Monday, November 3, 2008

ಏನಾದರೂ ಬರೆಯುವುದು

ಪ್ರತಿ ದಿನವೂ ಒಂದು ಪುಟವನ್ನಾದರೂ ಬರೆಯಬೇಕೆಂದುಕೊಂಡವನಿಗೆ ಆ ಮಾತನ್ನು ಉಳಿಸಿಕೊಳ್ಳಲು ಆಗಿಲ್ಲ.
(ಪುಸ್ತಕದ ಬಗ್ಗೆ ಬರೆಯಬೇಕೆಂದು ಹೊರಟವನು ತನ್ನ ಬಗ್ಗೆ ಬರೆಯುವುದು ಓದುವವರಿಗೆ ಬೇಜಾರಾಗಬಹುದು ಎಂದು ಸಹ ಒಮ್ಮೆ ಅನ್ನಿಸುತ್ತಿದೆ.)
ಅಮಿತ್ ರೇ ಬಬ್ಬ ಬ್ಯಾರಿಸ್ಟರ್‍. ಜೀವನದ ಬಗ್ಗೆ ಯಾವಾಗಲೂ ಸೀರಿಯಸ್ ಅಗಿ ಇರಲಾರದವನು. ಅವನಿಗೆ ಗಂಭೀರವಾದ ಹುಡುಗಿಯೊಬ್ಬಳು ಭೇಟಿಯಾಗುತ್ತಾಳೆ. ಯಾವುದರ ಬಗ್ಗೆಯೂ ಲೆಕ್ಕ ಇಡದ ಇವನಿಗೆ, ಎಲ್ಲದರ ಬಗ್ಗೆ ಲೆಕ್ಕ ಇಡುವ ಲಾವಣ್ಯಳ ಸ್ನೇಹ ಇಷ್ಟವಾಗತೊಡಗುತ್ತದೆ.
ಅನೇಕ ಹುಡುಗಿಯರೊಂದಿಗೆ ಸಂಬಂಧ ಬೆಳೆಸಿ ಯಾವುದಕ್ಕೂ ಕಮಿಟ್ ಆಗದವನಿಗೆ, ಇದೊಂದು ಬೇಡವೆಂದರೂ ಬಿಡದ ಸಂಬಂಧವಾಗಿಬಿಡುತ್ತದೆ. ತನ್ನ ಸ್ವಭಾವಕ್ಕೆ ವಿರುದ್ಧವಾಗಿ ತಾನೇ ನಡೆದುಕೊಳ್ಳುತ್ತಿರುವುದು ಅವನಿಗೆ ಅ‌ಚ್ಚರಿ ಹುಟ್ಟಿಸುತ್ತದೆ.
ಕೊನೆಗೆ ಅವರಿಬ್ಬರಿಗೂ ಅನ್ನಿಸುವುದು ಇಷ್ಟು. 'ತುಂಬ ಸ್ವತಂ‌ತ್ರ ಸ್ವಭಾವದ ತನಗೆ ಇದಕ್ಕಿಂತ ಸರಿಯಾದ ಜೋಡಿ ಸಿಗದು'.
ಅವರು ಭಯಂಕರವಾಗಿ ಪ್ರೀತಿಸುತ್ತಾರೆ. ಕ್ಷಣಕಾಲ ಬಿಟ್ಟಿದ್ದರೆ ಜೀವ ಹೋಗಿ ಬಿಡುತ್ತದೇನೋ ಎನ್ನುವಷ್ಟು.
ಅಮಿತ್ ಲಾವಣ್ಯಳ ಮನೆಯವರ ಅನುಮತಿ ಪಡೆದು ಮದುವೆಗೆ ತಯಾರಿ ನಡೆಸುತ್ತಾನೆ.
ಇದಕ್ಕೆ ಎರಡೂ ಮನೆಯವರ ಅನುಮತಿಯೂ ದೊರಕುತ್ತದೆ.
ಆದರೆ ಅವರು ಮದುವೆಯಾಗುವುದಿಲ್ಲ.
ಯಾಕೆ? ಓದುಗನೆದುರಿಗೆ ಈ ಪ್ರಶ್ನೆ ಧುತ್ತೆಂದು ಎದುರಾಗುತ್ತದೆ.
ಕಾದಂಬರಿಯುದ್ದಕ್ಕೂ ತಾನೊಂದು ಪಾತ್ರವಾಗಿ ಬಿಡುವ ಲೇಖಕ ಈ ಪ್ರಶ್ನೆಗೆ ನೇರವಾದ ಉತ್ತರ ನೀಡುವುದಿಲ್ಲ.
ಈ ಉತ್ತರಕ್ಕೆ ಅನೇಕ ಆಯಾಮಗಳಿವೆ. ಅವು ಈ ಕಾದಂಬರಿ ಓದುವುದನ್ನು ಮುಗಿಸಿದ ನಂತರವೂ ಓದುಗನನ್ನು ಕಾಡುವುದು ನಿಲ್ಲಿಸುವುದಿಲ್ಲ.
ಕಾದಂಬರಿಯ ಪಾತ್ರಗಳು ನಾವು, ನೀವೆಲ್ಲ ಎಲ್ಲೊ ನೋಡಿದವರಾಗಿ, ಎಂಜಿ ರೋಡಿನಲ್ಲಿ, ದೊಡ್ಡ ಮಾಲಿನ್ನಲಿ, ಟ್ರಾಫಿಕ್ ಸಿಗ್ಲಲ್ಲಿನಲ್ಲಿ, ಹೆಸರಿಲ್ಲದ ಬ್ಲಾಗಿನ್ನಲ್ಲಿ ನಮಗೆ ಸಿಕ್ಕವರಾಗಿ, ಚಿಂತೆಗೆ ಹಚ್ಚುತ್ತಾರೆ, ಜೀವ ಹಿಂಡುತ್ತಾರೆ.
ನಾನು ಈ ಕಾದಂಬರಿಯನ್ನು ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಹತ್ತು ಬಾರಿಯಾದರೂ ಓದಿದ್ದೇನೆ. ಅಷ್ಟೇ ಸಾರಿ `ಇದು ಹಿಂಗ್ಯಾಕಾತು' ಅಂತ ವಿಚಾರ ಮಾಡಿದ್ದೇನೆ.
ಈಗ `ನಾನ್ಯಾಕೆ ಒಬ್ಬನೇ ಒದ್ದಾಡಲಿ' ಎಂದು ಈ ಕೆಲಸ ಕ್ಕೆ ಕೈ ಹಾಕಿದ್ದೇನೆ.

ಇನ್ನೊಂದು.
ಅಮೇರಿಕದ ಚಿತ್ರನಟ ಪಾಲ್ ನ್ಯೂಮನ್ ಸತ್ತು ಹೋದಾಗಲೇ ಅವನ ಬಗ್ಗೆ ಬರೆಯಬೇಕೆಂದುಕೊಂಡವನು ಸೋಮಾರಿತನದಿಂದ ಬಿಟ್ಟೆ.
ನಿನ್ನೆ ರಾತ್ರಿ ಅಲ್ಫ್ರೆಡ್ ಹಿಚ್ಕಾಕ್ ನ ಟೋರ್ನ ಕರ್ಟನ್ ನೋಡಿ ಬರೆಯಲೇಬೇಕೆನ್ನಿಸಿತು. ಶುರು ಮಾಡುತ್ತೇನೆ.
ಮೊನ್ನೆ ಸಿಕ್ಕಿದ ಕೆಂಡಸಂಪಿಗೆ ರಷೀದ್ ಅವರು, ಎನಾದರೂ ಬರೆಯಿರಿ ಎಂದರು. ಇದಾದರೂ ನನಗೆ ಬರೆಯಲು ಹಚ್ಚಲಿ.

Sunday, October 26, 2008

ಫೇರ್‍ವೆಲ್ ಮೈ ಫ್ರೆಂಡ್

ಹೋಗಿ ಬಾ ಗೆಳೆಯಾ, ಒಳ್ಳೆಯದಾಗಲಿ
ರವೀಂದ್ರನಾಥ ಟಾಗೋರ್‍ ಅವರ ಫೇರ್‍ವೆಲ್ ಮೈ ಫ್ರೆಂಡ್ ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆನ್ನುವುದು ನನ್ನ ಬಹುದಿನದ ಬಯಕೆ. ಆದರೆ ಈಗ ಅದರ ಹೆಸರನ್ನಾದರೂ ನಾನು ಸರಿಯಾಗಿ ಭಾಷಾಂತರಿಸಿದೆನೇ ಎನ್ನುವ ಸಂದೇಹ ಇದೆ.
ಲೇಖಕ ಚಿದಾನಂದ ಸಾಲಿ ಅವರ ಮುಂದೆ ಈ ಮಾತನ್ನು ಅನ್ನಬಾರದೇ ಅಂದು ಬಿಟ್ಟೆನೋ ಏನೋ. ಅವರು ನನ್ನನ್ನು ಬೆಂಬಿಡದೇ ಕಾಡುವ ಮಾತಾಡಿದ್ದಾರೆ. ಅವರು ಗೆಲ್ಲುತ್ತಾರೋ, ನಾನು ಗೆಲ್ಲುತ್ತೇನೋ ನೋಡಬೇಕು.
ಈ ಕಾದಂಬರಿ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಇದನ್ನು ಜೀನಿಯಸ್ ಎಂದಿದ್ದಾರೆ. ಕೆಲವರು ಸಾಧಾರಣ ಎಂದು ಮರೆತು ಬಿಟ್ಟಿದ್ದಾರೆ. ಆದರೆ ನನಗೆ ಇದು ಎಂದೂ ಮರೆಯದ ಅನುಭವವನ್ನು ನೀಡಿದೆ.
ಇದನ್ನು ಬೇರೆಯವರಿಗೆ ಹೇಳದೇ ಇದ್ದರೆ ಪಾಪ ಎನ್ನುವಷ್ಟು ನನ್ನನ್ನು ಇದು ಕಾಡಿದೆ. ಎಷ್ಟೋ ಜನ ಸ್ಹೇಹಿತರಿಗೆ ಇದನ್ನು ಹೇಳಿ ಹೇಳಿ ನಿದ್ದೆ ಕೆಡಿಸಿದ್ದೇನೆ. ಇವನು ಯಾಕಾದರೂ ಇದನ್ನು ಓದಿದನೋ ಅಂತಲೋ, ಅಥವಾ ನಾವು ಯಾಕಾದರೂ ಇವನ ಗೆಳೆಯರಾದೆವೋ ಅಂತ ಅವರಿಗೆ ಅನ್ನಿಸಿರಬಹುದು. ಅದನ್ನು ಕನ್ನಡದಲ್ಲಿ ಬರೆಯಬೇಕು ಅಂತಲೂ ಬಹಳ ಸಾರಿ ಅನ್ನಿಸಿದೆ.
ಬರೆಯಲಾರದ್ದಕ್ದೆ ಕಾರಣಗಳೇನೂ ಇಲ್ಲ. ಶಿಸ್ತು ಇರಲಾರದ್ದು, ಸೋಮಾರಿತನ, ಅಥವಾ ಯಾವಾನಿಗೆ ಬೇಕು ಅನ್ನುವ ಮನೋಭಾವ ಇರಬಹುದು.
ಈಗ ಮಾಡಲೇ ಬೇಕಾಗಿ ಬಂದಿದೆ.
ಈ ಕಾದಂಬರಿ ಟಾಗೋರರ ಯಯಾತಿಯಾಗುವ ಪ್ರಯತ್ನದ ಫಲ ಅಂತ ಯಾರೋ ಹೇಳಿದ್ದಾರೆ. ಇದನ್ನು ಬರೆದಿದ್ದು ಅವರು ತಾನು ಯುವಕರಿಗೇನು ಕಮ್ಮಿ ಅಂತ ತೋರಿಸಿಕೊಳ್ಳಲು ಅಂತ ಕೆಲವು ವಿಮರ್ಷಕರು ಹೇಳಿದ್ದಾರೆ. ಇದರ ಬಗ್ಗೆ ನನಗೆ ಯಾವ ಅಭಿಪ್ರಾಯವೂ ಇಲ್ಲ. ಪ್ರತೀ ಓದುಗನಿಗೆ ತನ್ನದೇ ಅಭಿಪ್ರಾಯ ಇರುತ್ತೆ, ಇರಬೇಕು.
ಇದಕ್ಕಿಂತ ಹೆಚ್ಚು ಬರೆಯಲು ಇಂದು ಆಗುತ್ತಿಲ್ಲ. ಮತ್ತೆ ಬರೆಯುತ್ತೇನೆ.
ಹೃಷಿ

Friday, October 17, 2008

An Indian Wife's Poem

An Indian wife’s poem

He did not like the curry
And he did not like my cake
He said my biscuits were too hard …
Not like his mother used to make
I did not prepare the coffee
He did not like the stew,
I did not mend his socks
The way his mother used to do
I pondered for an answer
I was looking for a clue
Isn’t there anything I could do
To match his mothers shoe
Then I smiled as I saw light
One thing I could definitely do
I turned around
And slapped him tight
Like his mother used to!!!

Author unknown