ ಆದೀತು ಎಂದುಕೊಂಡೆ.
Print Close
Democracy for Dummies-2
ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ
ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ
By ಹೃಷಿಕೇಶ್ ಬಹದ್ದೂರ್ ದೇಸಾಯಿ
ರಾಜ್ಯದ ೩೦ ಪಂಚಾಯಿತಿಗಳಲ್ಲಿ ಬಿಜೆಪಿ ೧೨ ಸ್ಥಾನ ಗೆದ್ದಿತು, ಕಾಂಗ್ರೆಸ್, ಜೆಡಿಎಸ್ ನಾಲ್ಕು ನಾಲ್ಕು ಗೆದ್ದವು, ಇನ್ನುಳಿದ ೧0 ಅತಂತ್ರ ಅಂತ ಕೆಲವರು ಮೊನ್ನೆ ಸುದ್ದಿ ಬರೆದಿದ್ದಾರೆ. ನಿನ್ನೆಯಿಂದ ಅನೇಕರು ಓದುತ್ತಲೇ ಇದ್ದಾರೆ. ಎಲ್ಲಾ ಕಡೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಂದು ಪಂಚಾಯಿತಿ ಸಭೆಗಳು ಆರಂಭವಾಗುವವರೆಗೆ ಇಂಥ ಸುದ್ದಿ ಓದಲೇಬೇಕಾದ ಅನಿವಾರ್ಯತೆ ಮತದಾರರೆಂಬ ನಿತ್ಯ ನಾರಕಿಗಳಿಗೆ ಇದೆ.
ಹಂಗೆಲ್ಲಾ ಅಂದರೇನು? ಇದರ ಅರ್ಥ ಏನು? ಈ ಜನವರಿ ೪ ನಾಲ್ಕರ ಚುನಾವಣೆ ಫಲಿತಾಂಶದ ಹಕೀಕತ್ತಾದರೂ ಏನು? ಇದು ಬೇಕಿತ್ತೇ?
ನಿಮ್ಮೊಡನಿದ್ದೂ ನಿಮ್ಮಂತಿರದ ಬಾಳು
“ಇದರ ಸೀದಾ ಸಾದಾ ಅರ್ಥ ಏನೆಂದರೆ, ರಾಜ್ಯದ ಜಿಲ್ಲಾ ಪಂಚಾಯಿತಿಗಳ ಪೈಕಿ ೪೦ ಶೇಕಡಾ ಸಂಸ್ಥೆಗಳಲ್ಲಿ ಬಹುಮತ ಪಡೆದ ಬಿಜೆಪಿ ಹಾಗೂ ಅದರ ಕಮಾಂಡರ್ ಆದ ಯಡಿಯೂರಪ್ಪ ಅವರು ಗೆದ್ದಂತೆ” ಅಂತ ಮುಖ್ಯಮಂತ್ರಿಗಳ ರೇಸ್ ಕೋಸ್ ನಿವಾಸದ ಸುತ್ತಮುತ್ತ ತಿರುಗಾಡುತ್ತಿರುವ ಅವರ ಹಿಂಬಾಲಕರು ಹೇಳುತ್ತಿದ್ದಾರಂತೆ. ಹೇಳಿಕೊಂಡು ಮತ್ತೆ ತಿರುಗಾಡುತ್ತಿದ್ದಾರಂತೆ.
ಅಡ್ಡ ವೈಸರ್ ಗಳು
ಇನ್ನು ಕೆಲವರು “ಇದಕ್ಕೆ ಸಾಧನೆ ಅಂತಾರೆಯೇ? ಇದು ಕಂಪ್ಲೀಟ್ ಫೇಲ್ಯುರ್. ನಾನು ಮುಖ್ಯಮಂತ್ರಿಯಾಗಿದ್ದರೆ ತೋರಿಸುತ್ತಿದ್ದೆ. ನೂರಕ್ಕೆ ನೂರು ಕಡೆ ನಮ್ಮವರು ಬಂದು ವಿರೋಧ ಪಕ್ಷ ನಿರ್ನಾಮ ಮಾಡುತ್ತಿದ್ದೆ !@#$,” ಅಂತ ಹೇಳುತ್ತಿದ್ದಾರಂತೆ. ಇಂಥ ಕುಹಕಿಗಳಲ್ಲಿ ‘ಅವರೊಡನಿದ್ದೂ ಅವರೊಡನಿರದಿರುವ ಕೆಲವರು’ ಇದ್ದಾರೆ ಅಂತ ಮುಖ್ಯಮಂತ್ರಿಗಳ ಅಡ್ಡ ಅಡ್ಡ ಅಡ್ವೈಸರ್ ಗಳು ಅವರ ಮಾರ್ನಿಂಗ್ ವಾಕ್ ನಲ್ಲಿ ಹೇಳುತ್ತಿದ್ದಾರಂತೆ.
ಹಾಗಾದರೆ ಪಂಚಾಯಿತಿ ಚುನಾವಣೆಗಳಲ್ಲಿ ಏನಾಯ್ತು?
ರಾಜ್ಯದ ಜನ ಬಿಜೆಪಿ ಸರಕಾರ ದ ಹಗರಣಗಳನ್ನು, ಮುಖ್ಯಮಂತ್ರಿಗಳೂ ಸೇರಿದಂತೆ ಮಂತ್ರಿಗಳ ವಿರುದ್ಧದ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ, ವೈಯಕ್ತಿಕ ದುರ್ನಡತೆಯ ಆರೋಪಗಳೆಲ್ಲವನ್ನೂ ಮರೆತರೆ? ಎಲ್ಲಕ್ಕಿಂತ ಮುಖ್ಯವಾಗಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡಕರಿ ಅವರೇ ‘ಅನೈತಿಕ’ ಎಂದು ಒಪ್ಪಿಕೊಂಡ ಡಿನೋಟಿಫಿಕೇಷನ್ನುಗಳನ್ನು ಕ್ಷಮಿಸಿದರೇ?
ಅಥವಾ “ಈ ಎರಡೂವರೆ ವರ್ಷದಲ್ಲಿ ನೀವು ಮಾಡಿದ್ದೆಲ್ಲವನ್ನೂ ನಾವು ಒಪ್ಪಿಕೊಂಡಿಲ್ಲ. ಇದು ಮೊದಲ ಎಚ್ಚರಿಕೆ. ನಿಮ್ಮನ್ನು ನೀವು ತಿದ್ದಿಕೊಳ್ಳಲು ನಿಮಗೆ ಒಂದು ಅವಕಾಶ ಕೊಟ್ಟಿದ್ದೇವೆ. ಇದೇ ಲಾಸ್ಟ್. ಇನ್ನು ಮುಂದೆ ನೀವು ತಿದ್ದಿಕೊಳ್ಳದಿದ್ದರೆ ಇನ್ನು ಎರಡೂವರೆ ವರ್ಷದ ನಂತರ ನಿಮಗೆ ತಿದ್ದಿಕೊಳ್ಳಲು ಅವಕಾಶ ಸಿಗುವುದಿಲ್ಲ. ಆಗ ನಾವೆಲ್ಲ ಸೇರಿ ಹೊಸ ತಪ್ಪು ಮಾಡಲು ಬೇರೆ ಪಕ್ಷಕ್ಕೆ ಅವಕಾಶ ಕೊಡುತ್ತೇವೆ” ಎಂದು ಹಳ್ಳಿ ಜನರೆಲ್ಲ ಸೇರಿ ಸರಕಾರಕ್ಕೆ ಧಮಕಿ ಕೊಟ್ಟಿದ್ದಾರೆಯೇ?
ಇವರೆಡೂ ಅಲ್ಲ.
ಸರಕಾರದ ತಪ್ಪು ಒಪ್ಪುಗಳನ್ನು ಜನ ಮರೆತಿಲ್ಲ, ಕ್ಷಮಿಸಿಲ್ಲ. ರಾಜ್ಯದ ಆಡಳಿತವೇ ಬೇರೆ, ಪಂಚಾಯಿತಿ ಚುನಾವಣೆಯೇ ಬೇರೆ. ಇದೇ ಪ್ರಜಾಪ್ರಭುತ್ವದ ಮಜಾ.
ಚಹಾ ಅಂಗಡಿಯ ಮೆನುನಲ್ಲಿ ಏನಿದೆ?
ಪಂಚಾಯಿತಿ ಚುನಾವಣೆಗಳಲ್ಲಿ ಇಂಥ ದೊಡ್ಡ ದೊಡ್ಡ ವಿಷಯಗಳೆಲ್ಲ್ಲ ಚರ್ಚೆಯ ವಿಷಯಗಳೇ ಅಲ್ಲ. ಬೇರುಮಟ್ಟದ ರಾಜಕೀಯದಲ್ಲಿ ಅಪಾರ ಅನುಭವ ಇರುವ ಯಡಿಯೂರಪ್ಪ ಅವರಿಗೆ ಇದು ಚೆನ್ನಾಗಿ ಗೊತ್ತು.
ಅದಕ್ಕೇ ಅವರು ‘ನಾನು ತಪ್ಪು ಮಾಡಿದ್ದರೆ ಪಂಚಾಯಿತಿ ಚುನಾವಣೆಗಳಲ್ಲಿ ಜನ ತೀರ್ಪು ಕೊಡುತ್ತಾರೆ’ ಅಂತ ಹೇಳಿದ್ದು. ರಾಜ್ಯ ಮಟ್ಟದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳು ಪಂಚಾಯಿತಿ ಚುನಾವಣೆಗೆ ಮುಂಚೆ ಊರ ಮುಂದಿನ ಚಹಾ ಅಂಗಡಿಯಲ್ಲಿ ಚರ್ಚೆಗೆ ಬರುವುದೇ ಇಲ್ಲ, ಮತದಾರನ ಆಯ್ಕೆಯನ್ನು ಅವು ನಿರ್ಧರಿಸುವುದಿಲ್ಲ. ಚುನಾವಣೆ ಸಮಯದಲ್ಲಿ ಸುಮ್ಮನೇ ಹಳ್ಳಿಗಳ ಕಡೆ ಪಿಕ್ ನಿಕ್ ಗೆ ಹೋದವರಿಗೇ ಇದು ಗೊತ್ತಾಗುವಾಗ ರಾಜಕೀಯವನ್ನೇ ಉಂಡು ತಿಂದು ಉಸಿರಾಡುವ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲವೇ?
ಕಪ್ಪು ಬಿಳುಪಿನ ಪೋಸ್ಟ್ ಮಾರ್ಟಮ್
ಈ ಗಹನವಾದ ವಿಚಾರವನ್ನು ತಿಳಿಯುವ ಮುನ್ನ ಒಂದು ಕತೆ ಕೇಳೋಣ. ಮೊನ್ನೆಯ ಚುನಾವಣೆ ಪ್ರಚಾರ ನೋಡಲು ನಾವು ಹೋದಾಗ ಹಿಂದೆ ಎರಡು ಸಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಗೆದ್ದು, ಗ್ರಾಮೀಣ ಜನರ, ಹಿಂದುಳಿದವರ ನಾಯಕ ಅಂತ ಅನ್ನಿಸಿಕೊಂಡ ಅಮೃತ್ ಚಿಮ್ಕೋಡ್ ಅವರು ಸಿಕ್ಕರು. ಅವರು ಅವರ ಮನೆಯವರ ಪರವಾಗಿ ಪ್ರಚಾರ ನಡೆಸಿದ್ದರು. ಹಳ್ಳಿಯ ಮುದುಕಿಯೊಬ್ಬಳು ಅವರನ್ನು “ಅಯ್ಯೋ ನೀನೆಷ್ಟು ಕರ್ರಗಿದ್ದೀ, ನಿಮ್ಮ ಮೇಡಂ ಅವರು ಎಷ್ಟು ಬೆಳ್ಳಗಿದ್ದಾರೆ” ಅಂದಳು. “ಅಯ್ಯೋ ಏನು ಮಾಡೋದು ಎವ್ವಾ, ರಾಧಾ ಕ್ಯೋಂ ಗೋರಿ, ಮೈ ಕ್ಯೋಂ ಕಾಲಾ?” ಅಂತ ನಕ್ಕರು. ಆ ಮನೆಯಲ್ಲಿದ್ದ ಎಲ್ಲರನ್ನೂ ನಗಿಸಿದರು. (ರಾಧಾ ಯಾಕೆ ಬೆಳ್ಳಗಿದ್ದಾಳೆ ನಾನೇಕೆ ಕಪ್ಪು ಎನ್ನುವುದೊಂದು ಮೀರಾ ಭಜನೆ). ನಂತರ ಅಮೃತ್ ಈಚೆಗೆ ಬಂದು ನಕ್ಕರು. “ನಮ್ಮ ಸಾಹೇಬರು ನಾಮಿನೇಷನ್ ಹಾಕಿದಾಗಲೇ ಗೆದ್ದು ಬಿಟ್ಟರು” ಅಂತ ಅವರ ಹಿಂಬಾಲಕರೊಬ್ಬರು ಹೇಳಿದರು. ಸಾಹೇಬರ ಹೆಂಡತಿ ನಾಮಿನೇಷನ್ ಹಾಕಿದ್ದರೂ ಕೂಡ ಸಾಹೇಬರು ಹಾಕಿದಂತೆ ಅಂತ ಅವರು ಮಾತಾಡುತ್ತಾರೆ.
ಕುಯ್ಯುವ, ಹೊಲಿಯುವ ಕಾಂಟ್ರ್ಯಾಕ್ಟ್
ನೀವು ಈ ಜನರಿಗೆ ಏನು ಮಾಡಿದ್ದೀರಿ ಅಂತ ನಾವು ಕೇಳಿದಾಗ ಅವರು ಹೇಳಲು ಶುರು ಮಾಡಿದರು. “ಸಾರ್ ನಾನು ನನ್ನ ಕ್ಷೇತ್ರದ ಪೋಸ್ಟ ಮಾರ್ಟಮ್ ಗಳಿಗೆ ಗುತ್ತಿಗೆದಾರ. ಅದರಲ್ಲೂ ಕ್ಲಾಸ್ ಒನ್ ಕಾಂಟ್ರಾಕ್ಟರ್. ಈ ಹಳ್ಳಿಗಳಲ್ಲಿ ಯಾರಿಗಾದರೂ ಆರಾಮ ಇಲ್ಲದೇ ಜಿಲ್ಲಾಸ್ಪತ್ರೆಗೆ ಹೋಗಿ ಸತ್ತರೆ, ಅಲ್ಲಿ ಅವರಿಗೆ ಪೋಸ್ಟ ಮಾರ್ಟಮ್ ಮಾಡಬೇಕು. ಅದನ್ನು ಮಾಡಲು ಡೆಡ್ ಬಾಡಿಯನ್ನು ಹೆಣದ ಮನೆಗೆ ಒಯ್ಯಬೇಕು. ಅಲ್ಲಿಗೆ ಒಯ್ಯುವವರಿಗೆ ಲಂಚ ಕೊಡಬೇಕು. ನಂತರ ಅದನ್ನು ಕೊಯ್ಯುವವರು, ಹೊಲಿಯುವವರು ಸಿಗಬೇಕು. ಅವರಿಗೆ ಕುಡಿಸಬೇಕು. ನಂತರ ಜಿಲ್ಲಾ ಸರ್ಜನ್ನರು ಅವನ ಮರಣ ಶಾಸನಕ್ಕೆ ಸಹಿ ಹಾಕಬೇಕು. ಅಲ್ಲಿ ಅವರಿಗಾಗಿ ಕಾಲು ಬಿದ್ದು, ಲಂಚ ಕೊಟ್ಟು ಕಾಯಬೇಕು. ಇದನ್ನೆಲ್ಲ ಹಳ್ಳಿ ಯ ಜನ ಮಾಡಲಾರರು. ಇಂಥ ಕೆಲಸಕ್ಕೆ ಅವರಿಗೆ ನಾನು ಬೇಕು. ಇಂಥ ಫೋನ್ ನನಗೆ ವಾರಕ್ಕೆ ಒಂದಾದರೂ ಬರುತ್ತದೆ, ಅಂತ ಅವರು ಹೇಳಿದರು. ಅಂದರೆ ಇವರನ್ನು ಎರಡು ಸಾರಿ ಗೆಲ್ಲಿಸಿದವರು ಜೀವಂತ ಮತದಾರರಲ್ಲ. ಸತ್ತು ಹೋದವರು!
ಮತದಾರರೆಂಬ ವಿಕಲಚೇತನರು
ಪಂಚಾಯಿತಿಗಳಲ್ಲಿ ಚರ್ಚೆಗೆ ಬರುವ ವಿಷಯಗಳು ಇವು. ಡಿಸಿ ಆಫೀಸಿನವರೇ ನೀಡಿದ ರೇಷನ್ ಕಾರ್ಡನ್ನು ಡಿಸಿ ಆಫೀಸಿನವರೇ ರದ್ದು ಮಾಡಿದ್ದು. ಜಾತಿ, ಗಳಿಕೆ, ವಿಳಾಸ ಪ್ರಮಾಣ ಪತ್ರಗಳನ್ನು ಕೊಡಲು ಕಳೆದ ವರ್ಷ ೧೦೦ ರೂಪಾಯಿ ಕೇಳಿದ ತಲಾಠಿ ಈ ವರ್ಷ ೨೦೦ ರೂಪಾಯಿ ಕೇಳಿದ್ದು, ಅಂಗವಿಕಲರು, (ವಿಕಲಚೇತನರು ಎನ್ನುವುದು ತಪ್ಪು ಪದ ಬಳಕೆಯಂತೆ) ವಿಧವೆಯರು ಹಾಗೂ ನೆಲೆ ಇಲ್ಲದ ವಯಸ್ಸಾದವರಿಗೆ ಸಿಗಬೇಕಾದ ಮಾಸಾಶನಗಳು ಜಿಲ್ಲಾ ಖಜಾನೆಯಿಂದ ಬಿಡುಗಡೆಯಾದರೂ ಹಳ್ಳಿಯವರೆಗೂ ಬರಲಾರದ್ದು,
ಹಾವು ಕಡಿದು ಸತ್ತ ರೈತ ನ ಕುಟುಂಬಕ್ಕೆ ಐದು ವರ್ಷದ ಹಿಂದೆ ಬರಬೇಕಾದ ಹತ್ತು ಸಾವಿರ ರೂಪಾಯಿ ಬಂತೋ ಇಲ್ಲವೋ ಗೊತ್ತಾಗಲಾರದ್ದು, ಮಾರಾಟ ಮಾಡಿದ ಹೊಲದ ಮಾಲೀಕರ ಹೆಸರನ್ನು ಪಹಣಿ ಪತ್ರದಲ್ಲಿ ಬದಲಾಯಿಸಲು ತಹಶೀಲ್ದಾರ್ ಕಚೇರಿಗೆ ಕಳೆದ ಮೂರು ವರ್ಷದಲ್ಲಿ ೮೬ ಸಾರಿ ಹೋಗಿಬಂದರೂ ಆಗದೇ ಇರೋದು. ವರ್ಷಾನುಗಟ್ಟಲೇ ಡಾಕ್ಟರು ಇಲ್ಲದೇ ಇರುವ ಸರಕಾರಿ ಆಸ್ಪತ್ರೆಯಲ್ಲಿ ನರ್ಸು ಕೂಡ ಇಲ್ಲದೇ ಇರುವುದು, ಇಂಥವೆಲ್ಲ.
ಒಬ್ಬ ಯಶಸ್ವೀ ಜಿಲ್ಲಾ ಪಂಚಾಯಿತಿ ಸದಸ್ಯ ಇದನ್ನೆಲ್ಲಾ ಮಾಡಿಸುತ್ತಾನೆ. ಮತದಾರನ ಕೈಹಿಡಿದುಕೊಂಡು ಟೇಬಲ್ ಟೇಬಲ್ ಓಡಾಡುತ್ತಾನೆ. ಮತದಾರರ ಖರ್ಚು ಕಮ್ಮಿ ಮಾಡಿಸುತ್ತಾನೆ. ಸರಕಾರಿ ಕಚೇರಿಗಳಲ್ಲಿ ಅವರ ಮೇಲೆ ಬೀಳುವ ಅಧಿಕಾರಿಗಳು ಹಾಗೂ ದಲಾಲರ ಕ್ರೂರ ದೃಷ್ಟಿಯನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ತಪ್ಪಿಸುತ್ತಾನೆ.
ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುವ ಸಂಸ್ಕೃತಿ ಇನ್ನೂ ನಮ್ಮಲ್ಲಿ ಬಂದಿಲ್ಲ. ಜನರ ಕುಂದುಕೊರತೆಗಳು ತಂತಾನೆ ಪರಿಹಾರ ಆಗುವ ಮಟ್ಟಿಗೆ ನಮ್ಮ ವ್ಯವಸ್ಥೆ ನಮ್ಮಲ್ಲಿ ಬೆಳೆದಿಲ್ಲವಾದ್ದರಿಂದ ಇಂಥ ವಿಷಯಗಳು ನಮ್ಮ ದೇಶದಲ್ಲಿ ಇನ್ನೂ ಚುನಾವಣೆಗಳನ್ನು ನಿರ್ಧರಿಸುತ್ತವೆ.
ಯಾರಿಗೂ ಬೇಡವಾದ ಸರಕಾರದ ಷೇರು
ಹಾಗಂತ ನಗರಗಳಲ್ಲಿ ಸರಕಾರಿ ವ್ಯವಸ್ಥೆ ಸುಧಾರಿಸಿದೆ ಅಂತಲ್ಲ. ಅಲ್ಲಿ ನಮ್ಮ ದಿನ ನಿತ್ಯಕ್ಕೆ ಬೇಕಾದ ವಸ್ತು, ಹಾಗೂ ಸೇವೆಗಳನ್ನು ನೀಡಲು ಖಾಸಗಿ ಸಂಸ್ಥೆಗಳು ಇರುತ್ತವೆ.
ಉದಾಹರಣೆಗೆ ದೆಹಲಿ ಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಈಗ ನೀವು ಹಣ ಕೊಟ್ಟರೆ ಖಾಸಗಿ ಕಂಪನಿಗಳಿಂದ ನೀರು, ವಿದ್ಯುತ್, ಅಡುಗೆ ಅನಿಲ, ಫೋನು, ಮುಂತಾದವುಗಳನ್ನು ಪಡೆಯಬಹುದು. ಇನ್ನು ನಗರಗಳಲ್ಲಿರುವವರು ಬಾಡಿಗೆ ಮನೆ, ಕೆಲಸ, ಮಕ್ಕಳಿಗೆ ಸ್ಕೂಲು ಇವೆಲ್ಲಕ್ಕಾಗಿ ಸರಕಾರವನ್ನು ಅವಲಂಬಿಸುವುದನ್ನು ಬಿಟ್ಟು ಎಷ್ಟು ವರ್ಷಗಳಾದವು ಎನ್ನುವುದು ಮರೆತು ಹೋಗುವಷ್ಟು ವರ್ಷಗಳಾದವು. ನಮಗೆ ಸೇವೆ ನೀಡುವ ಕಂಪನಿ ಹೇಗೆ ನಡೆಯುತ್ತದೆ ಎಂಬುದು ನನಗೆ ತಿಳಿಯಬೇಕು ಎಂದು ಅದರ ಷೇರು ಖರೀದಿಸುವ ನಮ್ಮ ಜನ ನಮ್ಮನ್ನಾಳುವ ವರನ್ನು ಆರಿಸಲು ಮತಹಾಕುವುದಿಲ್ಲ.
ಇಂಡಿಯಾ ಸೋಲುತ್ತಿದ್ದರೂ ಸಚಿನ್ ಸೆಂಚುರಿ ಹೊಡೆಯುವುದು ಯಾಕೆ?
ಎಲ್ಲಕ್ಕಿಂತ ಮುಖ್ಯವಾಗಿ ನಗರಗಳಲ್ಲಿ ಹಳ್ಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಳ್ಳವರು ಇದ್ದಾರೆ. ಉಳ್ಳವರಿಗೆ ಚುನಾವಣೆ ದಿನ ಇಂಡಿಯಾ ಆಸ್ಟ್ರೇಲಿಯಾ ಮ್ಯಾಚ್ ನೋಡಬೇಕಾಗಿರುತ್ತದೆ. ಏನೂ ಇಲ್ಲದವರಿಗೆ ಅಭ್ಯರ್ಥಿ ನೀಡುವ ಹಣ ಹಾಗೂ ಇದ್ದಿದ್ದರಲ್ಲೇ ಹೈಕ್ವಾಲಿಟಿ ಇರುವ ಹೆಂಡ ಸಿಗುತ್ತದೆ. ಆದರೆ ಸಚಿನ್ ಸೆಂಚುರಿ ಹೊಡೆದು ಇಂಡಿಯಾ ಸೋತಮೇಲೆ, ಚಿಯರ್ ಗರ್ಲುಗಳ ಮೇಕಪ್ ಎಲ್ಲ ಬೆವರಿನಲ್ಲಿ ಹರಿದು ಹೋದಮೇಲೆ ನಮ್ಮವರು ‘ದಿನದಿಂದ ದಿನಕ್ಕೆ ಹದಗೆಡುತ್ತಿರುವ ಈ ಹೊಲಸು ರಾಜಕೀಯ’ದ ಬಗ್ಗೆ ಮಾತಾಡುತ್ತಾರೆ. “ ಚುನಾವಣೆಗಳಲ್ಲಿ ಜಾತಿ, ಹಣ, ಹೆಂಡ ಎಲ್ಲಾ ಬ್ಯಾನ್ ಮಾಡಬೇಕು. ಆ ಟೀ ಎನ್ ಶೇಷನ್ ರಾಷ್ಟ್ರಪತಿ ಆಗಿದ್ದರೆ ಇದನ್ನೆಲ್ಲ ಮಾಡುತ್ತಿದ್ದ. ಅವನನ್ನು ಎಲ್ಲರೂ ಸೇರಿ ಸೋಲಿಸಿಬಿಟ್ಟರು ~!@#*” ಅಂತ ಮನೆಯಲ್ಲಿ ನ ಸಣ್ಣ ಮಕ್ಕಳಿಗೂ ಕೂಡ ಕೇಳುವಂತೆ ಹೇಳಿ ಹೆಂಡತಿ ಯೊಂದಿಗೆ ಸಾಸ್ ಬಹೂ ನೋಡಲು ಕೂಡುತ್ತಾರೆ. ‘ಪ್ರಜಾಪ್ರಭುತ್ವ ವನ್ನು ಜೀವಂತವಾಗಿಡಲು ನಮಗಿರುವ ಕನಿಷ್ಟ ಜವಾಬ್ದಾರಿ ಮತಹಾಕುವುದು’ ಎನ್ನುವ ಟಾಟಾ ಟೀ ಜಾಹೀರಾತಿಗೆ ಟೀವಿ ಮ್ಯೂಟ್ ಮಾಡುತ್ತಾರೆ. ಒಂದು ಕ್ಷಣದ ಪಾಪಪ್ರಜ್ಞೆಯಿಂದ ಮುಕ್ತರಾಗುತ್ತಾರೆ. ರಾಜಕೀಯ ಕೆಟ್ಟು ಹೋಗಿರುವುದರಿಂದ ತಾವು ಓಟು ಹಾಕುವುದು ನಿಲ್ಲಿಸಿಲ್ಲ. ತಾವು ಓಟು ಹಾಕುವುದು ನಿಲ್ಲಿಸಿದ್ದರಿಂದ ಅದು ಕೆಟ್ಟು ಹೋಗಿದೆ ಅನ್ನುವುದು ಅವರಿಗೆ ಹೊಳೆಯುವುದಿಲ್ಲ. ಯಾಕೆಂದರೆ ಟೀ ಎನ್ ಸೀತಾರಾಮ ಅವರು ಅದನ್ನು ಇನ್ನೂ ತೋರಿಸಿಲ್ಲ! ಟೀಮಿನಲ್ಲಿನ ಇತರರು ಆಡದೇ ಇಂಡಿಯಾ ಸೋಲುತ್ತಲೇ ಹೋದರೂ ಸಚಿನ್ ಸೆಂಚುರಿ ಹೊಡೆಯುವದನ್ನು ನಿಲ್ಲಿಸುವುದಿಲ್ಲವಲ್ಲ, ಯಾಕೆ ಅಂತ ಅವರು ಒಮ್ಮೆಯೂ ತಲೆ ಕೆಡಿಸಿಕೊಂಡಿಲ್ಲ.
ಸೊಫಿಸ್ಟಿಕೇಟೆಡ್ ಮತದಾರರ ಹುಂಬ ಆಲೋಚನೆಗಳು
ಇನ್ನು ಚುನಾವಣೆಗಳಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನಿಜ. ಈ ದೇಶದಲ್ಲಿ ಎಲ್ಲಿಯವರೆಗೂ ಜಾತಿ ಆಧಾರಿತ ಭೇದಭಾವ ಇರುತ್ತದೋ, ಎಲ್ಲಿಯವರೆಗೆ ಕೆಲ ಜಾತಿಗಳಿಗೆ ಎಲ್ಲ ರಾಜಕೀಯ ಅಧಿಕಾರ ಸಿಕ್ಕು ಕೆಲ ಜಾತಿಗಳಿಗೆ ಏನೂ ಸಿಗುವುದೇ ಇಲ್ಲವೋ ಅಲ್ಲಿಯವರೆಗೆ ಚುನಾವಣೆ ಗಳಲ್ಲಿ ಜಾತಿ ಇರುತ್ತದೆ. ಅದಕ್ಕೇ ಮೇಲು ಜಾತಿಯ ಅಭ್ಯರ್ಥಿಗಳು ಕೆಳಜಾತಿಗಳ ಮತದಾರರನ್ನೂ, ಕೆಲ ಜಾತಿಯ ಅಭ್ಯರ್ಥಿಗಳು ಮೇಲು ಜಾತಿಗ ಳ ಮತದಾರರನ್ನೂ ಓಲೈಸುತ್ತಾ ನಡೆಯುತ್ತಾರೆ. ಹೊರಗಿನವರಿಗೆ ಇದು ವಿಚಿತ್ರವಾಗಿ, ಅಸಹ್ಯವಾಗಿ ಕಂಡರೂ ಈ ವ್ಯವಸ್ಥೆಯ ಒಳಗೇ ಜೀವನ ತೇಯಬೇಕಾದವರಿಗೆ ಇದು ಅನಿವಾರ್ಯ. ನಮ್ಮ ಜಾತಿಯವರು ಏನು ತಪ್ಪು ಮಾಡಿದರೂ ಪರವಾಗಿಲ್ಲ, ಅಧಿಕಾರಕ್ಕೆ ಬರಲಿ, ಅವರೇ ಮುಂದುವರೆಯಲಿ. ಇತರ ಜಾತಿಯವರು ಎಷ್ಟು ಒಳ್ಳಯೆವರಾಗಿದ್ದು, ಜನರ ಕೆಲಸ ಮಾಡಿದರೂ ಸರಿ ಅವರಿಗೊಂದು ಚಾನ್ಸ್ ಕೊಡೋದು ಬೇಡ ಎನ್ನುವ ವಿಚಾರ ಬಹಳ ಮತದಾರರ ಮನಸ್ಸಿನಲ್ಲಿ ಇದೆ. ಛೀ, ಇದೆಲ್ಲಾ ಹೊಲಸು ಎನ್ನುವ, ಜೀವನ ದಲ್ಲಿ ಒಮ್ಮೆಯೂ ಮತದಾನ ಯಂತ್ರ ನೋಡದ ಅನೇಕ ಸೊಫಿಸ್ಟಿಕೇಟೆಡ್ ನಾಗರಿಕರಲ್ಲಿಯೂ ಕೂಡ ಈ ಭಾವನೆ ಇದೆ. ಅವರು ಇದನ್ನು ಮುಕ್ತವಾಗಿ ಒಪ್ಪುವುದಿಲ್ಲ ಎನ್ನುವುದು ಅವರ ಸೊಫಿಸ್ಟಿಕೇಷನ್.
ಮತ ಹಾಕದೇ ಸೋತವರು
ಇದು ತಪ್ಪಬೇಕಾದರೆ, ಜನರ ಕೆಲಸ ಮಾಡಿದವರು, ಮಾಡುವಂಥವರು ಮುಂದೆ ಬರಲಿ, ಬೇರೆ ನೆವ ಹೇಳಿ ಮತ ಕೇಳುವವರು ಮನೆಯಲ್ಲಿ ಕೂಡಲಿ ಎನ್ನುವುದು ಆಗಬೇಕಾದರೆ, ಹೆಚ್ಚು ಜನ ಓಟು ಹಾಕಬೇಕು. ಉದಾಹರಣೆಗೆ ರಾಜ್ಯದ ಒಂದು ಮತ ಕ್ಷೇತ್ರದ ಮತದಾರರದ ಸಂಖ್ಯೆ ಸರಿ ಸುಮಾರು ೩೦,೦೦೦. ಇದರಲ್ಲಿ ಕಾಲು ಭಾಗ ಕ್ಕಿಂತ ಕಮ್ಮಿ ಮತ ಪಡೆದವರು ಗೆದ್ದಿದ್ದಾರೆ. ಯಾಕೆಂದರೆ ಅರ್ಧ ಕ್ಕಿಂತ ಹೆಚ್ಚು ಜನ ಮತಗಟ್ಟೆಗಳ ಕಡೆಗೇ ಹೋಗಿಲ್ಲ. ಗೆದ್ದ ಅನೇಕ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಿಂತ ಕೇವಲ ನೂರಿನ್ನೂರು ಮತಗಳ ಅಂತರ ದಿಂದ ಮುಂದಿದ್ದವರು. ಮತದಾನ ಹೆಚ್ಚಾಗಿದ್ದರೆ ಗೆದ್ದವರ ಗೆಲುವು ಇಷ್ಟು ಸರಳವಂತೂ ಆಗಿರುತ್ತಿದ್ದಿಲ್ಲ. ಸ್ಪರ್ಧೆ ಹೆಚ್ಚು ಆರೋಗ್ಯಕರವಾಗಿರುತ್ತಿತ್ತು. ಚುನಾವಣೆ ರಸಹೀನ ವಾಗಿರುತ್ತಿರಲಿಲ್ಲ. ಒಳ್ಳೆಯ ಅಭ್ಯರ್ಥಿಗಳು ಗೆದ್ದು ಬರುತ್ತಿದ್ದರೋ ಇಲ್ಲವೋ, ಬರುವ ಸಾಧ್ಯತೆಯಂತೂ ಹೆಚ್ಚಿರುತ್ತಿತ್ತು. ನಮ್ಮ ಜನ ಬೇಕಾದವರನ್ನು ಗೆಲ್ಲಿಸಲು ಮತ ಹಾಕುವುದು ಹಾಗಿರಲಿ, ಬೇಡವಾದವರನ್ನು ಸೋಲಿಸಲು ಮತ ಹಾಕಿದರೆ ಸಾಕಿತ್ತು. ಅದೂ ಆಗಿಲ್ಲ.
ಆ ಗತ್ತು ಆಗಿತ್ತು, ಈಗಿಲ್ಲ
ಆದರೆ ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದ ತಕ್ಷಣ ಯಡಿಯೂರಪ್ಪ ಅವರಿಗೆ ಇದ್ದ ಆತ್ಮವಿಶ್ವಾಸ, ಗತ್ತು ಈಗ ಇಲ್ಲ. ಯಾಕಿರಬಹುದು? ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಹೀಗೆ: “ನಾವು ೩೦ ರಲ್ಲಿ ೨೦ ಜಿಲ್ಲಾ ಪಂಚಾಯಿತಿ ಗೆಲ್ಲುತ್ತೇವೆ. ೧೭೬ ತಾಲೂಕು ಪಂಚಾಯಿತಿಗಳಲ್ಲಿ ೧೦೦ಕ್ಕೂ ಹೆಚ್ಚರಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಇರುತ್ತಾರೆ”. ಇದು ಆಗಲಿಲ್ಲ. ಏನು ತಪ್ಪಾಯಿತು?
ಚುನಾವಣೆಯೊಂದಿಗೆ ರಾಯರ ಪ್ರಣಯ
ಮೊದಲನೇಯ ಸಾಧ್ಯತೆ ಇದು. ಚುನಾವಣೆ ಯಲ್ಲಿ ಚರ್ಚೆಗೆ ತಕ್ಕ ವಿಷಯ ಅಂತ ಯಾವುದೂ ಇರಲಾರದ್ದರಿಂದ ಜನರಲ್ಲಿ ಈ ರಾಜಕೀಯ ಆಯ್ಕೆಯ ಆಟದಲ್ಲಿ ಆಸಕ್ತಿ ಇರಲಿಲ್ಲ. ಕೇಂದ್ರದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿ ಸರಕಾರಗಳು ಶಿವರಾಜ ಪಾಟೀಲರ ಶರ್ಟಿನಂತೆ ಬದಲಾಗುತ್ತಿದ್ದಾಗ ಒಂದು ಜೋಕ್ ಇತ್ತು. ‘ಈಗ ಚುನಾವಣೆಯಾದರೆ ಯಾರಿಗೆ ಲಾಭ? ಪ್ರಣಯ ರಾಯ್ ಗೆ ಮಾತ್ರ. ಯಾಕೆಂದರೆ ಅವರು ಗಂಟೆಗಟ್ಟಲೇ ಚುನಾವಣಾ ವಿಶ್ಲೇಷಣೆ ಮಾಡುತ್ತಾರೆ, ಜನ ಕೆಲಸ ಬಿಟ್ಟು ನೋಡುತ್ತಾರೆ, ಅದರಿಂದ ಅವರಿಗೆ ಜಾಹೀರಾತಿನಲ್ಲಿ ಹಣ ದೊರೆಯುತ್ತದೆ! ಆಗ ಅದು ಬೇರೆ ಯಾರಿಗೂ ಬೇಕಾಗಿರಲಿಲ್ಲ. ಈಗ ಕೂಡ ಚುನಾವಣೆಯಲ್ಲಿ ಆಸಕ್ತಿ ಇದ್ದದ್ದು ಪತ್ರಿಕೆ, ಟೀವಿಗಳಿಗೆ ಮಾತ್ರ.
ಕಣ್ಣೀರಿನ ಲಗೋರಿ
ಎರಡನೆಯ ಸಾಧ್ಯತೆ ಇದು. ‘ಗೌಡರು ಹಾಗೂ ಅವರ ಮಕ್ಕಳು ನಾನು ಬಾಲು ಹಾಕಿದಾಗ ಸಿಕ್ಸು ಹೊಡೆದರು, ನನ್ನ ಪಾಳಿ ಬಂದಾಗ ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿ ಕೊಂಡು ಓಡಿಹೋದರು’ ಅಂತ ಯಡಿಯೂರಪ್ಪ ನವರು ಕಣ್ಣೀರು ಸುರಿಸಿಕೊಂಡು ಜನರ ಬಳಿಗೆ ಬಂದಾಗ ಅಯ್ಯೋ ಪಾಪ ಎಂದ ಜನ ಈಗ ಹಾಗನ್ನುತ್ತಿಲ್ಲ. ಜನರಿಗೆ ತಮ್ಮ ಗೋಳನ್ನು ಕೇಳಿ ಕಣ್ಣೀರು ಒರೆಸುವವರು ಬೇಕಾಗಿದ್ದಾರೆ. ಇತರರ ಕಣ್ಣೀರು ಅವರ ಭಾವನೆಗಳನ್ನು ಹಿಂದಿನಂತೆ ಜಾಗೃತ ಗೊಳಿಸುತ್ತಿಲ್ಲ. ಇದರ ಉದಾಹರಣೆಗಳು ಶಿವವೊಗ್ಗ, ಚಿತ್ರದುರ್ಗ, ಕೋಲಾರ ಹಾಗೂ ಇನ್ನು ಕೆಲವು ಜಿಲ್ಲೆಗಳು.
ಆಗ ನಾನು ಔಟ್, ಈಗ ನೀನು ಔಟ್
ಮೂರನೇಯ ಸಾಧ್ಯತೆ ಇದು. ತಮ್ಮ ತಮ್ಮ ಜಿಲ್ಲೆಯ ಚುನಾವಣೆಗಳನ್ನು ಕೆಲವು ಎಮ್ಮೆಲ್ಲೆಗಳು ಗಂಭೀರವಾಗಿ ತೆಗೆದುಕೊಂಡಿದ್ದು. ಇದರಿಂದ ಕೆಲವು ಕಡೆ ಕೆಲವು ಜನ ಗೆದ್ದಿದ್ದಾರೆ, ಕೆಲವರನ್ನು ಸೋಲಿಸಲಾಗಿದೆ. ಯಡಿಯೂರಪ್ಪ ಅವರ ಸರಕಾರದ ಉಳಿವಿನ ಮಹಾನಾಟಕದಲ್ಲಿ ಸದನದಿಂದ ಹೊರನಿಲ್ಲಬೇಕಾದ ೧೬ ಜನ ಬಿಜೆಪಿ ವಿರುದ್ಧ ದ ಹೋರಾಟವನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದಿರಬಹುದು. ಇದು ಆಡಳಿತ ಪಕ್ಷದ ಪ್ರಭಾವವನ್ನು ಆ ಕ್ಷೇತ್ರಗಳಲ್ಲಿ ಕುಗ್ಗಿಸಿದೆ. ಇದಕ್ಕೆ ಉದಾಹರಣೆಗಳು ರಾಯಚೂರು, ಕೊಪ್ಪಳ, ಕಾರವಾರ ಮುಂತಾದವು.
ಇನ್ನು ಸ್ವಲ್ಪ ಕಡೆಗಳಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಿದಂತೆ ಕಾಣುತ್ತದೆ. ಜನರಲ್ಲಿ ಇರಬಹುದಾದ ಅಸಮಾಧಾನಕ್ಕೆ ಗಾಳಿ ಹಾಕಿ, ಆಡಳಿತ ಪಕ್ಷ ದ ಅಭ್ಯರ್ಥಿಗೆ ಪರ್ಯಾಯವಾಗಬಹುದಾದ ಅಭ್ಯರ್ಥಿಯನ್ನು ಹುಡುಕಿ, ಮತದಾರರು ಮತಗಟ್ಟೆಗೆ ಬರುವಂತೆ ಪುಸಲಾಯಿಸಲು ಓಡಾಡಿದ ವಿರೋಧ ಪಕ್ಷದ ನಾಯಕರ ಜಿಲ್ಲೆ, ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕ್ಕೆ ಜನವರಿಯ ಚಳಿಯಲ್ಲೂ ಬೆವರು ಒಡೆದಿದೆ. ಲೆಕ್ಕಾಚಾರ ತಪ್ಪಾಗಿದೆ. ಇದಕ್ಕೆ ಉದಾಹರಣೆಗಳು ಗುಲ್ಬರ್ಗಾ, ಬಳ್ಳಾರಿ, ಚಿಕ್ಕಬಳ್ಳಾಪುರ ಇರಬಹುದು. ಆದರೆ ಇಂಥವು ಕಮ್ಮಿ.
ಯಮುನೆಯೋ, ಕೃಷ್ಣೆಯೋ ಕಾವೇರಿಯೋ?
ಇಷ್ಟೆಲ್ಲಾ ಆದ ನಂತರ ಯಡಿಯೂರಪ್ಪ ಅವರು ಇಲ್ಲೇ ಇರುತ್ತಾರೋ ಅಥವಾ ದಿನಾ ಬೆಳಿಗ್ಗೆ ದೆಹಲಿ ಯ ಜಮುನಾ ನದಿ ನೀರು ಕುಡಿಯು ವ ತಮ್ಮ ಆಸೆ ಯನ್ನು ಪೂರೈಸಿಕೊಳ್ಳುತ್ತಾರೋ? ಪ್ರಶ್ನೆ ಕಠಿಣ. ಆದರೆ ಉತ್ತರ ಸರಳ. ಅವರು ಸೋತು ಹೋಗಿ, ಬೇರೆ ದಾರಿ ಇಲ್ಲದೇ ರಾಜ್ಯಸಭೆ ಸದಸ್ಯನಾಗಿ ಈ ವಯಸ್ಸಿನಲ್ಲಿ ಹಿಂದಿ ಕಲಿಯುವ ಪರಿಸ್ಥಿತಿ ಅವರಿಗೆ ಬರಲಿಲ್ಲ. ಇನ್ನು ಭಾರಿ ಜಯ ಸಾಧಿಸಿ, ವಿರೋಧಿಗಳ ಬಾಯಿಮುಚ್ಚಿಸಿ, ಪತ್ರಿಕೆಗಳಿಗೆ ಮೌನ ವೃತದ ದೀಕ್ಷೆ ಕೊಟ್ಟು, ‘ನನ್ನ ಇನ್ನಿಂಗ್ಸ್ ಆಗಿದೆ, ಇನ್ನು ಯುವಕರ ಆಟ’ ಅಂತ ಇನ್ನೊಬ್ಬ ನಾಯಕರನ್ನು ಆಡಲು ಬಿಡುವಷ್ಟು ದೊಡ್ಡ ಯಶಸ್ಸೂ ಅವರ ಕೈ ಸೇರಲಿಲ್ಲ.
ಬೆಂಗಳೂರಿನಲ್ಲಿ ತಿರುವಳ್ಳುವರ್ ಮೂರ್ತಿ ಕೂಡಿಸಿ, ಚೆನ್ನೈನಲ್ಲಿ ಸರ್ವಜ್ಙನನ್ನು ನಿಲ್ಲಲು ಬಿಟ್ಟು ಕಾವೇರಿ ಕಿರಿಕಿರಿ ತಪ್ಪಿಸಿಕೊಂಡ ಅವರು, ನಮ್ಮ ಪಾಲಿನ ಕೃಷ್ಣೆಯ ನೀರನ್ನು ಪೂರಾ ಬಳಸಿಕೊಳ್ಳಲು ಡ್ಯಾಮ್ ಕಟ್ಟಿ, ಕಾಲುವೆ ಅಗೆಯುವ ತಯ್ಯಾರಿಯಲ್ಲಿ ಸಫಾರಿ ತೆಗೆದು ಇಡುವುದು ಒಳಿತು. ಮುಂದಿನ ಮೂರು ವರ್ಷದ ಬೇಸಿಗೆಗಳಲ್ಲಿ ಅವರು ಜಮುನಾ ನದಿ ನೀರಿನ ರುಚಿ ನೋಡುವ ಸಾಧ್ಯತೆ ಕಡಿಮೆ.
ಎಲ್ಲಾ ಸರಿ, ಆದರೆ ಈ ಪಂಚಾಯಿತಿ ಎಂದರೇನು? ಈ ಪಂಚಾಯಿತಿ ಗಳಿಂದ ನನಗೇನಾದರೂ ಒಳ್ಳೆಯದಾಗುತ್ತದೆಯೇ? ಇದರಿಂದ ಯಾರಿಗಾದರೂ ಏನಾದರೂ ಒಳ್ಳೆಯದಾಗುತ್ತದೆಯೇ? ಈ ವಿಚಾರಗಳನ್ನು ಆಮೇಲೆ ನೋಡೋಣ.
ಈಗ ಇಲ್ಲಿಗೆ ಮುಗಿಯಿತು.
Print Close
ಬಡಪಾಯಿಗಳಿಗೆ ಡೆಮೋಕ್ರಸಿ: ಹೃಷಿಕೇಶ್ ಪಂಚಾಯಿತಿ ಪಾಠ
By ಹೃಷಿಕೇಶ್ ಬಹದ್ದೂರ್ ದೇಸಾಯಿ
ರಾಜ್ಯದ ೩೦ ಪಂಚಾಯಿತಿಗಳಲ್ಲಿ ಬಿಜೆಪಿ ೧೨ ಸ್ಥಾನ ಗೆದ್ದಿತು, ಕಾಂಗ್ರೆಸ್, ಜೆಡಿಎಸ್ ನಾಲ್ಕು ನಾಲ್ಕು ಗೆದ್ದವು, ಇನ್ನುಳಿದ ೧0 ಅತಂತ್ರ ಅಂತ ಕೆಲವರು ಮೊನ್ನೆ ಸುದ್ದಿ ಬರೆದಿದ್ದಾರೆ. ನಿನ್ನೆಯಿಂದ ಅನೇಕರು ಓದುತ್ತಲೇ ಇದ್ದಾರೆ. ಎಲ್ಲಾ ಕಡೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಂದು ಪಂಚಾಯಿತಿ ಸಭೆಗಳು ಆರಂಭವಾಗುವವರೆಗೆ ಇಂಥ ಸುದ್ದಿ ಓದಲೇಬೇಕಾದ ಅನಿವಾರ್ಯತೆ ಮತದಾರರೆಂಬ ನಿತ್ಯ ನಾರಕಿಗಳಿಗೆ ಇದೆ.
ಹಂಗೆಲ್ಲಾ ಅಂದರೇನು? ಇದರ ಅರ್ಥ ಏನು? ಈ ಜನವರಿ ೪ ನಾಲ್ಕರ ಚುನಾವಣೆ ಫಲಿತಾಂಶದ ಹಕೀಕತ್ತಾದರೂ ಏನು? ಇದು ಬೇಕಿತ್ತೇ?
ನಿಮ್ಮೊಡನಿದ್ದೂ ನಿಮ್ಮಂತಿರದ ಬಾಳು
“ಇದರ ಸೀದಾ ಸಾದಾ ಅರ್ಥ ಏನೆಂದರೆ, ರಾಜ್ಯದ ಜಿಲ್ಲಾ ಪಂಚಾಯಿತಿಗಳ ಪೈಕಿ ೪೦ ಶೇಕಡಾ ಸಂಸ್ಥೆಗಳಲ್ಲಿ ಬಹುಮತ ಪಡೆದ ಬಿಜೆಪಿ ಹಾಗೂ ಅದರ ಕಮಾಂಡರ್ ಆದ ಯಡಿಯೂರಪ್ಪ ಅವರು ಗೆದ್ದಂತೆ” ಅಂತ ಮುಖ್ಯಮಂತ್ರಿಗಳ ರೇಸ್ ಕೋಸ್ ನಿವಾಸದ ಸುತ್ತಮುತ್ತ ತಿರುಗಾಡುತ್ತಿರುವ ಅವರ ಹಿಂಬಾಲಕರು ಹೇಳುತ್ತಿದ್ದಾರಂತೆ. ಹೇಳಿಕೊಂಡು ಮತ್ತೆ ತಿರುಗಾಡುತ್ತಿದ್ದಾರಂತೆ.
ಅಡ್ಡ ವೈಸರ್ ಗಳು
ಇನ್ನು ಕೆಲವರು “ಇದಕ್ಕೆ ಸಾಧನೆ ಅಂತಾರೆಯೇ? ಇದು ಕಂಪ್ಲೀಟ್ ಫೇಲ್ಯುರ್. ನಾನು ಮುಖ್ಯಮಂತ್ರಿಯಾಗಿದ್ದರೆ ತೋರಿಸುತ್ತಿದ್ದೆ. ನೂರಕ್ಕೆ ನೂರು ಕಡೆ ನಮ್ಮವರು ಬಂದು ವಿರೋಧ ಪಕ್ಷ ನಿರ್ನಾಮ ಮಾಡುತ್ತಿದ್ದೆ !@#$,” ಅಂತ ಹೇಳುತ್ತಿದ್ದಾರಂತೆ. ಇಂಥ ಕುಹಕಿಗಳಲ್ಲಿ ‘ಅವರೊಡನಿದ್ದೂ ಅವರೊಡನಿರದಿರುವ ಕೆಲವರು’ ಇದ್ದಾರೆ ಅಂತ ಮುಖ್ಯಮಂತ್ರಿಗಳ ಅಡ್ಡ ಅಡ್ಡ ಅಡ್ವೈಸರ್ ಗಳು ಅವರ ಮಾರ್ನಿಂಗ್ ವಾಕ್ ನಲ್ಲಿ ಹೇಳುತ್ತಿದ್ದಾರಂತೆ.
ಹಾಗಾದರೆ ಪಂಚಾಯಿತಿ ಚುನಾವಣೆಗಳಲ್ಲಿ ಏನಾಯ್ತು?
ರಾಜ್ಯದ ಜನ ಬಿಜೆಪಿ ಸರಕಾರ ದ ಹಗರಣಗಳನ್ನು, ಮುಖ್ಯಮಂತ್ರಿಗಳೂ ಸೇರಿದಂತೆ ಮಂತ್ರಿಗಳ ವಿರುದ್ಧದ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ, ವೈಯಕ್ತಿಕ ದುರ್ನಡತೆಯ ಆರೋಪಗಳೆಲ್ಲವನ್ನೂ ಮರೆತರೆ? ಎಲ್ಲಕ್ಕಿಂತ ಮುಖ್ಯವಾಗಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡಕರಿ ಅವರೇ ‘ಅನೈತಿಕ’ ಎಂದು ಒಪ್ಪಿಕೊಂಡ ಡಿನೋಟಿಫಿಕೇಷನ್ನುಗಳನ್ನು ಕ್ಷಮಿಸಿದರೇ?
ಅಥವಾ “ಈ ಎರಡೂವರೆ ವರ್ಷದಲ್ಲಿ ನೀವು ಮಾಡಿದ್ದೆಲ್ಲವನ್ನೂ ನಾವು ಒಪ್ಪಿಕೊಂಡಿಲ್ಲ. ಇದು ಮೊದಲ ಎಚ್ಚರಿಕೆ. ನಿಮ್ಮನ್ನು ನೀವು ತಿದ್ದಿಕೊಳ್ಳಲು ನಿಮಗೆ ಒಂದು ಅವಕಾಶ ಕೊಟ್ಟಿದ್ದೇವೆ. ಇದೇ ಲಾಸ್ಟ್. ಇನ್ನು ಮುಂದೆ ನೀವು ತಿದ್ದಿಕೊಳ್ಳದಿದ್ದರೆ ಇನ್ನು ಎರಡೂವರೆ ವರ್ಷದ ನಂತರ ನಿಮಗೆ ತಿದ್ದಿಕೊಳ್ಳಲು ಅವಕಾಶ ಸಿಗುವುದಿಲ್ಲ. ಆಗ ನಾವೆಲ್ಲ ಸೇರಿ ಹೊಸ ತಪ್ಪು ಮಾಡಲು ಬೇರೆ ಪಕ್ಷಕ್ಕೆ ಅವಕಾಶ ಕೊಡುತ್ತೇವೆ” ಎಂದು ಹಳ್ಳಿ ಜನರೆಲ್ಲ ಸೇರಿ ಸರಕಾರಕ್ಕೆ ಧಮಕಿ ಕೊಟ್ಟಿದ್ದಾರೆಯೇ?
ಇವರೆಡೂ ಅಲ್ಲ.
ಸರಕಾರದ ತಪ್ಪು ಒಪ್ಪುಗಳನ್ನು ಜನ ಮರೆತಿಲ್ಲ, ಕ್ಷಮಿಸಿಲ್ಲ. ರಾಜ್ಯದ ಆಡಳಿತವೇ ಬೇರೆ, ಪಂಚಾಯಿತಿ ಚುನಾವಣೆಯೇ ಬೇರೆ. ಇದೇ ಪ್ರಜಾಪ್ರಭುತ್ವದ ಮಜಾ.
ಚಹಾ ಅಂಗಡಿಯ ಮೆನುನಲ್ಲಿ ಏನಿದೆ?
ಪಂಚಾಯಿತಿ ಚುನಾವಣೆಗಳಲ್ಲಿ ಇಂಥ ದೊಡ್ಡ ದೊಡ್ಡ ವಿಷಯಗಳೆಲ್ಲ್ಲ ಚರ್ಚೆಯ ವಿಷಯಗಳೇ ಅಲ್ಲ. ಬೇರುಮಟ್ಟದ ರಾಜಕೀಯದಲ್ಲಿ ಅಪಾರ ಅನುಭವ ಇರುವ ಯಡಿಯೂರಪ್ಪ ಅವರಿಗೆ ಇದು ಚೆನ್ನಾಗಿ ಗೊತ್ತು.
ಅದಕ್ಕೇ ಅವರು ‘ನಾನು ತಪ್ಪು ಮಾಡಿದ್ದರೆ ಪಂಚಾಯಿತಿ ಚುನಾವಣೆಗಳಲ್ಲಿ ಜನ ತೀರ್ಪು ಕೊಡುತ್ತಾರೆ’ ಅಂತ ಹೇಳಿದ್ದು. ರಾಜ್ಯ ಮಟ್ಟದ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳು ಪಂಚಾಯಿತಿ ಚುನಾವಣೆಗೆ ಮುಂಚೆ ಊರ ಮುಂದಿನ ಚಹಾ ಅಂಗಡಿಯಲ್ಲಿ ಚರ್ಚೆಗೆ ಬರುವುದೇ ಇಲ್ಲ, ಮತದಾರನ ಆಯ್ಕೆಯನ್ನು ಅವು ನಿರ್ಧರಿಸುವುದಿಲ್ಲ. ಚುನಾವಣೆ ಸಮಯದಲ್ಲಿ ಸುಮ್ಮನೇ ಹಳ್ಳಿಗಳ ಕಡೆ ಪಿಕ್ ನಿಕ್ ಗೆ ಹೋದವರಿಗೇ ಇದು ಗೊತ್ತಾಗುವಾಗ ರಾಜಕೀಯವನ್ನೇ ಉಂಡು ತಿಂದು ಉಸಿರಾಡುವ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲವೇ?
ಕಪ್ಪು ಬಿಳುಪಿನ ಪೋಸ್ಟ್ ಮಾರ್ಟಮ್
ಈ ಗಹನವಾದ ವಿಚಾರವನ್ನು ತಿಳಿಯುವ ಮುನ್ನ ಒಂದು ಕತೆ ಕೇಳೋಣ. ಮೊನ್ನೆಯ ಚುನಾವಣೆ ಪ್ರಚಾರ ನೋಡಲು ನಾವು ಹೋದಾಗ ಹಿಂದೆ ಎರಡು ಸಾರಿ ಜಿಲ್ಲಾ ಪಂಚಾಯಿತಿ ಚುನಾವಣೆ ಗೆದ್ದು, ಗ್ರಾಮೀಣ ಜನರ, ಹಿಂದುಳಿದವರ ನಾಯಕ ಅಂತ ಅನ್ನಿಸಿಕೊಂಡ ಅಮೃತ್ ಚಿಮ್ಕೋಡ್ ಅವರು ಸಿಕ್ಕರು. ಅವರು ಅವರ ಮನೆಯವರ ಪರವಾಗಿ ಪ್ರಚಾರ ನಡೆಸಿದ್ದರು. ಹಳ್ಳಿಯ ಮುದುಕಿಯೊಬ್ಬಳು ಅವರನ್ನು “ಅಯ್ಯೋ ನೀನೆಷ್ಟು ಕರ್ರಗಿದ್ದೀ, ನಿಮ್ಮ ಮೇಡಂ ಅವರು ಎಷ್ಟು ಬೆಳ್ಳಗಿದ್ದಾರೆ” ಅಂದಳು. “ಅಯ್ಯೋ ಏನು ಮಾಡೋದು ಎವ್ವಾ, ರಾಧಾ ಕ್ಯೋಂ ಗೋರಿ, ಮೈ ಕ್ಯೋಂ ಕಾಲಾ?” ಅಂತ ನಕ್ಕರು. ಆ ಮನೆಯಲ್ಲಿದ್ದ ಎಲ್ಲರನ್ನೂ ನಗಿಸಿದರು. (ರಾಧಾ ಯಾಕೆ ಬೆಳ್ಳಗಿದ್ದಾಳೆ ನಾನೇಕೆ ಕಪ್ಪು ಎನ್ನುವುದೊಂದು ಮೀರಾ ಭಜನೆ). ನಂತರ ಅಮೃತ್ ಈಚೆಗೆ ಬಂದು ನಕ್ಕರು. “ನಮ್ಮ ಸಾಹೇಬರು ನಾಮಿನೇಷನ್ ಹಾಕಿದಾಗಲೇ ಗೆದ್ದು ಬಿಟ್ಟರು” ಅಂತ ಅವರ ಹಿಂಬಾಲಕರೊಬ್ಬರು ಹೇಳಿದರು. ಸಾಹೇಬರ ಹೆಂಡತಿ ನಾಮಿನೇಷನ್ ಹಾಕಿದ್ದರೂ ಕೂಡ ಸಾಹೇಬರು ಹಾಕಿದಂತೆ ಅಂತ ಅವರು ಮಾತಾಡುತ್ತಾರೆ.
ಕುಯ್ಯುವ, ಹೊಲಿಯುವ ಕಾಂಟ್ರ್ಯಾಕ್ಟ್
ನೀವು ಈ ಜನರಿಗೆ ಏನು ಮಾಡಿದ್ದೀರಿ ಅಂತ ನಾವು ಕೇಳಿದಾಗ ಅವರು ಹೇಳಲು ಶುರು ಮಾಡಿದರು. “ಸಾರ್ ನಾನು ನನ್ನ ಕ್ಷೇತ್ರದ ಪೋಸ್ಟ ಮಾರ್ಟಮ್ ಗಳಿಗೆ ಗುತ್ತಿಗೆದಾರ. ಅದರಲ್ಲೂ ಕ್ಲಾಸ್ ಒನ್ ಕಾಂಟ್ರಾಕ್ಟರ್. ಈ ಹಳ್ಳಿಗಳಲ್ಲಿ ಯಾರಿಗಾದರೂ ಆರಾಮ ಇಲ್ಲದೇ ಜಿಲ್ಲಾಸ್ಪತ್ರೆಗೆ ಹೋಗಿ ಸತ್ತರೆ, ಅಲ್ಲಿ ಅವರಿಗೆ ಪೋಸ್ಟ ಮಾರ್ಟಮ್ ಮಾಡಬೇಕು. ಅದನ್ನು ಮಾಡಲು ಡೆಡ್ ಬಾಡಿಯನ್ನು ಹೆಣದ ಮನೆಗೆ ಒಯ್ಯಬೇಕು. ಅಲ್ಲಿಗೆ ಒಯ್ಯುವವರಿಗೆ ಲಂಚ ಕೊಡಬೇಕು. ನಂತರ ಅದನ್ನು ಕೊಯ್ಯುವವರು, ಹೊಲಿಯುವವರು ಸಿಗಬೇಕು. ಅವರಿಗೆ ಕುಡಿಸಬೇಕು. ನಂತರ ಜಿಲ್ಲಾ ಸರ್ಜನ್ನರು ಅವನ ಮರಣ ಶಾಸನಕ್ಕೆ ಸಹಿ ಹಾಕಬೇಕು. ಅಲ್ಲಿ ಅವರಿಗಾಗಿ ಕಾಲು ಬಿದ್ದು, ಲಂಚ ಕೊಟ್ಟು ಕಾಯಬೇಕು. ಇದನ್ನೆಲ್ಲ ಹಳ್ಳಿ ಯ ಜನ ಮಾಡಲಾರರು. ಇಂಥ ಕೆಲಸಕ್ಕೆ ಅವರಿಗೆ ನಾನು ಬೇಕು. ಇಂಥ ಫೋನ್ ನನಗೆ ವಾರಕ್ಕೆ ಒಂದಾದರೂ ಬರುತ್ತದೆ, ಅಂತ ಅವರು ಹೇಳಿದರು. ಅಂದರೆ ಇವರನ್ನು ಎರಡು ಸಾರಿ ಗೆಲ್ಲಿಸಿದವರು ಜೀವಂತ ಮತದಾರರಲ್ಲ. ಸತ್ತು ಹೋದವರು!
ಮತದಾರರೆಂಬ ವಿಕಲಚೇತನರು
ಪಂಚಾಯಿತಿಗಳಲ್ಲಿ ಚರ್ಚೆಗೆ ಬರುವ ವಿಷಯಗಳು ಇವು. ಡಿಸಿ ಆಫೀಸಿನವರೇ ನೀಡಿದ ರೇಷನ್ ಕಾರ್ಡನ್ನು ಡಿಸಿ ಆಫೀಸಿನವರೇ ರದ್ದು ಮಾಡಿದ್ದು. ಜಾತಿ, ಗಳಿಕೆ, ವಿಳಾಸ ಪ್ರಮಾಣ ಪತ್ರಗಳನ್ನು ಕೊಡಲು ಕಳೆದ ವರ್ಷ ೧೦೦ ರೂಪಾಯಿ ಕೇಳಿದ ತಲಾಠಿ ಈ ವರ್ಷ ೨೦೦ ರೂಪಾಯಿ ಕೇಳಿದ್ದು, ಅಂಗವಿಕಲರು, (ವಿಕಲಚೇತನರು ಎನ್ನುವುದು ತಪ್ಪು ಪದ ಬಳಕೆಯಂತೆ) ವಿಧವೆಯರು ಹಾಗೂ ನೆಲೆ ಇಲ್ಲದ ವಯಸ್ಸಾದವರಿಗೆ ಸಿಗಬೇಕಾದ ಮಾಸಾಶನಗಳು ಜಿಲ್ಲಾ ಖಜಾನೆಯಿಂದ ಬಿಡುಗಡೆಯಾದರೂ ಹಳ್ಳಿಯವರೆಗೂ ಬರಲಾರದ್ದು,
ಹಾವು ಕಡಿದು ಸತ್ತ ರೈತ ನ ಕುಟುಂಬಕ್ಕೆ ಐದು ವರ್ಷದ ಹಿಂದೆ ಬರಬೇಕಾದ ಹತ್ತು ಸಾವಿರ ರೂಪಾಯಿ ಬಂತೋ ಇಲ್ಲವೋ ಗೊತ್ತಾಗಲಾರದ್ದು, ಮಾರಾಟ ಮಾಡಿದ ಹೊಲದ ಮಾಲೀಕರ ಹೆಸರನ್ನು ಪಹಣಿ ಪತ್ರದಲ್ಲಿ ಬದಲಾಯಿಸಲು ತಹಶೀಲ್ದಾರ್ ಕಚೇರಿಗೆ ಕಳೆದ ಮೂರು ವರ್ಷದಲ್ಲಿ ೮೬ ಸಾರಿ ಹೋಗಿಬಂದರೂ ಆಗದೇ ಇರೋದು. ವರ್ಷಾನುಗಟ್ಟಲೇ ಡಾಕ್ಟರು ಇಲ್ಲದೇ ಇರುವ ಸರಕಾರಿ ಆಸ್ಪತ್ರೆಯಲ್ಲಿ ನರ್ಸು ಕೂಡ ಇಲ್ಲದೇ ಇರುವುದು, ಇಂಥವೆಲ್ಲ.
ಒಬ್ಬ ಯಶಸ್ವೀ ಜಿಲ್ಲಾ ಪಂಚಾಯಿತಿ ಸದಸ್ಯ ಇದನ್ನೆಲ್ಲಾ ಮಾಡಿಸುತ್ತಾನೆ. ಮತದಾರನ ಕೈಹಿಡಿದುಕೊಂಡು ಟೇಬಲ್ ಟೇಬಲ್ ಓಡಾಡುತ್ತಾನೆ. ಮತದಾರರ ಖರ್ಚು ಕಮ್ಮಿ ಮಾಡಿಸುತ್ತಾನೆ. ಸರಕಾರಿ ಕಚೇರಿಗಳಲ್ಲಿ ಅವರ ಮೇಲೆ ಬೀಳುವ ಅಧಿಕಾರಿಗಳು ಹಾಗೂ ದಲಾಲರ ಕ್ರೂರ ದೃಷ್ಟಿಯನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ತಪ್ಪಿಸುತ್ತಾನೆ.
ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುವ ಸಂಸ್ಕೃತಿ ಇನ್ನೂ ನಮ್ಮಲ್ಲಿ ಬಂದಿಲ್ಲ. ಜನರ ಕುಂದುಕೊರತೆಗಳು ತಂತಾನೆ ಪರಿಹಾರ ಆಗುವ ಮಟ್ಟಿಗೆ ನಮ್ಮ ವ್ಯವಸ್ಥೆ ನಮ್ಮಲ್ಲಿ ಬೆಳೆದಿಲ್ಲವಾದ್ದರಿಂದ ಇಂಥ ವಿಷಯಗಳು ನಮ್ಮ ದೇಶದಲ್ಲಿ ಇನ್ನೂ ಚುನಾವಣೆಗಳನ್ನು ನಿರ್ಧರಿಸುತ್ತವೆ.
ಯಾರಿಗೂ ಬೇಡವಾದ ಸರಕಾರದ ಷೇರು
ಹಾಗಂತ ನಗರಗಳಲ್ಲಿ ಸರಕಾರಿ ವ್ಯವಸ್ಥೆ ಸುಧಾರಿಸಿದೆ ಅಂತಲ್ಲ. ಅಲ್ಲಿ ನಮ್ಮ ದಿನ ನಿತ್ಯಕ್ಕೆ ಬೇಕಾದ ವಸ್ತು, ಹಾಗೂ ಸೇವೆಗಳನ್ನು ನೀಡಲು ಖಾಸಗಿ ಸಂಸ್ಥೆಗಳು ಇರುತ್ತವೆ.
ಉದಾಹರಣೆಗೆ ದೆಹಲಿ ಯ ಪ್ರತಿಷ್ಠಿತ ಬಡಾವಣೆಗಳಲ್ಲಿ ಈಗ ನೀವು ಹಣ ಕೊಟ್ಟರೆ ಖಾಸಗಿ ಕಂಪನಿಗಳಿಂದ ನೀರು, ವಿದ್ಯುತ್, ಅಡುಗೆ ಅನಿಲ, ಫೋನು, ಮುಂತಾದವುಗಳನ್ನು ಪಡೆಯಬಹುದು. ಇನ್ನು ನಗರಗಳಲ್ಲಿರುವವರು ಬಾಡಿಗೆ ಮನೆ, ಕೆಲಸ, ಮಕ್ಕಳಿಗೆ ಸ್ಕೂಲು ಇವೆಲ್ಲಕ್ಕಾಗಿ ಸರಕಾರವನ್ನು ಅವಲಂಬಿಸುವುದನ್ನು ಬಿಟ್ಟು ಎಷ್ಟು ವರ್ಷಗಳಾದವು ಎನ್ನುವುದು ಮರೆತು ಹೋಗುವಷ್ಟು ವರ್ಷಗಳಾದವು. ನಮಗೆ ಸೇವೆ ನೀಡುವ ಕಂಪನಿ ಹೇಗೆ ನಡೆಯುತ್ತದೆ ಎಂಬುದು ನನಗೆ ತಿಳಿಯಬೇಕು ಎಂದು ಅದರ ಷೇರು ಖರೀದಿಸುವ ನಮ್ಮ ಜನ ನಮ್ಮನ್ನಾಳುವ ವರನ್ನು ಆರಿಸಲು ಮತಹಾಕುವುದಿಲ್ಲ.
ಇಂಡಿಯಾ ಸೋಲುತ್ತಿದ್ದರೂ ಸಚಿನ್ ಸೆಂಚುರಿ ಹೊಡೆಯುವುದು ಯಾಕೆ?
ಎಲ್ಲಕ್ಕಿಂತ ಮುಖ್ಯವಾಗಿ ನಗರಗಳಲ್ಲಿ ಹಳ್ಳಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಳ್ಳವರು ಇದ್ದಾರೆ. ಉಳ್ಳವರಿಗೆ ಚುನಾವಣೆ ದಿನ ಇಂಡಿಯಾ ಆಸ್ಟ್ರೇಲಿಯಾ ಮ್ಯಾಚ್ ನೋಡಬೇಕಾಗಿರುತ್ತದೆ. ಏನೂ ಇಲ್ಲದವರಿಗೆ ಅಭ್ಯರ್ಥಿ ನೀಡುವ ಹಣ ಹಾಗೂ ಇದ್ದಿದ್ದರಲ್ಲೇ ಹೈಕ್ವಾಲಿಟಿ ಇರುವ ಹೆಂಡ ಸಿಗುತ್ತದೆ. ಆದರೆ ಸಚಿನ್ ಸೆಂಚುರಿ ಹೊಡೆದು ಇಂಡಿಯಾ ಸೋತಮೇಲೆ, ಚಿಯರ್ ಗರ್ಲುಗಳ ಮೇಕಪ್ ಎಲ್ಲ ಬೆವರಿನಲ್ಲಿ ಹರಿದು ಹೋದಮೇಲೆ ನಮ್ಮವರು ‘ದಿನದಿಂದ ದಿನಕ್ಕೆ ಹದಗೆಡುತ್ತಿರುವ ಈ ಹೊಲಸು ರಾಜಕೀಯ’ದ ಬಗ್ಗೆ ಮಾತಾಡುತ್ತಾರೆ. “ ಚುನಾವಣೆಗಳಲ್ಲಿ ಜಾತಿ, ಹಣ, ಹೆಂಡ ಎಲ್ಲಾ ಬ್ಯಾನ್ ಮಾಡಬೇಕು. ಆ ಟೀ ಎನ್ ಶೇಷನ್ ರಾಷ್ಟ್ರಪತಿ ಆಗಿದ್ದರೆ ಇದನ್ನೆಲ್ಲ ಮಾಡುತ್ತಿದ್ದ. ಅವನನ್ನು ಎಲ್ಲರೂ ಸೇರಿ ಸೋಲಿಸಿಬಿಟ್ಟರು ~!@#*” ಅಂತ ಮನೆಯಲ್ಲಿ ನ ಸಣ್ಣ ಮಕ್ಕಳಿಗೂ ಕೂಡ ಕೇಳುವಂತೆ ಹೇಳಿ ಹೆಂಡತಿ ಯೊಂದಿಗೆ ಸಾಸ್ ಬಹೂ ನೋಡಲು ಕೂಡುತ್ತಾರೆ. ‘ಪ್ರಜಾಪ್ರಭುತ್ವ ವನ್ನು ಜೀವಂತವಾಗಿಡಲು ನಮಗಿರುವ ಕನಿಷ್ಟ ಜವಾಬ್ದಾರಿ ಮತಹಾಕುವುದು’ ಎನ್ನುವ ಟಾಟಾ ಟೀ ಜಾಹೀರಾತಿಗೆ ಟೀವಿ ಮ್ಯೂಟ್ ಮಾಡುತ್ತಾರೆ. ಒಂದು ಕ್ಷಣದ ಪಾಪಪ್ರಜ್ಞೆಯಿಂದ ಮುಕ್ತರಾಗುತ್ತಾರೆ. ರಾಜಕೀಯ ಕೆಟ್ಟು ಹೋಗಿರುವುದರಿಂದ ತಾವು ಓಟು ಹಾಕುವುದು ನಿಲ್ಲಿಸಿಲ್ಲ. ತಾವು ಓಟು ಹಾಕುವುದು ನಿಲ್ಲಿಸಿದ್ದರಿಂದ ಅದು ಕೆಟ್ಟು ಹೋಗಿದೆ ಅನ್ನುವುದು ಅವರಿಗೆ ಹೊಳೆಯುವುದಿಲ್ಲ. ಯಾಕೆಂದರೆ ಟೀ ಎನ್ ಸೀತಾರಾಮ ಅವರು ಅದನ್ನು ಇನ್ನೂ ತೋರಿಸಿಲ್ಲ! ಟೀಮಿನಲ್ಲಿನ ಇತರರು ಆಡದೇ ಇಂಡಿಯಾ ಸೋಲುತ್ತಲೇ ಹೋದರೂ ಸಚಿನ್ ಸೆಂಚುರಿ ಹೊಡೆಯುವದನ್ನು ನಿಲ್ಲಿಸುವುದಿಲ್ಲವಲ್ಲ, ಯಾಕೆ ಅಂತ ಅವರು ಒಮ್ಮೆಯೂ ತಲೆ ಕೆಡಿಸಿಕೊಂಡಿಲ್ಲ.
ಸೊಫಿಸ್ಟಿಕೇಟೆಡ್ ಮತದಾರರ ಹುಂಬ ಆಲೋಚನೆಗಳು
ಇನ್ನು ಚುನಾವಣೆಗಳಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನಿಜ. ಈ ದೇಶದಲ್ಲಿ ಎಲ್ಲಿಯವರೆಗೂ ಜಾತಿ ಆಧಾರಿತ ಭೇದಭಾವ ಇರುತ್ತದೋ, ಎಲ್ಲಿಯವರೆಗೆ ಕೆಲ ಜಾತಿಗಳಿಗೆ ಎಲ್ಲ ರಾಜಕೀಯ ಅಧಿಕಾರ ಸಿಕ್ಕು ಕೆಲ ಜಾತಿಗಳಿಗೆ ಏನೂ ಸಿಗುವುದೇ ಇಲ್ಲವೋ ಅಲ್ಲಿಯವರೆಗೆ ಚುನಾವಣೆ ಗಳಲ್ಲಿ ಜಾತಿ ಇರುತ್ತದೆ. ಅದಕ್ಕೇ ಮೇಲು ಜಾತಿಯ ಅಭ್ಯರ್ಥಿಗಳು ಕೆಳಜಾತಿಗಳ ಮತದಾರರನ್ನೂ, ಕೆಲ ಜಾತಿಯ ಅಭ್ಯರ್ಥಿಗಳು ಮೇಲು ಜಾತಿಗ ಳ ಮತದಾರರನ್ನೂ ಓಲೈಸುತ್ತಾ ನಡೆಯುತ್ತಾರೆ. ಹೊರಗಿನವರಿಗೆ ಇದು ವಿಚಿತ್ರವಾಗಿ, ಅಸಹ್ಯವಾಗಿ ಕಂಡರೂ ಈ ವ್ಯವಸ್ಥೆಯ ಒಳಗೇ ಜೀವನ ತೇಯಬೇಕಾದವರಿಗೆ ಇದು ಅನಿವಾರ್ಯ. ನಮ್ಮ ಜಾತಿಯವರು ಏನು ತಪ್ಪು ಮಾಡಿದರೂ ಪರವಾಗಿಲ್ಲ, ಅಧಿಕಾರಕ್ಕೆ ಬರಲಿ, ಅವರೇ ಮುಂದುವರೆಯಲಿ. ಇತರ ಜಾತಿಯವರು ಎಷ್ಟು ಒಳ್ಳಯೆವರಾಗಿದ್ದು, ಜನರ ಕೆಲಸ ಮಾಡಿದರೂ ಸರಿ ಅವರಿಗೊಂದು ಚಾನ್ಸ್ ಕೊಡೋದು ಬೇಡ ಎನ್ನುವ ವಿಚಾರ ಬಹಳ ಮತದಾರರ ಮನಸ್ಸಿನಲ್ಲಿ ಇದೆ. ಛೀ, ಇದೆಲ್ಲಾ ಹೊಲಸು ಎನ್ನುವ, ಜೀವನ ದಲ್ಲಿ ಒಮ್ಮೆಯೂ ಮತದಾನ ಯಂತ್ರ ನೋಡದ ಅನೇಕ ಸೊಫಿಸ್ಟಿಕೇಟೆಡ್ ನಾಗರಿಕರಲ್ಲಿಯೂ ಕೂಡ ಈ ಭಾವನೆ ಇದೆ. ಅವರು ಇದನ್ನು ಮುಕ್ತವಾಗಿ ಒಪ್ಪುವುದಿಲ್ಲ ಎನ್ನುವುದು ಅವರ ಸೊಫಿಸ್ಟಿಕೇಷನ್.
ಮತ ಹಾಕದೇ ಸೋತವರು
ಇದು ತಪ್ಪಬೇಕಾದರೆ, ಜನರ ಕೆಲಸ ಮಾಡಿದವರು, ಮಾಡುವಂಥವರು ಮುಂದೆ ಬರಲಿ, ಬೇರೆ ನೆವ ಹೇಳಿ ಮತ ಕೇಳುವವರು ಮನೆಯಲ್ಲಿ ಕೂಡಲಿ ಎನ್ನುವುದು ಆಗಬೇಕಾದರೆ, ಹೆಚ್ಚು ಜನ ಓಟು ಹಾಕಬೇಕು. ಉದಾಹರಣೆಗೆ ರಾಜ್ಯದ ಒಂದು ಮತ ಕ್ಷೇತ್ರದ ಮತದಾರರದ ಸಂಖ್ಯೆ ಸರಿ ಸುಮಾರು ೩೦,೦೦೦. ಇದರಲ್ಲಿ ಕಾಲು ಭಾಗ ಕ್ಕಿಂತ ಕಮ್ಮಿ ಮತ ಪಡೆದವರು ಗೆದ್ದಿದ್ದಾರೆ. ಯಾಕೆಂದರೆ ಅರ್ಧ ಕ್ಕಿಂತ ಹೆಚ್ಚು ಜನ ಮತಗಟ್ಟೆಗಳ ಕಡೆಗೇ ಹೋಗಿಲ್ಲ. ಗೆದ್ದ ಅನೇಕ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿಗಿಂತ ಕೇವಲ ನೂರಿನ್ನೂರು ಮತಗಳ ಅಂತರ ದಿಂದ ಮುಂದಿದ್ದವರು. ಮತದಾನ ಹೆಚ್ಚಾಗಿದ್ದರೆ ಗೆದ್ದವರ ಗೆಲುವು ಇಷ್ಟು ಸರಳವಂತೂ ಆಗಿರುತ್ತಿದ್ದಿಲ್ಲ. ಸ್ಪರ್ಧೆ ಹೆಚ್ಚು ಆರೋಗ್ಯಕರವಾಗಿರುತ್ತಿತ್ತು. ಚುನಾವಣೆ ರಸಹೀನ ವಾಗಿರುತ್ತಿರಲಿಲ್ಲ. ಒಳ್ಳೆಯ ಅಭ್ಯರ್ಥಿಗಳು ಗೆದ್ದು ಬರುತ್ತಿದ್ದರೋ ಇಲ್ಲವೋ, ಬರುವ ಸಾಧ್ಯತೆಯಂತೂ ಹೆಚ್ಚಿರುತ್ತಿತ್ತು. ನಮ್ಮ ಜನ ಬೇಕಾದವರನ್ನು ಗೆಲ್ಲಿಸಲು ಮತ ಹಾಕುವುದು ಹಾಗಿರಲಿ, ಬೇಡವಾದವರನ್ನು ಸೋಲಿಸಲು ಮತ ಹಾಕಿದರೆ ಸಾಕಿತ್ತು. ಅದೂ ಆಗಿಲ್ಲ.
ಆ ಗತ್ತು ಆಗಿತ್ತು, ಈಗಿಲ್ಲ
ಆದರೆ ಪಂಚಾಯಿತಿ ಚುನಾವಣೆ ಘೋಷಣೆ ಮಾಡಿದ ತಕ್ಷಣ ಯಡಿಯೂರಪ್ಪ ಅವರಿಗೆ ಇದ್ದ ಆತ್ಮವಿಶ್ವಾಸ, ಗತ್ತು ಈಗ ಇಲ್ಲ. ಯಾಕಿರಬಹುದು? ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಹೀಗೆ: “ನಾವು ೩೦ ರಲ್ಲಿ ೨೦ ಜಿಲ್ಲಾ ಪಂಚಾಯಿತಿ ಗೆಲ್ಲುತ್ತೇವೆ. ೧೭೬ ತಾಲೂಕು ಪಂಚಾಯಿತಿಗಳಲ್ಲಿ ೧೦೦ಕ್ಕೂ ಹೆಚ್ಚರಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಇರುತ್ತಾರೆ”. ಇದು ಆಗಲಿಲ್ಲ. ಏನು ತಪ್ಪಾಯಿತು?
ಚುನಾವಣೆಯೊಂದಿಗೆ ರಾಯರ ಪ್ರಣಯ
ಮೊದಲನೇಯ ಸಾಧ್ಯತೆ ಇದು. ಚುನಾವಣೆ ಯಲ್ಲಿ ಚರ್ಚೆಗೆ ತಕ್ಕ ವಿಷಯ ಅಂತ ಯಾವುದೂ ಇರಲಾರದ್ದರಿಂದ ಜನರಲ್ಲಿ ಈ ರಾಜಕೀಯ ಆಯ್ಕೆಯ ಆಟದಲ್ಲಿ ಆಸಕ್ತಿ ಇರಲಿಲ್ಲ. ಕೇಂದ್ರದಲ್ಲಿ ರಾಜಕೀಯ ಅಸ್ಥಿರತೆ ಹೆಚ್ಚಿ ಸರಕಾರಗಳು ಶಿವರಾಜ ಪಾಟೀಲರ ಶರ್ಟಿನಂತೆ ಬದಲಾಗುತ್ತಿದ್ದಾಗ ಒಂದು ಜೋಕ್ ಇತ್ತು. ‘ಈಗ ಚುನಾವಣೆಯಾದರೆ ಯಾರಿಗೆ ಲಾಭ? ಪ್ರಣಯ ರಾಯ್ ಗೆ ಮಾತ್ರ. ಯಾಕೆಂದರೆ ಅವರು ಗಂಟೆಗಟ್ಟಲೇ ಚುನಾವಣಾ ವಿಶ್ಲೇಷಣೆ ಮಾಡುತ್ತಾರೆ, ಜನ ಕೆಲಸ ಬಿಟ್ಟು ನೋಡುತ್ತಾರೆ, ಅದರಿಂದ ಅವರಿಗೆ ಜಾಹೀರಾತಿನಲ್ಲಿ ಹಣ ದೊರೆಯುತ್ತದೆ! ಆಗ ಅದು ಬೇರೆ ಯಾರಿಗೂ ಬೇಕಾಗಿರಲಿಲ್ಲ. ಈಗ ಕೂಡ ಚುನಾವಣೆಯಲ್ಲಿ ಆಸಕ್ತಿ ಇದ್ದದ್ದು ಪತ್ರಿಕೆ, ಟೀವಿಗಳಿಗೆ ಮಾತ್ರ.
ಕಣ್ಣೀರಿನ ಲಗೋರಿ
ಎರಡನೆಯ ಸಾಧ್ಯತೆ ಇದು. ‘ಗೌಡರು ಹಾಗೂ ಅವರ ಮಕ್ಕಳು ನಾನು ಬಾಲು ಹಾಕಿದಾಗ ಸಿಕ್ಸು ಹೊಡೆದರು, ನನ್ನ ಪಾಳಿ ಬಂದಾಗ ಆಟ ಗೂಟ ಜೈ ಅಂತ ಸ್ಟಂಪು ಕಿತ್ತಿ ಕೊಂಡು ಓಡಿಹೋದರು’ ಅಂತ ಯಡಿಯೂರಪ್ಪ ನವರು ಕಣ್ಣೀರು ಸುರಿಸಿಕೊಂಡು ಜನರ ಬಳಿಗೆ ಬಂದಾಗ ಅಯ್ಯೋ ಪಾಪ ಎಂದ ಜನ ಈಗ ಹಾಗನ್ನುತ್ತಿಲ್ಲ. ಜನರಿಗೆ ತಮ್ಮ ಗೋಳನ್ನು ಕೇಳಿ ಕಣ್ಣೀರು ಒರೆಸುವವರು ಬೇಕಾಗಿದ್ದಾರೆ. ಇತರರ ಕಣ್ಣೀರು ಅವರ ಭಾವನೆಗಳನ್ನು ಹಿಂದಿನಂತೆ ಜಾಗೃತ ಗೊಳಿಸುತ್ತಿಲ್ಲ. ಇದರ ಉದಾಹರಣೆಗಳು ಶಿವವೊಗ್ಗ, ಚಿತ್ರದುರ್ಗ, ಕೋಲಾರ ಹಾಗೂ ಇನ್ನು ಕೆಲವು ಜಿಲ್ಲೆಗಳು.
ಆಗ ನಾನು ಔಟ್, ಈಗ ನೀನು ಔಟ್
ಮೂರನೇಯ ಸಾಧ್ಯತೆ ಇದು. ತಮ್ಮ ತಮ್ಮ ಜಿಲ್ಲೆಯ ಚುನಾವಣೆಗಳನ್ನು ಕೆಲವು ಎಮ್ಮೆಲ್ಲೆಗಳು ಗಂಭೀರವಾಗಿ ತೆಗೆದುಕೊಂಡಿದ್ದು. ಇದರಿಂದ ಕೆಲವು ಕಡೆ ಕೆಲವು ಜನ ಗೆದ್ದಿದ್ದಾರೆ, ಕೆಲವರನ್ನು ಸೋಲಿಸಲಾಗಿದೆ. ಯಡಿಯೂರಪ್ಪ ಅವರ ಸರಕಾರದ ಉಳಿವಿನ ಮಹಾನಾಟಕದಲ್ಲಿ ಸದನದಿಂದ ಹೊರನಿಲ್ಲಬೇಕಾದ ೧೬ ಜನ ಬಿಜೆಪಿ ವಿರುದ್ಧ ದ ಹೋರಾಟವನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದ್ದಿರಬಹುದು. ಇದು ಆಡಳಿತ ಪಕ್ಷದ ಪ್ರಭಾವವನ್ನು ಆ ಕ್ಷೇತ್ರಗಳಲ್ಲಿ ಕುಗ್ಗಿಸಿದೆ. ಇದಕ್ಕೆ ಉದಾಹರಣೆಗಳು ರಾಯಚೂರು, ಕೊಪ್ಪಳ, ಕಾರವಾರ ಮುಂತಾದವು.
ಇನ್ನು ಸ್ವಲ್ಪ ಕಡೆಗಳಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಿದಂತೆ ಕಾಣುತ್ತದೆ. ಜನರಲ್ಲಿ ಇರಬಹುದಾದ ಅಸಮಾಧಾನಕ್ಕೆ ಗಾಳಿ ಹಾಕಿ, ಆಡಳಿತ ಪಕ್ಷ ದ ಅಭ್ಯರ್ಥಿಗೆ ಪರ್ಯಾಯವಾಗಬಹುದಾದ ಅಭ್ಯರ್ಥಿಯನ್ನು ಹುಡುಕಿ, ಮತದಾರರು ಮತಗಟ್ಟೆಗೆ ಬರುವಂತೆ ಪುಸಲಾಯಿಸಲು ಓಡಾಡಿದ ವಿರೋಧ ಪಕ್ಷದ ನಾಯಕರ ಜಿಲ್ಲೆ, ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕ್ಕೆ ಜನವರಿಯ ಚಳಿಯಲ್ಲೂ ಬೆವರು ಒಡೆದಿದೆ. ಲೆಕ್ಕಾಚಾರ ತಪ್ಪಾಗಿದೆ. ಇದಕ್ಕೆ ಉದಾಹರಣೆಗಳು ಗುಲ್ಬರ್ಗಾ, ಬಳ್ಳಾರಿ, ಚಿಕ್ಕಬಳ್ಳಾಪುರ ಇರಬಹುದು. ಆದರೆ ಇಂಥವು ಕಮ್ಮಿ.
ಯಮುನೆಯೋ, ಕೃಷ್ಣೆಯೋ ಕಾವೇರಿಯೋ?
ಇಷ್ಟೆಲ್ಲಾ ಆದ ನಂತರ ಯಡಿಯೂರಪ್ಪ ಅವರು ಇಲ್ಲೇ ಇರುತ್ತಾರೋ ಅಥವಾ ದಿನಾ ಬೆಳಿಗ್ಗೆ ದೆಹಲಿ ಯ ಜಮುನಾ ನದಿ ನೀರು ಕುಡಿಯು ವ ತಮ್ಮ ಆಸೆ ಯನ್ನು ಪೂರೈಸಿಕೊಳ್ಳುತ್ತಾರೋ? ಪ್ರಶ್ನೆ ಕಠಿಣ. ಆದರೆ ಉತ್ತರ ಸರಳ. ಅವರು ಸೋತು ಹೋಗಿ, ಬೇರೆ ದಾರಿ ಇಲ್ಲದೇ ರಾಜ್ಯಸಭೆ ಸದಸ್ಯನಾಗಿ ಈ ವಯಸ್ಸಿನಲ್ಲಿ ಹಿಂದಿ ಕಲಿಯುವ ಪರಿಸ್ಥಿತಿ ಅವರಿಗೆ ಬರಲಿಲ್ಲ. ಇನ್ನು ಭಾರಿ ಜಯ ಸಾಧಿಸಿ, ವಿರೋಧಿಗಳ ಬಾಯಿಮುಚ್ಚಿಸಿ, ಪತ್ರಿಕೆಗಳಿಗೆ ಮೌನ ವೃತದ ದೀಕ್ಷೆ ಕೊಟ್ಟು, ‘ನನ್ನ ಇನ್ನಿಂಗ್ಸ್ ಆಗಿದೆ, ಇನ್ನು ಯುವಕರ ಆಟ’ ಅಂತ ಇನ್ನೊಬ್ಬ ನಾಯಕರನ್ನು ಆಡಲು ಬಿಡುವಷ್ಟು ದೊಡ್ಡ ಯಶಸ್ಸೂ ಅವರ ಕೈ ಸೇರಲಿಲ್ಲ.
ಬೆಂಗಳೂರಿನಲ್ಲಿ ತಿರುವಳ್ಳುವರ್ ಮೂರ್ತಿ ಕೂಡಿಸಿ, ಚೆನ್ನೈನಲ್ಲಿ ಸರ್ವಜ್ಙನನ್ನು ನಿಲ್ಲಲು ಬಿಟ್ಟು ಕಾವೇರಿ ಕಿರಿಕಿರಿ ತಪ್ಪಿಸಿಕೊಂಡ ಅವರು, ನಮ್ಮ ಪಾಲಿನ ಕೃಷ್ಣೆಯ ನೀರನ್ನು ಪೂರಾ ಬಳಸಿಕೊಳ್ಳಲು ಡ್ಯಾಮ್ ಕಟ್ಟಿ, ಕಾಲುವೆ ಅಗೆಯುವ ತಯ್ಯಾರಿಯಲ್ಲಿ ಸಫಾರಿ ತೆಗೆದು ಇಡುವುದು ಒಳಿತು. ಮುಂದಿನ ಮೂರು ವರ್ಷದ ಬೇಸಿಗೆಗಳಲ್ಲಿ ಅವರು ಜಮುನಾ ನದಿ ನೀರಿನ ರುಚಿ ನೋಡುವ ಸಾಧ್ಯತೆ ಕಡಿಮೆ.
ಎಲ್ಲಾ ಸರಿ, ಆದರೆ ಈ ಪಂಚಾಯಿತಿ ಎಂದರೇನು? ಈ ಪಂಚಾಯಿತಿ ಗಳಿಂದ ನನಗೇನಾದರೂ ಒಳ್ಳೆಯದಾಗುತ್ತದೆಯೇ? ಇದರಿಂದ ಯಾರಿಗಾದರೂ ಏನಾದರೂ ಒಳ್ಳೆಯದಾಗುತ್ತದೆಯೇ? ಈ ವಿಚಾರಗಳನ್ನು ಆಮೇಲೆ ನೋಡೋಣ.
ಈಗ ಇಲ್ಲಿಗೆ ಮುಗಿಯಿತು.
Print Close
Labels:
Democracy for Dummies,
Kendasampige,
Panchayats
How to outsource the Kannada Sahitya Sammelana
ಕನ್ನಡ ಸಮ್ಮೇಳನ ಹೊರಗುತ್ತಿಗೆ:ಒಂದು ನಿದ್ದೆಗಣ್ಣು ವರದಿ
ಗಣ್ಣು ವರದಿ
ಹೃಷಿಕೇಶ್ ಬಹದ್ದೂರ್ ದೇಸಾಯಿ
ಶುಕ್ರವಾರ, 4 ಫೆಬ್ರವರಿ 2011 (05:34 IST)
ಚಿತ್ರ: ಪ್ರಕಾಶ್ ಬಾಬು
ರೀ ಸಿಎಂ ಸಾಹೇಬರ ಪಿಎ ಮೀಟಿಂಗ್ ಇದೆ ಅಂತ ಹೇಳಿದ್ದಾರೆ ಏಳ್ರೀ. ಹೋಗ್ರೀ, ಅಂತ ಸಂಪಾದಕರು ರಾತ್ರಿ ಎರಡು ಗಂಟೆಗೆ ಫೋನ್ ಮಾಡಿದರು. ಇಷ್ಟೊತ್ತಿಗೆ ಎಂಥಾ ಮೀಟೀಂಗು ಸಾರ್ ಎಂದೆ. ನನಗೊತ್ತಿದ್ದರೆ ನಾನ್ಯಾಕ್ರೀ ನಿಮಗೆ ಹೇಳ್ತಿದ್ದೆ? ಸುಮ್ಮನೇ ಹೋಗ್ರೀ ಅಂತ ಚೀರಿದರು. ಇವರ್ಯಾಕೆ ಚೀರ್ತಾರೆ ಅನ್ನಿಸಿತಾದರೂ, ಸಂಪಾದಕರಾದ ಮೇಲೆ ಇಷ್ಟಾದರೂ ಚೀರದಿದ್ದರೆ ಹೇಗೆ ಅಂತ ಅರ್ಥವಾಯಿತು.
ಅವರು ಕೂಗಿದ ನಂತರ ನಾನು ಎದ್ದು ನನ್ನ ಹೆಂಡತಿಯನ್ನು ಎಬ್ಬಿಸದೇ ಮುಖ ತೊಳೆದು, ಗಾಡಿ ತೆಗೆದು ಗೇಟಿಗೆ ಕೀಲಿ ಹಾಕುತ್ತಿದ್ದೆ. ಆಗ ನನ್ನ ಹೆಂಡತಿ ಕೂಗಿದಳು. “ಜಾಕೆಟ್ ತೊಗೊಂಡು ಹೋಗ್ರೀ. ಸೀಎಮ್ಮ ಮನಿ ಹತ್ತಿರ ಭಾಳ ಥಂಡಿ ಐತೆಂತ. ಮತ್ತೆ ಒಳಗೆ ಹೋಗಿ ಜಾಕೆಟ್ ಹೊದ್ದು ಹೊರಟೆ. ನಾನು ಮಾಡುವುದು ಎಲ್ಲ ಇವಳಿಗೆ ಹೇಗೆ ಗೊತ್ತಾಗುತ್ತದೆ? ಬಹುಶಃ ನನಗೆ ರೇಡಿಯೋ ಕಾಲರ್ ಹಾಕಿರಬೇಕು, ಅಂದುಕೊಂಡೆ. ಅಲ್ಲಿ ಹೋದರೆ ಸೀಎಮ್ಮ ಅವರ ಮನೆಯಲ್ಲಿ ಸೀಎಮ್ಮೇ ಇಲ್ಲ. ಸೀಎಮ್ ಮನೆಯಲ್ಲಿ ಆಗಲೇ ಪೋಲಿಸ್ ಕಮಿಷನರ್ ಅವರು, ಚೀಫ್ ಸೆಕ್ರೆಟರಿ, ಕಂಟೋನಮೆಂಟಿನ ನೀಲಿ ಕಾರಿನಿಂದ ಇಳಿದ ನೀಲಿ ಸಮವಸ್ತ್ರ ಧರಿಸಿ ನೀಲಿ ಪೇಟಾ ಸುತ್ತಿದ್ದ ಸರದಾರಜಿ ಆರ್ಮಿಯವರು, ಆ ಸಾಹೇಬರು, ಈ ಸಾಹೇಬರು, ಎಲ್ಲರೂ ನೆರೆದಿದ್ದರು.
ಅಷ್ಟೊತ್ತಿಗೆ ಸೀಎಮ್ಮ ಅವರ ಪೀಎ ಬಂದರು. ಅವರನ್ನು ಕಂಡ ಸೀನಿಯರ್ ಜರ್ನಲಿಸ್ಟೊಬ್ಬರು, `ಅಲ್ಲಯ್ಯಾ ಏನು ಎಲ್ಲ ದೊಡ್ಡವರೆಲ್ಲಾ ಬಂದು ಬಿಟ್ಟಿದ್ದಾರೆ, ಏನು ಸಮಾಚಾರ? ಏನಾದರೂ ಎಮರ್ ಜೆನ್ಸಿನಾ? ಬೆಂಗಳೂರಿಗೆ ಟೆರರಿಸ್ಟುಗಳು ಬಂದು ಬಿಟ್ಟಿದ್ದಾರಾ? ಎನ್ ಕತೆ?' ಅಂತ ಅಂದರು.
ಅಯ್ಯೋ ಅಂಥದ್ದೇನಿಲ್ಲ ಬನ್ನಿ ಸಾ, ಸಾಹಿತ್ಯ ಸಮ್ಮೇಳನದ ವಿಷಯ ಅಷ್ಟೇ. ಇಲ್ಲೇ ಮೂರನೇ ಫ್ಲೋರಲ್ಲಿ ಮೀಟಿಂಗು, ಬನ್ನಿ ಬನ್ನಿ, ಸೀಎಮ್ ಇನ್ನೇನು ಬಂದು ಬಿಡ್ತಾರೆ, ಅಂದರು.
ಪೇಪರ್ ಕಚೇರಿಗಳಲ್ಲಿ ಕೆಲಸ ಮಾಡಿ ಮಾಡಿದವರಿಗೆ ಯಾವ ಕೆಟ್ಟ ವಿಷಯಕ್ಕೂ ಗಾಬರಿಯಾಗದ, ಎಂಥ ಒಳ್ಳೆ ವಿಷಯದಲ್ಲೂ ಆಸಕ್ತಿ ಹುಟ್ಟದ ನಿರ್ಲಿಪ್ತತೆ ಬಂದು ಬಿಟ್ಟಿರುತ್ತದೆ. ನಾನೂ ಅದೇ ಹಾದಿಯಲ್ಲಿದ್ದೇನೆ. ಆ ಹೆದ್ದಾರಿಯ ಅರ್ಧದಷ್ಟು ಮೈಲುಗಲ್ಲುಗಳನ್ನು ದಾಟಿ ರಸ್ತೆ ಪಕ್ಕದ ಢಾಬಾದಲ್ಲಿ ಬೈಟೂ ಚಹಾ ಕುಡಿಯುತ್ತಿದ್ದೇನೆ. ಅಂಥ ಅರ್ಧ ನಿರ್ಲಿಪ್ತನಾದ ನನಗೇ ಶಾಕ್ ಆಯಿತು. ಹತ್ತು ವರ್ಷಗಳಲ್ಲಿ ಅಂಥ ಶಾಕ್ ಆಗಿರಲಿಲ್ಲ.
ಸಮ್ಮೇಳನಕ್ಕಾಗಿ ಮಂತ್ರಿಗಳೆಲ್ಲ ಸೇರಿ, ಸೀಎಮ್ ಮನೆಯಲ್ಲಿ ಅವರಿಲದ್ದ ಹೊತ್ತಿನಲ್ಲಿ, ರಾತ್ರಿ ಎರಡು ಗಂಟೆಗೆ ಮೀಟಿಂಗ್ ಮಾಡ್ತಾರಾ? ಸಮ್ಮೇಳನ ನಡೆಸುವುದು ಕೂಡ ಎಮರಜೆನ್ಸಿ ಆಗಿಬಿಟ್ಟಿತಾ, ಏನು ಇದು, ಎಂಥಾ ಕಾಲ ಬಂತು, ಅಂತ ಎಲ್ಲರೂ ಒಂದೇ ಸಮಯಕ್ಕೆ ಒಬ್ಬರಿಗೊಬ್ಬರು ಒಂದೇ ಪ್ರಶ್ನೆ ಕೇಳಿದೆವು. ಯಾರಿಗೂ ಏನೂ ತಿಳಿಯದಿದ್ದರಿಂದ ಒಳಗೆ ಹೋದೆವು. ಸುಮ್ಮನೇ ಕೂತೆವು.
ಅಷ್ಟೊತ್ತಿಗೆ ಹೆಲಿಕಾಪ್ಟರಿನಲ್ಲಿ ಸೀ ಎಮ್ಮು ಬಂದರು. ಗಡಬಡಿಸಿ ಒಳಗೆ ಹೋದರು. ಎಲ್ಲೋಗಿದ್ರೀ ಸಾರ್ ಅಂತ ಯಾರೋ ಅಂದರು. ಎಂಥ ಕಾಲ ಬಂತ್ರಿ, ಈಗ ತಾನೇ ಕೊಳ್ಳೆಗಾಲದಿಂದ ಬರ್ತಾ ಇದ್ದೇನೆ. ಎಲ್ಲ ಸೇರಿ ನನ್ನ ವಿರುದ್ಧ ಮಾಟ ಮಾಡಿಸಿದ್ದಾರೆ. ಅದಕ್ಕೆ ವಿರುದ್ಧ ಮಾಟ ಮಾಡೋ ಎಕ್ಸ್ ಪರ್ಟ್ ಒಬ್ಬ ಸಿಕ್ಕಿದ್ದಾನೆ ಅಂತ ನಮ್ಮ ಬ್ಲ್ಯಾಕ್ ಮ್ಯಾಜಿಕ್ ಅಡವೈಸರ್ ಹೇಳಿದರು ಅದಕ್ಕೆ ಹೋಗಿದ್ದೆ ಅಂದರು.
ಅಷ್ಟೊತ್ತಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಾಹಿತಿಗಳನ್ನು ಕರೆದುಕೊಂಡು ಬಂದು ಸೀಎಮ್ ಪಕ್ಕ ಕೂರಿಸಿದರು. ‘ಮೀಟಿಂಗ್ ಶುರು ಮಾಡೋಣ' ಅಂತ ಹೇಳಿ ವಿಡಿಯೋ ಕಾನ್ಫರನ್ಸ್ ಆರಂಭ ಮಾಡಿದರು. ಆಗ ಪರದೆಯ ಮೇಲೆ ಕಂಡಿದ್ದು ಅಮೇರಿಕದ ಹಳ್ಳಿಯೊಂದರಲ್ಲಿ ನೆಲೆಸಿರುವ ಐಟಿ ಜೀವಿಯೊಬ್ಬರ ಮನೆ. ಅವರ ಮನೆಯಲ್ಲಿ ಅನೇಕ ಕನ್ನಡಾಭಿಮಾನಿಗಳು ನೆರೆದಿದ್ದರು.
ಅಷ್ಟೊತ್ತಿಗೆ ಸೀಎಮ್ಮವರು ಜೋರಾಗಿ ಮಾತು ಆರಂಭಿಸಿದರು.
ಹೊರನಾಡಿನಲ್ಲಿ ನೆಲೆಸಿರುವ ಕನ್ನಡದ ಮಕ್ಕಳೇ, ಇಲ್ಲಿರುವ ನಾವೆಲ್ಲ ಹೇಗೇ ಇರಲಿ, ನೀವೆಲ್ಲ ನಮ್ಮ ಹೆಸರನ್ನು ಎತ್ತಿ ಹಿಡಿದಿದ್ದೀರಿ. ನೀವು ಯಶಸ್ಸು ಗಳಿಸಲು ನಿಮ್ಮ ಯುವ ಜೀವನದ ಅಮೂಲ್ಯ ಗಳಿಗೆಗಳನ್ನು ಕಂಪ್ಯೂಟರ್ ಮುಂದೆ ಕಳೆದಿದ್ದೀರಿ. ಅದರಿಂದ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಿದೆ. ಅಲ್ಲಿದ್ದುಕೊಂಡು ಇಲ್ಲಿಯ ಜೀವಿಗಳಿಗಾಗಿ ತುಡಿಯುತ್ತೀರಿ. ಈಗ ನೀವು ಇನ್ನೂ ದೊಡ್ಡ ತ್ಯಾಗ ಮಾಡುವ ಸಮಯ ಬಂದಿದೆ ಎಂದರು. ಆಗ ನನಗೆ ಲೆಕ್ಕ ಸಿಕ್ಕಿತು. ಸೀಎಮ್ಮು ಐಟಿ ಹೈಕುಳಗಳ ಹತ್ತಿರ ಸಮ್ಮೇಳನಕ್ಕಾಗಿ ಹಣ ಕೇಳುತ್ತಿದ್ದಾರೆ! ಅವರಿಗೆ ಅನುಕೂಲವಾಗಬೇಕು ಅಂತ ರಾಹುಕಾಲ ಗುಳಿಕಕಾಲ ಬಿಟ್ಟು ಈ ಕಾಲ್ ಸೆಂಟರ್ ಕಾಲದಲ್ಲಿ ಮೀಟಿಂಗು ಇಟ್ಟು ನಮ್ಮನ್ನು ಕರೆಸಿದ್ದಾರೆ! ನಾನೆಷ್ಟು ಬೇಗ ಕಂಡುಹಿಡಿದು ಬಿಟ್ಟೆ. ನಾನೆಂಥ ಬುದ್ಧಿವಂತ ಅಂತ ಎಡಗೈಯಲ್ಲಿ ಬೆನ್ನು ಚಪ್ಪರಿಸಿಕೊಂಡೆ.
ಆದರೆ ಸೀಮ್ಮು ನನ್ನ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು. ನೋಡಿ ನಮ್ಮ ಸರಕಾರ ಹಿಂದಿನ ಸರಕಾರಗಳಂತಲ್ಲ. ನಮ್ಮಲ್ಲಿ ಕನ್ನಡದ ಕೆಲಸಕ್ಕಾಗಿ ಬೇಕಾದಷ್ಟು ಹಣ ಇದೆ. ನಿಮ್ಮ ಹಣ ನಮಗೆ ಬೇಡ. ಆದರೆ ನಿಮ್ಮ ಸಮಯ, ನಿಮ್ಮ ಮ್ಯಾನೇಜ್ ಮೆಂಟ್ ಎಕ್ಸಪರ್ಟೈಸ್ ನಮಗೆ ಬೇಕು. ಅದಕ್ಕೇ ನಾವು ಈ ಬಾರಿಯ ಸಮ್ಮೇಳನವನ್ನು ನಿಮಗೆ ಔಟ್ ಸೋರ್ಸ್ ಮಾಡಬೇಕೆಂದಿದ್ದೇವೆ! ನನಗೆ ಒಂದೇ ದಿನದಲ್ಲಿ ಎರಡು ಬಾರಿ ಶಾಕ್ ಆಯಿತು.
ಸಭೆಯಲ್ಲಿದ್ದ ಪತ್ರಕರ್ತರು ಗುಸುಗುಸು ಮಾತಾಡಲಿಕ್ಕೆ ಆರಂಭ ಮಾಡಿದ್ದನ್ನು ನೋಡಿ ಸೀಎಮ್ಮರ ಪರಾಕಿಗರು ನಸುನಕ್ಕರು. ತುಟಿಯ ಮೇಲೆ ಕೈ ಇಟ್ಟು ಸುಮ್ಮನಿರುವಂತೆ ಸೂಚಿಸಿದರು. ಸೀಎಮ್ ಮುಂದುವರೆಸಿದರು. ಸಮ್ಮೇಳನ ನಡೆಸುವುದು ಕಷ್ಟವೇನಲ್ಲ. ಅದರಲ್ಲಿ ಇರೋದು ಮೂರೇ ಸವಾಲುಗಳು. ಒಂದು ಊಟ, ಒಂದು ಮೆರವಣಿಗೆ, ಇನ್ನೊಂದು ಬಂದ ಸರಕಾರಿ ನೌಕರರಿಗೆ ಹಾಜರಾತಿ ಪತ್ರ ಕೊಡುವುದು.
ನೋಡಿ, ಸಮ್ಮೇನದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಏನು? ಅಲ್ಲಿಗೆ ಬರುವ ಸರಕಾರಿ ನೌಕರರಿಗೆ, ಕನ್ನಡ ಶಿಕ್ಷಕರಿಗೆ, ಕನ್ನಡ ಪರೀಕ್ಷೆ ಬರೆಯುತ್ತಿರುವ ಅಧಿಕಾರಿಗಳಿಗೆ ಅಟೆಂಡೆನ್ಸ್ ಸರ್ಟಿಫಿಕೇಟು ಕೊಡುವುದು. ಈ ಓಓಡಿ ಪತ್ರಕ್ಕಾಗಿಯೇ ಅವರು ಸಮ್ಮೇಳನಕ್ಕೆ ಓಡಿ ಬರುವುದು. ಸಂಘಟಕರು ಇದನ್ನು ಮೊದಲ ದಿನವೇ ಕೊಟ್ಟರೆ ಅವರು ಪ್ರತಿನಿಧಿಗಳು ತಮ್ಮ ಹೆಂಡತಿ ಮಕ್ಕಳೊಂದಿಗೆ ರಿಸಾರ್ಟು, ಗೋವಾ, ತಿರುಪತಿ ಅಂತ ಸುತ್ತಲು ಹೋಗುತ್ತಾರೆ. ಬೇಕಾದರೆ ಇದಕ್ಕೆ ಜನಾರ್ಧನ ರೆಡ್ಡಿ ಅವರು ಹೆಲ್ಪ್ ಮಾಡುತ್ತಾರೆ. ಓಓಡಿ ಸಿಕ್ಕವರಿಗೆ ಒಂದು ಪ್ಯಾಕೇಜ್ ಮಾಡಿ ಕಳಿಸಿಕೊಡಲು ಸಮ್ಮೇಳನ ಸಭಾಂಗಣದಿಂದಲೇ ಬಸ್ಸು ಬಿಡುವಾ. ಅದರಲ್ಲೇನು? ಎಂದರು.
ಇನ್ನು ಊಟ. ಅದನ್ನು ಕೇಟರಿಂಗಿನವರಿಗೆ ಕೊಡಬಹುದು. ಸಮ್ಮೇಳನದ ಜಾಗದಲ್ಲಿ ಊಟಕ್ಕೆ ಗದ್ದಲ ಆಗಬಹುದು ಎನ್ನುವುದಾದರೆ ಪ್ರತಿನಿಧಿಗಳು ಉಳಿದುಕೊಂಡಿರುವ ಹೋಟೇಲು ರೂಮಿಗೇ ಊಟ ಕಳಿಸಬಹುದು. ಕೇಬಲ್ ಟಿವಿಯವರಿಗೆ ಹೇಳಿದರೆ ಲೈವ್ ರಿಲೇ ಕೊಡ್ತಾರೆ. ಪ್ರತಿನಿಧಿಗಳು ರೂಮಿನಲ್ಲಿಯೇ ಗೋಷ್ಠಿಗಳನ್ನು ಕೇಳಬಹುದು. ಸಭಾ ಮೈದಾನಕ್ಕೆ ಬಂದು ಬಟ್ಟೆ ಧೂಳು ಮಾಡಿಕೊಳ್ಳುವುದು ಬೇಕಾಗಿಲ್ಲ. ಸಂಘಟಕರಿಗೂ ಅನುಕೂಲ ಆಗುತ್ತೆ. ಇನ್ನು ಏನೇನು ಊಟ ಕೊಡ್ತೇವೆ ಅಂತ ದಿನಾಲೂ ಪತ್ರಿಕಾ ಕಚೇರಿಗಳಿಗೆ ಈ ಮೇಲ್ ಕಳಿಸಿಬಿಟ್ಟರೆ ಅದೇ ಸುದ್ದಿಯಾಗುತ್ತೆ. ಸಮ್ಮೇನಗಳ ಬಗ್ಗೆ ಇನ್ನೇನು ಸುದ್ದಿ ಬರುತ್ತೆ ಹೇಳಿ? ಅಂದರು. ನಮ್ಮವರಿಗೆ ಹೌದು ಅನ್ನಿಸಿದಕ್ಕೋ ಏನೋ ಸುಮ್ಮನೇ ಕೂತರು.
ಇನ್ನು ಮೆರವಣಿಗೆ. ಬೆಂಗಳೂರಿನಲ್ಲಿ ನೂರಾರು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳಿವೆ. ಅವರಿಗೆ ಯಾರಿಗಾದರೂ ಹೇಳಿದರೆ ಆಯಿತು. ಒಂದು ಸ್ವಲ್ಪ ಜನಪದ, ಒಂದು ಸ್ವಲ್ಪ ಭರತ ನಾಟ್ಯ, ಒಂದು ಸ್ವಲ್ಪ ತಮಾಷೆ ಗೊಂಬೆಗಳು, ಒಂದಿಷ್ಟು ಪೂರ್ಣ ಕುಂಭ ಹೊತ್ತ ಕಾಲೇಜು ಹುಡುಗಿಯರು, ಇಷ್ಟು ಸೇರಿಸಿ ಒಂದು ಪ್ರೋಗ್ರಾಂ ಮಾಡೀಪ್ಪಾ ಅಂದರೆ ಅವರು ಮಾಡ್ತಾರೆ. ಇದ್ಯಾವುದೂ ಕಷ್ಟ ಇಲ್ಲ. ಮಾಡಬಹುದು ಅಂದರು.
ಇನ್ನು ಅಧ್ಯಕ್ಷರ ಭಾಷಣ. ಅದು ಫಾರ್ಮುಲಾ ಸಿನೆಮಾದ ಕತೆ ಇದ್ದಂತೆ. ಐದು ಕಾಮೆಡಿ ಸೀನು, ನಾಲ್ಕು ಹಾಡು, ಮೂರು ಫೈಟು, ಒಬ್ಬ ಹೀರೋ ಎರಡು ಹೀರೋಯಿನ್ನು, ಐದು ನಿಮಿಷಕ್ಕೊಂದು ಬೆಡ್ ರೂಮು ಸೀನು ಇದ್ದರೆ ಒಂದು ಸಿನೆಮಾ ಅಲ್ಲವೇ, ಹಾಗೆ ಕಾವೇರಿ- ಕೃಷ್ಣಾ ವಿವಾದ, ಮರಾಠಿ- ತಮಿಳು ಗಲಾಟೆ, ಕಾಸರಗೋಡು- ಬೆಳಗಾವಿ ಗಡಿ ಸಮಸ್ಯೆ, ಭಾಷಾವಾರು ವಿಂಗಡನೆ, ಮಹಾಜನ್, ಗೋಕಾಕ್, ಮಹಿಷಿ, ನಂಜುಂಡಪ್ಪ ವರದಿಗಳು, ಇಂಗ್ಲಿಷ್ ಮಾಧ್ಯಮ ಸಮಸ್ಯೆ, ಕನ್ನಡಿಗರಿಗೆ ರೇಲ್ವೆ ನೇಮಕಾತಿ ಸಮಸ್ಯೆ, ಇತ್ಯಾದಿಗಳನ್ನು ರುಚಿಗೆ ತಕ್ಕಂತೆ ಸೇರಿಸಿ, ಸಣ್ಣಗೆ ಶುರುಮಾಡಿ ಜೋರಾಗಿ ಮುಗಿಸಿದರೆ ಆಯಿತು. ಅದರಲ್ಲೇನು? ಹಿಂದಿನ ಅಧ್ಯಕ್ಷರ ಭಾಷಣದ ಪುಟಗಳನ್ನು ಅಲ್ಲಲ್ಲಿ ಸೇರಿಸಿ ಪುಸ್ತಕ ಮಾಡಿದರಾಯಿತು. ಅದು ಯಾವಾಗಲೂ ಪ್ರಸ್ತುತ. ಯಾಕೆಂದರೆ ಕನ್ನಡದ ಸಮಸ್ಯೆಗಳು ಯಾವಾಗಲೂ ಪ್ರಸ್ತುತವಲ್ಲವೇ? ಅಂದರು. ಇನ್ನು ಅಧ್ಯಕ್ಷರಿಗೆ ಭಾಷಣ ಬರೆಯಲು ಟೈಂ ಇಲ್ಲದಿದ್ದರೆ ಅದನ್ನೂ ಸಹ ಒಂದು ಶಬ್ದಕ್ಕೆ ಇಷ್ಟು ಅನ್ನೋ ಲೆಕ್ಕದಲ್ಲಿ ಮಾಡಿಕೊಡುವವರಿದ್ದಾರೆ ಬಳೆಪೇಟೆಯಲ್ಲಿ. ಬೇಕಾದರೆ ನನ್ನ ಪೀಏ ನಂಬರ್ ಕೊಡ್ತಾರೆ, ಅಂದರು.
ನೀವೇ ಯಾಕೆ ಮಾಡಬಾರದು ಅಂತ ಕೇಳಬೇಡಿ. ಇಲ್ಲಿ ನಮಗೆ ತುಂಬಾ ಕೆಲಸ ಇದೆ. ಮೊದಲನೇಯದಾಗಿ ಮನೆಯಿಂದ ವಿಧಾನಸೌಧ, ವಿಧಾನಸೌಧದಿಂದ ಮನೆಗೆ ಹೋಗುವುದೇ ಕಷ್ಟವಾಗಿದೆ. ನಮ್ಮ ವಿರೋಧಿಗಳು ಹಾದಿಯಲ್ಲೆಲ್ಲ ಮಂತ್ರಿಸಿದ ಕುಂಬಳಕಾಯಿ ಇಡ್ತಾಇದ್ದಾರೆ. ಅದಕ್ಕೇ ವಿಧಾನಸೌಧವನ್ನೇ ಮನಗೆ ಶಿಫ್ಟು ಮಾಡಬೇಕೂಂತ ತಯಾರಿ ನಡೆಸಿದ್ದೇವೆ. ಇನ್ನು ನಾನು ಇಲ್ಲಿ ಮಾಡ್ತಾ ಇರೋ ಕೆಲಸವನ್ನು ಮಂತ್ರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಮಾಡ್ತಾ ಇದ್ದಾರೆ. ಅವರಿಗೆ ಟೈಂ ಇಲ್ಲ. ಐಎಎಸ್ ಅಧಿಕಾರಿಗಳಿಗೆ ಆಸಕ್ತಿ ಇಲ್ಲ. ಕನ್ನಡ ಪರ ಸಂಘಟನೆಗಳಿಗೆ ಹೋರಾಟ ಮಾಡೋದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಇನ್ನು ಸಮ್ಮೇಳನ ಯಾರು ಮಾಡಬೇಕು? ನಿನ್ನೆ ಯಾರೋ ಹೇಳಿದರು ಈ ಸಂಕ್ರಮಣ ಕಾಲದಲ್ಲಿ ಕನ್ನಡದ ಬಗ್ಗೆ ಕಳಕಳಿ ಇರೋದು ಎನ್ನಾರಾಯಿಗಳಿಗೆ ಮಾತ್ರ ಅಂತ. ಅದಕ್ಕೇ ನಿಮ್ಮನ್ನು ಕೇಳ್ತಾ ಇರೋದು. ಈಗಾಗಲೇ ಪ್ಯಾಲೇಸ್ ಗ್ರೌಂಡು ಬುಕ್ ಮಾಡಿದ್ದೇವೆ. ದಯವಿಟ್ಟು ಒಪ್ಪಕೊಳ್ಳಿ. ಕನ್ನಡಕ್ಕಾಗಿ ನೀವು ಇಷ್ಟಾದರೂ ಮಾಡಬೇಕು ಎಂದು ಗದರಿಸಿದರು. ಅವರು ಹೂಂ, ಹಾಂ ಅನ್ನುವ ಮೊದಲು ವಿಡಿಯೋ ಕಾನ್ಫರನ್ಸ್ ಬಂದ್ ಮಾಡಿದರು. ನಿಮ್ಮ ಪ್ರಶ್ನೆಗಳಿಗೆ ಸಮಯ ಇಲ್ಲ. ನಾನೇ ಅನೇಕರಿಗೆ ಪ್ರಶ್ನೆ ಆಗಿದ್ದೇನೆ ಅಂತ ಹೇಳಿ ಹೋದರು. ಅಷ್ಟೊತ್ತಿಗೆ ಬೆಳಕಾಗುತ್ತಿತ್ತು. ಎದ್ದು ಕಚೇರಿಗೆ ಹೋದೆವು. ನೈಟ್ ಶಿಫ್ಟಿನ ಜೀವಿಗಳು ಹೋಗಿಯಾಗಿತ್ತು. ಕಸ ಹೊಡೆಯುವವರು ಇನ್ನೂ ಬಂದಿದ್ದಿಲ್ಲ. ಸಾವಿರಾರು ಪ್ರೆಸ್ ನೋಟುಗಳು ಯಾರ ಅಂಕೆಗೂ ಸಿಗದಂತೆ ಎಲ್ಲೆಂದರಲ್ಲಿ ಬಿದ್ದಿದ್ದವು, ಸುಂದರಿಯ ಹೆಗಲ ಮೇಲಿನ ಕೂದಲಂತೆ. ಅದರಲ್ಲೇ ಜಾಗ ಹುಡುಕಿ ಕುಳಿತು ಸುದ್ದಿ ಬರೆದೆ. ಸಂಪಾದಕರಿಗೆ ರಜಾ ಚೀಟಿ ಬರೆದಿಟ್ಟು ಮನೆಗೆ ಹೋಗಿ ಕಣ್ಣು ತೆರೆದುಕೊಂಡೇ ನಿದ್ದೆಮಾಡಿದೆ
ಮರುದಿನ ಬೆಳಿಗ್ಗೆ ಪೇಪರ್ ಓದುವಾಗ ಮೂರನೇ ಶಾಕ್ ಆಯಿತು.
“ರಾಜ್ಯ ಸರಕಾರವು ಈ ಸಾಲಿನ ಸಮ್ಮೇಳನವನ್ನು ಅಮೇರಿಕದಲ್ಲಿ ಆಯೋಜಿಸಲು ನಿರ್ಧರಿಸಿದೆ. ಅಲ್ಲಿನ ಕನ್ನಡಾಭಿಮಾನಿಗಳು ಬರಾಕ್ ಒಬಾಮಾ ಅವರ ಸ್ನೇಹಿತರಾದ ಕನ್ನಡಿಗರೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಯೂರೋಪು, ಅಮೇರಿಕೆ ಯ ಸಂಸತ್ತು ಗಳಿಗೆ ಆಯ್ಕೆಯಾದ ಭಾರತೀಯ ಸಂಜಾತರನ್ನು ಅತಿಥಿಗಳೆಂದು, ಆಹ್ವಾನಿಸಲಾಗಿದೆ. ಸಮ್ಮೇಳನದ ಉದ್ಘಾಟನೆ, ಗೋಷ್ಠಿಗಳು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವನ್ನೂ ಯೂಟ್ಯೂಬ್ ನಲ್ಲಿ ಹಾಕಲಾಗುವುದು. ಅದನ್ನು ನೋಡಿದವರಿಗೆ ಓಓಡಿ ಪತ್ರ ನೀಡಲಾಗುವುದು. ಅದನ್ನು ಬಳಸಿ ಪ್ರವಾಸ ಹೋಗಲಿಕ್ಕ ಅನುಕೂಲವಾಗುವಂತೆ ಸರಕಾರಿ ನೌಕರರಿಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ. ಮೊನ್ನೆ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಸಿಟ್ಟು ಮಾಡಿಕೊಂಡೇ ಆಫೀಸಿಗೆ ಹೋದೆ. ಸಂಪಾದಕರ ಹತ್ತಿರ ಜಗಳ ಮಾಡಿದೆ. ಎಷ್ಟು ದೊಡ್ಡ ತಪ್ಪು ಸಾರ್ ಇದು. ಅಲ್ಲ ಸಾರ್, ಮೀಟಿಂಗಿಗೆ ಹೋದವನು ನಾನು. ನಾನು ಹೇಳಿದ್ದು ಫೈನಲ್ ಆಗಬೇಕೇ ಹೊರತು, ಇಲ್ಲಿ ಕಚೇರಿಯಲ್ಲಿ ಕುಳಿತು ನಾನು ಬರೆದದ್ದನ್ನು ತಿದ್ದಿದವನು ಹೇಳಿದ್ದಲ್ಲ. ಎನ್ನಾರಾಯಿಗಳು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿಗೆ ಬಂದು ಸಮ್ಮೇಳನ ಮಾಡ್ತಾರೆ ಅಂತ ಸೀಎಮ್ಮು ಹೇಳಿದರು. ಅದನ್ನು ಬಿಟ್ಟು ಅಮೇರಿಕೆಯಲ್ಲಿ ಮಾಡ್ತಾರೆ ಅಂತ ಬಂದಿದೆ. ಇದು ಅನ್ಯಾಯ ಅಲ್ಲ ಅಂದರೆ ಏನು ಸಾರ್ ಅಂದೆ.
ಅಯ್ಯೋ ನೀವು ಹೋದ ಮೇಲೆ ಸೀಎಮ್ ಆಫೀಸಿನಿಂದ ಒಂದು ಪತ್ರ ಕಳಿಸಿದರಪ್ಪ, ಎನ್ನಾರಾಯಿಗಳು ನಾವು ಬೆಂಗಳೂರಿಗೆ ಬರಕ್ಕಾಗಲ್ಲ, ಇಲ್ಲೇ ಸಿಲಿಕಾನ್ ವ್ಯಾಲಿಯಲ್ಲೇ ಮಾಡ್ತೇವೆ ಅಂತ ಮೇಲ್ ಕಳಿಸಿದರಂತೆ. ಅದಕ್ಕೇ ಸುದ್ದಿ ಬದಲಾಯಿತು, ಅಂದರು.ಸಂಪಾದಕರು ನಕ್ಕರು. ನಾನು ಅವರ ನಗುವಿನ ಹಿಂದೆ ಏನಿರಬಹುದು ಎಂದು ಯೋಚಿಸುತ್ತಾ ಕ್ಯಾಂಟೀನಿಗೆ ಹೋದೆ.
ಗಣ್ಣು ವರದಿ
ಹೃಷಿಕೇಶ್ ಬಹದ್ದೂರ್ ದೇಸಾಯಿ
ಶುಕ್ರವಾರ, 4 ಫೆಬ್ರವರಿ 2011 (05:34 IST)
ಚಿತ್ರ: ಪ್ರಕಾಶ್ ಬಾಬು
ರೀ ಸಿಎಂ ಸಾಹೇಬರ ಪಿಎ ಮೀಟಿಂಗ್ ಇದೆ ಅಂತ ಹೇಳಿದ್ದಾರೆ ಏಳ್ರೀ. ಹೋಗ್ರೀ, ಅಂತ ಸಂಪಾದಕರು ರಾತ್ರಿ ಎರಡು ಗಂಟೆಗೆ ಫೋನ್ ಮಾಡಿದರು. ಇಷ್ಟೊತ್ತಿಗೆ ಎಂಥಾ ಮೀಟೀಂಗು ಸಾರ್ ಎಂದೆ. ನನಗೊತ್ತಿದ್ದರೆ ನಾನ್ಯಾಕ್ರೀ ನಿಮಗೆ ಹೇಳ್ತಿದ್ದೆ? ಸುಮ್ಮನೇ ಹೋಗ್ರೀ ಅಂತ ಚೀರಿದರು. ಇವರ್ಯಾಕೆ ಚೀರ್ತಾರೆ ಅನ್ನಿಸಿತಾದರೂ, ಸಂಪಾದಕರಾದ ಮೇಲೆ ಇಷ್ಟಾದರೂ ಚೀರದಿದ್ದರೆ ಹೇಗೆ ಅಂತ ಅರ್ಥವಾಯಿತು.
ಅವರು ಕೂಗಿದ ನಂತರ ನಾನು ಎದ್ದು ನನ್ನ ಹೆಂಡತಿಯನ್ನು ಎಬ್ಬಿಸದೇ ಮುಖ ತೊಳೆದು, ಗಾಡಿ ತೆಗೆದು ಗೇಟಿಗೆ ಕೀಲಿ ಹಾಕುತ್ತಿದ್ದೆ. ಆಗ ನನ್ನ ಹೆಂಡತಿ ಕೂಗಿದಳು. “ಜಾಕೆಟ್ ತೊಗೊಂಡು ಹೋಗ್ರೀ. ಸೀಎಮ್ಮ ಮನಿ ಹತ್ತಿರ ಭಾಳ ಥಂಡಿ ಐತೆಂತ. ಮತ್ತೆ ಒಳಗೆ ಹೋಗಿ ಜಾಕೆಟ್ ಹೊದ್ದು ಹೊರಟೆ. ನಾನು ಮಾಡುವುದು ಎಲ್ಲ ಇವಳಿಗೆ ಹೇಗೆ ಗೊತ್ತಾಗುತ್ತದೆ? ಬಹುಶಃ ನನಗೆ ರೇಡಿಯೋ ಕಾಲರ್ ಹಾಕಿರಬೇಕು, ಅಂದುಕೊಂಡೆ. ಅಲ್ಲಿ ಹೋದರೆ ಸೀಎಮ್ಮ ಅವರ ಮನೆಯಲ್ಲಿ ಸೀಎಮ್ಮೇ ಇಲ್ಲ. ಸೀಎಮ್ ಮನೆಯಲ್ಲಿ ಆಗಲೇ ಪೋಲಿಸ್ ಕಮಿಷನರ್ ಅವರು, ಚೀಫ್ ಸೆಕ್ರೆಟರಿ, ಕಂಟೋನಮೆಂಟಿನ ನೀಲಿ ಕಾರಿನಿಂದ ಇಳಿದ ನೀಲಿ ಸಮವಸ್ತ್ರ ಧರಿಸಿ ನೀಲಿ ಪೇಟಾ ಸುತ್ತಿದ್ದ ಸರದಾರಜಿ ಆರ್ಮಿಯವರು, ಆ ಸಾಹೇಬರು, ಈ ಸಾಹೇಬರು, ಎಲ್ಲರೂ ನೆರೆದಿದ್ದರು.
ಅಷ್ಟೊತ್ತಿಗೆ ಸೀಎಮ್ಮ ಅವರ ಪೀಎ ಬಂದರು. ಅವರನ್ನು ಕಂಡ ಸೀನಿಯರ್ ಜರ್ನಲಿಸ್ಟೊಬ್ಬರು, `ಅಲ್ಲಯ್ಯಾ ಏನು ಎಲ್ಲ ದೊಡ್ಡವರೆಲ್ಲಾ ಬಂದು ಬಿಟ್ಟಿದ್ದಾರೆ, ಏನು ಸಮಾಚಾರ? ಏನಾದರೂ ಎಮರ್ ಜೆನ್ಸಿನಾ? ಬೆಂಗಳೂರಿಗೆ ಟೆರರಿಸ್ಟುಗಳು ಬಂದು ಬಿಟ್ಟಿದ್ದಾರಾ? ಎನ್ ಕತೆ?' ಅಂತ ಅಂದರು.
ಅಯ್ಯೋ ಅಂಥದ್ದೇನಿಲ್ಲ ಬನ್ನಿ ಸಾ, ಸಾಹಿತ್ಯ ಸಮ್ಮೇಳನದ ವಿಷಯ ಅಷ್ಟೇ. ಇಲ್ಲೇ ಮೂರನೇ ಫ್ಲೋರಲ್ಲಿ ಮೀಟಿಂಗು, ಬನ್ನಿ ಬನ್ನಿ, ಸೀಎಮ್ ಇನ್ನೇನು ಬಂದು ಬಿಡ್ತಾರೆ, ಅಂದರು.
ಪೇಪರ್ ಕಚೇರಿಗಳಲ್ಲಿ ಕೆಲಸ ಮಾಡಿ ಮಾಡಿದವರಿಗೆ ಯಾವ ಕೆಟ್ಟ ವಿಷಯಕ್ಕೂ ಗಾಬರಿಯಾಗದ, ಎಂಥ ಒಳ್ಳೆ ವಿಷಯದಲ್ಲೂ ಆಸಕ್ತಿ ಹುಟ್ಟದ ನಿರ್ಲಿಪ್ತತೆ ಬಂದು ಬಿಟ್ಟಿರುತ್ತದೆ. ನಾನೂ ಅದೇ ಹಾದಿಯಲ್ಲಿದ್ದೇನೆ. ಆ ಹೆದ್ದಾರಿಯ ಅರ್ಧದಷ್ಟು ಮೈಲುಗಲ್ಲುಗಳನ್ನು ದಾಟಿ ರಸ್ತೆ ಪಕ್ಕದ ಢಾಬಾದಲ್ಲಿ ಬೈಟೂ ಚಹಾ ಕುಡಿಯುತ್ತಿದ್ದೇನೆ. ಅಂಥ ಅರ್ಧ ನಿರ್ಲಿಪ್ತನಾದ ನನಗೇ ಶಾಕ್ ಆಯಿತು. ಹತ್ತು ವರ್ಷಗಳಲ್ಲಿ ಅಂಥ ಶಾಕ್ ಆಗಿರಲಿಲ್ಲ.
ಸಮ್ಮೇಳನಕ್ಕಾಗಿ ಮಂತ್ರಿಗಳೆಲ್ಲ ಸೇರಿ, ಸೀಎಮ್ ಮನೆಯಲ್ಲಿ ಅವರಿಲದ್ದ ಹೊತ್ತಿನಲ್ಲಿ, ರಾತ್ರಿ ಎರಡು ಗಂಟೆಗೆ ಮೀಟಿಂಗ್ ಮಾಡ್ತಾರಾ? ಸಮ್ಮೇಳನ ನಡೆಸುವುದು ಕೂಡ ಎಮರಜೆನ್ಸಿ ಆಗಿಬಿಟ್ಟಿತಾ, ಏನು ಇದು, ಎಂಥಾ ಕಾಲ ಬಂತು, ಅಂತ ಎಲ್ಲರೂ ಒಂದೇ ಸಮಯಕ್ಕೆ ಒಬ್ಬರಿಗೊಬ್ಬರು ಒಂದೇ ಪ್ರಶ್ನೆ ಕೇಳಿದೆವು. ಯಾರಿಗೂ ಏನೂ ತಿಳಿಯದಿದ್ದರಿಂದ ಒಳಗೆ ಹೋದೆವು. ಸುಮ್ಮನೇ ಕೂತೆವು.
ಅಷ್ಟೊತ್ತಿಗೆ ಹೆಲಿಕಾಪ್ಟರಿನಲ್ಲಿ ಸೀ ಎಮ್ಮು ಬಂದರು. ಗಡಬಡಿಸಿ ಒಳಗೆ ಹೋದರು. ಎಲ್ಲೋಗಿದ್ರೀ ಸಾರ್ ಅಂತ ಯಾರೋ ಅಂದರು. ಎಂಥ ಕಾಲ ಬಂತ್ರಿ, ಈಗ ತಾನೇ ಕೊಳ್ಳೆಗಾಲದಿಂದ ಬರ್ತಾ ಇದ್ದೇನೆ. ಎಲ್ಲ ಸೇರಿ ನನ್ನ ವಿರುದ್ಧ ಮಾಟ ಮಾಡಿಸಿದ್ದಾರೆ. ಅದಕ್ಕೆ ವಿರುದ್ಧ ಮಾಟ ಮಾಡೋ ಎಕ್ಸ್ ಪರ್ಟ್ ಒಬ್ಬ ಸಿಕ್ಕಿದ್ದಾನೆ ಅಂತ ನಮ್ಮ ಬ್ಲ್ಯಾಕ್ ಮ್ಯಾಜಿಕ್ ಅಡವೈಸರ್ ಹೇಳಿದರು ಅದಕ್ಕೆ ಹೋಗಿದ್ದೆ ಅಂದರು.
ಅಷ್ಟೊತ್ತಿಗೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಸಾಹಿತಿಗಳನ್ನು ಕರೆದುಕೊಂಡು ಬಂದು ಸೀಎಮ್ ಪಕ್ಕ ಕೂರಿಸಿದರು. ‘ಮೀಟಿಂಗ್ ಶುರು ಮಾಡೋಣ' ಅಂತ ಹೇಳಿ ವಿಡಿಯೋ ಕಾನ್ಫರನ್ಸ್ ಆರಂಭ ಮಾಡಿದರು. ಆಗ ಪರದೆಯ ಮೇಲೆ ಕಂಡಿದ್ದು ಅಮೇರಿಕದ ಹಳ್ಳಿಯೊಂದರಲ್ಲಿ ನೆಲೆಸಿರುವ ಐಟಿ ಜೀವಿಯೊಬ್ಬರ ಮನೆ. ಅವರ ಮನೆಯಲ್ಲಿ ಅನೇಕ ಕನ್ನಡಾಭಿಮಾನಿಗಳು ನೆರೆದಿದ್ದರು.
ಅಷ್ಟೊತ್ತಿಗೆ ಸೀಎಮ್ಮವರು ಜೋರಾಗಿ ಮಾತು ಆರಂಭಿಸಿದರು.
ಹೊರನಾಡಿನಲ್ಲಿ ನೆಲೆಸಿರುವ ಕನ್ನಡದ ಮಕ್ಕಳೇ, ಇಲ್ಲಿರುವ ನಾವೆಲ್ಲ ಹೇಗೇ ಇರಲಿ, ನೀವೆಲ್ಲ ನಮ್ಮ ಹೆಸರನ್ನು ಎತ್ತಿ ಹಿಡಿದಿದ್ದೀರಿ. ನೀವು ಯಶಸ್ಸು ಗಳಿಸಲು ನಿಮ್ಮ ಯುವ ಜೀವನದ ಅಮೂಲ್ಯ ಗಳಿಗೆಗಳನ್ನು ಕಂಪ್ಯೂಟರ್ ಮುಂದೆ ಕಳೆದಿದ್ದೀರಿ. ಅದರಿಂದ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಿದೆ. ಅಲ್ಲಿದ್ದುಕೊಂಡು ಇಲ್ಲಿಯ ಜೀವಿಗಳಿಗಾಗಿ ತುಡಿಯುತ್ತೀರಿ. ಈಗ ನೀವು ಇನ್ನೂ ದೊಡ್ಡ ತ್ಯಾಗ ಮಾಡುವ ಸಮಯ ಬಂದಿದೆ ಎಂದರು. ಆಗ ನನಗೆ ಲೆಕ್ಕ ಸಿಕ್ಕಿತು. ಸೀಎಮ್ಮು ಐಟಿ ಹೈಕುಳಗಳ ಹತ್ತಿರ ಸಮ್ಮೇಳನಕ್ಕಾಗಿ ಹಣ ಕೇಳುತ್ತಿದ್ದಾರೆ! ಅವರಿಗೆ ಅನುಕೂಲವಾಗಬೇಕು ಅಂತ ರಾಹುಕಾಲ ಗುಳಿಕಕಾಲ ಬಿಟ್ಟು ಈ ಕಾಲ್ ಸೆಂಟರ್ ಕಾಲದಲ್ಲಿ ಮೀಟಿಂಗು ಇಟ್ಟು ನಮ್ಮನ್ನು ಕರೆಸಿದ್ದಾರೆ! ನಾನೆಷ್ಟು ಬೇಗ ಕಂಡುಹಿಡಿದು ಬಿಟ್ಟೆ. ನಾನೆಂಥ ಬುದ್ಧಿವಂತ ಅಂತ ಎಡಗೈಯಲ್ಲಿ ಬೆನ್ನು ಚಪ್ಪರಿಸಿಕೊಂಡೆ.
ಆದರೆ ಸೀಮ್ಮು ನನ್ನ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು. ನೋಡಿ ನಮ್ಮ ಸರಕಾರ ಹಿಂದಿನ ಸರಕಾರಗಳಂತಲ್ಲ. ನಮ್ಮಲ್ಲಿ ಕನ್ನಡದ ಕೆಲಸಕ್ಕಾಗಿ ಬೇಕಾದಷ್ಟು ಹಣ ಇದೆ. ನಿಮ್ಮ ಹಣ ನಮಗೆ ಬೇಡ. ಆದರೆ ನಿಮ್ಮ ಸಮಯ, ನಿಮ್ಮ ಮ್ಯಾನೇಜ್ ಮೆಂಟ್ ಎಕ್ಸಪರ್ಟೈಸ್ ನಮಗೆ ಬೇಕು. ಅದಕ್ಕೇ ನಾವು ಈ ಬಾರಿಯ ಸಮ್ಮೇಳನವನ್ನು ನಿಮಗೆ ಔಟ್ ಸೋರ್ಸ್ ಮಾಡಬೇಕೆಂದಿದ್ದೇವೆ! ನನಗೆ ಒಂದೇ ದಿನದಲ್ಲಿ ಎರಡು ಬಾರಿ ಶಾಕ್ ಆಯಿತು.
ಸಭೆಯಲ್ಲಿದ್ದ ಪತ್ರಕರ್ತರು ಗುಸುಗುಸು ಮಾತಾಡಲಿಕ್ಕೆ ಆರಂಭ ಮಾಡಿದ್ದನ್ನು ನೋಡಿ ಸೀಎಮ್ಮರ ಪರಾಕಿಗರು ನಸುನಕ್ಕರು. ತುಟಿಯ ಮೇಲೆ ಕೈ ಇಟ್ಟು ಸುಮ್ಮನಿರುವಂತೆ ಸೂಚಿಸಿದರು. ಸೀಎಮ್ ಮುಂದುವರೆಸಿದರು. ಸಮ್ಮೇಳನ ನಡೆಸುವುದು ಕಷ್ಟವೇನಲ್ಲ. ಅದರಲ್ಲಿ ಇರೋದು ಮೂರೇ ಸವಾಲುಗಳು. ಒಂದು ಊಟ, ಒಂದು ಮೆರವಣಿಗೆ, ಇನ್ನೊಂದು ಬಂದ ಸರಕಾರಿ ನೌಕರರಿಗೆ ಹಾಜರಾತಿ ಪತ್ರ ಕೊಡುವುದು.
ನೋಡಿ, ಸಮ್ಮೇನದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಏನು? ಅಲ್ಲಿಗೆ ಬರುವ ಸರಕಾರಿ ನೌಕರರಿಗೆ, ಕನ್ನಡ ಶಿಕ್ಷಕರಿಗೆ, ಕನ್ನಡ ಪರೀಕ್ಷೆ ಬರೆಯುತ್ತಿರುವ ಅಧಿಕಾರಿಗಳಿಗೆ ಅಟೆಂಡೆನ್ಸ್ ಸರ್ಟಿಫಿಕೇಟು ಕೊಡುವುದು. ಈ ಓಓಡಿ ಪತ್ರಕ್ಕಾಗಿಯೇ ಅವರು ಸಮ್ಮೇಳನಕ್ಕೆ ಓಡಿ ಬರುವುದು. ಸಂಘಟಕರು ಇದನ್ನು ಮೊದಲ ದಿನವೇ ಕೊಟ್ಟರೆ ಅವರು ಪ್ರತಿನಿಧಿಗಳು ತಮ್ಮ ಹೆಂಡತಿ ಮಕ್ಕಳೊಂದಿಗೆ ರಿಸಾರ್ಟು, ಗೋವಾ, ತಿರುಪತಿ ಅಂತ ಸುತ್ತಲು ಹೋಗುತ್ತಾರೆ. ಬೇಕಾದರೆ ಇದಕ್ಕೆ ಜನಾರ್ಧನ ರೆಡ್ಡಿ ಅವರು ಹೆಲ್ಪ್ ಮಾಡುತ್ತಾರೆ. ಓಓಡಿ ಸಿಕ್ಕವರಿಗೆ ಒಂದು ಪ್ಯಾಕೇಜ್ ಮಾಡಿ ಕಳಿಸಿಕೊಡಲು ಸಮ್ಮೇಳನ ಸಭಾಂಗಣದಿಂದಲೇ ಬಸ್ಸು ಬಿಡುವಾ. ಅದರಲ್ಲೇನು? ಎಂದರು.
ಇನ್ನು ಊಟ. ಅದನ್ನು ಕೇಟರಿಂಗಿನವರಿಗೆ ಕೊಡಬಹುದು. ಸಮ್ಮೇಳನದ ಜಾಗದಲ್ಲಿ ಊಟಕ್ಕೆ ಗದ್ದಲ ಆಗಬಹುದು ಎನ್ನುವುದಾದರೆ ಪ್ರತಿನಿಧಿಗಳು ಉಳಿದುಕೊಂಡಿರುವ ಹೋಟೇಲು ರೂಮಿಗೇ ಊಟ ಕಳಿಸಬಹುದು. ಕೇಬಲ್ ಟಿವಿಯವರಿಗೆ ಹೇಳಿದರೆ ಲೈವ್ ರಿಲೇ ಕೊಡ್ತಾರೆ. ಪ್ರತಿನಿಧಿಗಳು ರೂಮಿನಲ್ಲಿಯೇ ಗೋಷ್ಠಿಗಳನ್ನು ಕೇಳಬಹುದು. ಸಭಾ ಮೈದಾನಕ್ಕೆ ಬಂದು ಬಟ್ಟೆ ಧೂಳು ಮಾಡಿಕೊಳ್ಳುವುದು ಬೇಕಾಗಿಲ್ಲ. ಸಂಘಟಕರಿಗೂ ಅನುಕೂಲ ಆಗುತ್ತೆ. ಇನ್ನು ಏನೇನು ಊಟ ಕೊಡ್ತೇವೆ ಅಂತ ದಿನಾಲೂ ಪತ್ರಿಕಾ ಕಚೇರಿಗಳಿಗೆ ಈ ಮೇಲ್ ಕಳಿಸಿಬಿಟ್ಟರೆ ಅದೇ ಸುದ್ದಿಯಾಗುತ್ತೆ. ಸಮ್ಮೇನಗಳ ಬಗ್ಗೆ ಇನ್ನೇನು ಸುದ್ದಿ ಬರುತ್ತೆ ಹೇಳಿ? ಅಂದರು. ನಮ್ಮವರಿಗೆ ಹೌದು ಅನ್ನಿಸಿದಕ್ಕೋ ಏನೋ ಸುಮ್ಮನೇ ಕೂತರು.
ಇನ್ನು ಮೆರವಣಿಗೆ. ಬೆಂಗಳೂರಿನಲ್ಲಿ ನೂರಾರು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳಿವೆ. ಅವರಿಗೆ ಯಾರಿಗಾದರೂ ಹೇಳಿದರೆ ಆಯಿತು. ಒಂದು ಸ್ವಲ್ಪ ಜನಪದ, ಒಂದು ಸ್ವಲ್ಪ ಭರತ ನಾಟ್ಯ, ಒಂದು ಸ್ವಲ್ಪ ತಮಾಷೆ ಗೊಂಬೆಗಳು, ಒಂದಿಷ್ಟು ಪೂರ್ಣ ಕುಂಭ ಹೊತ್ತ ಕಾಲೇಜು ಹುಡುಗಿಯರು, ಇಷ್ಟು ಸೇರಿಸಿ ಒಂದು ಪ್ರೋಗ್ರಾಂ ಮಾಡೀಪ್ಪಾ ಅಂದರೆ ಅವರು ಮಾಡ್ತಾರೆ. ಇದ್ಯಾವುದೂ ಕಷ್ಟ ಇಲ್ಲ. ಮಾಡಬಹುದು ಅಂದರು.
ಇನ್ನು ಅಧ್ಯಕ್ಷರ ಭಾಷಣ. ಅದು ಫಾರ್ಮುಲಾ ಸಿನೆಮಾದ ಕತೆ ಇದ್ದಂತೆ. ಐದು ಕಾಮೆಡಿ ಸೀನು, ನಾಲ್ಕು ಹಾಡು, ಮೂರು ಫೈಟು, ಒಬ್ಬ ಹೀರೋ ಎರಡು ಹೀರೋಯಿನ್ನು, ಐದು ನಿಮಿಷಕ್ಕೊಂದು ಬೆಡ್ ರೂಮು ಸೀನು ಇದ್ದರೆ ಒಂದು ಸಿನೆಮಾ ಅಲ್ಲವೇ, ಹಾಗೆ ಕಾವೇರಿ- ಕೃಷ್ಣಾ ವಿವಾದ, ಮರಾಠಿ- ತಮಿಳು ಗಲಾಟೆ, ಕಾಸರಗೋಡು- ಬೆಳಗಾವಿ ಗಡಿ ಸಮಸ್ಯೆ, ಭಾಷಾವಾರು ವಿಂಗಡನೆ, ಮಹಾಜನ್, ಗೋಕಾಕ್, ಮಹಿಷಿ, ನಂಜುಂಡಪ್ಪ ವರದಿಗಳು, ಇಂಗ್ಲಿಷ್ ಮಾಧ್ಯಮ ಸಮಸ್ಯೆ, ಕನ್ನಡಿಗರಿಗೆ ರೇಲ್ವೆ ನೇಮಕಾತಿ ಸಮಸ್ಯೆ, ಇತ್ಯಾದಿಗಳನ್ನು ರುಚಿಗೆ ತಕ್ಕಂತೆ ಸೇರಿಸಿ, ಸಣ್ಣಗೆ ಶುರುಮಾಡಿ ಜೋರಾಗಿ ಮುಗಿಸಿದರೆ ಆಯಿತು. ಅದರಲ್ಲೇನು? ಹಿಂದಿನ ಅಧ್ಯಕ್ಷರ ಭಾಷಣದ ಪುಟಗಳನ್ನು ಅಲ್ಲಲ್ಲಿ ಸೇರಿಸಿ ಪುಸ್ತಕ ಮಾಡಿದರಾಯಿತು. ಅದು ಯಾವಾಗಲೂ ಪ್ರಸ್ತುತ. ಯಾಕೆಂದರೆ ಕನ್ನಡದ ಸಮಸ್ಯೆಗಳು ಯಾವಾಗಲೂ ಪ್ರಸ್ತುತವಲ್ಲವೇ? ಅಂದರು. ಇನ್ನು ಅಧ್ಯಕ್ಷರಿಗೆ ಭಾಷಣ ಬರೆಯಲು ಟೈಂ ಇಲ್ಲದಿದ್ದರೆ ಅದನ್ನೂ ಸಹ ಒಂದು ಶಬ್ದಕ್ಕೆ ಇಷ್ಟು ಅನ್ನೋ ಲೆಕ್ಕದಲ್ಲಿ ಮಾಡಿಕೊಡುವವರಿದ್ದಾರೆ ಬಳೆಪೇಟೆಯಲ್ಲಿ. ಬೇಕಾದರೆ ನನ್ನ ಪೀಏ ನಂಬರ್ ಕೊಡ್ತಾರೆ, ಅಂದರು.
ನೀವೇ ಯಾಕೆ ಮಾಡಬಾರದು ಅಂತ ಕೇಳಬೇಡಿ. ಇಲ್ಲಿ ನಮಗೆ ತುಂಬಾ ಕೆಲಸ ಇದೆ. ಮೊದಲನೇಯದಾಗಿ ಮನೆಯಿಂದ ವಿಧಾನಸೌಧ, ವಿಧಾನಸೌಧದಿಂದ ಮನೆಗೆ ಹೋಗುವುದೇ ಕಷ್ಟವಾಗಿದೆ. ನಮ್ಮ ವಿರೋಧಿಗಳು ಹಾದಿಯಲ್ಲೆಲ್ಲ ಮಂತ್ರಿಸಿದ ಕುಂಬಳಕಾಯಿ ಇಡ್ತಾಇದ್ದಾರೆ. ಅದಕ್ಕೇ ವಿಧಾನಸೌಧವನ್ನೇ ಮನಗೆ ಶಿಫ್ಟು ಮಾಡಬೇಕೂಂತ ತಯಾರಿ ನಡೆಸಿದ್ದೇವೆ. ಇನ್ನು ನಾನು ಇಲ್ಲಿ ಮಾಡ್ತಾ ಇರೋ ಕೆಲಸವನ್ನು ಮಂತ್ರಿಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಮಾಡ್ತಾ ಇದ್ದಾರೆ. ಅವರಿಗೆ ಟೈಂ ಇಲ್ಲ. ಐಎಎಸ್ ಅಧಿಕಾರಿಗಳಿಗೆ ಆಸಕ್ತಿ ಇಲ್ಲ. ಕನ್ನಡ ಪರ ಸಂಘಟನೆಗಳಿಗೆ ಹೋರಾಟ ಮಾಡೋದು ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ. ಇನ್ನು ಸಮ್ಮೇಳನ ಯಾರು ಮಾಡಬೇಕು? ನಿನ್ನೆ ಯಾರೋ ಹೇಳಿದರು ಈ ಸಂಕ್ರಮಣ ಕಾಲದಲ್ಲಿ ಕನ್ನಡದ ಬಗ್ಗೆ ಕಳಕಳಿ ಇರೋದು ಎನ್ನಾರಾಯಿಗಳಿಗೆ ಮಾತ್ರ ಅಂತ. ಅದಕ್ಕೇ ನಿಮ್ಮನ್ನು ಕೇಳ್ತಾ ಇರೋದು. ಈಗಾಗಲೇ ಪ್ಯಾಲೇಸ್ ಗ್ರೌಂಡು ಬುಕ್ ಮಾಡಿದ್ದೇವೆ. ದಯವಿಟ್ಟು ಒಪ್ಪಕೊಳ್ಳಿ. ಕನ್ನಡಕ್ಕಾಗಿ ನೀವು ಇಷ್ಟಾದರೂ ಮಾಡಬೇಕು ಎಂದು ಗದರಿಸಿದರು. ಅವರು ಹೂಂ, ಹಾಂ ಅನ್ನುವ ಮೊದಲು ವಿಡಿಯೋ ಕಾನ್ಫರನ್ಸ್ ಬಂದ್ ಮಾಡಿದರು. ನಿಮ್ಮ ಪ್ರಶ್ನೆಗಳಿಗೆ ಸಮಯ ಇಲ್ಲ. ನಾನೇ ಅನೇಕರಿಗೆ ಪ್ರಶ್ನೆ ಆಗಿದ್ದೇನೆ ಅಂತ ಹೇಳಿ ಹೋದರು. ಅಷ್ಟೊತ್ತಿಗೆ ಬೆಳಕಾಗುತ್ತಿತ್ತು. ಎದ್ದು ಕಚೇರಿಗೆ ಹೋದೆವು. ನೈಟ್ ಶಿಫ್ಟಿನ ಜೀವಿಗಳು ಹೋಗಿಯಾಗಿತ್ತು. ಕಸ ಹೊಡೆಯುವವರು ಇನ್ನೂ ಬಂದಿದ್ದಿಲ್ಲ. ಸಾವಿರಾರು ಪ್ರೆಸ್ ನೋಟುಗಳು ಯಾರ ಅಂಕೆಗೂ ಸಿಗದಂತೆ ಎಲ್ಲೆಂದರಲ್ಲಿ ಬಿದ್ದಿದ್ದವು, ಸುಂದರಿಯ ಹೆಗಲ ಮೇಲಿನ ಕೂದಲಂತೆ. ಅದರಲ್ಲೇ ಜಾಗ ಹುಡುಕಿ ಕುಳಿತು ಸುದ್ದಿ ಬರೆದೆ. ಸಂಪಾದಕರಿಗೆ ರಜಾ ಚೀಟಿ ಬರೆದಿಟ್ಟು ಮನೆಗೆ ಹೋಗಿ ಕಣ್ಣು ತೆರೆದುಕೊಂಡೇ ನಿದ್ದೆಮಾಡಿದೆ
ಮರುದಿನ ಬೆಳಿಗ್ಗೆ ಪೇಪರ್ ಓದುವಾಗ ಮೂರನೇ ಶಾಕ್ ಆಯಿತು.
“ರಾಜ್ಯ ಸರಕಾರವು ಈ ಸಾಲಿನ ಸಮ್ಮೇಳನವನ್ನು ಅಮೇರಿಕದಲ್ಲಿ ಆಯೋಜಿಸಲು ನಿರ್ಧರಿಸಿದೆ. ಅಲ್ಲಿನ ಕನ್ನಡಾಭಿಮಾನಿಗಳು ಬರಾಕ್ ಒಬಾಮಾ ಅವರ ಸ್ನೇಹಿತರಾದ ಕನ್ನಡಿಗರೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಯೂರೋಪು, ಅಮೇರಿಕೆ ಯ ಸಂಸತ್ತು ಗಳಿಗೆ ಆಯ್ಕೆಯಾದ ಭಾರತೀಯ ಸಂಜಾತರನ್ನು ಅತಿಥಿಗಳೆಂದು, ಆಹ್ವಾನಿಸಲಾಗಿದೆ. ಸಮ್ಮೇಳನದ ಉದ್ಘಾಟನೆ, ಗೋಷ್ಠಿಗಳು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲವನ್ನೂ ಯೂಟ್ಯೂಬ್ ನಲ್ಲಿ ಹಾಕಲಾಗುವುದು. ಅದನ್ನು ನೋಡಿದವರಿಗೆ ಓಓಡಿ ಪತ್ರ ನೀಡಲಾಗುವುದು. ಅದನ್ನು ಬಳಸಿ ಪ್ರವಾಸ ಹೋಗಲಿಕ್ಕ ಅನುಕೂಲವಾಗುವಂತೆ ಸರಕಾರಿ ನೌಕರರಿಗೆ ನಾಲ್ಕು ದಿನ ರಜೆ ಘೋಷಿಸಲಾಗಿದೆ. ಮೊನ್ನೆ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಸಿಟ್ಟು ಮಾಡಿಕೊಂಡೇ ಆಫೀಸಿಗೆ ಹೋದೆ. ಸಂಪಾದಕರ ಹತ್ತಿರ ಜಗಳ ಮಾಡಿದೆ. ಎಷ್ಟು ದೊಡ್ಡ ತಪ್ಪು ಸಾರ್ ಇದು. ಅಲ್ಲ ಸಾರ್, ಮೀಟಿಂಗಿಗೆ ಹೋದವನು ನಾನು. ನಾನು ಹೇಳಿದ್ದು ಫೈನಲ್ ಆಗಬೇಕೇ ಹೊರತು, ಇಲ್ಲಿ ಕಚೇರಿಯಲ್ಲಿ ಕುಳಿತು ನಾನು ಬರೆದದ್ದನ್ನು ತಿದ್ದಿದವನು ಹೇಳಿದ್ದಲ್ಲ. ಎನ್ನಾರಾಯಿಗಳು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿಗೆ ಬಂದು ಸಮ್ಮೇಳನ ಮಾಡ್ತಾರೆ ಅಂತ ಸೀಎಮ್ಮು ಹೇಳಿದರು. ಅದನ್ನು ಬಿಟ್ಟು ಅಮೇರಿಕೆಯಲ್ಲಿ ಮಾಡ್ತಾರೆ ಅಂತ ಬಂದಿದೆ. ಇದು ಅನ್ಯಾಯ ಅಲ್ಲ ಅಂದರೆ ಏನು ಸಾರ್ ಅಂದೆ.
ಅಯ್ಯೋ ನೀವು ಹೋದ ಮೇಲೆ ಸೀಎಮ್ ಆಫೀಸಿನಿಂದ ಒಂದು ಪತ್ರ ಕಳಿಸಿದರಪ್ಪ, ಎನ್ನಾರಾಯಿಗಳು ನಾವು ಬೆಂಗಳೂರಿಗೆ ಬರಕ್ಕಾಗಲ್ಲ, ಇಲ್ಲೇ ಸಿಲಿಕಾನ್ ವ್ಯಾಲಿಯಲ್ಲೇ ಮಾಡ್ತೇವೆ ಅಂತ ಮೇಲ್ ಕಳಿಸಿದರಂತೆ. ಅದಕ್ಕೇ ಸುದ್ದಿ ಬದಲಾಯಿತು, ಅಂದರು.ಸಂಪಾದಕರು ನಕ್ಕರು. ನಾನು ಅವರ ನಗುವಿನ ಹಿಂದೆ ಏನಿರಬಹುದು ಎಂದು ಯೋಚಿಸುತ್ತಾ ಕ್ಯಾಂಟೀನಿಗೆ ಹೋದೆ.
Labels:
Gadag Sahitya Sammelana,
Kendasampige,
Outsourcing
Subscribe to:
Posts (Atom)